IMPORTANT NOTICE

New official website is launched for Karada Community. Please visit www.karadavishwa.com for more details.

Saturday, 12 July 2025

ಕರಾಡ ಬ್ರಾಹ್ಮಣರ ಶ್ರೀ ಗುರುದರ್ಶನ ದಿನ - ಶೃಂಗೇರಿ ಶ್ರೀ ಮಠದಲ್ಲಿ : 21 JUL 25

 


link : https://www.karadavishwa.com/pages/0dpenj-d5x62v-ixn9ju

ವೇದ ಆಸಕ್ತರಿಗೆ online ಮತ್ತು offline ತರಗತಿಗಳು

ವೇದಾಭಿಮಾನಿಗಳಿಗೆ ನಮಸ್ಕಾರ 🙏

ನಮ್ಮ ಶಶಿಯಣ್ಣ ಪಾತನಡ್ಕ ಇವರು ಶ್ರುತಿರಥ ಎನ್ನುವ ಹೆಸರಿನಲ್ಲಿ ವೇದ ಅಧ್ಯಯನ/ ವೇದ ಪಾಠ ತರಗತಿಗಳನ್ನು ಸುಮಾರು ನಾಲ್ಕು ವರ್ಷಗಳಿಂದ ನಡೆಸುತ್ತಾ ಬಂದಿದ್ದಾರೆ. ವೇದ ಆಸಕ್ತರಿಗೆ ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳು ನಡೆಯುತ್ತಿವೆ. ಈ ವರ್ಷ ನಾವು ಕೆಲವು ಯುವ ಕರಾಡದ ಸದಸ್ಯರು ಅವರೊಂದಿಗೆ ಚರ್ಚಿಸಿ, ಬನಶಂಕರಿ ಆರನೇ ಹಂತದಲ್ಲಿರುವ (ಬ್ರಿಗೇಡ್ ಒಮೆಗಾ ವಸತಿ ಸಮುಚ್ಚಯದ ಬಳಿ) "ಸುರಭಿ ಮಾಣಿಮೂಲೆ" ಮನೆಯಲ್ಲಿ ವೇದ ಪಾಠ ತರಗತಿಗಳ ಹೊಸಬ್ಯಾಚನ್ನು ಮುಂದಿನ ತಿಂಗಳ ಉಪಾಕರ್ಮದ ದಿನದಿಂದಲೇ ಪ್ರಾರಂಭಿಸುವ ಯೋಜನೆ ಸಿದ್ಧವಾಗಿದೆ. ಈಗಾಗಲೇ ಶಶಿಯಣ್ಣ ಫಾರ್ಮನ್ನು ಕಳುಹಿಸಿಕೊಟ್ಟಿದ್ದಾರೆ. ಆಸಕ್ತರು ಕೆಳಗೆ ಕಳುಹಿಸಿರುವ ಲಿಂಕಿನಲ್ಲಿ ಇರುವ ಅರ್ಜಿಯನ್ನು ಭರ್ತಿ ಮಾಡಿ ಶಶಿಯಣ್ಣ ಅವರಿಗೆ ಕಳುಹಿಸಿ. ವಾರದಲ್ಲಿ ಒಂದು ಆಫ್ ಲೈನ್ ತರಗತಿ ಮತ್ತು ಇನ್ನೊಂದು ಆನ್ಲೈನ್ ತರಗತಿ.

ಬ್ರಾಹ್ಮಣರಾದ ನಾವು ಏನು ಮಾಡಬೇಕು ಅದನ್ನು ಮಾಡಲೇಬೇಕು. ನಮ್ಮ ಬದಲಾದ ಜೀವನ ಕ್ರಮದಲ್ಲಿ ನಮ್ಮ ನಿತ್ಯ ಅನುಷ್ಠಾನಗಳು ಮತ್ತು ವೈದಿಕ ಕಾರ್ಯಗಳ ಬಗ್ಗೆ ತಿಳುವಳಿಕೆಗಳು ಮರೆಯಾಗುತ್ತಿದೆ. ಇದರ ಬಗ್ಗೆ ಸರಿಯಾದ ಜ್ಞಾನವನ್ನು ಪಡೆಯುವುದು ಮತ್ತು ಅದನ್ನು ಮುಂದಿನ ಪೀಳಿಗೆಗೆ ಸರಿಯಾದ ರೀತಿಯಲ್ಲಿ ರವಾನಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲೆ ಇದೆ. ಹಾಗಾಗಿ ನಮ್ಮ ವ್ಯಾವಹಾರಿಕ ಸಮಯದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ವಾರದಲ್ಲಿ ಎರಡರಿಂದ ಮೂರು ಗಂಟೆ ಸಮಯವನ್ನು ಇದಕ್ಕೆ ಮೀಸಲಿಡುವ ನಿರ್ಧಾರ ಮಾಡೋಣ ಹಾಗೂ ನಿತ್ಯ ಅಭ್ಯಾಸ ಮಾಡುವ ಪ್ರಯತ್ನ ಮಾಡೋಣ. ಈ ಪರಿಸರದಲ್ಲಿ ಇರುವ ಎಲ್ಲರೂ ಸಂಕೋಚ ಬಿಟ್ಟು ಈ ದೃಷ್ಟಿಯಿಂದ ಯೋಚಿಸಿದರೆ ನಮ್ಮ ಸಮಾಜವನ್ನು ಸಾತ್ವಿಕವಾಗಿ ಮುನ್ನಡೆಸುವ ಜವಾಬ್ದಾರಿಗೆ ಹೆಗಲು ಕೊಟ್ಟಂತಾಗುತ್ತದೆ. ನಮ್ಮ ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲೆ ಇರುವುದರಿಂದ ಅನುಷ್ಠಾನಗಳನ್ನು ಮುಂದುವರಿಸುವುದು ಇಂದಿನ ಅಗತ್ಯತೆಯಾಗಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಆಸಕ್ತಿಯನ್ನು ತೋರಿಸುವ ಅವಶ್ಯಕತೆ ಇದೆ. ಅದಕ್ಕಾಗಿ ನಮ್ಮದೊಂದು ಸಣ್ಣ ಪ್ರಯತ್ನ.

ಹೇಗೆ ನಮ್ಮ ಕರಾಡ ಭಜನಾ ಸಂಜೆಯಲ್ಲಿ, ಭವಂತಡಿಯಲ್ಲಿ ನಾವು ಉತ್ಸಾಹದಿಂದ ಪಾಲ್ಗೊಳ್ಳುತ್ತೇವೆಯೋ ಅದೇ ಆಸಕ್ತಿ ಉತ್ಸಾಹದಿಂದ ವೇದಪಾಠ ತರಗತಿಗೆ ಬಂದು ಸೇರಿ ಸಂಪೂರ್ಣಗೊಳಿಸಿ ಹೊಸ ಭವಿಷ್ಯ ಬರೆಯುವ ಪ್ರಯತ್ನ ಮಾಡೋಣ.

ಈ ವರುಷ ಪ್ರಾರಂಭವಾಗಲಿರುವ ಈ ವೇದ ಪಾಠ ನಿರಂತರತೆಯನ್ನು ಕಾಣಲಿ. ಸಂಧ್ಯಾವಂದನೆ ದೇವಪೂಜೆ, ಗಣಪತಿ ಹೋಮ, ದುರ್ಗಾ ಪೂಜೆ, ರುದ್ರ ಪಾರಾಯಣ ಸೂಕ್ತಗಳು, ಪಂಚಾಂಗ ನೋಡುವುದು ಇನ್ನೂ ಕೆಲವು ಅಗತ್ಯ ತಿಳಿದರಬೇಕಾದಂತಹ ವಿಷಯಗಳನ್ನು ತಿಳಿಯುವ ಪ್ರಯತ್ನ ಮಾಡೋಣ. ಮುಂದಿನ ಪೀಳಿಗೆಗೆ ಆದಷ್ಟು ಗುಣಾತ್ಮಕ ಸಂದೇಶಗಳನ್ನು, ಕರ್ಮಾನುಷ್ಠಾನದ ಅವಶ್ಯಕತೆಯನ್ನು ತಿಳಿಸುವ ಪ್ರಯತ್ನದಲ್ಲಿ ಕೈಜೋಡಿಸೋಣ.

ನಮ್ಮ ಸಂಸ್ಕೃತಿ, ನಮ್ಮ ಸಮಾಜ ಮತ್ತು ನಮ್ಮ ಸಂಘಟನೆ ಎಂಬ ಸಂಕಲ್ಪ ದೊಂದಿಗೆ

ಯುವ ಕರಾಡ, ಬೆಂಗಳೂರು

Application form link : CLICK HERE