Monday 16 November 2020

ದೀಪಾವಳಿ: ಕತ್ತಲೆಯಿಂದ ಬೆಳಕಿನೆಡೆಗೆ

 ‘ತಮಸೋ ಮಾ ಜ್ಯೋರ್ತಿಗಮಯ’ – ‘ಕತ್ತಲೆಯಿಂದ, ಅಜ್ಞಾನದಿಂದ ನನ್ನನ್ನು ಬೆಳಕಿನೆಡೆಗೆ, ಜ್ಞಾನದೆಡೆಗೆ ಕರೆದುಕೊಂಡು ಹೋಗು’ ಎಂದು ಸಾವಿರಾರು ವರ್ಷಗಳ ಹಿಂದೆ ಭಗವಂತನನ್ನು ಋಷಿ-ಮುನಿಗಳು ಪ್ರಾರ್ಥಿಸಿದ್ದಾರೆ. ನಮ್ಮ ಹಿರಿಯರು ಮಾಡಿರುವ ಹಬ್ಬಗಳ ಹಿಂದೆ ಆಳವಾದ ತಾತ್ವಿಕ ರಹಸ್ಯಗಳಿವೆ. ಅದನ್ನು ನಾವು ತಿಳಿಯಬೇಕಷ್ಟೇ. ಪೌರಾಣಿಕ, ವೈಜ್ಞಾನಿಕ, ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಿನ್ನಲೆಗಳನ್ನು ನಮ್ಮ ಹಬ್ಬಗಳು ಒಳ ಗೊಂಡಿವೆ. ಅಲ್ಲದೆ ಹಬ್ಬಗಳಲ್ಲಿನ ಆಚಾರ-ವಿಚಾರಗಳು ಋತುಧರ್ಮಕ್ಕೆ ಅನುಗುಣವಾಗಿದೆ. ದೇಹದ ಆರೋಗ್ಯಕ್ಕೆ ಹೊಂದುವಂತಹವು. ನಮ್ಮ ಹಬ್ಬಗಳಲ್ಲಿ ವೈವಿಧ್ಯತೆಯಿದೆ.

ಆಚರಣೆಗಳಿಗೆ ಅನುಗುಣವಾಗಿ ದೀಪಾವಳಿ ಹಬ್ಬವನ್ನು ಸುಖರಾತ್ರಿ, ಯಕ್ಷರಾತ್ರಿ, ಸುಖಸುಪ್ತಿಕಾ, ಕೌಮುದೀ ಮಹೋತ್ಸವ, ಭಗಿನೀದ್ವಿತೀಯಾ, ಸೋದ ರಬಿದಿಗೆ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ.

ಉಪಶಮಿತ ಮೇಘನಾದಂ ಪ್ರಜ್ವಲಿತ ದಶಾನನಂ ರಮಿತರಾಮಮ್ |

ರಾಮಾಯಣಮಿವ ಸುಭಗಂ ದೀಪದಿನಂ ಹರತು ಮೇ ದುರಿತಮ್ ||

‘ರಾಮಾಯಣದಲ್ಲಿ ಮೇಘನಾದನು (ಇಂದ್ರಜಿತ್) ಶಾಂತನಾಗುವಂತೆ ಈ ದೀಪಾವಳಿ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗುತ್ತದೆ. ರಾಮಾಯಣದಲ್ಲಿ ದಶಮುಖ ರಾವಣನನ್ನು ಸುಡಲ್ಪ ಡುವಂತೆ (ನಾಶ), ಇದರಲ್ಲಿ ದಶೆ (ಬತ್ತಿ)ಗಳು ಮುಖವು (ಹಣತೆಗಳ ಮೂಲಕ) ಉರಿಸಲ್ಪಡುತ್ತವೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿ ಮಹೋತ್ಸವವು ದಿನವೂ ನಮ್ಮ ನಿಮ್ಮೆಲ್ಲರ ಪಾಪಗಳನ್ನು ಹೋಗಲಾಡಿಸಲಿ.’

ಅಂದರೆ ನಮ್ಮಲ್ಲಿರುವ ಅಜ್ಞಾನ, ಅರಿಷಡ್ವರ್ಗಗಳು ನಾಶವಾಗಿ, ಸಾತ್ವಿಕರು, ಜ್ಞಾನಿಗಳು ಆಗುವಂತೆ ದೀಪಾವಳಿ ಹಬ್ಬವು ನಮಗೆ ನೆರವನ್ನು ನೀಡಲಿ ಎಂದು ಈ ಹಬ್ಬದ ಆಶಯ.

ನರಕಚರ್ತುದಶಿ

ನರಕಾಸುರನು ಅನೇಕ ರಾಜರನ್ನು, ದೇವತೆಗಳನ್ನು ಗೆದ್ದು ಹದಿನಾರು ಸಾವಿರ ಸ್ತ್ರೀಯರನ್ನು ಸೆರೆಮನೆಯಲ್ಲಿ ಹಾಕಿದ್ದ. ಶ್ರೀಕೃಷ್ಣನು ನರಕಾಸುರನನ್ನು ಕೊಂದು ಅವರೆಲ್ಲರನ್ನು ಬಿಡುಗಡೆ ಮಾಡಿದನು. ಸ್ತ್ರೀಯರು ಮುಕ್ತರಾದ ಕಾರಣ ಶ್ರೀಕೃಷ್ಣನನ್ನು ಅರ್ಚಿಸಿ ದೀಪ ಬೆಳಗಿದರು ಎಂಬುದು ಪ್ರತೀತಿ. ಆ ದಿನದ ಸವಿನೆನಪಿಗಾಗಿ ನಾವು ನರಕಚತುರ್ದಶಿಯನ್ನು ಆಚರಿಸುತ್ತೇವೆ.

ಇನ್ನು ನಾವು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಾಗ, ಇದರಲ್ಲಿ ಗಹನವಾದ ಒಳಾರ್ಥವೂ ಇದೆ. ನರಕಾಸುರನೆಂದರೆ ನರಕಕ್ಕೆ ನಮ್ಮನ್ನು ಎಳೆದೊಯ್ಯುವ ರಾಕ್ಷಸೀಪ್ರವೃತ್ತಿ ಎಂದು. ರತ್ನಾಕರವರ್ಣಿಯು ಭರತೇಶವೈಭವದಲ್ಲಿ ‘ಹೊನ್ನು ಹೆಣ್ಣು ಮಣ್ಣು ಪಿಡಿದಾತ್ಮರೆಲ್ಲರೂ | ಮಣ್ಣು ಹಿಡಿದ ಲೋಹದಂತೆ’ ಎಂದು ಹೇಳುತ್ತಾನೆ. ನಾವು ನೈಜವಾಗಿ ದಿವ್ಯಾತ್ಮರಾಗಿದ್ದರೂ, ಅಜ್ಞಾನದ ಫಲವಾಗಿ ಅನೇಕ ಕಲ್ಮಶಗಳನ್ನು ಹೊಂದಿದ್ದೇವೆ. ಅದರಿಂದ ದುಃಖವನ್ನು ಅನುಭವಿಸುತ್ತಿದ್ದೇವೆ. ಅದನ್ನೇ ನರಕ ಎಂದು ಕರೆಯುತ್ತಾರೆ. ಕಲ್ಮಶಗಳು ಹೆಚ್ಚಾದಾಗ, ಮನುಷ್ಯ ದೇಹವನ್ನು ಹೊಂದಿದ್ದರೂ ರಾಕ್ಷಸೀಪ್ರವೃತ್ತಿಯನ್ನು ತೋರಿಸುತ್ತೇವೆ. ಆದ್ದರಿಂದ ನಾವು ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ, ಮಾಡಬಾರದ ಕೆಲಸಗಳನ್ನು ಮಾಡಿ ನರಕಕ್ಕೆ ಹೋಗುವುದು ಅಥವಾ ನರಕಯಾತನೆಯನ್ನು ಅನುಭವಿಸುವುದು ನಿಶ್ಚಿತ.

ಚತುರ್ದಶಿ ಎಂದರೆ ‘ವಿದ್ಯೆ’ ಎಂಬ ಅರ್ಥವಿದೆ. ಶಿಕ್ಷಣದ ಮೂಲಕ ನಿಜವಾದ ವಿದ್ಯೆಯನ್ನು ಪಡೆದಾಗ ನಾವು ಸುಸಂಸ್ಕೃತರಾಗುತ್ತೇವೆ. ಸುಸಂಸ್ಕೃತರಾಗಬೇಕಾದರೆ ನಮ್ಮಲ್ಲಿರುವ ಕೀಳುಮಟ್ಟದ ಸ್ವಭಾವಗಳನ್ನು ಬಿಡಬೇಕಾಗುತ್ತದೆ. ತಮಸ್ಸು ಮತ್ತು ರಜಸ್ಸನ್ನು ಬಿಟ್ಟು, ಸಾತ್ವಿಕ ಪುರುಷರಾದಾಗ ಮಾತ್ರ ನಾವು ನಿಜವಾದ ವಿದ್ಯಾವಂತರಾಗಲು ಸಾಧ್ಯ. ನಮ್ಮಲ್ಲಿರುವ ಆಸುರೀ ಗುಣಗಳನ್ನು ನಿರ್ಮೂಲನೆ ಮಾಡುತ್ತಾ, ಬ್ರಹ್ಮವಿದ್ಯೆಯನ್ನು ಪಡೆಯಬೇಕು ಎಂಬುದು ನರಕಚತುರ್ದಶಿಯ ಅಂತರ್ಗತ ಅರ್ಥವಾಗಿದೆ. ಹೊಸ ವಸ್ತ್ರಗಳನ್ನು ಧರಿಸಿ, ಹಣತೆಗಳನ್ನು ಹಚ್ಚಿ, ಪಟಾಕಿಗಳನ್ನು ಸಿಡಿಸುವುದರಲ್ಲಿ ನಮ್ಮ ದೀಪಾವಳಿಯ ಆಚರಣೆಯು ಮುಗಿಯದೆ, ನಿಜವಾದ ಅರ್ಥದಲ್ಲಿ ನಾವು ವಿದ್ಯಾವಂತರಾಗೋಣ. ಆಗ ನಿಜವಾದ ದೀಪಾವಳಿ ಹಬ್ಬದ ಆಚರಣೆಯಾಗುತ್ತದೆ.

ಹಲವು ಪೂಜೆಗಳು

ದೀಪಾವಳಿ ಹೆಸರೇ ಸೂಚಿಸುವಂತೆ ಇದು ದೀಪಗಳ ಹಬ್ಬ. ‘ದೀಪ + ಆವಳಿ’ – ಅಂದರೆ ದೀಪಗಳ ಸಾಲು ಎಂದು. ಅಂತಹ ದೀಪಗಳ ಪರಂಪರೆಯನ್ನು ಹೊಂದಿರುವುದರಿಂದ ಈ ಹಬ್ಬಕ್ಕೆ ಈ ನಾಮಧೇಯ. ಈ ಹಬ್ಬ ಒಂದು ದಿನದ ಆಚರಣೆಗೆ ಸೀಮಿತವಾಗಿಲ್ಲ. ನರಕಚತುರ್ದಶಿ, ಬಲಿಪಾಡ್ಯ, ಲಕ್ಷ್ಮೀಪೂಜೆ, ಕಾಳೀಪೂಜೆ, ಕುಬೇರಪೂಜೆ, ಯಮಧರ್ಮರಾಜನ ಪೂಜೆ, ಯಮುನಾಪೂಜೆ, ಇತ್ಯಾದಿ ಅನೇಕ ಪೂಜೆಗಳನ್ನು ದೀಪಾವಳಿ ಒಳಗೊಂಡಿದೆ.

CONTENT COPY RIGHT: https://www.prajavani.net/community/religion/deepavali-naraka-chaturdashi-celebrations-traditional-pooja-779056.html

ದಿನದ ಸೂಕ್ತಿ: ಬಲಿಪಾಡ್ಯಮಿ

 


ಅಶ್ವತ್ಥಾಮಾ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ ।
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ।।

ಇದರ ತಾತ್ಪರ್ಯ ಹೀಗೆ:

‘ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮ – ಇವರು ಏಳು ಜನರು ಚಿರಂಜೀವಿಗಳು.’

ಚಿರಂಜೀವಿಗಳು ಎಂದರೆ ಸಾವೇ ಇಲ್ಲದವರು. ಸಾವನ್ನು ಗೆಲ್ಲುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲವಷ್ಟೆ! ಹುಟ್ಟು ಇದ್ದಮೇಲೆ ಸಾವು ಇರಲೇಬೇಕು. ಆದರೆ ಏಳು ಜನರು ಸಾವನ್ನು ಗೆದ್ದಿದ್ದಾರೆ; ಅವರಿಗೆ ಸಾವೇ ಇಲ್ಲ – ಎನ್ನುವುದು ಪರಂಪರೆಯ ನಂಬಿಕೆ. ಈ ಏಳು ಜನರು ಯಾರೆಂಬುದನ್ನು ಮೇಲಿನ ಶ್ಲೋಕ ಪಟ್ಟಿಮಾಡಿ ಹೇಳಿದೆ. ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮ – ಇವರೇ ಆ ಏಳು ಚಿರಂಜೀವಿಗಳು.

ಚಿರಂಜೀವಿಗಳೆಂದು ಗುರುತಿಸಲ್ಪಟ್ಟಿರುವ ಏಳು ಜನರೂ ಪುರಾಣವ್ಯಕ್ತಿಗಳು; ಬಲಿಯನ್ನು ಹೊರತು ಪಡಿಸಿದರೆ, ಉಳಿದ ಅಷ್ಟು ಮಂದಿಯೂ ರಾಮಾಯಣ ಮತ್ತು ಮಹಾಭಾರತಗಳಲ್ಲಿರುವ ಪ್ರಮುಖ ಪಾತ್ರಗಳು ಎನ್ನಬಹುದು; ಬಲಿಯ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದ್ದರೂ ಬೇರೆ ಪುರಾಣಗಳಲ್ಲಿಯೇ ಹೆಚ್ಚಿನ ವಿವರಗಳು ಸಿಗುವುದು. ಈ ಏಳು ಜನರಿಗೆ ಚಿರಂಜೀವತ್ವ ಹೇಗೆ ದೊರೆಯಿತು ಎನ್ನುವುದು ಕೂಡ ಸ್ವಾರಸ್ಯಕರವಾಗಿದೆ. ಸದ್ಯಕ್ಕೆ ನಮಗೆ ಇಲ್ಲಿ ಪ್ರಸ್ತುತ ವ್ಯಕ್ತಿ ಎಂದರೆ ಬಲಿ. 

ಬಲಿಯು ಪ್ರಹ್ಲಾದನ ಮೊಮ್ಮಗ; ವಿರೋಚನನ ಮಗ. ಇವನು ರಾಕ್ಷಸರಾಜ. ಇವನ ದಾನಬುದ್ಧಿ ಎಲ್ಲ ಲೋಕಗಳಲ್ಲೂ ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ ಅವನಿಗೆ ತನ್ನ ದಾನಶೀಲತೆಯ ಬಗ್ಗೆ ತುಂಬ ಹೆಮ್ಮೆಯೂ ಇತ್ತು. ಇವನ ಅಹಂಕಾರವನ್ನು ತಗ್ಗಿಸಲೆಂದೇ ಮಹಾವಿಷ್ಣು ಇವನಲ್ಲಿಗೆ ಬಂದ; ಆದರೆ ವಾಮನರೂಪದಲ್ಲಿ ಬಂದ; ಬಂದು ದಾನವನ್ನು ಬೇಡಿದ. ಪುಟ್ಟ ಆಕೃತಿಯ ಈ ಬಾಲಕ ಏನನ್ನು ತಾನೆ ಕೇಳಿಯಾನು – ಎಂಬ ಎಣಿಕೆ ಬಲಿಚಕ್ರವರ್ತಿಯದ್ದು. ಮೇಲ್ನೋಟಕ್ಕೆ ಸಣ್ಣ ಕೋರಿಕೆಯಾಗಿಯೇ ಕಾಣುವಂಥ ದಾನವನ್ನೇ ಕೇಳಿದ ವಾಮನ; ಮೂರು ಹೆಜ್ಜೆಗಳಷ್ಟು ಭೂಮಿ ಅವನು ಕೇಳಿದ ದಾನ. ಹುಚ್ಚ, ಇಷ್ಟೇ ಸಾಕೇ, ಬೇರೆ ಏನನ್ನಾದರೂ ಕೇಳಿಕೋ – ಎಂದ ಬಲಿ. ಆದರೆ ಮೂರು ಹೆಜ್ಜೆಗಳಷ್ಟು ಭೂಮಿಯನ್ನೇ ಅವನು ಕೊಡಲು ಸಾಧ್ಯವಾಗಲಿಲ್ಲ. ವಾಮನ ತ್ರಿವಿಕ್ರಮನಾಗಿ ಬೆಳೆದು, ಒಂದು ಹೆಜ್ಜೆಯಿಂದ ಭೂಮಿಯನ್ನೂ, ಮತ್ತೊಂದರಿಂದ ಆಗಸವನ್ನೂ ಅಳೆದುಬಿಟ್ಟ! ಮೂರನೆಯ ಹೆಜ್ಜೆಗೆ ಬಲಿಯ ತಲೆಯೇ ಸ್ಥಾನವಾಯಿತು. ವಿಷ್ಣು ಅವನನ್ನು ಮೆಟ್ಟಿ, ಪಾತಾಳಕ್ಕೆ ತಳ್ಳಿದ. ಆದರೂ ಅವನ ದಾನಬುದ್ಧಿಯಿಂದ ಪ್ರಸನ್ನನಾಗಿ ಅವನಿಗೆ ಚಿರಂಜೀವಿಯಾಗಿರು ಎಂದು ಹರಸಿದ; ಮಾತ್ರವಲ್ಲ, ವರ್ಷಕ್ಕೊಮ್ಮೆ ಅವನು ತನ್ನ ರಾಜ್ಯವಾದ ಈ ಭೂಲೋಕಕ್ಕೆ ಬಂದುಹೋಗುವ ಅವಕಾಶವನ್ನೂ ಒದಗಿಸಿದ.

ಇಂದು ಬಲಿಪಾಡ್ಯಮಿ. ನಾವೆಲ್ಲರೂ ಬಲಿಯನ್ನು ಸ್ವಾಗತಿಸುವ ದಿನ. ಜೊತೆಗೆ ಅವನಿಂದ ಪಾಠವನ್ನು ಕಲಿಯುವ ಸಮಯ ಕೂಡ. ನಮ್ಮ ಗುಣಗಳ ಬಗ್ಗೆಯೂ ನಾವು ಎಚ್ಚರದಿಂದ ಇರಬೇಕು. ದುಡುಕಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಅಹಂಕಾರ ನಮ್ಮನ್ನು ಸವಾರಿಮಾಡತೊಡಗಿದರೆ ನಮ್ಮ ಗುಣಗಳೇ ನಮ್ಮ ಶತ್ರುಗಳೂ ಆಗಬಹುದು. ಎಲ್ಲ ಗುಣಗಳಲ್ಲೂ ಮಹಾಗುಣ ಎಂದರೆ ವಿನಯವೇ. ಇದನ್ನು ನಾವು ಮರೆಯಬಾರದು.

content copy right: https://www.prajavani.net/community/religion/balipadyami-deepavali-festival-religion-god-spiritual-morality-779481.html

ದಿನದ ಸೂಕ್ತಿ: ಲಕ್ಷ್ಮೀಪೂಜೆ

ಪರಸ್ಪರವಿರೋಧಿನ್ಯೋರೇಕಸಂಶ್ರಯದುರ್ಲಭಮ್‌

ಸಂಗತಂ ಶ್ರೀಸರಸ್ವತ್ಯೋರ್ಭೂತಯೇsಸ್ತು ಸದಾ ಸತಾಮ್‌ ।।

ಇದರ ತಾತ್ಪರ್ಯ ಹೀಗೆ:

‘ಲಕ್ಷ್ಮಿಯೂ ಸರಸ್ವತಿಯೂ ಒಂದು ಕಡೆ ಇರುವುದು ವಿರಳ. ಅವರಿಬ್ಬರೂ ವಿರೋಧವಿಲ್ಲದೆ ಯಾವಾಗಲೂ ಸಜ್ಜನರಲ್ಲಿ ಇರಲಿ ಎಂದು ಆಶಿಸುತ್ತೇನೆ.’

ಇಂದು ದೀಪಾವಳಿಯ ಎರಡನೆಯ ದಿನ; ಲಕ್ಷ್ಮಿಯನ್ನು ಪೂಜಿಸುವ ದಿನ. ಈ ಸಂದರ್ಭದಲ್ಲಿ  ಕಾಳಿದಾಸ ಮಹಾಕವಿಯ ಈ ಶ್ಲೋಕದ ಅನುಸಂಧಾನ ಅರ್ಥಪೂರ್ಣವಾಗುತ್ತದೆ.

ನಮ್ಮ ಸಮಾಜದಲ್ಲಿ ಇರುವ ನಂಬಿಕೆಯೊಂದನ್ನೇ ಮಹಾಕವಿ ಇಲ್ಲಿ ಹೇಳುತ್ತಿರುವುದು ಸ್ಪಷ್ಟ. ಲಕ್ಷ್ಮಿ ಮತ್ತು ಸರಸ್ವತಿ – ಈ ಇಬ್ಬರೂ ಒಂದೇ ಸ್ಥಳದಲ್ಲಿ ಇರುವುದಿಲ್ಲ ಎಂಬ ನಂಬಿಕೆ ಇದೆಯಷ್ಟೆ. ಎಂದರೆ ದುಡ್ಡು ಮತ್ತು ವಿದ್ಯೆ – ಇವೆರಡೂ ಒಂದು ಸ್ಥಳದಲ್ಲಿ ಅಥವಾ ಒಬ್ಬ ವ್ಯಕ್ತಿಯಲ್ಲಿ ಇರುವುದಿಲ್ಲ ಎಂಬುದು ಇದರ ತಾತ್ಪರ್ಯ. ಈ ನಂಬಿಕೆ ದಿಟವೋ ಸಟೆಯೋ – ಅದು ಬೇರೆ ಮಾತು. ಅದರೆ ಇಂಥದೊಂದು ನಂಬಿಕೆ ಜನರಲ್ಲಿ ಇದೆ ಎನ್ನುವುದಂತೂ ನಿಜ. ಇಂಥದೊಂದು ನಂಬಿಕೆಗೆ ಕಾರಣವಾದರೂ ಏನು – ಎಂಬ ಪ್ರಶ್ನೆ ಬರದೇ ಇರದು. ಕಾರಣ ಏನಾದರೂ ಇರಲಿ; ಒಂದನ್ನಂತೂ ಊಹಿಸಬಹುದು. ಅದೆಂದರೆ, ದುಡ್ಡನ್ನು ಸಂಪಾದಿಸಲು ಬೇಕಾದ ಮಾನಸಿಕತೆ ಮತ್ತು ಸಾಧನೆ–ಸಲಕರಣೆಗಳು ಬೇರೆ, ವಿದ್ಯೆಯನ್ನು ಸಂಪಾದಿಸಲು ಬೇಕಾದ ಮಾನಸಿಕತೆ ಮತ್ತು ಸಾಧನೆ–ಸಲಕರಣೆಗಳು ಬೇರೆ. ದುಡ್ಡಿನಲ್ಲಿಯೇ ಸಂತೋಷ ಇದೆ ಎಂದುಕೊಳ್ಳುವವರು ವಿದ್ಯೆಯ ಕಡೆಗೆ ಮುಖಮಾಡುವುದು ಕಡಿಮೆ; ಹೀಗೆಯೇ ಕಲಿಕೆಯಲ್ಲಿಯೇ ಸಂತೋಷವನ್ನು ಕಂಡುಕೊಂಡವರು ದುಡ್ಡಿನ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳುವುದು ಕಡಿಮೆ.

ಲಕ್ಷ್ಮಿ ಮತ್ತು ಸರಸ್ವತಿಗಳ ಈ ವಿಮುಖತೆಗೆ ಇನ್ನೂ ಹಲವು ಕಾರಣಗಳು ಇವೆಯೆನ್ನಿ! ಆದರೆ ಇವರಿಬ್ಬರೂ ಒಂದೆಡೆ ಇರಲೇ ಬಾರದು ಎಂದೇನೂ ಇಲ್ಲವಷ್ಟೆ. ಮಹಾಕವಿ ಅಂಥ ಸಂಗಮ ಸಾಧ್ಯವಾಗಲಿ ಎಂದು ಆಶಿಸುತ್ತಿದ್ದಾನೆ; ಆದರೆ ಸಜ್ಜನರಲ್ಲಿ ಅಂಥ ಸಮಾಗಮವಾಗಲಿ ಎಂದು ಹಾರೈಸುತ್ತಿದ್ದಾನೆ. ಏಕೆಂದರೆ ವಿದ್ಯೆ ಅಥವಾ ದುಡ್ಡು – ಇವೆರಡರಲ್ಲಿ ಯಾವುದಾದರೂ ಒಂದೇ ಇದ್ದರೂ ಸಾಕು, ಆ ವ್ಯಕ್ತಿಯ ತಲೆ ಕೆಡಿಸಲು; ಇನ್ನು ಎರಡೂ ಇದ್ದರೆ ಏನು ಹೇಳುವುದು? ಹೀಗಾಗಿಯೇ ಇವೆರಡೂ ಸಜ್ಜನರಲ್ಲಿ ಮಾತ್ರವೇ ಒಂದಾಗಿ ನೆಲಸಲಿ ಎಂದು ಕವಿ ಆಶಿಸಿರುವುದು.

ಆದರೆ ಇಲ್ಲಿ ಇನ್ನೊಂದು ವಿಷಯವನ್ನು ಕೂಡ ಗಮನಿಸಬೇಕು. ನಾವು ಲಕ್ಷ್ಮಿ ಮತ್ತು ಸರಸ್ವತಿಯನ್ನು ಬೇರೆ ಬೇರೆ ಎಂದು ಗ್ರಹಿಸುತ್ತಿರುವುದರಲ್ಲಿಯೇ ಸಮಸ್ಯೆ ಇದೆ. ಲಕ್ಷ್ಮಿ ಎಂದರೆ ವಿದ್ಯೆಯೂ ಹೌದು, ಸರಸ್ವತಿ ಎಂದರೆ ಸಂಪತ್ತೂ ಹೌದು. ಇದನ್ನು ಮನಗಂಡು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಇದೇ ನಿಜವಾದ ಲಕ್ಷ್ಮೀಪೂಜೆ.

Content From: https://www.prajavani.net/community/motivation/laxmi-pooja-a-religious-performance-during-deepavali-festival-779252.html

Thursday 16 July 2020

CONGRATULATIONS ROHITH PARADKAR


ರೋಹಿತ್ ಪರಾಡ್ಕರ್ - ಯರ್ಫಲೆ ಸುಬ್ಬಣ್ಣ ನವರ ಪುತ್ರ ,ದ್ವಿತೀಯ ಪಿಯುಸಿಯಲ್ಲಿ ನೂರಕ್ಕೆ 97 ಕ್ಕೂ ಅಧಿಕ ಅಂಕಗಳೊಂದಿಗೆ  ಅತ್ಯುತ್ತಮ ಸಾಧನೆ ಮಾಡಿದ್ದಾನೆ. ಪಠ್ಯ ಕ್ರಮಗಳ ಜೊತೆಗೆ, ತಬಲ,ಹಾಡುಗಾರಿಕೆ , ಭಜನೆ ಯಂತಹ  ಪಠ್ಯೇತರ ಚಟುವಟಿಕೆಗಳಲ್ಲೂ ಪರಿಣಿತನಾಗಿದ್ದಾನೆ . ಅಭಿನಂದನೆಗಳು ರೋಹಿತ್. ಶುಭವಾಗಲಿ. 💐🙏

CONGRATULATIONS ANKITHA BHAT

Wednesday 15 July 2020

CONGRATULATIONS NIDHISHREE M.A

ಬಹಳ ಅನುರೂಪ ನಮ್ಮ ಅನೂಪ : ಪಿಯುಸಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಮಟ್ಟದಲ್ಲಿ 8ನೇ ರ್ಯಾಂಕ್ ಗಳಿಸಿದ ಬಹುಮುಖಿ ಪ್ರತಿಭೆ: ಗಡಿನಾಡ ಕನ್ನಡಿಗರ ಕಣ್ಮಣಿ ಈತ ಅನೂಪ್ ಸ್ವರ್ಗ


ಕಾಸರಗೋಡು, ಜು.14: ಭಾಗವತ, ಮದ್ದಳೆಗಾರ, ಚೆಂಡೆವಾದಕ. ಹೀಗೆ ಕಲಾ ವಲಯದಲ್ಲಿ ಸರ್ವಾಂಗೀಣವಾಗಿ ತೊಡಗಿಕೊಂಡು, ಸಂಘಟಕ,  ವಾಗ್ಮಿ....ಮೊದಲಾಗಿಯೂ ಕಾಣಿಸಿಕೊಂಡು ಜನಮಾನಸದಲ್ಲಿ ಶಾಶ್ವತ ಸ್ಥಾನಪಡೆಯುತ್ತಿರುವ ಅನೂಪ್ ಸ್ವರ್ಗ ಈಗ ಶಿಕ್ಷಣ ಕ್ಷೇತ್ರದಲ್ಲೂ ಅತ್ಯುನ್ನತ ಸಾಧನೆ ನಡೆಸಿ ಗಡಿನಾಡು ಕಾಸರಗೋಡಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಪಿಯುಸಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದಲ್ಲೇ ಇವರು 8 ನೇ ರಾ ಯಂಕ್ ಪಡೆದಿದ್ದಾರೆ.

ಇವರುಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ. ಪೆರ್ಲ ಬಳಿಯ ಸ್ವರ್ಗ ಪ್ರದೇಶದ ಸುಸಂಸ್ಕೃತ ಕುಟುಂಬದಲ್ಲಿ , ಕಲಾವಿದ, ಸಂಘಟಕ ವಿವೇಕ ಸ್ವರ್ಗ ದಂಪತಿಯ ಪುತ್ರರಾಗಿ ಜನಿಸಿರುವ ಅನೂಪ್ ಎಳವೆಯಿಂದಲೇ ಕಲೆ ಮತ್ತು ಕಲಿಕೆಗಳಲ್ಲಿ ಸದಾ ಮುಂದು. ಚಿಕ್ಕ ಪ್ರಾಯದಲ್ಲೇ ಮದ್ದಳೆಚೆಂಡೆ ವಾದಕರಾಗಿ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವ ಅನೂಪ್ ಕ್ರಮೇಣ ಭಾಗವತಿಕೆಯನ್ನೂ ಅಭ್ಯಸಿಸಿ ಈ ರಂಗದಲ್ಲಿ ಯತ್ನ ಮುಂದುವರಿಸುತ್ತಿದ್ದಾರೆ. ಈ ಹಂತದಲ್ಲಿ ಹಿರಿಯ ಸಾಧಕ ಡಾ.ಸತೀಶ ಪುಣಿಂಚತ್ತಾಯ ಪೆರ್ಲ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಪಳಗಿರುವ ಈ ಪ್ರತಿಭೆ ಅನೇಕ ಆಟಕೂಟ- ಗಾನವೈಭವಗಳಲ್ಲಿ ಹಿಮ್ಮೇಳ ವಾದಕರಾಗಿ ಮಿಂಚಿದವರು. ತೆಂಕು ತಿಟ್ಟಿನ ಬಹುತೇಕ ಹಿರಿಯ ಭಾಗವತರಿಗೆ ಸಾಥಿ ನೀಡುವಷ್ಟು ಪಳಗಿದವರು. ವಿನೂತನ ಸಾಧನೆಯಾಗಿರುವ "ಏಕವ್ಯಕ್ತಿ ಯಕ್ಷಗಾನ ಹಿಮ್ಮೇಳ"ವನ್ನು ನಡೆಸುವ ಮೂಲಕ ಈ ಕ್ಷೇತ್ರಕ್ಕೊಂದು ಹೊಸ ಬೆಳಕನ್ನು ನೀಡಿದ ಇವರು ಆ ಸಾಧನೆಯಲ್ಲೂ ಸತತ ಪ್ರಯತ್ನದಲ್ಲಿ ತೊಡಗಿಕೊಂಡವರು. ಯಕ್ಷಗಾನದ ಇಂದು ಮತ್ತು ನಾಳೆಗೆ ಭದ್ರಭವಿಷ್ಯವಾಗಿ ಬೆಳೆಯುತ್ತಿದ್ದಾರೆ. 

ಯಕ್ಷಗಾನೀಯ ಸಂಘಟನೆಗಳಾದ ಯಕ್ಷ ಸ್ನೇಹಿ ಬಳಗೆ ಪೆರ್ಲ ಮತ್ತು ಶೇಣಿ ರಂಗಜಂಗಮ ಟ್ರಸ್ಟ್ (ರಿ) ಕಾಸರಗೋಡು ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಅವಿಆಭಾವದ ದುಡಿಮೆ ನಡೆಸುತ್ತಿದ್ದಾರೆ. ವಿನೂತನ ಡಿಜಿಟಲ್ ಮಾಧ್ಯಮಗಳಾದ "ಯಕ್ಷಾಂತರಂಗ" ಯೂಟ್ಯೂಬ್ ಚಾನೆಲ್ ಮತ್ತು "ನ್ಯೂಸ್ ಕಾಸರಗೋಡು 247" ಆರಂಭಗೊಂಡ ಹಂತದಲ್ಲೂ ಸಕ್ರಿ ಸಮಕ್ಷ ಹೊಂದಿದ್ದಾರೆ. 

ಎಲ್ಲವನ್ನೂ ಮೀರಿ ಯಕ್ಷಗಾನ ವಲಯದಲ್ಲಿ ಆಸಕ್ತಿ ಹೊಂದಿದರೆ ನಮ್ಮ ಮಕ್ಕಳು ಶಿಕ್ಷಣದಲ್ಲಿ ಹಿಂದೆ ಬೀಳುವರೋ ಎಂದು ಕೆಲವು ಹೆತ್ತವರು ಆತಂಕ ತಳೆಯುವುದು ಕೆಲವೆಡೆ ಕಂಡುಬರುತ್ತಿದೆ. ಅದಕ್ಕೆ ಕ್ರಿಯಾತ್ಮಕ ಉತ್ತರವಾಗಿ ಅನೇಕ ವಿದ್ಯಾರ್ಥಿಗಳು ಶಿಕ್ಷಣದಲ್ಲೂ ಮುನ್ನಡೆ ಸಾಧಿಸಿ, ಯಕ್ಷಾನದಲ್ಲೂ ಭರವಸೆ ನೀಡಿರುವ ನಿದರ್ಶನಗಳು ನಮ್ಮ ನಾಡಿನಲ್ಲೇ ಇದೆ. ಆ ಸಾಲಿಗೆ ಸಮರ್ಥವಾಗಿ ಅನೂಪ್ ಸೇರಿದ್ದಾರೆ. ತಮ್ಮ ಶೈಕ್ಷಣಿಕ ಸಾಧನೆ ಮೂಲಕ ಕಾಸರಗೋಡೂ ಸೇರಿದಂತೆ ಕನ್ನಡ ನಾಡಿಗೆ ಅನೂಪ್ ಸ್ವರ್ಗ ನಿಜ ಸ್ವರ್ಗ ಸುಖವನ್ನು ನೀಡಿದ್ದಾರೆ. 

ಅನೂಪ್ ನ ಈ ಸಾಧನೆಯಲ್ಲಿ "ನ್ಯೂಸ್ ಕಾಸರಗೋಡು 247" ಪ್ರಿಯ ಓದುಗರೊಂದಿಗೆ ಈ ಸಂತೋಷವನ್ನು ಹಂಚಿಕೊಳ್ಳುತ್ತಿದೆ. ಅನೂಪ್ ರಿಗೆ ಪ್ರೀತಿಯ ಶುಭ ಹಾರೈಕೆಗಳು. ಅನೂಪ್ನ ಸಾಧನೆಯ ಹಿಂದಿನ ಶಕ್ತಿಯಾದ ಆತನ ಹೆತ್ತವರಿಗೆ ಸಾಷ್ಟಾಂಗ ಪ್ರಣಾಮ.

Source: http://www.newskasaragod247.com/2020/07/8.html

Sunday 3 May 2020

ಕಲಿಕೆಗೆ ಹೊಸ ದಿಕ್ಕು ತೋರುವ ದೀಕ್ಷಾ ಆಪ್


"ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ" "knowledge is power" "ನಹಿ ಜ್ಞಾನೇನ ಸದೃಶಂ " "ವಿದ್ಯಾ ವಿಹೀನಾಂ ಪಶುಃ" ಮುಂತಾದ ನುಡಿಮುತ್ತುಗಳು ಜ್ಞಾನದ ಮಹತ್ವ ತಿಳಿಸುತ್ತವೆ  ಹಿಂದಿನ ಕಾಲದ ಶಿಕ್ಷಕರು  ವಿದ್ಯಾರ್ಥಿಗಳಿಗೆ  ವಿದ್ಯೆಯನ್ನು ಕಲಿಸಲು ಮರಳಿನ ಮೇಲೆ ಬರೆಯುತ್ತಿದ್ದರು ಕ್ರಮೇಣ ಸ್ಲೇಟ್ ಬಳಪ ,ಪೆನ್ ಪೆನ್ಸಿಲ್ ಪುಸ್ತಕಗಳನ್ನು ಬಳಸಿ ವಿದ್ಯೆಯನ್ನು ಕಲಿಸುತ್ತಿದ್ದರು ಕ್ರಮೇಣ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಆದಂತೆ ಕಲಿಸುವ ಕಲಿಯುವ ಪ್ರಕ್ರಿಯೆಯು ಡಿಜಿಟಲ್ ಆಗಿ‌ ಕಲಿಕೆ ಹೆಚ್ಚು ಆಸಕ್ತಿದಾಯಕ ಮತ್ತು ಮನರಂಜನೀಯವಾಗಿದೆ. ಈಗೆ ದೇಶದ ಎಲ್ಲಾ ಶಿಕ್ಷಕರು, ಮಕ್ಕಳು ಮತ್ತು ಪೋಷಕರ ಪಾಲಿಗೆ ಉಚಿತವಾಗಿ ಡಿಜಿಟಲ್‌ ಶಿಕ್ಷಣ ನೀಡುವ ಆಪ್ ಎಂದರೆ ದೀಕ್ಷ (DIKSHA)
DIKSHA ಎಂದರೆ DIGITAL INITIATION FOR KNOWLEDGE SHARING ಎಂದರ್ಥ ಅಂದರೆ ಡಿಜಿಟಲ್ ರೂಪದಲ್ಲಿ ಜ್ಞಾನವನ್ನು ಎಲ್ಲಾ ಕಡೆ ಹಂಚುವ ಒಂದು ಉಪಕ್ರಮ.


'ನಮ್ಮ ಶಿಕ್ಷಕರು ನಮ್ಮ ನಾಯಕರು '  ಎಂಬ ಅಡಿಬರಹದಲ್ಲಿ ಮೂಡಿಬಂದಿರುವ   ಈ ಆಪ್ ಕಲಿಯಲು ಮತ್ತು ಕಲಿಸಲು ಬಹುಪಯೋಗಿ.  ಈ ಉಪಕ್ರಮವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಬೆಂಬಲಿಸುತ್ತದೆ ಮತ್ತು ಭಾರತದಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ನೇತೃತ್ವದಲ್ಲಿದೆ.ದೀಕ್ಷಾ ಭಾರತದ ರಾಷ್ಟ್ರೀಯ ಡಿಜಿಟಲ್ ಮೂಲಸೌಕರ್ಯವಾಗಿದೆ.

 ಇದು  ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ನಿಗದಿತ ಶಾಲಾ ಪಠ್ಯಕ್ರಮಕ್ಕೆ ಸಂಬಂಧಿಸಿದ ಕಲಿಕಾ ಸಾಮಗ್ರಿಗಳನ್ನು ಮಕ್ಕಳು ಬಳಸುವ ಕ್ರಮಕ್ಕೆ ಪೂರಕವಾಗಿ ಬಳಸಬಹುದು.  ತರಗತಿಯ  ಶಿಕ್ಷಕರಿಗೆ ಪಾಠ ಯೋಜನೆಗಳು, ವರ್ಕ್‌ಶೀಟ್‌ಗಳು ಮತ್ತು ಚಟುವಟಿಕೆಗಳಂತಹ ಸಾಧನಗಳನ್ನು ಕ್ರಮಬದ್ಧವಾಗಿ ಬಳಸಲು ಸಹಕಾರಿ. ವಿದ್ಯಾರ್ಥಿಗಳು ವಿವಿಧ ವಿಷಯಗಳ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು, ಪಾಠಗಳನ್ನು ಕಲಿಯಲು, ಮತ್ತು ದೃಕ್-ಶ್ರವಣ  ಅಭ್ಯಾಸ ಚಟುವಟಿಕೆಗಳನ್ನು ಮಾಡುವ ಮೂಲಕ ಚೆನ್ನಾಗಿ ಕಲಿಯಲು ಉಪಯುಕ್ತವಾದ ಮಾದ್ಯಮ. ಪಾಲಕರು ತರಗತಿಯ ಚಟುವಟಿಕೆಗಳನ್ನು ಗಮನಿಸಿ ಅವರ ಮಕ್ಕಳಿಗೆ ಬರುವ ಅನುಮಾನಗಳನ್ನು ಪರಿಹರಿಸಲು ಈ ಆಪ್ ಮಾರ್ಗದರ್ಶನ ನೀಡುತ್ತದೆ.

  ದೀಕ್ಷಾ ಅಪ್ಲಿಕೇಶನ್ ಮುಖ್ಯಾಂಶಗಳು

 ಭಾರತದ ವಿವಿಯ ಭಾಗದ  ಶಿಕ್ಷಕರು ಒಂದರಿಂದ ಹತ್ತನೇ ತರಗತಿಯ  ವಿವಿಧ ಪಠ್ಯಕ್ರಮದ ವಿವಿಧ ಮಾಧ್ಯಮ ಬಹುತೇಕ ಎಲ್ಲಾ ವಿಷಯಗಳ ಸಿದ್ದ ಸಂಪನ್ಮೂಲಗಳನ್ನು ಉಚಿತವಾಗಿ ನೀಡುವ ಒಂದು ತಾಣವೆ ದೀಕ್ಷಾ.
 ಪಠ್ಯಪುಸ್ತಕಗಳಿಂದ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಮತ್ತು ವಿಷಯಕ್ಕೆ ಸಂಬಂಧಿಸಿದ ಹೆಚ್ಚುವರಿ ಕಲಿಕಾ ವಸ್ತುಗಳನ್ನು ಹುಡುಕಿ
 ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ವಿಷಯವನ್ನು ಆಫ್‌ಲೈನ್‌ನಲ್ಲಿ ಸಂಗ್ರಹಿಸಿ ಮತ್ತು ಹಂಚಿಕೊಳ್ಳಲು ಇದು ಬಹು ಉಪಯುಕ್ತ.ಶಾಲಾ ತರಗತಿಯಲ್ಲಿ ಕಲಿಸಿದ ವಿಷಯಗಳಿಗೆ ಸಂಬಂಧಿಸಿದ ಪಾಠಗಳು ಮತ್ತು ವರ್ಕ್‌ಶೀಟ್‌ಗಳನ್ನು ಮಕ್ಕಳು ಹುಡುಕಿ ಸ್ವಯಂ ಕಲಿಕೆ ಮತ್ತು ಸ್ವಯಂ ಮೌಲ್ಯಮಾಪನವನ್ನು ಮಾಡಿಕೊಳ್ಳಲು ಈ ಆಪ್ ಸಹಾಯಕವಾಗುತ್ತದೆ.ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಅಥವಾ ಮರಾಠಿ ಹಾಗೂ ಇತರೆ ಪ್ರಾದೇಶಿಕ ಭಾಷೆಗಳಲ್ಲಿ ಅಪ್ಲಿಕೇಶನ್ ಲಬ್ಯವಿರುವುದರಿಂದ ಗ್ರಾಮೀಣ ನಗರ ಎಂಬ ಬೇಧವಿಲ್ಲದೆ ಎಲ್ಲರಿಗೆ ಎಲ್ಲೆಡೆ ಶಿಕ್ಷಣ ಎಂಬ ಧ್ಯೇಯವನ್ನು ಈ ಆಪ್ ಹೊಂದಿದೆ.ದೇಶದ ವಿವಿಧ ಭಾಗಗಳ ವಿವಿಧ ವಿಷಯಗಳ ತಜ್ಞ ಶಿಕ್ಷಕರು ರಚಿಸಿರುವ ಈ ಕಂಟೆಂಟ್   ಪಠ್ಯಕ್ಕೆ ಸಂಬಂದಿಸಿದಂತೆ ವೀಡಿಯೊಗಳು , ಪಠ್ಯ ಪುಸ್ತಕಗಳು, ಪಿಡಿಎಫ್ ಗಳು ಮುಂತಾದ ಸಂಪನ್ಮೂಲಗಳನ್ನು ಹೊಂದಿವೆ .

 ಶಿಕ್ಷಕರಿಗೆ ಅನುಕೂಲಗಳು

 ಈ ಆಪ್ ಸಹಾಯದಿಂದ ಶಿಕ್ಷಕರು ತರಗತಿಯನ್ನು ಆಸಕ್ತಿದಾಯಕವಾಗಿಸಲು ಸಂವಾದಾತ್ಮಕ ಮತ್ತು ಆಕರ್ಷಕವಾಗಿ ಬೋಧಿಸುವ ವಸ್ತುಗಳನ್ನು ಹುಡುಕಿ
 ಕ್ಲಿಷ್ಟಕರವಾದ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಲು ಇತರ ಶಿಕ್ಷಕರೊಂದಿಗೆ ಉತ್ತಮ ಅಭ್ಯಾಸಗಳನ್ನು ನೋಡಿ ಮತ್ತು ಹಂಚಿಕೊಳ್ಳಲು ಈ ಆಪ್ ವರದಾನವಾಗಿದೆ.
ಅವರ ವೃತ್ತಿಪರ ಅಭಿವೃದ್ಧಿಯನ್ನು ಹೆಚ್ಚಿಸಲು ಈ ಆಪ್ ಅನೇಕ ಆನ್ಲೈನ್ ಕೋರ್ಸ್ ಪರಿಚಯ ಮಾಡಿದೆ. ಆನ್ಲೈನ್  ಕೋರ್ಸ್‌ಗಳಿಗೆ ಸೇರಿ ಕೋರ್ಸ್ ಪೂರ್ಣಗೊಂಡ ನಂತರ ಬ್ಯಾಡ್ಜ್‌ಗಳು ಮತ್ತು ಪ್ರಮಾಣಪತ್ರಗಳನ್ನು ಪಡೆಯಬಹುದು.

 ಶಿಕ್ಷಕರು ಮಕ್ಕಳಿಗೆ ಕಲಿಸಿದ ವಿಷಯದ ಬಗ್ಗೆ  ವಿದ್ಯಾರ್ಥಿಗಳ ತಿಳುವಳಿಕೆಯನ್ನು ಪರೀಕ್ಷಿಸಲು ಡಿಜಿಟಲ್ ಮೌಲ್ಯಮಾಪನಗಳನ್ನು ನಡೆಸಲು ಇದು ಉಪಯುಕ್ತವಾದ ಆಪ್ ಆಗಿದೆ.

 ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನುಕೂಲಗಳು

ಈ ಆಪ್ ನಲ್ಲಿ ಎಲ್ಲಾ ಪಠ್ಯ ಪುಸ್ತಕಗಳು ಲಭ್ಯವಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರು ಬೇಕಾದ ಪಠ್ಯ ಪುಸ್ತಕಗಳನ್ನು ಒಮ್ಮೆ ಡೌನ್‌ಲೋಡ್ ಮಾಡಿಕೊಂಡು ಆಪ್ಲೈನ್ ನಲ್ಲಿ  ಬಳಸಬಹುದು.

 ತರಗತಿಯಲ್ಲಿ ಕಲಿತ  ಪಾಠಗಳನ್ನು ಸುಲಭವಾಗಿ ಮತ್ತೊಮ್ಮೆ ಮನನ ಮಾಡಿಕೊಂಡು, ಕಲಿಯಬಹುದು. ಪಠ್ಯಪುಸ್ತಕದಲ್ಲಿ ಇರುವ  ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಪೋಷಕರು ತಮ್ಮ ಮಕ್ಕಳು  ತರಗತಿಯಲ್ಲಿ ಕಲಿತ ಪಾಠಗಳನ್ನು ತಿಳಿಯಲು  ಕಷ್ಟಕರವಾದ ವಿಷಯಗಳ ಬಗ್ಗೆ ಮಾಹಿತಿ ಹುಡುಕಿ ಸಮಸ್ಯೆಗಳನ್ನು ಪರಿಹರಿಸಲು ,ಅಭ್ಯಾಸ ಮಾಡಿಸಲು, ಮತ್ತು ಉತ್ತರ ಸರಿಯಾಗಿದೆಯೆ ಅಥವಾ ಇಲ್ಲವೇ ಎಂಬುದರ ಕುರಿತು ತಕ್ಷಣದ ಪ್ರತಿಕ್ರಿಯೆಯನ್ನು ಪಡೆಯಲು ಮನರಂಜನೆಯ ಮೂಲಕ ಮಕ್ಕಳ ಕಲಿಕೆಯನ್ನು ದೃಢಪಡಿಸಲು ಪೋಷಕರು ಈ ಆಪ್ ಬಳಸಬಹುದು.

ದೀಕ್ಷಾ ಆಪ್ ಬಳಸುವುದು ಹೇಗೆ?

ಪ್ಲೇ ಸ್ಟೋರ್ ಮತ್ತು ಐ ಒ ಎಸ್ ನಲ್ಲಿ  ದಿಕ್ಷಾ ಆಪ್ ಅನ್ನು ‌ಡೌನ್ಲಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಂಡ ನಂತರ ಶಿಕ್ಷಕರು ಅಥವಾ ವಿದ್ಯಾರ್ಥಿಯಾಗಿ ರಿಜಿಸ್ಟರ್ ಮಾಡಿಕೊಳ್ಳುವ ಆಯ್ಕೆ ಲಭ್ಯವಾಗುತ್ತವೆ ನಮಗೆ ಬೇಕಾದ ಆಯ್ಕೆ ಮಾಡಿಕೊಂಡು ಮುಂದುವರೆದರೆ ನಮ್ಮ ಪಠ್ಯ ಆಯ್ಕೆ ಗೆ ಅವಕಾಶ ನೀಡುತ್ತದೆ ಇದರಲ್ಲಿ ಕೇಂದ್ರ, ರಾಜ್ಯ ಈಗೆ ವಿವಿಧ ಪಠ್ಯಕ್ರಮದ ಆಯ್ಕೆಯಲ್ಲಿ ನಮಗೆ ಬೇಕಾ ಪಠ್ಯ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ .ನಂತರ ಯಾವ ತರಗತಿಯ ವಿಷಯ ಬೇಕು ಎಂದು ಆಯ್ಕೆ ಮಾಡಿಕೊಳ್ಳಬೇಕು ನಂತರ ನಮಗೆ ವಿವಿಧ ಈ ಕಂಟೆಂಟ್ ಲಭ್ಯವಾಗತ್ತದೆ ಮುಂದುವರೆದು ಅದರಲ್ಲಿ ತರಗತಿವಾರು ವಿಷಯವಾರು ಕಂಟೆಂಟ್ ನಾಲ್ಕು ವಿಧದಲ್ಲಿ ಲಭ್ಯವಿವೆ ಮೊದಲನೆಯದು ಪಠ್ಯ ಪುಸ್ತಕ ಎರಡನೆಯದು ಪಾಠಕ್ಕೆ ಸಂಬಂಧಿಸಿದ ವೀಡಿಯೋಗಳು, ಮೂರನೆಯದಾಗಿ ಡಾಕ್ಯುಮೆಂಟ್, ನಾಲ್ಕನೇಯ ಮತ್ತು ಮೌಲ್ಯಮಾಪನವನ್ನು ಮಾಡಲು ಬಹು ಉಪಯುಕ್ತ ಇಂಟರಾಕ್ಟೀವ್ ಪ್ರಶ್ನೆ ಉತ್ತರ ವಿವಿಧ ಮಾದರಿ ಲಭ್ಯ ಅದರಲ್ಲಿ ಬಹು ಆಯ್ಕೆ ಪ್ರಶ್ನೆ, ಒಂದು ಅಂಕ,ಮತ್ತು ಸರಳ ಉತ್ತರವಿರುವ  ಪ್ರಶ್ನೆ ಮತ್ತು ಉತ್ತರ ಮಾದರಿ ಲಭ್ಯ ಇವು ಕೆ ಬಿ‌ಸಿ ಮಾದರಿಯಲ್ಲಿ ಕಲಿಯುವವರ ಆಸಕ್ತಿ ಹೆಚ್ಚು ಮಾಡಿ ಕಲಿಕೆ ಮನರಂಜನಾದಾಯಕಾವಾಗಲು ಸಹಕಾರಿ. ಆದ್ದರಿಂದ ಕೆಲ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಕೆಲ ಸ್ಪರ್ಧಾರ್ಥಿಗಳು ಸಹ ಈ ಆಪ್ ಹೆಚ್ಚು ಬಳಸಿಕೊಂಡು ಉತ್ತಮ ಅಂಕ ಗಳಿಸಿದ ಉದಾಹರಣೆ ಇವೆ.

ಪೂರ್ವ ಸಿದ್ದತಾ ರಜೆ ಮತ್ತು ದೀಕ್ಷಾ

ವಿವಿಧ ರಾಜ್ಯಗಳು ಮಕ್ಕಳಿಗೆ‌ ವಾರ್ಷಿಕ ಪರೀಕ್ಷೆಯ ಮೊದಲು ಓದಲು ಪೂರ್ವ ಸಿದ್ದತಾ ರಜೆ (study holiday)  ನೀಡುವರು ಇಂತಹ ಸಂದರ್ಭಗಳಲ್ಲಿ ಓದಿದ ವಿಷಯಗಳ ಪುನರ್ಮನನ ಮಾಡಿಕೊಳ್ಳಲು ಮತ್ತು ಸ್ವ ಮೌಲ್ಯ ಮಾಪನ  ಮಾಡಿಕೊಳ್ಳಲು ಈ ಆಪ್ ಬಹು ಉಪಯೋಗಕಾರಿಯಾಗಿದೆ.

 ಈ‌ ಕಂಟೆಂಟ್

ಈ  ಆಪ್‌ ನಲ್ಲಿ ಮುಖ್ಯವಾಗಿ ನಮಗೆ ಈ ಕಂಟೆಂಟ್ ಲಭ್ಯವಿದ್ದು ಇದಕ್ಕೆ ಅಧಿಕಾರಿಗಳು ,ತಜ್ಞ ಶಿಕ್ಷಕರು, ಮತ್ತು ತಂತ್ರಜ್ಞರ ಅಪಾರ ಶ್ರಮದ ಹಿನ್ನೆಲೆ ಇದೆ. ಈಗಾಗಲೇ ಬಹುತೇಕ ರಾಜ್ಯಗಳ ಶಿಕ್ಷಣ ಸಂಶೋಧನಾ ನಿರ್ದೇಶನಾಲಯಗಳು ಈ ಆಪ್ ಅಭಿವೃದ್ಧಿ ಪಡಿಸಿ ಬಳಕೆಗೆ ಬಿಟ್ಟಿವೆ .ನಮ್ಮ ರಾಜ್ಯವು ಈ ವಿಚಾರದಲ್ಲಿ ಮುಂದಡಿ ಇಟ್ಟಿದೆ .ನಮ್ಮ ಡಿ ಎಸ್ ಇ ಆರ್ ,ಟಿ ,ನಿರ್ದೇಶಕರು. ಈ ಕಂಟೆಂಟ್ ಮುಖ್ಯಸ್ಥರು ಮತ್ತು ವಿವಿಧ ವಿಷಯ ಸಂಪನ್ಮೂಲ ಶಿಕ್ಷಕರು ಈ ಕಂಟೆಂಟ್ ಸಿದ್ದಪಡಿಸಿ ಅದನ್ನು ಈಗಾಗಲೇ ಆನ್ ಲೈನ್ ನಲ್ಲಿ ಲಭ್ಯವಿರುವಂತೆ ಮಾಡಿರುವರು ಈ ತಂಡದಲ್ಲಿ ನಾನು ಒಬ್ಬ ಸದಸ್ಯನಾಗಿ ಇಪ್ಪತ್ತಕ್ಕೂ ‌ಹೆಚ್ಚು ಸಮಾಜ ವಿಜ್ಞಾನದ ಸಂಪನ್ಮೂಲಗಳನ್ನು ಸೃಷ್ಟಿ ಮಡಿರುವೆ  ಎಂದು ಹೇಳಲು‌ ಹೆಮ್ಮೆ ಅನಿಸುತ್ತದೆ. ಸಂಪೂರ್ಣವಾಗಿ ಉಚಿತವಾಗಿ ಸಿಗುವ ಈ ಅಮೂಲ್ಯವಾದ ಸಂಪನ್ಮೂಲಗಳನ್ನು   ಸಮರ್ಪಕವಾಗಿ ಬಳಕೆ ಮಾಡಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಎಲ್ಲಾ ತರಗತಿಯ ಶಿಕ್ಷಕರ, ಮಕ್ಕಳ ಮತ್ತು ಪೋಷಕರ ಮನಃಪೂರ್ವಕವಾದ ಸಹಕಾರ ಅಗತ್ಯ.

ಸಿ ಜಿ ವೆಂಕಟೇಶ್ವರ
ತುಮಕೂರು



Friday 10 April 2020

NEW FEATURES..

NEW UPDATES.

FOUR NEW OPTIONS ADDED IN BLOGGER.

(A) GALLERY.

LINK. - https://karadaplus.blogspot.com/p/gallery.html

(B) YAKSHAGANA AUDIO CLIPS.

LINK. - https://karadaplus.blogspot.com/p/if-you-can-not-see-this-chirbit-listen.html

(C) ವೈದಿಕ ವಿಜ್ಞಾನಂ.

LINK. - https://vignanam.org/kannada.htm#&panel1-4

(D) E BOOKS.

LINK. - https://karadaplus.blogspot.com/p/e-books.html


THANK YOU...!!