Friday 25 September 2015

KARADA PLUS ANDROID APP

KARADA BRAHMANA SANGHA (KA.BRA.SA) in the name of KARADA PLUS Android app is really required or not? Please suggest.

ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!

ಅನೇಕರಲ್ಲಿ ಒಂದು ಗುಣವಿದೆ. ಅದೇನೆಂದರೆ ತಮ್ಮ ಎಲ್ಲ ಗೋಳು, ಸಂಕಟಗಳನ್ನು ಸ್ನೇಹಿತರು, ಬಂಧು-ಬಾಂಧವರು ಹಾಗೂ ಸಹೋದ್ಯೋಗಿಗಳ ಮುಂದೆ ಹರಡಿಕೊಳ್ಳುತ್ತಾರೆ, ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊಳ್ಳುವ ಮೂಲಕ ತಾವು ಹಗುರಾಗಿದ್ದೇವೆಂದು ಭಾವಿಸುತ್ತಾರೆ.
ನಮ್ಮ ಕಷ್ಟಗಳನ್ನು ಬೇರೆಯವರ ಮುಂದೆ ಹೇಳಿಕೊಂಡರೆ, ಹಂಚಿಕೊಂಡರೆ ಅದರ ಭಾರ ಹೇಗೆ ಕಡಿಮೆಯಾಗುತ್ತದೆ?
ನಮ್ಮ ತೊಂದರೆಗಳನ್ನು ನಮಗೆ ಬೇಕಾದವರ ಮುಂದೆ ಹೇಳಿಕೊಳ್ಳುವುದರಿಂದ ಸಲಹೆ, ಮಾರ್ಗದರ್ಶನದ ರೂಪದಲ್ಲಿ ಒಂದಷ್ಟು ಸಹಾಯ ಸಿಗಬಹುದು. ಮನಸ್ಸಿನಲ್ಲಿ ಮಡುಗಟ್ಟಿದ ಭಾವನೆಗಳನ್ನು ಹರಿಯಬಿಟ್ಟಾಗ, ಒಂದಷ್ಟು ರಿಲೀಫ್ ಸಿಗಬಹುದು. ನಮ್ಮ ಕಷ್ಟಗಳಿಗೆ ಸ್ನೇಹಿತರು ಪರಿಹಾರೋಪಾಯ ಸೂಚಿಸಬಹುದು. ಹೆಚ್ಚೆಂದರೆ ಹಣಕಾಸಿನ ನೆರವನ್ನೂ ನೀಡಬಹುದು. ಕೆಲವೊಮ್ಮೆ ಮನಸ್ಸಿನಲ್ಲಿಯೇ ಇಟ್ಟುಕೊಂಡು ಎಲ್ಲವನ್ನೂ ನುಂಗಿಕೊಂಡು ಒಳಗೊಳಗೇ ಪರಿತಪಿಸುವ ಬದಲು ನಾಲ್ಕು ಜನರ ಮುಂದೆ ಹೇಳಿಕೊಂಡಾಗ ಸಾಂತ್ವನ ಸಿಗುವುದು ಸುಳ್ಳಲ್ಲ.
ಇಲ್ಲಿ ಬಹಳ ಮುಖ್ಯವಾದ ಸಂಗತಿಯೇನೆಂದರೆ ನೀವು ನಿಮ್ಮ ಕಷ್ಟಗಳನ್ನು, ವೈಯಕ್ತಿಕ ಸಮಸ್ಯೆಗಳನ್ನು ಯಾರ ಮುಂದೆ ಹೇಳಿ–ಕೊಳ್ಳುತ್ತಿದ್ದೀರಿ ಎಂಬುದು. ಆತನೋ, ಆಕೆಯೋ, ನಿಮ್ಮ ಸಮಸ್ಯೆ–ಗಳನ್ನು ಕಾಪಾಡು–ವಷ್ಟು ನಿಯತ್ತು ಉಳ್ಳವರಾಗಿರಬೇಕು. ನಿಮಗೆ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನ, ಸಾಂತ್ವನ, ಸಮಾಧಾನ ಹೇಳುವಷ್ಟು ಪ್ರಬುದ್ಧರಾಗಿರಬೇಕು. ಅವರ ಸಲಹೆ-ಸಾಂತ್ವನಗಳು ಆ ಕ್ಷಣದಲ್ಲಿ ನಿಮಗೆ ನೆಮ್ಮದಿ ಸಿಗುವಂತಿರಬೇಕು. ಅಲ್ಲದೇ ಅಗತ್ಯ ಬಿದ್ದರೆ ನಿಮಗೆ ಹಣಕಾಸಿನ ನೆರವು ನೀಡಲು ಹಿಂದೇಟು ಹಾಕುವವರಾಗಿರಬಾರದು. ವೈದ್ಯರ ಮುಂದೆ ತನ್ನ ರೋಗಗಳ ಮಾಹಿತಿಯೆಲ್ಲವನ್ನೂ ಹೇಳಿಕೊಳ್ಳುತ್ತಾನಲ್ಲ, ಹಾಗೆ ಹೇಳಿಕೊಂಡಾಗ ವೈದ್ಯ ಮುಂದೆ ಮಾಡಬೇಕಾದ ಕಾರ್ಯಗಳ ಬಗ್ಗೆ ಪ್ರವೃತ್ತನಾಗು–ತ್ತಾನಲ್ಲ, ಅಂಥ ಸಾಂತ್ವನವಾದರೂ ಕೊಡುವವರ ಮುಂದೆ ತಮ್ಮ ಗೋಳು, ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು.
ನಿಮ್ಮ ವೈಯಕ್ತಿಕ ಅಥವಾ ಖಾಸಗಿ ಸಂಗತಿಗಳನ್ನು ಬೇರೆಯವರ ಮುಂದೆ ಹಂಚಿಕೊಳ್ಳುವುದೆಂದರೆ, ನಿಮ್ಮ ವ್ಯಕ್ತಿತ್ವದ ರಹಸ್ಯದ ತಿಜೋರಿ ಬೀಗದ ಕೈಯನ್ನು ಬೇರೆಯವರಿಗೆ ಕೊಟ್ಟ ಹಾಗೆ. ನಿಮ್ಮ ಕುರಿತಾದ ಆ ಮಾಹಿತಿಯನ್ನು ಅವರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಅಲ್ಲಿಯವರೆಗೆ ನೀವು ಕಾಪಾಡಿಕೊಂಡು ಬಂದ ನಿಮ್ಮ ಖಾಸಗಿ ಅಂಶಗಳೆಲ್ಲ ಬಹಿರಂಗವಾಗಬಹುದು. ಆ ಮೂಲಕ ನಿಮ್ಮ ಚಾರಿತ್ರ್ಯಹರಣವಾಗಬಹುದು. ನೀವೇ ಕೋಲು ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ಬರಬಹುದು. ನಿಮ್ಮೆಲ್ಲ ಗುಟ್ಟುಗಳನ್ನು ಯಾರ ಮುಂದೆ ಹೇಳಿಕೊಳ್ಳುತ್ತೀರೋ ಅವರು ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಬಹುದು. ಈ ಅಂಜಿಕೆಯಿಂದ ನೀವು ಅವರಿಗೆ ಸದಾ ಗೊಡ್ಡು ಸಲಾಮು ಹೊಡೆಯುತ್ತಾ ಇರಬೇಕಾದ ಪರಿಸ್ಥಿತಿಗೆ ನಿಮ್ಮನ್ನೇ ನೀವು ನೂಕಿಕೊಳ್ಳಬಹುದು.
ಬೇರೆಯವರ ಮುಂದೆ ನಿಮ್ಮ ‘ಪುರಾಣ’ ಹೇಳಿಕೊಳ್ಳುವುದರಿಂದ ಸಮಸ್ಯೆ ಖಂಡಿತ ಬಗೆಹರಿಯುವುದಿಲ್ಲ, ಕಡಿಮೆಯೂ ಆಗುವು–ದಿಲ್ಲ. ಅದರ ಬದಲು ಜಿಛಿ ಛ್ಛ್ಛಿಛ್ಚಿಠಿ ಹೆಚ್ಚುತ್ತಾ ಹೋಗುತ್ತದೆ. ನಿಮ್ಮನ್ನು ಗೌರವಿಸುತ್ತಿದ್ದವರು, ಇಷ್ಟಪಡುತ್ತಿದ್ದವರು ನಿಮ್ಮ ಪರಿಸ್ಥಿತಿ ನೋಡಿ ಕ್ರಮೇಣ ದೂರವಾಗಬಹುದು. ಅಂತರ ಕಾಪಾಡ–ಬಹುದು, ನಿಕೃಷ್ಟವಾಗಿಯೂ ಕಾಣಬಹುದು, ಲಘುವಾಗಿ ಪರಿಗಣಿಸಬಹುದು.
ನಿಮ್ಮ ಸಮಸ್ಯೆಗಳನ್ನು ಬೇರೆಯವರ ಮುಂದೆ ಹೇಳಿಕೊಳ್ಳಬೇಡಿ. ನಿಮಗೆ ನಿಮಗಿಂತ ಉತ್ತಮ ಸ್ನೇಹಿತ, ಹಿತ ಚಿಂತಕ, ಮಾರ್ಗದರ್ಶಕ ಮತ್ತೊಬ್ಬರಿಲ್ಲ. ಅವನ ಹೊರತಾಗಿ ಬೇರೆಲ್ಲೂ ಸಾಧ್ಯವಾದಷ್ಟು ಮಟ್ಟಿಗೆ ಹೇಳಿಕೊಳ್ಳಬೇಡಿ.

– ವಿಶ್ವೇಶ್ವರ ಭಟ್ . (‘ನೂರೆಂಟು ಮಾತು’)
Collected from: ( http://vbhat.in/breaking-news/guide_101114/)

Tuesday 1 September 2015

ಹಾದಿ ತಪ್ಪಾದರೆ ಎದ್ದ ಕುಂಡಲಿನಿಯೇ ಬೀಳಿಸಬಹುದು!!

1996 ರ ವಿಶ್ವಕಪ್ ಕ್ರಿಕೆಟ್ ನೆನಪಿದೆಯಾ? ಕ್ವಾರ್ಟ್‍ರ್ ಫೈನಲ್ ಪಂದ್ಯ. ಪಾಕಿಸ್ತಾನದೊಂದಿಗೆ ಭಾರತದ್ದು. ಬೆಂಗಳೂರಿನಲ್ಲಿ ನಡೆದಿತ್ತು. ಅಮೀರ್ ಸೋಹೈಲ್ ವೆಂಕಟೇಶ್ ಪ್ರಸಾದರ ಚೆಂಡನ್ನು ಬೌಂಡರಿಗಟ್ಟಿ ‘ ಹೇಗಿದೆ?’ ಎಂದು ವಿಕೃತ ನಗೆ ನಕ್ಕಿದ್ದರು. ಅದು ವೆಂಕಟೇಶ ಪ್ರಸಾದರನ್ನು ಅದ್ಯಾವ ಪರಿ ಕೆಣಕಿತ್ತೆಂದರೆ, ಇದ್ದ ಬದ್ದ ಶಕ್ತಿಯನ್ನೆಲ್ಲಾ ಕ್ರೋಢೀಕರಿಸಿ ಆತ ಎಸೆದ ಮರು ಚೆಂಡು ವಿಕೇಟನ್ನು ಉರುಳಿಸಿ ಅಮೀರ್ ಸೋಹೈಲ್‍ರನ್ನು ಪೆವಿಲಿಯನ್‍ಗಟ್ಟಿತ್ತು. ಎಲ್ಲಾ ಕ್ರಿಕೆಟ್ ಪ್ರೇಮಿಗಳಲ್ಲೂ ಮಿಂಚು ಹರಿದಿತ್ತು. ಅದು ವೆಂಕಿ ಜೀವನದ ‘ಬೆಸ್ಟ್ ಬಾಲ್’.
ಈ ರೀತಿಯ ಅನುಭವ ನಿಮಗೂ ಆಗಿಲ್ವಾ? ಯಾರೋ ಕೆಣಕಿದರು ಅಂತ ನಿಮ್ಮೊಳಗಿನ ಶಕ್ತಿ ಇದ್ದಕ್ಕಿದ್ದಂತೆ ಜಾಗೃತವಾಗಿ ಸೂಕ್ತ ಉತ್ತರ ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು! ಆಗಿರಲೇಬೇಕು. ಆಕ್ರೋಶ ಬಂದಾಗ ಏಕಮುಖವಾಗಿ ಆಲೋಚಿಸಲು ಶುರು ಮಾಡುತ್ತೇವಾದ್ದರಿಂದ ಇದ್ದಕ್ಕಿದ್ದಂತೆ ಕುಂಡಲಿನಿ ಜಾಗೃತವಾಗಿ ಸುಷುಮ್ನಾ ನಾಡಿಯ ಮೂಲಕ ಹರಿಯಲಾರಂಭಿಸುತ್ತದೆ. ಅಪಾರವಾದ ಶಕ್ತಿಯ ಉತ್ಪಾದನೆಯಾಗುತ್ತದೆ. ಅದೊಂದು ರೀತಿ ದೇಹದೊಳಗೆ ದೆವ್ವ ಹೊಕ್ಕಿದ ಅನುಭವ. ಕೋಪದಿಂದ ಪ್ರೇರೇಪಿತರಾಗಿದ್ದರಿಂದ ಸಹಜವಾಗಿಯೇ ಈ ಶಕ್ತಿಯ ಬಳಕೆ ಋಣಾತ್ಮಕ ಮಾರ್ಗದಲ್ಲಿಯೇ ಆಗುತ್ತದೆ. ಸ್ವಲ್ಪ ಹೊತ್ತು ಕಳೆದ ಮೇಲೆ ಕುಂಡಲಿನಿ ಸಹಜ ಸ್ಥಿತಿಗೆ ಮರುಳುತ್ತದೆ. ನಾವು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಕುಳಿತಿರುತ್ತೇವೆ ಅಷ್ಟೇ. ಸೊಳ್ಳೆ ಬಡಿಯಲೂ ತಾಕತ್ತಿಲ್ಲದವ ಎದುರಿಗಿನ ಧಢೂತಿ ಆಸಾಮಿಯನ್ನು ಬಡಿದಟ್ಟಿಬಿಡುತ್ತಾನೆ. ಅದೆಲ್ಲಾ ಕುಂಡಲಿನಿಯ ಶಕ್ತಿಯೇ.

b50534_2995ee4cb379336bc1e591315d4be2ee_srz_1000_1500_85_22_050_120_0ಇದೇನು ಅರ್ಥೈಸಿಕೊಳ್ಳಲು ಅಸಾಧ್ಯವಾದ ಪ್ರಕ್ರಿಯೆಯಲ್ಲ. ಅಣುವೊಂದರೊಳಗಿನ ಪ್ರೋಟಾನು, ನ್ಯೂಟ್ರಾನು, ಎಲೆಕ್ಟ್ರಾನುಗಳು ತಂತಮ್ಮ ಪಾಡಿಗೆ ಇದ್ದರೆ ಅದು ಸಹಜವಾಗಿಯೇ ಇದ್ದುಬಿಡುತ್ತವೆ. ಸ್ವಲ್ಪ ಶಕ್ತಿ ಹರಿಸಿ ಅವುಗಳನ್ನು ಬೇರ್ಪಡಿಸಿದರೆ ಮುಗಿಯಿತು. ಅವುಗಳು ಅಪಾರ ಶಕ್ತಿಯ ಗಣಿಗಳಾಗಿಬಿಡುತ್ತವೆ. ಅನೇಕ ಅಣುಗಳ ಬೇರ್ಪಡಿಸಿದ ಎಲೆಕ್ಟ್ರಾನುಗಳನ್ನು ಏಕಮುಖವಾಗಿ ಸಂಚರಿಸುವಂತೆ ಮಾಡಿದರೆ ಅದೇ ವಿದ್ಯುತ್ತು, ಅದೇ ಲೇಸರ್ ಕೂಡ. ಸಾಮಾನ್ಯವಾದ ಅಣುವಿನೊಳಗೆ ಅದೆಂತಹ ಬ್ರಹ್ಮಾಂಡ ಶಕ್ತಿ.
ಅಕ್ಷರಶಃ ಹಾಗೆಯೇ ನಮ್ಮ ದೇಹದೊಳಗೂ ಕೂಡ. ಅಣುವಿನೊಳಗಿನ ಬಂಧನವನ್ನು ಕಳಚಿದರೆ ಹೇಗೆ ಅದು ಶಕ್ತಿಯ ಕಣಜವಾಗುತ್ತದೋ ಹಾಗೆಯೇ ಮನಸ್ಸು ಹೊರಗಿನ ವಸ್ತುಗಳಲ್ಲಿ ಆಸಕ್ತಿ ಕಳೆದುಕೊಂಡರೆ ಕುಂಡಲಿನಿ ಮೇಲ್ಮುಖ ಓಟಕ್ಕೆ ಸಿದ್ಧವಾಗುತ್ತದೆ. ಈ ಬಂಧನ ಕಳಚುವ ಮಾರ್ಗ ಯಾವುದೆಂಬುದರ ಆಧಾರದ ಮೇಲೆ ಕುಂಡಲಿನಿಯ ಶಕ್ತಿ ಬಳಕೆಯಾಗುತ್ತದೆ. ಕೋಪದಿಂದ ಏಕಾಗ್ರಗೊಂಡ ಮನಸ್ಸು ಕ್ಷಣಾರ್ಧದಲ್ಲಿ ಮಾಡಬಾರದ್ದನ್ನು ಮಾಡಿಬಿಡುತ್ತದೆ. ಆಮೇಲೆ ಪಶ್ಚಾತ್ತಾಪ ಪಡುವುದಷ್ಟೇ ಕೆಲಸ. ಈ ಬಗೆಯ ಉದ್ದೀಪನ ಅತ್ಯಂತ ಕೆಳಮಟ್ಟದ್ದು. ಅದಕ್ಕೇ ನಮ್ಮಲ್ಲಿ ಕೋಪವನ್ನು ನಿಯಂತ್ರಿಸಬೇಕು ಎನ್ನುವುದು. ಇನ್ನು ಆಟ ಆಡುವಾಗ, ಪರೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರಿಸುವಾಗ ಸರಕ್ಕನೆ ಏಕಾಗ್ರಗೊಳ್ಳುವ ಮನಸ್ಸು ಅದ್ಭುತವಾದುದನ್ನು ಸಾಧಿಸಿಬಿಡುತ್ತಲ್ಲ ಅದು ಕುಂಡಲಿನಿ ಜಾಗೃತವಾಗುವ ಕಾರಣದಿಂದಲೇ. ‘ಅಯ್ಯೋ ಅದೆಲ್ಲಿಂದ ಉತ್ತರ ಹೊಳೀತೋ, ಗೊತ್ತಾಗಲೇ ಇಲ್ಲ’ ಅಂತ ಕೆಲವೊಮ್ಮೆ ಉದ್ಗರಿಸುತ್ತೇವಲ್ಲ ಅವೆಲ್ಲ ಈ ಮಹಾಶಕ್ತಿಯ ಹರಿವಿನದ್ದೇ ಪ್ರಭಾವ. ಇದು ಮಧ್ಯಮ ದಾರಿ. ಅತ್ಯಂತ ಶ್ರೇಷ್ಠವಾದದ್ದು ಯೋಗ ಮಾರ್ಗವೇ. ಕುಂಡಲಿನಿಯನ್ನು ಬಡಿ- ಬಡಿದು ಎಬ್ಬಿಸಿ ಒಂದೊಂದು ಚಕ್ರದಲ್ಲೂ ನಿಲ್ಲಿಸಿ ಉತ್ಪತ್ತಿಯಾದ ಅಷ್ಟೂ ಶಕ್ತಿಯನ್ನು ಒಳಗೇ ಕ್ರೋಢೀಕರಿಸುವ ಪ್ರಯತ್ನ. ಈ ಪ್ರಯಾಸದಲ್ಲಿ ಶಕ್ತಿ ವ್ಯಯ ಆಗುವುದಿಲ್ಲವಾದ್ದರಿಂದ ಕುಂಡಲಿನಿ ಕೆಳಗಿಳಿಯುವ ಪ್ರಮೇಯವೇ ಇಲ್ಲ. ಅದೀಗ ಮುಂದಿನ ಚಕ್ರದೆಡೆಗೆ ಮುಖಮಾಡಿ ನಿಲ್ಲುತ್ತದೆ. ಇನ್ನಷ್ಟು ಪ್ರಯತ್ನ ಹಾಕಿ ಕುಂಡಲಿನಿಯನ್ನು ಮೇಲಕ್ಕೆ ತಳ್ಳುತ್ತಾ ಹೋದಂತೆ ಬಗೆ ಬಗೆಯ ಆಧ್ಯಾತ್ಮಿಕ ಅನುಭೂತಿಗಳು ಒದಗಲಾರಂಭಿಸುತ್ತವೆ. ಕೊನೆಗೊಮ್ಮೆ ಈ ಕುಂಡಲಿನಿ ಸಹಸ್ರಾರವನ್ನು ಮುಟ್ಟಿದೊಡನೆ ಸಾವಿರ ಸೂರ್ಯರು ಬೆಳಗಿದ ಅನುಭವ.
ಈ ಮಾರ್ಗದುದ್ದಕ್ಕೂ ತನ್ನ ಶಕ್ತಿಯನ್ನು ವ್ಯಕ್ತಿ ಹ್ರಾಸಗೊಳಿಸಿಕೊಂಡಿಲ್ಲವಾದ್ದರಿಂದ ಆತನೀಗ ಅನಂತ ಶಕ್ತಿಯ ಆಗರ. ಇಡಿಯ ವಿಶ್ವವನ್ನೇ ಕೈ ಬೆರಳ ತುದಿಯಲ್ಲಿ ಆಡಿಸಬಲ್ಲ. ತನ್ನ ಇಚ್ಛಾ ಮಾತ್ರದಿಂದಲೇ ವೈಶ್ವಿಕ ನಿಯಮಗಳನ್ನು ಏರುಪೇರುಮಾಡಬಲ್ಲ.
ವಿಶ್ವಾಮಿತ್ರರನ್ನು ನೆನಪಿಸಿಕೊಳ್ಳಿ. ಅವರೊಳಗಿನ ಶಕ್ತಿಯಷ್ಟೂ ಹೇಗೆ ಘನೀಭೂತವಾಗಿತ್ತೆಂದರೆ ತ್ರಿಶಂಕುವಿಗೆ ಸ್ವರ್ಗವನ್ನೇ ನಿರ್ಮಿಸಿಕೊಡಲು ಹೊರಟಿದ್ದರು. ಋಷಿಗಳು ಕುಪಿತರಾಗಿ ಶಪಿಸುತ್ತಿದ್ದರಲ್ಲ ಆಗೆಲ್ಲ ಆ ಶಾಪಗಳು ಸತ್ಯವಾಗಿಬಿಡುತ್ತಿದ್ದುದಕ್ಕೂ ಇದೇ ಕಾರಣ.
ಬೇರೆ ಬೇರೆ ಚಕ್ರಗಳಲ್ಲಿ ನೆಲೆನಿಂತ ಕುಂಡಲಿನಿ ಶಕ್ತಿ ಹೊರಹಾಕಿ ಕೆಳಗಿಳಿದುಬಿಡುತ್ತದೆ. ಥೇಟು ಅಣುವಿನ ಸುತ್ತ ಸುತ್ತುವ ಎಲೆಕ್ಟ್ರಾನಿನಂತೆ. ಅಣುವೊಂದಕ್ಕೆ ಶಕ್ತಿ ತುಂಬಿದಾಗ ಎಲೆಕ್ಟ್ರಾನು ಮೇಲಿನ ಪರಿಧಿಗೆ ನೆಗೆಯುತ್ತದೆ. ಕೆಲವು ಕಾಲದಲ್ಲಿ ಶಕ್ತಿಯನ್ನು ಹೊರಹಾಕಿ ತಾನು ತನ್ನ ಹಳೆಯ ಪರಿಧಿಗೆ ಬಂದು ನೆಮ್ಮದಿಯಿಂದ ಕೇಂದ್ರವನ್ನು ಸುತ್ತುತ್ತಿರುತ್ತದೆ. ಹಾಗೆಯೇ ಕುಂಡಲಿನಿಯೂ. ಮೇಲಿನ ಚಕ್ರಗಳಿಗೆ ನೆಗೆಯುತ್ತದೆ: ಉತ್ಪತ್ತಿಯಾದ ಶಕ್ತಿಯನ್ನು ಹೊರದಬ್ಬಿ ಮತ್ತೆ ಮೂಲಾಧಾರಕ್ಕೆ ಮರಳುತ್ತದೆ. ಮತ್ತೆ ಅದನ್ನು ಎಬ್ಬಿಸಬೇಕು: ಮೇಲ್ಮುಖವಾಗಿ ಏರಿಸಬೇಕು. ಹೀಗಾಗಿಯೇ ಋಷಿಗಳು ಯಾರಿಗಾದರೂ ಶಾಪ ಕೊಟ್ಟ ಮೇಲೆ ಮತ್ತೆ ತಪಸ್ಸಿಗೆ ಮರಳುತ್ತಿದ್ದುದು.
ಇದನ್ನು ಅರ್ಥೈಸಿಕೊಂಡರೆ ದೇವತೆಗಳೇಕೆ ಕೆಲವರ ತಪಸ್ಸು ಭಂಗ ಮಾಡಲೆತ್ನಿಸುತ್ತಿದ್ದರೆಂಬುದೂ ಸ್ಪಷ್ಟವಾಗುತ್ತದೆ. ಅಪಾರ ಶಕ್ತಿಯನ್ನು ಪಡಕೊಂಡವ ಅದನ್ನು ಸೂಕ್ತ ದಿಕ್ಕಿನಲ್ಲಿ ಬಳಸಲಿಲ್ಲವೆಂದರೆ ಆತ ಸಮಾಜ ಘಾತುಕನೇ ಸರಿ. ಅಂತಹವನಿಗೆ ಶಕ್ತಿ ಸಂಚಯಕ್ಕೇ ಅವಕಾಶ ಕೊಡಬಾರದು. ಅಣುವಿನ ಸಾಮಥ್ರ್ಯ ಗುರುತಿಸಿ ಒಬ್ಬ ವಿದ್ಯುತ್ ಉತ್ಪಾದಿಸಿದರೆ, ಮತ್ತೊಬ್ಬ ಬಾಂಬು ತಯಾರಿಸುತ್ತಾನೆ. ಮನುಕುಲಕ್ಕೆ ಕಂಟಕವಾಗಿರುವ ಈ ಬಾಂಬುಗಳನ್ನು ತಯಾರಿಸಲು ಬಿಡದೇ ಇರುವುದೇ ಶ್ರೇಷ್ಠ ಪ್ರಕ್ರಿಯೆ. ಅದಕ್ಕೆಂದೇ ಮೇನಕೆ ವಿಶ್ವಾಮಿತ್ರರ ತಪಸ್ಸು ಕೆಡಿಸಿ ಅವರನ್ನು ಸಂಸಾರಕ್ಕೆಳೆದು ಅವರ ಶಕ್ತಿ ಹ್ರಾಸಗೊಳಿಸಿದ್ದು. ಆದರೆ ಒಮ್ಮೆ ಅವರ ಮನಸ್ಸು ತಿಳಿಯಾಗಿ ವಶಿಷ್ಟರ ಮೇಲಿನ ಕೋಪ ಇಳಿದು ಅವರು ಬದಲಾದ ಮೇಲೆ ಅವರ ತಪೋಭಂಗದ ಪ್ರಯತ್ನ ನಮಗೆ ಕಂಡು ಬರುವುದೇ ಇಲ್ಲ. ಇದರರ್ಥ ಬಲು ಸ್ಪಷ್ಟ. ಕುಂಡಲಿನಿ ಜಾಗೃತಿಗೆ ಬಳಸುವ ಮಾರ್ಗ ಮತ್ತು ಹಿಂದಿನ ಉದ್ದೇಶ ಎರಡೂ ಬಲು ಮುಖ್ಯದ್ದು. ಅರಬ್ ರಾಷ್ಟ್ರಗಳಲ್ಲಿ ಕುಂಡಲಿನಿ ಜಾಗೃತಿಗೆ ಅನ್ಯರ ಮೇಲಿನ ದ್ವೇಷವನ್ನೇ ಆಯುಧವನ್ನಾಗಿಸಿಕೊಳ್ಳಲಾಯಿತು. ಯುದ್ಧೋನ್ಮಾದವೇ ಅವರಿಗೆ ಶಕ್ತಿ ಸಂಗ್ರಹದ ಮಾರ್ಗ. ಸುಷುಮ್ನಾದ ಮೂಲಕ ಏರಿದ ಕುಂಡಲಿನಿ ಶಕ್ತಿಯೇ ಅವರಲ್ಲಿ ಕೊಲೆಗಡುಕತನದ ಕ್ರೌರ್ಯ ತುಂಬೋದು.
ಕುಂಡಲಿನಿಯ ಸುಷುಮ್ನ ನಾಡಿಯ ಮೂಲಕ ಮೇಲೇರಿಸುವುದು ಅಸಾಧ್ಯವೆಂದಲ್ಲವಾದ ಮೇಲೆ ಮುಂದಿನ ಪ್ರಶ್ನೆ, ಅದನ್ನು ಸೂಕ್ತ ಮಾರ್ಗಗಳ ಮೂಲಕ ಸಾಧಿಸಿಕೊಳ್ಳೋದು ಹೇಗೆ ಅಂತ. ಪ್ರಾಣಶಕ್ತಿಯ ನಿಗ್ರಹದ ಮೂಲಕ.
ಹೌದು. ಇಡಿಯ ವಿಶ್ವವನ್ನು ಹಿಡಿದು ನಿಂತಿರುವ ಶಕ್ತಿ ಪ್ರಾಣವೇ. ಅನೇಕ ಬಾರಿ ಮೂಗಿನಿಂದ ಒಳಗೆಳೆದುಕೊಳ್ಳುವ ಉಸಿರೇ ಪ್ರಾಣ ಅಂತ ಕರೆದು ಬಿಡುತ್ತೇವೆ ಅದು ಇಂಗ್ಲೀಷಿನ ಅನುವಾದದ ಪ್ರಬಾವ. ವಾಸ್ತವವಾಗಿ ಉಸಿರಾಟ ಪ್ರಾಣಶಕ್ತಿಯ ಅರಿವು ಮೂಡಿಸುವ ಸ್ಥೂಲ ರೂಪ ಮಾತ್ರ.
ಗ್ರಹಗಳು ತಮ್ಮ ತಮ್ಮ ಸ್ಥಾನದಲ್ಲಿ ನಿಂತಿರಲು; ಸೂರ್ಯನ ಸುತ್ತ ಭೂಮಿ ಸುತ್ತಲೂ ಪ್ರಾಣವೇ ಕಾರಣ. ಅಷ್ಟೇ ಅಲ್ಲ. ಅಣು- ಅಣುವಿನ ನಡುವಿನ ಬಂಧಕ್ಕೂ; ಎಲೆಕ್ಟ್ರಾನುಗಳ ಭ್ರಮಣೆಗೂ ಈ ಪ್ರಾಣವೇ ಕಾರಣ. ವಿವೇಕಾನಂದರಂತೂ ಸೃಷ್ಟಿಯ ಉಗಮದ ಹೊತ್ತಲ್ಲಿ ಪ್ರಾಣದ ಕಂಪನದಿಂದಲೇ ಆಕಾಶ ಉತ್ಪಾದನೆಯಾದದ್ದು ಅಂತಾರೆ. ಆಕಾಶ ಮತ್ತು ಪ್ರಾಣಗಳ ಸಂಯೋಗದಿಂದಲೇ ವಾಯುವಿನ ಜನನ. ಆನಂತರ ಅಗ್ನಿ, ನೀರು, ಮಣ್ಣು ಇವೆಲ್ಲದರ ಉತ್ಪಾದನೆಗೂ ಪ್ರಾಣವೇ ಮೂಲವಸ್ತು. ಇಷ್ಡೆಲ್ಲಾ ಪ್ರಾಣ ಎಲ್ಲೆಡೆ ವ್ಯಾಪ್ತಗೊಂಡಿದೆ ಎಂದ ಮೇಲೆ ಪಂಚಭೂತಗಳಿಂದಲೇ ನಿರ್ಮಾಣಗೊಂಡ ಶರೀರ ಪ್ರಾಣಶಕ್ತಿಯಿಂದಲೇ ತುಂಬಿಹೋಗಿದೆಯೆಂಬುದಕ್ಕೆ ಅತಿಯಾದ ಚರ್ಚೆ ಮಾಡಬೇಕಾದ ಅವಶ್ಯಕತೆ ಇಲ್ಲ. ಈ ಪ್ರಾಣದ ಸ್ವಾಧೀನವೇ ರಾಜಯೋಗದ ಪ್ರಕಾರ ಕುಂಡಲಿನಿ ಶಕ್ತಿಯನ್ನು ವಶಪಡಿಸಿಕೊಳ್ಳುವುದರ ಸೂಕ್ತ ಅರ್ಥ.
ಪ್ರಾಣಾಯಾಮ ಈ ಕಾರಣಕ್ಕಾಗಿಯೇ ಯೋಗದ ಒಂದು ಬಹುಮುಖ್ಯ ಹೆಜ್ಜೆ. ಅನೇಕ ಬಾರಿ ನಾವು ಪ್ರಾಣಾಯಾಮವೆಂದರೆ ಲಯಬದ್ಧ ಉಸಿರಾಟವೆಂದಷ್ಟೇ ಭಾವಿಸುತ್ತೇವೆ. ಆದರೆ ವಾಸ್ತವವಾಗಿ ಯಾವುದರಿಂದ ಉಸಿರಾಟ ನಡೆಯುತ್ತಿದೆಯೋ ಅದು ಪ್ರಾಣ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಾವು ಪ್ರಯತ್ನ ಹಾಕದೆಯೇ ಮೂಗಿನ ಹೊಳ್ಳೆಗಳಿಂದ ಉಸಿರು ಒಳನುಗ್ಗೋದು, ಹೊರ ಧಾವಿಸೋದು ನಡೆಯುತ್ತಿದೆಯಲ್ಲ; ಅದಕ್ಕೆ ಕಾರಣ ಪ್ರಾಣ. ಈ ಪ್ರಾಣ ಶ್ವಾಸಕೋಶವನ್ನು ಹಿಗ್ಗಿಸುವುದರಿಂದ ಮೂಗು ವಾತಾವರಣದಿಂದ ಗಾಳಿಯನ್ನು ಒಳಗೆಳೆದುಕೊಳ್ಳುತ್ತದೆ. ಪ್ರಾಣ ಶ್ವಾಸಕೋಶವನ್ನು ಕುಗ್ಗಿಸಿದೊಡನೆ ಅಲ್ಲಿರುವ ಅಷ್ಟೂ ಗಾಳಿಯನ್ನು ಮೂಗು ಹೊರಹಾಕುತ್ತದೆ. ಹಾಗಂತ ಇಲ್ಲಿ ಮೂಗಿನ ಪಾತ್ರವೂ ಶೂನ್ಯ. ಎಲ್ಲರೂ ಪ್ರಾಣದ ಮಾತನ್ನು ಕೇಳುವ ಗುಲಾಮರು ಅಷ್ಟೇ!
ಉಸಿರು ಪ್ರಾಣವಲ್ಲದಿದ್ದರೂ ಪ್ರಾಣ ಶಕ್ತಿಯ ನೇರ ಅನುಭವ ಉಸಿರಿನ ಮೂಲಕವೇ ಆಗೋದು. ಅದಕ್ಕೇ ಈ ಉಸಿರನ್ನೇ ನಿಯಂತ್ರಿಸಿದರೆ ಪ್ರಾಣ ನಾವು ಹೇಳಿದಂತೆ ಕೇಳಬೇಕಲ್ಲ ಎಂಬ ರಿವರ್ಸ್ ಇಂಜಿನಿಯರಿಂಗ್ ನಮ್ಮ ಋಷಿಗಳ ತಲೆ ಹೊಕ್ಕಿತು. ವಾಸ್ತವವಾಗಿ ಇದು ಜಿರಳೆ ರಂಧ್ರದೊಳಕ್ಕೆ ತನ್ನ ಮೀಸೆಯನ್ನು ಮೊದಲು ಒಳಹಾಕಿ ಆಮೇಲೆ ಇಡಿಯ ದೇಹವನ್ನು ಒಳತೂರಿಸುವುದಲ್ಲಾ ಅಂತಹುದೇ ಪ್ರಕ್ರಿಯೆ. ಇದರ ಆಧಾರದ ಮೇಲೇಯೇ ಉಸಿರಾಟವನ್ನು ಲಯಬದ್ಧಗೊಳಿಸಿ ಪ್ರಾಣದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಶುರು ಮಾಡಿದರು.
ನೀವು ಯಾರದ್ದಾದರೂ ಮನೆಗೆ ಹೋದಾಗ ದೊಡ್ಡವರೊಡನೆ ಹೆಚ್ಚು ಮಾತನಾಡಬೇಡಿ; ಅಲ್ಲಿರುವ ಚಿಕ್ಕ ಮಕ್ಕಳೊಡನೆ ಆಟವಾಡಿ, ಅವರೊಡನೆ ನಲಿದಾಡಿ. ಸಹಜವಾಗಿಯೇ ದೊಡ್ಡವರಿಗೂ ನೀವು ಪ್ರೀತಿಪಾತ್ರರೇ ಆಗಿಬಿಡುತ್ತೀರಿ. ಇದು ಮನೆಯವರನ್ನು ಒಲಿಸಿಕೊಳ್ಳುವ ಅತ್ಯಂತ ಸೂಕ್ತ ಮಾರ್ಗ. ಹಾಗೆಯೇ ಉಸಿರಿನ ಮೇಲೆ ಹಿಡಿತ ಸಾಧೀಸುವ ಮೂಲಕ ಶ್ವಾಸಕೋಶದ ಸ್ನಾಯುಗಳನ್ನು ಗೆದ್ದಂತೆಯೇ. ಈಗ ಪ್ರಾಣ ಹೇಳಿದಂತೆ ನಿಮ್ಮ ಶ್ವಾಸಕೋಶಗಳು ಕೇಳುತ್ತಿಲ್ಲ; ನಿಮ್ಮ ಉಸಿರಿಗೆ ತಕ್ಕಂತೆ ಅದು ಮಾರ್ಪಟ್ಟಿದೆ. ನೀವು ಅದನ್ನು ಹೇಳಿದಂತೆ ಕೇಳುವ ಹಂತಕ್ಕೆ ತಂದಿದ್ದೀರಿ.
ಒಮ್ಮೆ ಈ ಪ್ರಾಣಶಕ್ತಿ ನಿಮ್ಮ ತೆಕ್ಕೆಗೆ ಬಂದೊಡನೆ ಪ್ರಯತ್ನಪೂರ್ವಕವಾಗಿ ಅದನ್ನು ನರನಾಡಿಗಳಲ್ಲಿ ಹರಿಸಿದರಾಯ್ತು. ಎಲ್ಲ ಮಾಂಸಖಂಡಗಳೂ, ಸ್ನಾಯುಗಳೂ ಉಜ್ಜೀವನಗೊಳ್ಳುತ್ತವೆ. ಕುಂಡಲಿನಿ ಸುಷುಮ್ನದ ಮೂಲಕ ಮೇಲೇರಲು ಆರಂಭಿಸುತ್ತದೆ.
ಈ ಪ್ರಯತ್ನದ ಮೂಲಕ ಕುಂಡಲಿನಿ ಜಾಗೃತಿಗೆ ಯತ್ನಿಸುವ ಯೋಗಿ ದಿನ ಕಳೆದಂತೆ ಶಾಂತನಾಗುತ್ತಾನೆ, ಮಂದಸ್ಮಿತನಾಗುತ್ತಾನೆ. ಕಾಲಕ್ರಮೇಣ ಕೋಪ- ತಾಪಗಳು, ದ್ವೇಷ- ಅಸೂಯೆಗಳು ಕಡಿಮೆಯಾಗುತ್ತದೆ. ಹೀಗಾಗಿ ಈಗ ಸಂಗ್ರಹವಾಗುತ್ತಿರುವ ಶಕ್ತಿ ಅನವಶ್ಯಕವಾಗಿ ಪೋಲಾಗದೇ ಕುಂಡಲಿನಿಯನ್ನು ಕೆಳಗಿಳಿಯದಂತೆ ತಡೆಯುತ್ತದೆ. ಆಗಲೇ ಯೋಗದ ಮುಂದಿನ ಹಂತ ಪ್ರತ್ಯಾಹಾರ. ಮನಸ್ಸನ್ನು ಬೇಕಾದಲ್ಲಿ ಕೇಂದ್ರೀಕರಿಸುವ ಪ್ರಯತ್ನ.
ಒಮ್ಮೆ ದೇಹದೊಳಗೆ ಉತ್ಪಾದನೆಯಾಗಿರುವ ಅಷ್ಟೂ ಶಕ್ತಿಯನ್ನು ಮನಸ್ಸಿನ ಏಕಾಗ್ರತೆಗೆ ಧಾರೆಯೆರೆಯುತ್ತಾ ಹೋದಂತೆ ಅದು ಧಾರಣೆಗೆ ಅಣಿಯಾಗುತ್ತದೆ. ಯೋಗದ ಮುಂದಿನ ಹಂತವಿದು. ಈ ವೇಳೆಗೆ ಕುಂಡಲಿನಿ ಸುಷುಮ್ನದ ಮೂಲಕ ಮೇಲು- ಮೇಲಕ್ಕೆ ನುಗ್ಗುತ್ತಿರುತ್ತದೆ. ಆಗಲೇ ಸಿದ್ಧಿಯಾಗೋದು ಧ್ಯಾನ! ಈ ವೇಳೆಗಾಗಲೇ ಆಜ್ಞಾ ಚಕ್ರದಲ್ಲಿ ಸ್ಥಿತಗೊಂಡಿರುವ ಕುಂಡಲಿನಿ ಮನಸ್ಸು ಧ್ಯಾನದ ಆಳಕ್ಕೆ ಮುಳುಗುತ್ತಿದ್ದಂತೆ ಮೇಲೇರುತ್ತಾ ಏರುತ್ತಾ ಸಹಸ್ರಾರವನ್ನು ಸೇರಿ ಬಿಡುತ್ತದೆ. ಅಲ್ಲಿಗೆ ಭಾವನೆಗಳೆಲ್ಲ ಶೂನ್ಯವಾಗಿ ಭಾವಸಮಾಧಿ ಸಿದ್ಧಸಿಬಿಡುತ್ತದೆ. ಇದುವೇ ನಿಜವಾದ ಶಿವ-ಶಿವೆಯರ ಮಿಲನ. ಮತ್ತು ಇದುವೇ ನಿಜವಾದ ಕುಂಡಲಿನಿ ಜಾಗೃತಿಯ ಮಾರ್ಗ.
ಕುಂಡಲಿನಿಯನ್ನು ಜಾಗೃತಗೊಳಿಸುವುದು ಕಷ್ಟದ ಕೆಲಸ ಅಲ್ಲವೇ ಅಲ್ಲ. ವಿದ್ಯುತ್ ಉತ್ಪಾದನೆಗಿಂತ ಅದನ್ನು ಸಂಗ್ರಹಿಸುವ ಕೆಲಸ ಹೇಗೆ ಕಠಿಣವೋ, ಹಾಗೇ ಉತ್ಪಾದಿತ ಶಕ್ತಿಯನ್ನು ಹಿಡಿದಿಡಲು ಸಾಧನೆ ಬೇಕು. ಅದಕ್ಕೇ ಯೋಗದಲ್ಲಿ ಮೊದಲು ಯಮ-ನಿಯಮಗಳಿಗೇ ಪ್ರಾಶಸ್ತ್ಯ. ಇದನ್ನು ಸಿದ್ಧಸಿಕೊಳ್ಳಲಾಗದವ, ಕುಂಡಲಿನಿಯನ್ನು ಜಾಗೃತಗೊಳಿಸಿಕೊಂಡರೆ ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು.
ಹೀಗಾಗಿಯೇ ಸನಾತನ ಧರ್ಮದ ಸಾಹಿತ್ಯಗಳು ನೈತಿಕ ಚೌಕಟ್ಟಿನ ಆಗರ. ಅದಕ್ಕೇ ಇಲ್ಲಿ ಅಲ್ಕೈದಾ, ಐಸಿಸ್‍ಗಳು ಕಾಣಿಸಿಕೊಳ್ಳಲಾರವು, ಲಾಡೆನ್, ಮುಲ್ಲಾ ಒಮರ್‍ಗಳು ಹುಟ್ಟಲಾರರು!!

Tuesday 25 August 2015

ಕುಂಡಲಿನಿ, ನಮ್ಮೊಳಗಿನ ಸುಪ್ತ ಶಕ್ತಿ ಸಂಜೀವಿನಿ

ಶಿವನಿಗೆ ಮೂರನೇ ಕಣ್ಣು ಇರೋದು ಕಲಾವಿದನ ಕಲ್ಪನೆಯಾ ಅಥವಾ ಹಾಗೊಂದು ಸಾದ್ಯತೆ ಇದೆಯಾ? ಹೌದು, ಪುರಾಣದ ಕಥೆಗಳು ನಮ್ಮನ್ನು ಪ್ರಗತಿಂದ ದೂರ ತಳ್ಳಿಬಿಡುವ ಭಯ ಯಾವಾಗಲೂ ಇದ್ದದ್ದೇ. ಆದರೆ ಪ್ರಾಮಾಣಿಕವಾಗಿ ಹೇಳಿ, ಅನೇಕ ಬಗೆಯ ಅತೀಂದ್ರಿಯ ಶಕ್ತಿಗಳು ನಮಗೂ ಇಲ್ಲವೇ?
ಉದಾಹರಣೆಗೆ ಕೆಲವು ಅಪರೂಪದ ಘಟನೆಗಳು ಆಗಾಗ ನಮ್ಮ ಅನುಭವಕ್ಕೆ ಬರುತ್ತಲೇ ಇರುತ್ತವೆ. ಯಾರನ್ನೋ ಉತ್ಕಟವಾಗಿ ನೆನಪಿಸಿಕೊಳ್ಳುತ್ತಿರುತ್ತೇವೆ, ಅವರ ಫೋನ್ ಕಾಲ್ ಬರುತ್ತೆ ಅಥವಾ ಅವರೇ ಹಾಜರಾಗಿಬಿಡ್ತಾರೆ. ಆಗೆಲ್ಲ ನಿಮಗೆ ನೂರು ವರ್ಷ ಆಯಸ್ಸು ಅಂತೀವಿ. ದೂರದೂರಿನಲ್ಲಿ ಮಗ ತೊಂದರೆಗೆ ಸಿಕ್ಕಿ ಹಾಕಿಕೊಂಡಿರ್ತಾನೆ, ಇಲ್ಲಿ ಯಾವುದರ ಅರಿವಿಲ್ಲದಿದ್ದರೂ ತಾಯ ಎದೆ ಬಡಿತ ಜೋರಾಗಿರುತ್ತೆ. ಇವತ್ತು ಆಫೀಸಿನಲ್ಲಿ ಅವಘಡ ನಡೆದೇ ನಡೆಯುತ್ತೆ ಅಂತ ಮನಸ್ಸು ಹೇಳುತ್ತಿರುತ್ತೆ; ಸಂಜೆಯೊಳಗೆ ರಾದ್ದಾಂತವೇ ಆಗಿಬಿಟ್ಟಿರುತ್ತೆ. ಹೇಗೆ ಇದೆಲ್ಲ? ಪ್ರತೀಬಾರಿ ‘ಆಕಸ್ಮಿಕ’ವೇ ಉತ್ತರವೇ. ಅಥವಾ ಕಾಕತಾಳೀಯವೆಂದು ತಳ್ಳಿಬಿಡೋಣವೆ? ಪ್ರಾಮಾಣಿಕವಾಗಿ ಯೋಚಿಸಿ ಇವೆಲ್ಲ ಹೇಗೆ ಸಾಧ್ಯ?

10299003_925107604219059_9062761733252944909_nವಿಜ್ಞಾನದ ಮರೆಯಲಿ ನಿಂತು ಹಿಂದು ಧರ್ಮದ ಮೇಲೆ ಕಲ್ಲೆಸೆಯುವವರಿಗೆ ಒಂದು ಅಚ್ಚರಿಯ ಸಂಗತಿ ಹೇಳಲೇಬೇಕು. ಕಳೆದ ಕೆಲವಾರು ವರ್ಷಗಳ ಹಿಂದೆ ಮೆದುಳಿನ ಬರೋಬ್ಬರಿ ಮಧ್ಯ ಭಾಗದಲ್ಲಿ ವಿಜ್ಞಾನಿಗಳು ‘ಪಿನಿಯಲ್ ಗ್ಲ್ಯಾಂಡ್’ನ್ನು ಗುರುತಿಸಿದರು. ಇದು ಗೋಧಿಯ ಕಾಳಿನ್ಟದ್ದು ನಮ್ಮ ಪಾಲಿಗೆ ನಿದ್ದೆಯ ನಿಯಂತ್ರಣಕ್ಕೆ ಕಾರಣವಾಗುವುದಷ್ಟೇ ಅಲ್ಲ, ಅದ್ಭುತವಾದ ಆಧ್ಯಾತ್ಮಿಕ ಅನುಭೂತಿಗಳಿಗೂ ಪ್ರಮುಖ ತಾಣವಾಗಿದೆಯೆಂದು ಒಪ್ಪಿದ ಅನೇಕರು ಇದನ್ನು ‘ಮೂರನೇ ಕಣ್ಣು’ ಎಂತಲೇ ಕರೆದರು! ಭೌತಿಕ ಮತ್ತು ಆಧ್ಯಾತ್ಮಿಕ ಅನುಭವಗಳ ನಡುವಿನ ಕೊಂಡಿ ಇದು ಎಂಬುದು ಅವರ ಅಂಬೋಣ. ಅದಕ್ಕೆಂದೇ ಭ್ರೂ ಮಧ್ಯೆ ಭಸ್ಮವಿಟ್ಟು ಗೌರವ ಸಲ್ಲಿಸುವ ರೂಢಿ ನಮ್ಮದು. ಪಿನಿಯಲ್ ಗ್ರಂಥಿ ಚುರುಕಾದಾಗಲೆಲ್ಲ ಅತೀಂದ್ರಿಯವಾದ ಘಟನೆಗಳು ಸಹಜವೆಂಬಂತೆ ನಡೆಯುತ್ತವೆ.
ಇಷ್ಟಕ್ಕೂ ಅದೇಕೆ ಅಸಾಧ್ಯವಾಗಬೇಕು ಹೇಳಿ? ಹಾಗೇ ಗಮನಿಸಿ. ಜೋಗ್‌ನಲ್ಲಿ ಉತ್ಪಾದನೆಯಾಗುವ “ದ್ಯುತ್ ನಮ್ಮ ಮನೆಗೆ ತಲುಪಲು ವಾಹಕ ತಂತಿಗಳು ಬೇಕೇಬೇಕು. ಹಾಗೆಂದಮಾತ್ರಕ್ಕೆ ತಂತಿಗಳಿಲ್ಲದೇ “ದ್ಯುತ್ ಹರಿಯುವುದು ಅಸಾಧ್ಯವೆಂದಿರೋ ಜೋಕೆ. “ದ್ಯುತ್ತಿನ ಪ್ರಖರ ರೂಪವಾದ “ಂಚು ಭೂ”ಗೆ ತಲುಪಲು ಯಾವ ತಂತಿಯೂ ಇಲ್ಲವಲ್ಲ, ಅದು ಹೇಗೆ? ಬಲು ಸರಳ. ಮನೆಯಲ್ಲಿ ಹರಿಯುವ ವಿದ್ಯುತ್ ೧೨೦ ವೋಲ್ಟ್ ಸಾಮರ್ಥ್ಯದ್ದಾದರೆ, ಭೂಮಿಗೆ ಅಪ್ಪಳಿಸಲೆಂದು ಧಾವಿಸುವ ಮಿಂಚಿನದ್ದು ಹತ್ತು ಕೋಟಿ ವೋಲ್ಟ್‌ಗಳು! ಹರಿಯುವ ವಿದ್ಯುತ್ತಿನ ಸಾಮರ್ಥ್ಯ ಅಪಾರವಾಗಿದ್ದರೆ ಅದಕ್ಕೆ ವಾಹಕವೇ ಬೇಕಿಲ್ಲ. ಹಾಗಾದರೆ ಉತ್ಕಟವಾದ ಇಚ್ಛೆಯೊಂದು ತಂತಿಲ್ಲದೇ ಮತ್ತೊಬ್ಬ ವ್ಯಕ್ತಿಯನ್ನು ಮುಟ್ಟುವುದದೇಕೆ ಸಾಧ್ಯವಿಲ್ಲ?
ಸಾಮಾನ್ಯವಾಗಿ ಪ್ರೇಮಿಗಳಲ್ಲಿ ಈ ಬಗೆಯ ಉತ್ಕಟ ಭಾವವಿರುತ್ತದೆ. ಅದು ತಾಯ ಪ್ರೇಮವಿರಬಹುದು, ನಲ್ಲ-ನಲ್ಲೆಯರದ್ದೂ ಆಗಿರಬಹುದು. ಈ ಪ್ರವಾಹ ಏಕಮುಖವಾದಷ್ಟೂ ಪಿನಿಯಲ್ ಗ್ರಂಥಿ ಜಾಗೃತವಾಗುತ್ತದೆ. ಈ ಕಾರಣಕ್ಕೆ ನಮ್ಮಲ್ಲಿ ಮೂರ್ತಿಪೂಜೆ ಹುಟ್ಟಿಕೊಂಡಿದ್ದು. ಹುಟ್ಟುವ ಅಷ್ಟೂ ಪ್ರೇಮವನ್ನು ಆ ಮೂರ್ತಿಯ ಹಿಂದಿನ ತತ್ವಕ್ಕೆ ಸಮರ್ಪಿಸಿದರೆ ಈ ಗ್ರಂಥಿ ಜಾಗೃತವಾಗಿ ಆಗ ಹುಟ್ಟುವ ಆಲೋಚನೆಗಳು ಅಸಾಮಾನ್ಯವಾಗಿರುತ್ತವೆ. ‘ನಿಮಗೆ ನಿಮ್ಮ ಗಂಡ ದೇವರಾಗಬಹುದಾದರೆ, ನಾನೇಕೆ ದೇವರನ್ನೇ ಗಂಡನೆನ್ನಬಾರದು’ ಎಂದು ಮೀರಾ ಪ್ರಶ್ನಿಸುವಾಗ ಅವಳಲ್ಲಿದ್ದ ಭಾವ ಇದೇ. ಅಕ್ಕ ಮಹಾದೇವಿಯ ಚನ್ನಮಲ್ಲಿಕಾರ್ಜುನನ ಪ್ರೇಮವೂ ಇದೇ ಬಗೆಯದ್ದು. ಹೀಗಾಗಿಯೇ ಇಂದಿಗೂ ಅನೇಕರ ಮನಸ್ಸಿನ ಕದ ಅವರು ತಟ್ಟುತ್ತಲೇ ಇರುತ್ತಾರೆ! ಸುಮ್ಮನೆ ಯೋಚಿಸಿ. ಅವರು ಹುಟ್ಟು ಹಾಕಿದ ಆಲೋಚನಾ ತರಂಗಗಳ ಸಾಮರ್ಥ್ಯದೆದುರು ಮಿಂಚಿನ ದಶಕೋಟಿ ವೋಲ್ಟೂ ತೃಣ ಮಾತ್ರ! ಹೀಗಿರುವಾಗ ಹತ್ತು ಸಾವಿರ ವರ್ಷಗಳ ಹಿಂದೆ ತನ್ನ ಆಲೋಚನೆಗಳನ್ನು ಜಗತ್ತಿಗೆ ಕೊಟ್ಟ ಋಗಳ ಚಿಂತನಾ ತರಂಗಗಳ ಸಾಮರ್ಥ್ಯ ಅಂದಾಜು ಮಾಡಿ ನೋಡಿ!
ವಿಜ್ಞಾನ ಯಾವುದನ್ನು ವಿವರಿಸಲು ಹೆಣಗಾಡುತ್ತಿದೆಯೋ, ತಂತ್ರಶಾಸ್ತ್ರ ಕುಂಡಲಿನಿ ಶಕ್ತಿಯ ಮೂಲಕ ಸರಳವಾಗಿ “ವರಿಸಿದೆ. ಬಹುಶಃ ಅದು ಉಲ್ಲೇಖಿಸಿರುವ ಆಜ್ಞಾ ಚಕ್ರ ಪಿನಿಯಲ್ ಗ್ರಂಥಿಯೇ ಇರಬೇಕೆನ್ನಿಸುತ್ತದೆ.
ವಾಸ್ತವವಾಗಿ ಕುಂಡಲಿನಿ ಬೆನ್ನು ಮೂಳೆಯ ಕೆಳಭಾಗದಲ್ಲಿ ಸುಪ್ತವಾಗಿರುವುದಂತೆ. ಕುಂಡಲ ಅಂದರೆನೇ ಸುರುಳಿಯಾಕಾರದ್ದು ಅಂತ. ಈ ಶಕ್ತಿ ಹಾವಿನ ರೂಪದಲ್ಲಿ ಸುರುಳಿ ಸಿಂಬೆಯಾಗಿರುತ್ತದೆ. ಯೋಗದ ಮೂಲಕ ಈ ಹಾವನ್ನು ಜಾಗೃತಗೊಳಿಸಿ ಒಂದೊಂದೇ ಚಕ್ರದ ಮೂಲಕ ಹಾದುಹೋಗುವಂತೆ ಮಾಡಿದರೆ ಕೊನೆಗೆ ಮೆದುಳಿಗೆ ಬಂದು ಸೇರಿಕೊಳ್ಳುತ್ತದೆ. ಆಗ ಪರಮಾನುಭೂತಿ. ಅದಕ್ಕೇ ನಮ್ಮಲ್ಲಿ ಜಾಗೃತ ಕುಂಡಲಿನಿಯ ಪ್ರತೀಕವಾದ ನಾಗರ ಕಟ್ಟೆಗಳನ್ನು ಆರಾಧಿಸುವುದು.
ಈ ಇಡಿಯ ಪ್ರಕ್ರಿಯೆಯನ್ನು ಮತ್ತೊಂದು ಬಗೆಯಲ್ಲಿಯೂ ರಸವತ್ತಾಗಿ ಬಣ್ಣಿಸುತ್ತಾರೆ. ಮೂಲಾಧಾರದಲ್ಲಿರುವ ಕುಂಡಲಿನಿ ಎಲ್ಲ ಶಕ್ತಿಯ ಕೇಂದ್ರ. ಈ ಶಕ್ತಿಯೇ ದುರ್ಗೆ! ಬಹುಪಾಲು ಸಮಯ ಆಕೆ ಶಾಂತಳಾಗಿಯೇ ಇರುತ್ತಾಳೆ. ಪ್ರಯತ್ನಪೂರ್ವಕವಾಗಿ ಆಕೆಯನ್ನು ಜಾಗೃತಗೊಳಿಸಿದರೆ ಆಕೆ ಆರು ಚಕ್ರಗಳ ಮೂಲಕ ಹಾದು ಸಹಸ್ರಾರದಲ್ಲಿ ಕುಳಿತಿರುವ ಶಿವನೊಡನೆ ಒಂದಾಗುತ್ತಾಳೆ. ಯೋಗಿಯೊಬ್ಬ ಅನುಭವಿಸುವ ಪರಮಾನಂದವನ್ನು ಶಿವ-ಶಿವೆಯರ ಮಿಲನಕ್ಕೆ ಹೋಲಿಸಿದ್ದಾರೆ ನಮ್ಮವರು.
ಕುಂಡಲಿನಿಯ ಶಕ್ತಿಗೂ ಬೆನ್ನಹುರಿಗೂ ನಿಕಟವಾದ ಸಂಪರ್ಕವಿದೆ. ಹೀಗಾಗಿಯೇ ಯೊಗಾಸನಗಳಲ್ಲೂ ಬೆನ್ನಹುರಿ ನೇರವಾಗಿಟ್ಟುಕೊಳ್ಳುವ ಅಭ್ಯಾಸಕ್ಕೇ ಮೊದಲ ಪ್ರಾಶಸ್ತ್ಯ. ನೀರು ಹರಿಯುವ ಪೈಪು ಬಾಗಿ ಬೆಂಡಾಗಿದ್ದರೆ ನೀರು ಸರಾಗವಾಗಿ ಹರಿಯಲು ಹೇಗೆ ಅಡಚಣೆಯಾಗುವುದೋ ಹಾಗೆಯೇ ಬೆನ್ನಹುರಿ ನೇರವಾಗಿಲ್ಲದಿದ್ದರೆ ಕುಂಡಲಿನಿಯೂ ಸರಾಗವಾಗಿ ಮೇಲೇರಲಾರದು. ಈ ಬೆನ್ನಹುರಿಗೆ ಹೊಂದಿಕೊಂಡಂತೆ ಇರುವುದೇ ಇಡಾ ಮತ್ತು ಪಿಂಗಳವೆಂಬ ನಾಡಿಗಳು. ಇವೆರಡೂ ನಾಡಿಗಳ ನಡುವಿನ ಖಾಲಿ ಸ್ಥಳವೇ ಸುಷುಮ್ನಾ. ಈ ಸುಷುಮ್ನಾದ ಮೂಲಕವೇ ಏರೋದು ಕುಂಡಲಿನಿ.
ಇವಿಷ್ಟೂ ತುಂಬಾ ಟೆಕ್ನಿಕಲ್ ಆಯ್ತು. ಮೂಲಭೂತ ಪ್ರಶ್ನೆ ಮಾತ್ರ ಹಾಗೆಯೇ ಉಳಿತು. ಕುಂಡಲಿನಿಯಲ್ಲಿ ಶಕ್ತಿ ಇರೋದು ನಿಜವಾ? ವಿಜ್ಞಾನ ಅಧಿಕೃತವಾಗಿ ಈ ಕುರಿತಂತೆ ಏನೂ ಹೇಳಿಲ್ಲವಾದರೂ ಧಿಕ್ಕರಿಸುವ ಧೈರ್ಯವನ್ನೂ ತೋರುತ್ತಿಲ್ಲ. ಆದರೆ ಅನುಭವಕ್ಕೆ ಬರುವ ಕೆಲವು ಸಂಗತಿಗಳ ಆಧಾರದ ಮೇಲೆ ಕುಂಡಲಿನಿ ಶಕ್ತಿಯ ಇರುವನ್ನು ಅಂದಾಜಿಸಬಹುದು.
ಹಾಗೇ ಯೋಚಿಸಿ. ಮನಸ್ಸಿನಲ್ಲಿ ಬಗೆಬಗೆಯ ಆಸೆಗಳು ಭುಗಿಲೇಳುತ್ತಲೇ ಇರುತ್ತವೆ. ತಿನ್ನುವ, ಕುಡಿಯುವ, ನೋಡುವ, ಸ್ಪರ್ಶಿಸುವ, ಭೋಗಿಸುವ ಬಗೆ-ಬಗೆಯ ಬಯಕೆಗಳು. ಆದರೆ ನೀವೊಂದು ಮುಖ್ಯವಾದ ಪರೀಕ್ಷೆ ಬರೆಯಬೇಕಾದ ದಿನ ಬಂದಿದೆಯೆಂದುಕೊಳ್ಳಿ, ಅವತ್ತು ಹಸಿವಿದ್ದರೂ ತಿನ್ನಬೇಕೆನಿಸುತ್ತಿಲ್ಲ; ಭೋಗದ ಬಯಕೆಗಳು ಹತ್ತಿರಕ್ಕೂ ಸುಳಿಯುತ್ತಿಲ್ಲ. ಹೀಗೇಕೆ? ಒಳ್ಳೆಯ ಭಜನೆಯೊಂದನ್ನು ಕೇಳಿದ ಮೇಲೆ ಸ್ವಲ್ಪ ಹೊತ್ತು ಕಣ್ಣುಮುಚ್ಚಿ ಕೂರಬೇಕೆನಿಸುತ್ತಲ್ಲ!! ಆಗೆಲ್ಲಾ ನಾವೂ ಉದ್ಗರಿಸುತ್ತೇವೆ, ‘ಮನಸ್ಸು ಅದೆಷ್ಟು ಎತ್ತರಕ್ಕೇರಿತ್ತಲ್ಲ’ ಅಂತ. ನಿಜ ಹೇಳಿ. ಮನಸ್ಸು ಕೆಳಕ್ಕಿಳಿಯುವುದು, ಎತ್ತರಕ್ಕೇರುವುದು ಅಂತೆಲ್ಲ ಮಾತಾಡುವ ನಮಗೆ ನಿಜವಾಗಿಯೂ ಮನಸ್ಸು ಎಲ್ಲಿದೆ ಎಂಬುದು ಗೊತ್ತೇನು? ವಾಸ್ತವವಾಗಿ ಕುಂಡಲಿನಿ ಮೂಲಾಧಾರದಲ್ಲಿದ್ದಾಗ ಮನಸ್ಸು ಭೋಗದ ಚಿಂತನೆಯಲ್ಲಿ ಲೀನವಾಗಿರುತ್ತದೆ. ಅಲ್ಲಿಂದ ಅದು ಒಂದೊಂದು ಹಂತ ಮೇಲೇರಿದಂತೆಲ್ಲ ಮನೋಭಾವನೆಗಳು ಬದಲಾಗುತ್ತ ಸಾಗುತ್ತದೆ.
ಋಗಳು ಕುಂಡಲಿನಿ ಸಾಗುವ ಹಾದಿಯನ್ನು ಗಮನಿಸಿ ಮಾರ್ಗದುದ್ದಕ್ಕೂ ಚಕ್ರಗಳನ್ನು ಗುರುತಿಸಿದ್ದಾರೆ. ಅತ್ಯಂತ ಕೆಳಮಟ್ಟದ್ದು ಮೂಲಾಧಾರ. ಇಲ್ಲಿಯೇ ಕುಂಡಲಿನಿ ಸದಾ ಸುರುಳಿಯಾಗಿರೋದು. ಇಲ್ಲಿಂದ ಮೇಲೆ ಮಣಿಪೂರ, ಆಮೇಲೆ ಸ್ವಾಧಿಷ್ಠಾನ. ಮತ್ತೂ ಸ್ವಲ್ಪ ಮೇಲೇರಿದರೆ ಅನಾಹತ. ಆನಂತರ “ಶುದ್ಧ, ಭ್ರೂ ಮಧ್ಯೆ ಆಜ್ಞಾ. ಈ ಆರು ಚಕ್ರಗಳನ್ನು ದಾಟಿದರೆ ಸೇರೋದು ಮೆದುಳಿನಲ್ಲಿನ ಸಹಸ್ರಾರ. ಪ್ರತಿಯೊಂದು ಚಕ್ರವೂ ಒಂದೊಂದು ಕಮಲದಂತೆ ಚಿತ್ರಿಸಲ್ಪಟ್ಟಿದೆ. ಅದಕ್ಕಿರುವ ದಳಗಳ ಸಂಖ್ಯೆಯೂ ಬೇರೆ-ಬೇರೆ. ಸಹಸ್ರಾರ ಕೆಳಮುಖವಾಗಿ ಇನ್ನೂ ಅರಳದಿರುವ ಸಾ”ರ ದಳಗಳ ಕಮಲವಂತೆ. ಕುಂಡಲಿನಿ ಒಂದೊಂದೇ ಚಕ್ರವನ್ನು ಹಾದು ಹೋಗುತ್ತಿದ್ದಂತೆ ಆಯಾ ಕಮಲಗಳು ಅರಳುತ್ತವೆ. ಆಗೆಲ್ಲ ಬಗೆಬಗೆಯ ಶಕ್ತಿಗಳು ಸಿದ್ಧಿಯಾಗುತ್ತವೆ. ಕೆಲವರಿಗೆ ನೀರಿನ ಮೇಲೆ ನಡೆಯುವ, ಗಾಳಿಯಲ್ಲಿ ತೇಲುವ ಶಕ್ತಿ ದೊರೆತರೆ ಇನ್ನೂ ಕೆಲವರಿಗೆ ಇತರರ ಮನಸ್ಸನ್ನೇ ಓದಿಬಿಡುವ ಶಕ್ತಿ ಬಂದೀತು. ಈ ಕುಂಡಲಿನಿ ಸಹಸ್ರಾರವನ್ನು ಮುಟ್ಟಿದೊಡನೆ ಕೆಳಮುಖವಾಗಿರುವ ಆ ಕಮಲ ಊರ್ಧ್ವಮುಖಿಯಾಗಿ ಅರಳಿ ನಿಲ್ಲುವುದಂತೆ. ಆಗಲೇ ಯೋಗಿಯೊಬ್ಬ ಪರಿಪೂರ್ಣ ಆನಂದವನ್ನು ತನ್ನದಾಗಿಸಿಕೊಳ್ಳುವುದು. ಆಗಲೇ ಆತನಿಗೆ ಬಾಹ್ಯ ಪ್ರಜ್ಞೆ ಕಳೆದುಹೋಗಿ ಪೂರ್ಣ ಸಮಾಧಿಯ ಅನುಭೂತಿಯಾಗೋದು.
ಇಂತಹ ಸ್ಥಿತಿಗೇರಲು ಎರಡು ಮಾರ್ಗಗಳಿವೆ. ಮೊದಲನೆಯದು ಅರಿ”ಗೇ ಬರದಂತೆ ಅಚಾನಕ್ಕಾಗಿ ಜ್ಞಾನದ ಹೊಸ್ತಿಲನ್ನು ಎಡವಿ ಬಿದ್ದು ಸಮಾಧಿಗೇರಿಬಿಡುವುದು, ಮತ್ತೊಂದು ನಿರಂತರ ಅಭ್ಯಾಸದಿಂದ ಹಂತ-ಹಂತವಾಗಿ ಮೇಲೇರಿ, ಬೇಕೆಂದಾಗ ಈ ಅನುಭವದ ಸವಿ ಸವಿಯುವುದು. ನಮ್ಮ ಋಷಿಗಳು ಎರಡನೇ ಸಾಲಿಗೆ ಸೇರಿದವರು. ಅಷ್ಟೇಅಲ್ಲ, ಇತರರು ಇದನ್ನು ಸಾಧಿಸಿಕೊಳ್ಳಲು ಬೇಕಾದ ಕ್ರಮವನ್ನೂ ನಿರೂಪಿಸಿಕೊಟ್ಟರು. ಅಚಾನಕ್ಕಾಗಿ ಕುಂಡಲಿನಿ ಮೇಲೇರಿದ ಕೆಲವರಿಗೆ ಪೊದೆಯಲ್ಲಿ, ಗುಹೆಯಲ್ಲಿ ದೇವತೆಗಳು ಕಂಡರು; ದೇವದೂತರು ಅನ್ನ-ನೀರು ಕೊಟ್ಟರು. ಅನಕ್ಷರಸ್ಥ ಓದುವಂತೆ ಮಾಡಿದರು. ಈ ಬಗೆಯ ಅನುಭವಗಳ್ಯಾವುವೂ ಸುಳ್ಳಾಗಿರಲಿಕ್ಕಿಲ್ಲ. ಆದರೆ ಕುಂಡಲಿನಿ ಅಚಾನಕ್ಕು ಸಹಸ್ರಾರ ಮುಟ್ಟಿದ ಆನಂದವನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ ಅಷ್ಟೇ. ಇಂಥವರು ಹುಟ್ಟುಹಾಕಿದ ಮತ ಪಂಥಗಳು ಕೆಲವಷ್ಟು ಒಳ್ಳೆಯ ಅಂಶಗಳನ್ನು ಹೊಂದಿದ್ದರೂ ಅವು ಸಮಾಜಕ್ಕೆ ಉಂಟುಮಾಡಿದ ಅನಾಹುತವೇ ಹೆಚ್ಚು. ಹಾಗೆಂದು ಸ್ವಾಮಿ ವಿವೇಕಾನಂದರ ಅಭಿಮತ.
ಭಾರತ ಈ ಕುಂಡಲಿನಿಯ ಜಾಗೃತಿಗೆ ರೂಪಿಸಿದ ವೈಜ್ಞಾನಿಕಕ್ರಮವನ್ನು ಯೋಗ ಎಂದು ಕರೆತು. ಶಕ್ತಿ ಉತ್ಪಾದನೆಯ ತೀವ್ರ ಪ್ರಯತ್ನಕ್ಕೆ ಧ್ಯಾನ ಎಂಬ ಹೆಸರು ಕೊಟ್ಟಿತು. ಹಾಗಂತ ಯೋಗ ಸಲೀಸಾದುದಲ್ಲ. ಮನಸ್ಸು ಕೇಳಮುಖವಾಗಿದೆಯೆಂದರೆ ಕುಂಡಲಿನಿ ಕೆಳ ಚಕ್ರದಲ್ಲಿದೆ ಅಂತರ್ಥ ತಾನೇ? ಅದಕ್ಕೆ ಮೊದಲು ಮನಸ್ಸನ್ನು ಅಭ್ಯಾಸಪೂರ್ವಕವಾಗಿ ಮೇಲೆತ್ತಬೇಕು. ಅಂದರೆ ಭೋಗದ ವಾಸನೆ ಬಿಡಬೇಕು. ಈ ಬಗೆಯ ವಿರಾಗಿಯಲ್ಲಿ ಕುಂಡಲಿನಿ ಸುಮ್ಮನಿರುವುದಕ್ಕೆ ಸಾಧ್ಯವೇ ಇಲ್ಲ ಮತ್ತು ಜಾಗೃತಗೊಂಡ ಕುಂಡಲಿನಿಗೆ ಸುಷುಮ್ನಾದ ಮೂಲಕ ಮೇಲೇರದೇ ಬೇರೆ ವಿಧಿಲ್ಲ. ಆಗ ಅವನದ್ದು ಧ್ಯಾನಕ್ಕೆ ಮೊದಲ ಹೆಜ್ಜೆ. ಇವಿಷ್ಟೂ ಆಗುವ ವೇಳೆಗೆ ಮನಸ್ಸು ಸಾಕಷ್ಟು ಮೆತ್ತಗಾಗಿರುತ್ತದೆ. ತನ್ನ ಹಾರಾಟವನ್ನು ಕಡಿಮೆ ಮಾಡಿ ಹೇಳಿದಂತೆ ಕೇಳಿಕೊಂಡು ಬಿದ್ದಿರುತ್ತದೆ. ಈಗ ಇದನ್ನು ಬೇಕಾದೆಡೆ ಕೇಂದ್ರೀಕರಿಸುವ ಪ್ರಯತ್ನ ಮಾಡಬೇಕು. ಇದನ್ನು ದೀರ್ಘಕಾಲ ಅಭ್ಯಾಸ ಮಾಡಿದರೆ ಇದು ಧ್ಯಾನವಾಗಿಬಿಡುತ್ತದೆ.
ಹೀಗೆ ಧ್ಯಾನದಿಂದ ಶೇಖರಿಸಲ್ಪಟ್ಟ ಅಷ್ಟೂ ಶಕ್ತಿಯು ಸುಷುಮ್ನಾ ನಾಳದ ಮೂಲಕ ಹರಿಯಲು ಶುರುವಾತೆಂದರೆ ಅಪರೂಪದ ಅನುಭವಗಳಾಗುತ್ತವೆ. ಇವು ನಮ್ಮ ಕಲ್ಪನೆಯನ್ನು, ಕನಸನ್ನೂ ಮೀರಿಸಬಹುದಾದ ವೈಭವದ ಅನುಭವಗಳು. ಒಂದೊಂದು ಚಕ್ರದ ಕಮಲವೂ ಕುಂಡಲಿನಿ ಶಕ್ತಿ ಪ್ರವಾಹದಿಂದ ಅರಳುತ್ತ ಹೋದಂತೆ ಸೃಷ್ಟಿಯ ರಹಸ್ಯ ತೆರೆದುಕೊಳ್ಳುತ್ತ ಹೋಗುವುದು. ಅಪಾರವಾದ ಶಕ್ತಿ ಹರಿಯಲಾರಂಭಿಸುವುದು. ಹೀಗೆ ಕ್ರಮಬದ್ಧ ಸಾಧನೆಂದ ಶಕ್ತಿ ಸಂಚಯ ಮಾಡಿಕೊಂಡವರು ಋಗಳೆನಿಸಿದರು. ಅವರೇ ವೇದಗಳನ್ನು ಬೆಳಕಿಗೆ ತಂದರು. ಭೂಗೋಳ, ಖಗೋಳ, ಅಣು ವಿಜ್ಞಾನ, ಆಯುರ್ವೇದವೇ ಮೊದಲಾದವುಗಳ ಅಂತರಂಗವನ್ನು ಅರಿತು ನಮ್ಮೆದುರಿಗಿಟ್ಟರು. ಇಷ್ಟು ಶ್ರೇಷ್ಠ “ಚಾರಗಳನ್ನು ಸಮಾಜಕ್ಕೆ ನೀಡುವಾಗ ಇದಕ್ಕೊಂದು ಪೇಟೆಂಟ್ ಪಡೆಯಬೇಕೆಂದು ಅವರಿಗೆಂದೂ ಅನಿಸಲಿಲ್ಲ. ತಮ್ಮ ವಿಚಾರಗಳನ್ನು ಉಳಿಸುವುದಕ್ಕೋಸ್ಕರ “ರೋಧಿಗಳ ದಮನ ಮಾಡಲು ಅವರು ಕತ್ತಿ ಹಿಡಿಯಲಿಲ್ಲ. ಏಕೆಂದರೆ ಅವರು ಯೋಗಿಗಳಾಗಿದ್ದರು, ಭೋಗಿಗಳಲ್ಲ!
ಅಂದಹಾಗೆ ಒಂದು ಮಾತು. ವ್ಯಕ್ತಿಯೊಬ್ಬ ಕುಂಡಲಿನಿ ಜಾಗೃತಗೊಳಿಸಿಕೊಂಡು ವಿಶೇಷ ಜ್ಞಾನ ಪಡೆದು ಋಷಿಯಾಗುತ್ತಾನೆ, ಗುರುವಾಗುತ್ತಾನೆ. ಹಾಗೆಯೇ ರಾಷ್ಟ್ರಕ್ಕೂ ಕುಂಡಲಿನಿ ಇದೆಯಾ? ಏಕಿಲ್ಲ. ರಾಷ್ಟ್ರಕ್ಕೆ ಆತ್ಮಇರಬಹುದಾದರೆ ಕುಂಡಲಿನಿಯೂ ಇರಲೇಬೇಕು. ಒಮ್ಮೆ ಭಾರತದ ಭೂಪಟವನ್ನು ಕಣ್ಣೆದುರಿಗಿಟ್ಟುಕೊಂಡು ನೋಡಿ. ಮೂಲಾಧಾರವಾದ ಕನ್ಯಾಕುಮಾರಿಯಲ್ಲಿ ಸುಪ್ತಳಾಗಿರುವ ದುರ್ಗೆಯು ಮೈಕೊಡವಿ ಎದ್ದು ನಿಂತು ಸಹಸ್ರಾರವಾದ ಹಿಮಾಲಯದಲ್ಲಿ ನೆಲೆ ನಿಂತಿರುವ ಶಿವನನ್ನು ಸೇರಿಕೊಂಡುಬಿಟ್ಟರೆ ರಾಷ್ಟ್ರದ ಕುಂಡಲಿನಿ ಷಟ್ಚಕ್ರಗಳನ್ನು ಭೇದಿಸಿದಂತೆಯೇ. ವಿಶ್ವಗುರುವಾಗುವ ಕೊನೆಯ ಹಂತ ಅದೇ!

Tuesday 18 August 2015

ಇದು ಬೌದ್ಧಿಕ ಕ್ಷತ್ರಿಯರ ಯುದ್ಧ

 ಅಮೇರಿಕಾದ ಪ್ರಿಸ್ನಟನ್ ನ ಶಾಲೆ. ಅಲ್ಲಿನ ಶಿಕ್ಷರರೊಬ್ಬರು ದೆಹಲಿ ಮೂಲದ ಹಿಂದೂವೊಬ್ಬರನ್ನು ವಿವೇಕಾನಂದರು ಮತ್ತು ರಾಮಕೃಷ್ಣರ ಕುರಿತಂತೆ ಮಕ್ಕಳಿಗೆ ಪಾಠ ಮಾಡಬಾರದೆಂದು ನುಡಿದರು.ಆಶ್ಚರ್ಯಚಕಿತರಾದ ಆತ ಹುಬ್ಬೇರಿಸಿ ಏಕೆಂದು ಕೇಳಿದರೆ ಅವರು ಸಲಿಂಗಕಾಮಿಗಳಾಗಿದ್ದರಂತೆ ಎಂಬ ಉತ್ತರ ಬಂತು.ಬೆಚ್ಚಿ ಬಿದ್ದ ಭಾರತೀಯ ಮೂಲದ ವ್ಯಕ್ತಿ ಹಾಗೆ ಹೇಳಿದ್ದು ಯಾರೆಂದು ಕೇಳಿದ್ದಕ್ಕೆ ಅವರು ಆತನ ಕೈಗೊಂದು ಪುಸ್ತಕವಿತ್ತರು.ಅದು ಜೆಫ್ರಿ ಕೃಪಾಲ್ ಬರೆದಿದ್ದ ‘ಕಾಳಿಯ ಮಕ್ಕಳು’. ಕೃತಿಯುದ್ದಕ್ಕೂ ವಿಕೃತಿಗಳೇ ತುಂಬಿದ್ದುದನ್ನು ಕಂಡು ಅಸಹ್ಯದಿಂದ ಬೆಂದು ಹೋದ ಆತ ಅಮೇರಿಕಾದ ಬುದ್ಧಿವಂತರ ನಡುವೆ ತಿರುಗಾಡುತ್ತಿರುವ ಹಿಂದೂಗಳ ಅವಹೇಳನ ಮಾಡುವ ಅನೇಕ ಪುಸ್ತಕಗಳನ್ನು ಹುಡುಕಿದರು.ಅದರ ಕುರಿತಂತೆ ಇತರ ಹಿಂದೂಗಳಿಗೆ ಗೊತ್ತಿರಲಿಲ್ಲವೆಂದಲ್ಲ.ಆದರೆ ಅವರು ಅದೆಷ್ಟು ಅವಮಾನಿತರಾಗಿದ್ದರೆಂದರೆ ಬಾಯಿ ತೆರೆಯಲಾಗದೇ ಮೌನ ವಹಿಸಿ ಬಿಟ್ಟಿದ್ದರು.ಶಾಲೆಗಳಲ್ಲಿ ಹಿಂದೂವಾಗಿರುವುದು ಮಗುವೊಂದಕ್ಕೆ ಅತ್ಯಂತ ಕಠಿಣವಾಗಿತ್ತು.ಓರಗೆಯ ಕ್ರಿಶ್ಚಿಯನ್ನರು ಹಿಂದೂ ದೇವ-ದೇವಿಯರನ್ನು ಆಡಿಕೊಂಡು ನಗುವಾಗ ಇವರೆಲ್ಲ ಬರಿಯ ಮೂಕ ಪ್ರೇಕ್ಷಕರಷ್ಟೇ.
ರಾಜೀವ್ ಮಲ್ಹೋತ್ರಾ! ಬ್ರೇಕಿಂಗ್ ಇಂಡಿಯಾ, ಬೀಯಿಂಗ್ ಡಿಫರೆಂಟ್, ಇಂದ್ರಾಸ್ ನೆಟ್ ಗಳ ಮೂಲಕ ಅಮೇರಿಕಾದಾದ್ಯಂತ ಹರಡಿಕೊಂಡಿರುವ ಹಿಂದೂ ವಿರೋಧಿಗಳಿಗ ಸೂಕ್ತ ಉತ್ತರ ಕೊಡುತ್ತಿರುವ ವ್ಯಕ್ತಿ. ಎಡಪಂಥದ ಗಬ್ಬು ಘಾಟಿನಲ್ಲಿಯೇ ಕಾಲದೂಡುತ್ತಿರುವ ಭಾರತದ ಬುದ್ಧಿ ಜೀವಿಗಳ ಆರಾಧ್ಯವೆನಿಸಿದ್ದವರನ್ನೆಲ್ಲ ತನ್ನ ಭೌದ್ಧಿಕ ಗದಾಪ್ರಹಾರದಿಂದ ಝಾಡಿಸಿ ಕೊಡವಿ ಬಿಟ್ಟಿರುವ ಜಟ್ಟಿ ಆತ.
ತನ್ನ ಮಗು ಓದುತ್ತಿರುವ ಪ್ರಿನ್ಸ ಟನ್ ನ ಶಾಲೆಯೊಂದು ಆತನಲ್ಲಿ ಭಾರತದ ಕುರಿತಂತೆ, ಹಿಂದೂ ಧರ್ಮದ ಕುರಿತಂತೆ ಜಿಜ್ಞಾಸೆ ಹುಟ್ಟು ಹಾಕಿತ್ತು.ಅವರು ಅಮೇರಿಕದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನಗಳಿಗೆ ಹೋಗಲು ಶುರು ಮಾಡಿದರು.ಅವರಿಗೆ ಅಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು.ಜುದಾಯಿಸಂನ ಬಗ್ಗೆ ರಬ್ಬಿಗಳು,ಬುದ್ಧ ಪಂಥದ ಕುರಿತಾಗಿ ಭಿಕ್ಷುಗಳು,ಇಸ್ಲಾಂನ ಬಗ್ಗೆ ಇಮಾಮ್ ಗಳು ಮಾಡನಾಡಿದರೆ,ಹಿಂದೂ ಧರ್ಮದ ಕುರಿತಾಗಿ ಮಾತ್ರ ಹಿಂದೂಗಳೇ ಅಲ್ಲದ ಯನಿವರ್ಸಿಟಿಯ ಪ್ರೊಫೆಸರುಗಳು ಮಾಡನಾಡುತ್ತಿದ್ದರು.ಸಂಸ್ಕೃತವನ್ನು ತಿಳಿಯುವುದೆಂದರೆ ಹಿಂದೂ ಧರ್ಮದ ಸಾಹಿತ್ಯವನ್ನು ಅರೆದು ಕುಡಿದಿರುವಂತೆ ಎಂಬುದು ಅವರ ಭಾವನೆಯಾಗಿತ್ತು.ರಾಜೀವ್ ಗೆ ಇದು ಸರಿ ಕಾಣಲಿಲ್ಲ.ಅವರು ಅಮೇರಿಕನ್ನರ ಗ್ರಹಿಕೆಯನ್ನು ವ್ಯವಸ್ಥಿತವಾಗಿ ಖಂಡಿಸಿ ಪತ್ರಿಕೆಗಳಿಗೆ ಲೇಖನ ಬರೆಯಲಾರಂಭಿಸಿದರು.
ವೆಂಡಿ ಡೋನಿಯರ್ ಮತ್ತು ಆಕೆಯ ಶೀಷ್ಯ ವೃಂದ ಹಿಂದೂ ಧರ್ಮದ ಮೇಲೆ ಎಸಗಿರುವ ಆಘಾತ ಈಗ ಮುಕ್ತ ಚರ್ಚೆಗೆ ಬಂತು.ದೆಹಲಿಯ ವಕಿಲೇ ಮೋನಿಕಾ ಅರೋರಾ ಈ ಚರ್ಚೆಗಳಿಂದ ಪ್ರೇರೆಪಿತರಾಗಿ ವೆಂಡಿ ಡೋನಿಯರ್ ಳ ಹಿಂದೂ ಧರ್ಮಕ್ಕೆ ವಿರುದ್ಧವಾಗಿರುವ ಕೃತಿಯೊಂದರ ಮೇಲೆ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದಳು.ಅಲ್ಲಿಗೆ ಹಿಂದೂ ಧರ್ಮ ಇನ್ನು ಅಪದ್ಧಗಳನ್ನು ಸಹಿಸಲಾರದೆಂಬ ಸ್ಪಷ್ಟ ಸಂದೇಶ ಜಗತ್ತಿಗೆ ಹೋಯ್ತು.ಅಕೇಯ ಕೃತಿಯಲ್ಲಿದ್ದ ತಪ್ಪುಗಳನ್ನು ಪುಟಸಂಖ್ಯೆಗಳ ಸಮೇತ ಉಲ್ಲೇಖ ಮಾಡಿ ನ್ಯಾಯಾಲದ ಮುಂದಿರಸಲಾಯಿತು.ಆಕೆಯ ಭಾರತದ ಭಕ್ತರು,ಪಶ್ಚಿಮದ ಶಿಷ್ಯರು ಹಿಂದೂ ಧರ್ಮದ ಸಹಿಷ್ಣು ವಿಚಾರಧಾರೆ ಸತ್ತೇ ಹೊಯಿತೆಂದು ಒಂದೇ ಕಣ್ಣಿನಲ್ಲಿ ಅತ್ತರು.ಯಾರೂ ‘ಕ್ಯಾರೆ’ ಎನ್ನಲಿಲ್ಲ.ಕೊನೆಗೆ ಕೆಲವು ಗೂಂಡಾಗಳು ಈ ಕೃತಿಯ ವಿರುದ್ಧನಿಂತಿದ್ದಾರೆಂದು ಪುಕಾರು ಹಬ್ಬಿಸಿ ಜನಸ್ಪಂದನೆಗಾಗಿ ಕಾದರು.ಲಾಭವಾಗಲಿಲ್ಲ,ಪ್ರಕಾಶಕರಾದ ಪೆಂಗ್ವಿನ್ ಸಂಸ್ಥೆ ಈ ಪುಸ್ತಕವನ್ನು ಮರಳಿಪಡೆದು ಡೋನಿಯರ್ ತಪ್ಪು ಮಾಡಿದ್ದಾಳೆಂಬುದನ್ನು ಅನುಮೋದಿಸಿತು.
ಹಾಗೆ ನೋಡಿದರೆ ಈ ಇಡಿಯ ಹೋರಾಟದಲ್ಲಿ ರಾಜೀವ್ ಮಲ್ಹೋತ್ರಾ ನೇರವಾಗಿ ಇಳಿದೇ ಇರಲಿಲ್ಲ ಆದರೆ ಅಮೇರಿಕಾದಲ್ಲಿ ಅವರು ಶುರು ಮಾಡಿದ ಬೌದ್ಧಿಕ ಸಮರ ಜಗತ್ತಿನ ಎಲ್ಲ ಹಿಂದೂಗಳ ಆತ್ಮಸ್ಥೈರ್ಯ ವೃದ್ಧಿಸಿತ್ತು.
ರಾಜೀವ್ ಮಲ್ಹೋತ್ತಾ ಅಮೇರಿಕನ್ನರ,ಬುದ್ಧಿಜೀವಿಗಳ,ಕ್ರಿಶ್ಚಿಯನ್ ಮಿಷಿನರಿಗಳ ವಿರುದ್ಧ ತೊಡೆತಟ್ಟಿ ಸಮರಕ್ಕೆ ನಿಂತರು.ಎಲ್ಲಿಯೂ ಭಾವನೆಗಳು ಬೌದ್ಧಿಕ ಯುದ್ದಧವನ್ನು ಸೋಲಿಸದಂತೆ ಎಚ್ಚರಿಕೆ ವಹಿಸಿದರು.ಭಾರತದ ಕುರಿತಂತೆ,ಹಿಂದೂ ಧರ್ಮದ ಕುರಿತಂತೆ ಅಮೆರಿಕನ್ ಪಂಡಿತರು ಎತ್ತಿರುವ ಪ್ರಶ್ನೆಗಳಿಗೆ ಅವರದೇ ಶೈಲಿಯಲ್ಲಿ ಉತ್ತರಿಸಲಾರಂಭಿಸಿದರು.ಭಾರತನ್ನು ಅವಹೇಳನನ ಗೈಯುವ, ಹಿಂದೂ ಧರ್ಮವನ್ನು ತುಚ್ಛವಾಗಿ ಕಾಣುವ ಬಿಳಿಯರ ಪ್ರಯತ್ನಕ್ಕೆ ತಡೆಗೋಡೆಯಾಗಿ ನಿಂತರು.ಅಲ್ಲಿಯವರೆಗೆ ಸುಪ್ತವಗಿದ್ದ ಹಿಂದೂ ಶ್ರದ್ಧೆ ಜಾಗೃತವಾಯ್ತು.ರಾಜೀವ್ ಮಲ್ಹೋತ್ರಾ ಹಿಂದೂಗಳನ್ನು ಅಂತಾರಾಷ್ಟರೀಯ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳುವ ಸಮರ್ಥ ವ್ಯಕ್ತಿಯಾಗಿಬಿಟ್ಟಿದ್ದರು.ಅವರ ಬ್ರೇಕಿಂಗ್ ಇಂಡಿಯಾ ಅಂತೂ ಭಾರತವನ್ನು ಛಿದ್ರ ಛಿದ್ರವಾಗಿಸುವ ಮಿಶಿನರಿಗಳ ಕೈವಾಡಕ್ಕೆ ಹಿಡಿದ ಕೈಗನ್ನಡಿಯಾಯ್ತು.
ಸಹಜವಾಗಿಯೇ ಇಷ್ಟೂ ದಿನ ಸುಳ್ಳನ್ನು ಸತ್ಯವೆಂದುನಂಬಿಸುತ್ತಾ ಬಂದಿದ್ದ ಪಶ್ಚಿಮದ ಪಂಡಿತರ ಬೆವರು ಹರಿಯಿತು.ರಾಜೀವ್ ಮಲ್ಹೋತ್ರಾರನ್ನು ಚರ್ಚೆಗೆ ಆಹ್ವಾನಿಸುವುದನ್ನೇ ಬಿಟ್ಟು ಬಿಟ್ಟರು.ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದವರು ಅವರ ಅಧ್ಯಯನದ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನೆ ಎತ್ತಿದರು.ಅಮೆರಿಕದಲ್ಲಿ ಬಿಡಿ, ಭಾರತದಲ್ಲೂ ಸಮೂಹ ಮಾಧ್ಯಮದ ಆಯಕಟ್ಟಿನಲ್ಲಿರುವವರು ಈ ಎಲ್ಲ ಬೆಳವಣಿಗೆಗಳಿಂದ ವಿಚಲಿತರಾಗಿ ಮನಸ್ಸಿಗೆ ಬಂದಂತೆ ಮಾತನಾಡಿದರು.ಅದು ಹಾಗೆಯೇ.ಬರ್ಖಾ,ರಾಜ್ ದೀಪ್ ರಿಗಷ್ಟೇ ಅಲ್ಲ, ನಮ್ಮ ಅನೇಕ ವಿಶ್ವವಿದ್ಯಾಲಯಗಳ ಪ್ರಮುಖ ಪ್ರೋಫೆಸರುಗಳಿಗೆ ಈ ಅಮೇರಿಕದ ಪಂಡಿತರ ಕೃತಿಗಳೇ ಅಧ್ಯಯನಕ್ಕೆ ಆಹಾರ.ಇವರುಗಳೆಲ್ಲ ಭಾರತವನ್ನು ನೋಡುವುದು ಈ ಕೃತಿಗಳ ಕಣ್ಣಿನಿಂದಲೇ.
ಎಷ್ಟು ಅಚ್ಚರಿಯಲ್ಲವೆ? ಋಗ್ವೇದದ ಅನುವಾದ ನಮಗೆ ಮ್ಯಾಕ್ಸ್ ಮುಲ್ಲರನದೇ ಆಗಬೇಕು.ಹಿಂದೂ ಪ್ರಜ್ಞೆಯ ಕುರಿತಂತೆ ವೆಂಡಿ ಡೋನಿಯರಳೇ ಹೇಳಬೇಕು.ಕೊನೆಗೆ ಪೂರ್ವದ ಸಾಹಿತ್ಯದ ಕುರಿತಂತೆ ಅಧಿಕಾರಿಯುತವಾಗಿ ಮಾತನಾಡಲು ಶೆಲ್ಡನ್ ಪೊಲ್ಲಾಕ್ ನೇ ಬೇಕು.ಆತ ಮತ್ತೊಬ್ಬ ಮಹಾ ಮೋಸಗಾರ,ಆಚರಣೆಗಳಿಂದ ಹಿಂದುವಂತೆ ಕಾಣಿಸಿಕೊಳ್ಳುತ್ತಾನೆ.ನಿಮ್ಮ ಮನೆಗೋ,ಮಠಕ್ಕೋ ಬಂದರೆ ನೇರ ದೇವರೆದುರಿಗೆ ನಿಂತು ‘ಅಗ್ನಿಮೀಳೆ’ ಎಂದು ಮಂತ್ರ ಶುರು ಮಾಡಿಯೇಬಿಡುತ್ತಾನೆ.ಅಲ್ಲಿಗೆ ನೀವು ಕ್ಲೀನ್ ಬೊಲ್ಡ್.ನಿಧಾನವಾಗಿ ಆತ ಹಿಂದೂ ಧರ್ಮದ ಕುರಿತಂತೆ ಪ್ರಶ್ನಾರ್ಥಕವಾಗಿ ಮಾತನಾಡಲಾತಂಭಿಸುತ್ತಾನೆ.ನಾವು ತಲೆ ಅಲುಗಾಡಿಸುತ್ತಾ ಅಹುದಹುದೆನ್ನುತ್ತೇವೆ.ಈತನ ಪ್ರಭಾವದಿಂದ ಶೃಂಗೇರಿ ಮಠವೂ ಹೊರ ಬಂದಿಲ್ಲ.ಇನ್ ಫೋಸಿಸ್ ಸಂಸ್ಥೆಯಂತೂ ಪೂರ್ವದ ಸಾಹಿತ್ಯದ ಅನುವಾದಕ್ಕೆಂದು ಆತನಿಗೆ ಯಾರುಯಾರಿಗೂ ನೀಡದಷ್ಟು ಬಲುದೊಡ್ಡ ಮೊತ್ತವನ್ನು ದತ್ತಿಯಾಗಿ ನೀಡಿದೆ.ಈ ಗುಲಾಮ ಮಾನಸಿಕತೆಗೆ ಏನನ್ನುತ್ತೀರಿ?
ಜಗತ್ತೇಲ್ಲ ಈ ರೀತಿಯ ಢೋಂಗಿ ಜನರೊಂದಿಗೆ ನಿಂತಿರುವಾಗ ಏಕಾಂಗಿಯಾಗಿ ಹೋರಾಟ ಶುರು ಮಾಡಿದ್ದು ರಾಜೀವ್ ಮಲ್ಹೋತ್ತಾ.ಆದರೆ ಬರಬರುತ್ತಾ ಅವರ ಶಕ್ತಿ ವೃದ್ಧಿಯಾಯಿತು.ಭಾರತೀಯರು ಸಮಸ್ಯೆಯನ್ನು ಅರಿತುಕೊಳ್ಳಲಾರಂಭಿಸಿದರು.ಹಿಂದೂ ಧರ್ಮದ ಕುರಿತಂತೆ ಆಚರಣೆಯಲ್ಲಿ ನಿಷ್ಠರಾದ ಹಿಂದೂಗಳೇ ಮಾತನಾಡಬೇಕು,ಸಂಸ್ಕೃತದ ಕುರಿತಂತೆ ಅರಿತವರೇ ಹೇಳಬೇಕು ಇವೆಲ್ಲ ಪ್ರಜ್ಞೆ ಜಾಗೃತವಾಯಿತು.
16ನೇ ವಿಶ್ವ ಸಂಸ್ಕೃತ ಸಮ್ಮೇಳನ ಬ್ಯಾಂಕಾಕಿನಲ್ಲಿ ನಡೆದಾಗ ಅಲ್ಲಿಗೆ ರಾಜೀವ್ ಮಲ್ಹೋತ್ರಾ ವಿಶೇಷ ಅತಿಥಿ. ಅಲ್ಲಿ ಅವರು ಮಾತನಾಡುತ್ತಾ ತಾನು ಮುಂದೆ ಬರೆಯಲಿರುವ ಕೃತಿಯಲ್ಲಿ ದಾಖಲಿಸಲಿರುವ ಅಂಶಗಳ ಕುರಿತು ಗಮನ ಸೆಳೆದರು.ಪಶ್ಚಿಮದ ಜನ ಸಂಸ್ಕೃತ ಕಲಿತು ಹೇಳಿದ್ದನ್ನು ನಾವು ಕೇಳಬೇಕೆ? ನಾವು ಪಶ್ಚಿಮ ಕೊಟ್ಟದ್ದನ್ನು ಸ್ವೀಕರಿಸುವ ದಾಸರೆ ಅಥವಾ ಪಶ್ಚಿಮಕ್ಕೂ ಕೊಡಬಲ್ಲ ಸಾಮರ್ಥ್ಯ ನಮ್ಮಲ್ಲಿದೆಯೇ? ಹೀಗೆ ಅನೇಕ ಅಂಶಗಳು ಅದರಲ್ಲಿ ದಾಖಲಾಗಿವೆ ಎಂದಂತೆ ನೆರೆದಿದ್ದ ಸಾಂಪ್ರದಾಯಿಕರೆಲ್ಲ ಆನಂದದಿಂದ ಚಪ್ಪಾಳೆ ತಟ್ಟಿದರೆ ಕೆಲವರಿಗೆ ನಡುಕ ಉಂಟಾಗಿತ್ತು.ಹೇಗಾದರೂ ಮಾಡಿ ಈ ಕೃತಿ ಹೊರಬರದಂತೆ ತಡೆಯಬೇಕೆಂಬ ಪ್ರಯತ್ನ ಶುರುವಾಯ್ತು.
ಪ್ರಿನ್ಸ್ ಟನ್ ನ ಚರ್ಚ್ ಒಂದರಲ್ಲಿ ಶಿಕ್ಷಕನಾದ ರಿಚರ್ಡ್ ಫಾಕ್ಸ್ ಯಂಗ್ ಚಾಲಾಕುತನ ತೋರಿದ.ರಾಜೀವ್ ಮಲ್ಹೋತ್ರಾರ ಪುಸ್ತಕಗಳಲ್ಲಿ ಕೃತಿಚೌರ್ಯವಾಗಿದೆ ಎಂದು ಹುಯಿಲೆಬ್ಬಿಸಿದ.ಅವರ ಪುಸ್ತಕಗಳಲ್ಲಿ ತಾವು ಯಾರಿಂದ ಈ ವಿಚಾರವನ್ನು ಎರವಲು ಪಡೆದಿದ್ದಾರೋ ಅವರ ಹೆಸರನ್ನು ನಮೂದಿಸಿಲ್ಲವೆಂದು ಪುಸ್ತಕ ಪ್ರಕಾಶಕರಿಗೆ ದೂರು ಕೊಟ್ಟ.ಆತನ ಬೆಂಬಲಕ್ಕೆ ಪಿಟಿಷನ್ನಿಗೆಗೆ 192 ಜನ ಸಹಿ ಮಾಡಿದರು.ಭಾರತದಲ್ಲಿ ಅನೇಕ ಎಡಚರು ಅರ್ಧರಾತ್ರಿಯಲ್ಲೂ ಕೊಡೆ ಹಿಡಿದು ಕುಣಿದಾಡಿದರು.ಇತ್ತ ಮಧು ಕಿಶ್ವರ್ ರವರು ರಾಜೀವ್ ರ ಬೆಂವಲಕ್ಕೆ ಬಿಂತು ಪಿಟಿಷನ್ ಜನರ ಮುಂದಿಟ್ಟಾಗ ಏಳಿ ಸಾವಿರಕ್ಕೂ ಹೆಚ್ಚು ಜನ ಸಹಿ ಮಾಡಿದರು.ಹಾಂ!ಕದನ ಈಗಲೂ ನಡೆಯುತ್ತಿದೆ.
ಹೌದು, ಇದು ನಿರ್ಣಾಯಕ ಕದನವೇ.ಸುಳ್ಳನ್ನು ಸತ್ಯವೆಂದು ನಂಬಿಸಿ ಸೌಧ ಕಟ್ಟಿದವರ ಅಡಿಪಾಯವೇ ಅಲುಗಾಡುತ್ತಿದೆ.ಆ ಸೌಧವನ್ನು ತೋರಿಸಿ ಇಷ್ಟು ದಿನ ಭಾರತದಲ್ಲಿ ತಮ್ಮ ಬೇಳೆ ಬೇಯಿಸಿಕೊಂಡ ಪುಣ್ಯಾತ್ಮರೆಲ್ಲ ಬಿಳಿಚಿಕೊಂಡಿದ್ದಾರೆ.ನೆನಪಿಡಿ,ರಾ ಜೀ ವ್ ಮಲ್ಹೋತ್ರಾ ನೆಪ ಮಾತ್ರ. ಈ ಕದನ ನಮ್ಮೆಲ್ಲರಿಗೂ ಸೇರಿದ್ದು.ಸಮಯ ಸಿಕ್ಕಾಗ ನೀವೂ ಪಿಟಿಷನ್ನಿಗೆ ಒಂದು ಸಹಿ ಹಾಕಿ

Saturday 15 August 2015

ನಮ್ಮ ಸುಖಕ್ಕಾಗಿ ತನ್ನ ಜೀವ ಕೊಡುವ ಯೋಧನ ಕಷ್ಟ ಕೇಳಿದ್ದೇವಾ?

ಒಂದು ಗಂಭೀರ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ಕೇಳಲೇಬೇಕಾಗಿದೆ. ನಿಜಕ್ಕೂ ನಾವು ನಮ್ಮ ಸೈನಿಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆವಾ? ಅವರಿಗೆ ಸಿಗಬೇಕಾದ ಮರ್ಯಾದೆ ಸಿಗುತ್ತಿದೆಯಾ? ನಮ್ಮ ನೆಮ್ಮದಿ, ಮೋಜು, ತೆವಲು, ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ, ನಮ್ಮ ಕುಟುಂಬದ ಒಳಿತಿಗಾಗಿ ತಮ್ಮ ಸಂಸಾರವನ್ನೇ ಪಣಕ್ಕಿಡುವ ಸೈನಿಕರ ಕ್ಷೇಮಕ್ಕಾಗಿ ನಾವು ಮಾಡುತ್ತಿರುವುದೇನು? ದೇಶ ರಕ್ಷಣೆಯ ಮುಂದೆ ಎಲ್ಲವೂ ಗೌಣ ಎಂದು ಭಾವಿಸಿರುವ ಸೈನಿಕರನ್ನು ನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ? ದೇಶ ರಕ್ಷಣೆಗಾಗಿ ಸರ್ವಸ್ವವನ್ನೂ ಧಾರೆಯೆರೆಯುವ, ಅದನ್ನೇ ತನ್ನ ಜೀವನದ ಪರಮ ಪವಿತ್ರ ಕಾರ್ಯ ಎಂದು ಭಾವಿಸಿರುವ ಸೈನಿಕನಿಗೆ ನಾವು ಎಷ್ಟು ಪ್ರೀತಿ ತೋರಿದ್ದೇವೆ? ಅವನ ಕೆಲಸವನ್ನು ಮೆಚ್ಚಿ ಮೈದಡವಿದ್ದೇವೆ? ಅವನ ಶ್ರಮ, ರಕ್ತ, ಕಣ್ಣೀರಿಗೆ ಯಾವ ಬೆಲೆಯಿದೆ?
ಈ ಪ್ರಶ್ನೆಯನ್ನು ಕೇಳಲೇ ಬೇಕಾಗಿದೆ.
ಈ ಜಗತ್ತಿನ ಅತ್ಯಂತ ಎತ್ತರದ ಮತ್ತು ದುರ್ಗಮವಾದ ಯುದ್ಧಭೂಮಿ ಎಂದು ಕರೆಯಿಸಿಕೊಳ್ಳುವ ಸಿಯಾಚಿನ್ ಪ್ರದೇಶವನ್ನೊಮ್ಮೆ ಸುಮ್ಮನೆ ಮಸ್ಸಿನಲ್ಲಿ ಕಲ್ಪಿಸಿಕೊಳ್ಳಿ. ಮತ್ತೇನೂ ಹೇಳೋದು ಬೇಡ, ನಮಗೆ ‘ಅರ್ಧ’ ದಿನ ಅಲ್ಲಿರಲು ಸಾಧ್ಯವಿಲ್ಲ. ಮೂಳೆಯ ಮೂಲೆ ಮೂಲೆ ಕೊರೆಯುವ ಮೈನಸ್ ಎಪ್ಪತ್ತು ಡಿಗ್ರಿ ಹವಾಮಾನವಿರುವ ಭೀಕರ ಚಳಿ, ಶೀತಗಾಳಿ, ಕೆಲ ಕಾಲ ಬರಿ ಮೈಯನ್ನು ಗಾಳಿಗೆ ಬಿಟ್ಟರೆ ಮರಗೆಟ್ಟು ಹೋಗುವಂಥ ವಿಷಮ ವಾತಾವರಣ, ಹಿಮ ಪರ್ವತದ ಹೊರತಾಗಿ ಮತ್ತೇನೂ ಕಾಣದ, ಪ್ರತಿದಿನ ಮಲ ಮೂತ್ರ ವಿಸರ್ಜನೆಗೂ ಹರಸಾಹಸ ಮಾಡಬೇಕಾದ ಪರಿಸ್ಥಿತಿಯಿರುವ ಸಿಯಾಚಿನ್ ಪ್ರದೇಶದಲ್ಲಿ ಯುದ್ಧ ಮಾಡುವ ಮಾತಿರಲಿ, ಅಲ್ಲಿ ಇರುವುದೇ ಒಂದು ದೊಡ್ಡ ಪವಾಡ. ಸಿಯಾಚಿನ್ ಪ್ರದೇಶವನ್ನು ‘ಕಿಲ್ಲಿಂಗ್ ಫೀಲ್ಡ್್’ ಎಂದು ಕರೆಯುವುದುಂಟು.
ಅಲ್ಲಿಗೆ ಭೇಟಿ ನೀಡಿದ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಹೇಳಿದ್ದರು – ‘ಸಾಮಾನ್ಯ ಮನುಷ್ಯನಾದವನು ಸಿಯಾಚಿನ್್ನಲ್ಲಿ ಹತ್ತು ನಿಮಿಷ ಸಹ ಇರಲಾರ. ಇಂಥ ಪ್ರದೇಶದಲ್ಲಿ ನಮ್ಮ ಸೈನಿಕರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದೇ ಒಂದು ವಿಸ್ಮಯ. ಯಾಕೆಂದರೆ ಕೆಲವರು ಇಲ್ಲಿ ಎರಡು-ಮೂರು ವರ್ಷಗಳಿಂದ ಇದ್ದಾರೆ. ಅವರ ಮನೋಸ್ಥೈರ್ಯಕ್ಕೆ ನಾನು ಮೂಕ ವಿಸ್ಮಿತನಾಗಿದ್ದೇನೆ. ನನಗೆ ಮನೆಯಲ್ಲಿ ಇರುವಾಗ ಸೈನಿಕರ ನೆನಪಾದರೆ ಏನೋ ಅಪರಾಧ ಭಾವ ಕಾಡುತ್ತಿತ್ತು. ನಾನು ಇಲ್ಲಿ ಇಷ್ಟೊಂದು ಆರಾಮಾಗಿದ್ದೇನೆ. ಆದರೆ ನಮ್ಮ ಸೈನಿಕರ ಪಾಡೇನು ಎಂಬುದನ್ನು ನೆನೆದಾಗ ಕುಬ್ಜನಾಗಿಬಿಡುತ್ತಿದ್ದೆ. ಹೀಗಾಗಿ ಆಗಾಗ ಕಾರ್ಗಿಲ್ ಮತ್ತು ಸಿಯಾಚಿನ್್ಗೆ ಹೋಗಿ ಬರುತ್ತಿದ್ದೆ’
ಸಿಯಾಚಿನ್ ಮೃತ್ಯು ಕಂದರವೇ. ಅಲ್ಲಿ ಸೈನಿಕರು ವೈರಿಗಳ ಜತೆ ಕಾದಾಡಿ ಮೃತಪಟ್ಟಿದ್ದಕ್ಕಿಂತ, ಭೀಕರ ಚಳಿ ಜತೆ ಹೋರಾಡಲಾಗದೇ ಸತ್ತಿದ್ದೇ ಹೆಚ್ಚು. ವೈರಿಗಳ ಜತೆ ಕಾದಾಡುವುದು ದೊಡ್ಡದಲ್ಲ. ಆದರೆ ‘ಅಗೋಚರ ಚಳಿ’ಯ ಜತೆ ಸೆಣಸುವುದೆಂತು?
ಸಿಯಾಚಿನ್್ನಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಯೋಧರು ಜಗತ್ತಿನ ಎಂಥ ವಾತಾವರಣದಲ್ಲಾದರೂ ಬದುಕುತ್ತಾರೆ. ತಾಸಿಗೆ 160-180 ಕಿ.ಮಿ. ವೇಗದಲ್ಲಿ ಬೀಸುವ ಚಳಿಗಾಳಿ, ವರ್ಷವಿಡೀ ಸುರಿಯುವ ಮಂಜಿನಧಾರೆಗೆ ಎದೆಯೊಡ್ಡುವುದಿದೆಯಲ್ಲ, ಅದಕ್ಕೆ ಅಗಾಧ ಛಾತಿಯೇ ಬೇಕು. ಕಳೆದ ಹತ್ತು ವರ್ಷಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಸೈನಿಕರು ಫ್ರಾಸ್ಟ್್ಬೈಟ್, ಚಳಿ ಹೊಡೆತಕ್ಕೆ ಅಸು ನೀಗಿದ್ದಾರೆ.
ಭಾರತೀಯ ಸೇನೆಯಲ್ಲಿ ಸಿಯಾಚಿನ್ ಡ್ಯೂಟಿಗೆ ಸೈನಿಕನೊಬ್ಬನಿಗೆ ಬುಲಾವ್ ಬಂತೆಂದರೆ ಮೃತ್ಯುಲೋಕಕ್ಕೆ ಸೆಣೆಸಲು ಕರೆ ಬಂದಂತೆ. ಆದರೆ ನಮ್ಮ ಸೈನಿಕರು ಅದೆಂಥ ಕಠಿಣತಮ ಮಾನಸಿಕ ಸ್ಥಿತಿ, ಛಲ, ಪ್ರೇರಣೆ, ಹೋರಾಟ, ತ್ಯಾಗ, ಬಲಿದಾನ, ದೇಶಪ್ರೇಮಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುತ್ತಾರೆಂದರೆ, ಯಾರೂ ಸಹ ಒಲ್ಲೆ ಎನ್ನುವುದಿಲ್ಲ. ಬೆಂಗಳೂರಿನ ವಿಧಾನಸೌಧದಲ್ಲೋ, ಎಂಎಸ್ ಬಿಲ್ಡಿಂಗ್್ನಲ್ಲೋ ಕೆಲಸ ಮಾಡುವ ಸರ್ಕಾರಿ ನೌಕರ ಅಥವಾ ಪತ್ರಿಕಾಲಯದಲ್ಲಿ ಕೆಲಸ ಮಾಡುವ ವರದಿಗಾರರನ್ನು ಬೀದರಕ್ಕೋ, ಗುಲ್ಬರ್ಗಕ್ಕೋ ವರ್ಗ ಮಾಡಿ, ವಿಲಿವಿಲಿ ಅಂತ ಒದ್ದಾಡಿ ಬಿಡುತ್ತಾರೆ. ನೌಕರಿಯನ್ನಾದರೂ ಬಿಟ್ಟೇವು ಆದರೆ ಬೆಂಗಳೂರು ಬಿಡಲೊಲ್ಲೆವು ಅಂತಾರೆ. ಸರ್ಕಾರಿ ವೈದ್ಯರನ್ನು ಪಕ್ಕದ ಹಳ್ಳಿಗೆ ಕಳಿಸಿಬಿಡಿ ನೋಡೋಣ.
ಆದರೆ ವೀರಯೋಧನನ್ನು ಲಡಾಕ್್ಗೋ, ಕಾರ್ಗಿಲ್್ಗೋ, ಸಿಯಾಚಿನ್್ಗೋ ಕಳಿಸಿ, ಮದುವೆಯಾದ ಮಾರನೇ ದಿನವೇ ಅಲ್ಲಿಗೆ ಹೊರಡಿ ಎನ್ನಿ, ‘ಇಲ್ಲ’ ಅಂದ್ರೇ ಕೇಳಿ. ಮರು ಮಾತಿಲ್ಲದೇ, ತುಟಿಪಿಟಿಕ್ಕೆನ್ನದೇ ಮಣಭಾರದ ಟ್ರಂಕ್ ಕಟ್ಟುತ್ತಾರೆ. ಜೀವದ ಹಂಗು ತೊರೆದು ಸೆಣೆಸಲು ಸಿದ್ಧರಾಗಿ ನಿಂತಿರುತ್ತಾರೆ. ನೌಕರಿ ಮಾಡಬೇಕಲ್ಲಪ್ಪಾ ಎಂಬ ಭಾವನೆಯಿಂದಲ್ಲ.
ದೇಶಪ್ರೇಮ, ದೇಶ ರಕ್ಷಣೆಗಾಗಿ! ಅದಕ್ಕಾಗಿ ಎಂಥ ಅಪಾಯ ಎದುರಿಸಲು ರೆಡಿ. ಇಂಥ ಸೈನಿಕರನ್ನ್ನುನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ? ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಕಾರ್ಗಿಲ್ ಯುದ್ಧದ ದಿನಗಳನ್ನು ಒಮ್ಮೆ ನೆನಪಿಸಿಕೊಂಡರೆ ಆ ಸಮಯಕ್ಕೆ ನಮ್ಮ ಮೈಯಲ್ಲಿ ಅದೆಂಥಾ ಉತ್ಕರ್ಷ ಭೋರ್ಗರೆದಿತ್ತು ಎಂಬುದೂ ನೆನಪಿಗೆ ಬರುತ್ತದೆ. ಆಗಷ್ಟೇ ಟಿವಿ ಪತ್ರಿಕೋದ್ಯಮವೂ ತಲೆ ಎತ್ತಿತ್ತು. ಹಿಂದೆಂದೂ ಇರದ ರೀತಿಯಲ್ಲಿ ಅದು ಯುದ್ಧವನ್ನು ಸೀದಾ ನಮ್ಮ ಮನೆಯ ಜಗುಲಿಗೇ ತಂದಿರಿಸಿತ್ತು. ಪ್ರತಿ ಭಾರತೀಯನ ಎದೆಯಲ್ಲೂ ದೇಶಪ್ರೇಮದ ಡಮರು ನಾದ. ಆದರೆ, ಸಮರ ಮುಗಿದು ವರ್ಷಗಳು ಕಳೆಯುತ್ತಲೇ ನಮ್ಮ ಸ್ಮೃತಿ ಖಜಾನೆ ನಿಧಾನಕ್ಕೆ ಮುಸುಕು ಎಳೆದುಕೊಳ್ಳತೊಡಗಿತು. ನಮಗೆ ಚರ್ಚಿಸುವುದಕ್ಕೆ ಕೂಗಾಡುವುದಕ್ಕೆ ಬೇರೆ ವಿಷಯಗಳು ಸಿಕ್ಕವು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಕೆಲದಿನಗಳವರೆಗೆ ನೆನಪಿಸಿಕೊಂಡೆವು. ಕೊನೆಗೆ ಆಗೀಗ ಅವರ ಹೆಸರು ಪ್ರಸ್ತಾಪವಾಗುವ ಹಂತಕ್ಕೆ ಹೋಗಿ ನಿಧಾನಕ್ಕೆ ಎಲ್ಲವೂ ಮಸುಕಾಯಿತು. ವಿಕ್ರಂ ಬಾತ್ರಾ, ಸೌರಭ್ ಕಾಲಿಯಾ ಹೀಗೆ ಮಹಾಶೌರ್ಯ ಮೆರೆದವರನ್ನು ಈಗಲೂ ನೆನಪಿಸಿಕೊಳ್ಳುತ್ತಿದ್ದೇವೆ. ಅವರನ್ನು ಮರೆಯಬಾರದು ಕೂಡ. ಆದರೆ ಹೋರಾಡಿ ಗಾಯಗೊಂಡು, ಕೈ-ಕಾಲು ಕಳೆದುಕೊಂಡ ಯೋಧರ ಸಂಖ್ಯೆಯೂ ದೊಡ್ಡದು. ಅವರೆಲ್ಲ ನಮ್ಮ ಅಂದಾಜಿಗೆ ನಿಲುಕಲೇ ಇಲ್ಲ. ಇವತ್ತಿಗೆ ಅವರೆಲ್ಲರ ಸ್ಥಿತಿ ಏನೆಂಬ ಬಗ್ಗೆ ಯಾರಿಗೂ ದರಕಾರವಿಲ್ಲ.
ಕಾರ್ಗಿಲ್ ವಿಜಯೋತ್ಸವ ಎಂಬುದು ನಮಗೆ ನವರಾತ್ರಿ- ದೀಪಾವಳಿಗಳಂತೆ ಒಂದು ಹಬ್ಬವಾಗಬೇಕಿತ್ತು. ಯುದ್ಧದ ಕಾವು ಎದ್ದಿದ್ದ ದಿನಗಳಲ್ಲಿ ಯೋಧರನ್ನು ಕೊಂಡಾಡಿದ್ದಷ್ಟೇ ದೇಶಪ್ರೇಮವಾಗುವುದಿಲ್ಲ. ನಮ್ಮ ನೆಚ್ಚಿನ ನಟನ ಚಿತ್ರ ಬಿಡುಗಡೆಯಾದ ದಿನದಂದೂ ಆತನ ಕಟೌಟ್ ಏರಿಸಿ ತೋರಿಸುತ್ತೇವೆ. ಕಾರ್ಗಿಲ್್ನ ಕದನಕ್ಕೆ, ಅದರಲ್ಲಿ ನಮ್ಮ ಯೋಧರ ವಿಜಯಕ್ಕೆ ದಶಕಗಳ ಪ್ರಾಯವೇ ಸಂದಿದ್ದರೂ ಪ್ರಾರಂಭಿಕ ಪ್ರಶಂಸೆಗಳನ್ನು ಮೀರಿದ ಕೃತಜ್ಞತಾಪೂರ್ವಕ ಆರಾಧನೆಯೊಂದು ನಮ್ಮಲ್ಲಿ ನೆಲೆಗೊಳ್ಳಲೇ ಇಲ್ಲ. ಸರ್ಕಾರದ ಮಟ್ಟದಲ್ಲಂತೂ ಈ ವಿಜಯದ ನೆನಪು ಅಪ್ರಸ್ತುತವಾಗುವುದು ಅವಶ್ಯವಿತ್ತು! ಏಕೆಂದರೆ ಎನ್್ಡಿಎ ಸರ್ಕಾರದ ಅವಧಿಯಲ್ಲಿ ಈ ಸಮರ ನಡೆದಿದ್ದರಿಂದ ಅದರ ಗೆಲುವನ್ನು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ನೆನಪಿಸಿಕೊಂಡಿದ್ದೇ ಆದರೆ ಅದರ ಶ್ರೇಯಸ್ಸನ್ನು ತಮ್ಮ ಪ್ರತಿಪಕ್ಷಗಳಿಗೆ ಸಲ್ಲಿಸಿದಂತಾಗುತ್ತಲ್ಲ ಎಂಬುದು ಕಳೆದೆರಡು ಅವಧಿಗಳಿಗೆ ದೇಶವನ್ನು ಆಳುತ್ತಿರುವ ಯುಪಿಎ ಕೂಟದ ಚಿಂತನೆ! ಇವರ ರಾಜಕೀಯ ವರಸೆಗಳು ಏನೇ ಇದ್ದಿರಲಿ, ನಾವು ಈ ವಿಜಯದ ಸಂಭ್ರಮವನ್ನು ಕಾಪಿಟ್ಟುಕೊಳ್ಳೋಣ ಎಂಬ ತೀವ್ರತೆ ಪ್ರಜೆಗಳಾದ ನಮ್ಮಲ್ಲೂ ಉಳಿಯಲಿಲ್ಲ ಎಂಬುದೇ ದುರಂತ.
ಈ ಹಿಂದಿನ ಸಮರಗಳ ಬಗ್ಗೆ ಹಿರಿಯರ ಬಾಯಲ್ಲಿ ಕೇಳಿ ತಿಳಿದ, ಪುಸ್ತಕಗಳಲ್ಲಿ, ವರದಿಗಳಲ್ಲಿ ಓದಿಕೊಂಡ ಅನುಭವಗಳಷ್ಟೇ ಇದ್ದವು. ಆದರೆ, ಕಾರ್ಗಿಲ್್ನ ಸಮರ ಮೊದಲೇ ಹೇಳಿದಂತೆ ನೇರವಾಗಿ ನಮ್ಮ ಮನೆಯ ಜಗುಲಿಯಲ್ಲೇ ಅನಾವರಣಗೊಂಡಿತ್ತು. ಈ ದೇಶದ ಯುವಕರನ್ನು ಅದು ನೇರವಾಗಿ ತಾಗಿತ್ತು. ಅಷ್ಟಾಗಿಯೂ ಇಂದು ಯಾವ ಹುಡುಗ-ಹುಡುಗಿಯ ಕೊಠಡಿಯಿಂದಲೂ ಶಾರುಖ್, ಸಲ್ಮಾನ್, ಐಶ್ವರ್ಯಾ, ಧೋನಿ, ಸಚಿನ್, ಯುವರಾಜ್, ಗಂಭೀರ್ ಇವರುಗಳು ನಿವೃತ್ತಿ ಪಡೆದಿಲ್ಲ. ಕಣ್ಣೆದುರು ಕಾರ್ಗಿಲ್ ಕದನ ತೆರೆದುಕೊಂಡಿತು ಎಂಬ ಅಚ್ಚರಿ ಆ ಕ್ಷಣಕ್ಕೆ ಸದ್ದು ಮಾಡಿತಾದರೂ ಯಾರ ಮನೆ ಗೋಡೆಯನ್ನೂ ವಿಕ್ರಂ ಬಾತ್ರಾ, ಸೌರಭ್ ಕಾಲಿಯಾ, ಅಂಜು ನಯ್ಯರ್್ರಂಥ ವೀರರು ಆಕ್ರಮಿಸಿಕೊಳ್ಳಲಿಲ್ಲ. ಪರ್ವತ ಶ್ರೇಣಿಯೊಂದನ್ನು ಗೆದ್ದುಕೊಂಡ ಬೆನ್ನಲ್ಲೇ, ಇದು ಆರಂಭವಷ್ಟೇ ಇನ್ನೂ ಗೆಲ್ಲಬೇಕಿದೆ ಎಂಬ ಅರ್ಥದಲ್ಲಿ ‘ಯೇ ದಿಲ್ ಮಾಂಗೇ ಮೋರ್್’ ಎಂದು ಅವಾಜು ಹಾಕಿದ್ದ ವಿಕ್ರಂ ಬಾತ್ರಾ. ಮಾತಿನಂತೆ ನಡೆದು ಪ್ರಾಣವನ್ನೂ ಕೊಟ್ಟ. ನಾವು ಆ ಕ್ಷಣಕ್ಕೆ ಭಾವುಕರಾಗಿ ನಂತರ ತಮಾಷೆ ಮುಗಿಯಿತೆಂಬಂತೆ ಪೆಪ್ಸಿ ಹೀರಿಕೊಂಡು ‘ದಿಲ್ ಮಾಂಗೆ ಮೋರ್್’ ಎಂಬ ನಮ್ಮ ಬಣ್ಣದ ಲೋಕದಲ್ಲಿ ಕಳೆದು ಹೋದೆವು.
ಹಾಗಾದರೆ ನಮ್ಮ ದೇಶಪ್ರೇಮದ ಗ್ರಹಿಕೆಯಲ್ಲೇ ದೋಷವಿದೆಯಾ? ಕಾರ್ಗಿಲ್್ನ ವೀರೋತ್ಕರ್ಷ ಯುವಕರನ್ನು ಸೇನೆ ಸೇರುವುದಕ್ಕೆ ಇಡಿ ಇಡಿಯಾಗಿ ಪ್ರೇರೇಪಿಸಲೇ ಇಲ್ಲ. ಇದು ಸರ್ಕಾರ- ಸಮಾಜಗಳ ಒಟ್ಟಾರೆ ವೈಫಲ್ಯವೆಂದೇ ಹೇಳಬೇಕು. ಏಕೆಂದರೆ ದೇಶಸೇವೆ ಎಂಬುದು ನಮ್ಮಲ್ಲಿ ಆಕರ್ಷಣೆಯೇ ಅಲ್ಲ. ಸಾಫ್ಟ್್ವೇರ್ ಉದ್ಯೋಗಿಯಾಗಿದ್ದೇನೆ, ಬಿಸಿನೆಸ್ ಮಾಡುತ್ತಿದ್ದೇನೆ, ಟಿವಿಲೀ ಬರ್ತೇನೆ ಅಂತೆಲ್ಲ ಹೇಳಿಕೊಂಡಂತೆ ಯೋಧನಾಗಿದ್ದೇನೆ ಅನ್ನುವುದು, ಸೇನೆಯಲ್ಲಿ ಸೇವೆಯನ್ನು ಹೇಳಿಕೊಳ್ಳುವ ಕಾಯಕವನ್ನಾಗಿ ರೂಪಿಸುವುದಕ್ಕೆ ಸೋತಿದ್ದೇವೆ. ಇಲ್ಲಿ ಯೋಧರ ಕೈಗೆ ನೀಡುವ ಬಂದೂಕುಗಳು, ಅವರ ಸಾರಿಗೆಗೆ ಬಳಸುವ ವಾಹನಗಳು ಇಂಥ ಅಗತ್ಯಗಳ ಪೂರೈಕೆಯಲ್ಲೂ ಭ್ರಷ್ಟಾಚಾರ ನಡೆಯುತ್ತದೆ. ಸಾಲದ್ದಕ್ಕೆ ಯೋಧ ತನ್ನ ಪ್ರಾಣ ಒತ್ತೆ ಇಟ್ಟು ಗೆದ್ದುಕೊಂಡ ನೆಲವನ್ನು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಂತಿ ಒಪ್ಪಂದ ಎಂಬ ನೆಪದಲ್ಲಿ ಬಿಟ್ಟುಕೊಡುತ್ತಾರೆ. ದೇಶಕ್ಕಾಗಿ ತ್ಯಾಗ ಮಾಡಿದವನನ್ನು ಆತನಿಗೆ ತಾನು ಮಾಡಿದ ತ್ಯಾಗ ಸಾರ್ಥಕ ಎಂಬಂತೆ ನಡೆಸಿಕೊಳ್ಳುವ ಜಾಯಮಾನವೇ ನಮ್ಮದಲ್ಲ. ಅವರ ಕುಟುಂಬದ ಬೇಕು- ಬೇಡಗಳನ್ನು ವಿಚಾರಿಸಿಕೊಳ್ಳುವ ಕೆಲಸ ಸರಿಯಾಗಿ ಆಗುವುದಿಲ್ಲ. ಗಾಯಗೊಂಡ ಯೋಧರಿಗೆ ಸರ್ಕಾರಿ ಕೆಲಸ ಕೊಡುತ್ತೇವೆ ಎಂಬ ಘೋಷಣೆಯೇನೋ ಆಗುತ್ತದೆ, ಅದಕ್ಕೆ ಚಪ್ಪಾಳೆಯೂ ಸಂದಾಯವಾಗುತ್ತದೆ. ಆದರೆ, ಆ ಯೋಧ ಘೋಷಣೆಯಾಗಿದ್ದನ್ನು ತನಗೆ ದಕ್ಕಿಸಿಕೊಳ್ಳುವುದಕ್ಕೆ ಕಚೇರಿಯಿಂದ ಕಚೇರಿಗೆ ಅಲೆಯುತ್ತ ಬಸವಳಿದು ಹೋಗುತ್ತಾನೆ. ಐದು- ಹತ್ತು ವರ್ಷಗಳೇ ಸಂದರೂ ಅವನ ಉದ್ಯೋಗ ಭರವಸೆ ಈಡೇರುವುದಿಲ್ಲ. ಇನ್ನು, ಮೃತ ಯೋಧರ ಕುಟುಂಬಗಳಿಗೆ ನೀಡುವ ಭರವಸೆಗಳ ಕತೆಯೂ ಇದೇ.
ಇವೆಲ್ಲದರ ಪರಿಣಾಮ ಸಮಾಜದ ಸಂವೇದನೆಗೂ ತಾಗದೇ ಇರುವುದಿಲ್ಲ. ಅಷ್ಟೆಲ್ಲ ಹೋರಾಡಿ, ತಮ್ಮ ಸರ್ವಸ್ವವನ್ನೂ ದೇಶಕ್ಕೆ ಅಂತ ಎತ್ತಿಟ್ಟು ಕಾದಾಡುವ ಯೋಧನ ಗತಿ ಹೀಗೆ ಅನ್ನುವುದಾದರೆ ಯಾವ ಪುರುಷಾರ್ಥಕ್ಕಾಗಿ ಮಿಲಿಟರಿ ಸೇರಬೇಕು ಎಂದು ಯುವಕರು ಅಂದುಕೊಂಡರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.
ದೇಶ ಕಾಳಜಿಗೆ ಕೆಲಸ ಮಾಡುತ್ತೇನೆ ಅಂತ ಹೊರಡುವ ಎಲ್ಲರಿಗೂ ಸಾಮಾನ್ಯವಾಗಿ ಇದೇ ಗತಿ ಎಂಬ ಉದಾಹರಣೆಗಳೇ ನಮ್ಮ ಕಣ್ಣ ಮುಂದೆ ಸುಳಿದಾಡುತ್ತವೆ. ಮೊನ್ನೆ ಪಾಕಿಸ್ತಾನದ ಜೈಲಿನಿಂದ ಬಿಡುಗಡೆ ಹೊಂದಿದ ಸುರ್ಜೀತ್ ಸಿಂಗ್ ಕತೆಯನ್ನೇ ಗಮನಿಸಿ. ‘ತಾನು ಗೂಢಚಾರಿಕೆಗೆ ಎಂದೇ ಪಾಕಿಸ್ತಾನದ ಒಳಗೆ ನುಸುಳಿದ್ದು. ಆದರೆ ನನ್ನನ್ನು ಹಾಗೆ ಕಳುಹಿಸಿದ ಸರ್ಕಾರ ಮಾತ್ರ ನನ್ನ ಬಿಡುಗಡೆಗಾಗಲೀ, ನನ್ನ ಕುಟುಂಬದ ಹಿತ ಕಾಯುವುದಕ್ಕಾಗಲೀ ಏನೂ ಮಾಡಲಿಲ್ಲ’ ಎಂದುಬಿಟ್ಟ ಸುರ್ಜೀತ್. ನಿಜ, ಆತನ ಆ ಹೇಳಿಕೆ ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಒಂದಿಷ್ಟು ಮುಜುಗರ ಉಂಟುಮಾಡಿದೆ. ಈಗಲೂ ಅಧಿಕೃತವಾಗಿ ನಾವು ಆತನನ್ನು ಗೂಢಚಾರ ಎಂದು ಒಪ್ಪಿಕೊಳ್ಳುವುದಕ್ಕಾಗುವುದಿಲ್ಲ. ಆದರೆ ಆತನ ದನಿಯಲ್ಲಿ ವ್ಯಕ್ತವಾದ ಹತಾಶೆಯನ್ನು ಗಮನಿಸಿ. ಯುವಕನಾಗಿ ಪಾಕ್ ನೆಲದಲ್ಲಿ ಕಾಲಿಟ್ಟಿರುವ ಆತ ಮರಳಿ ಬರುತ್ತಿರುವುದು ಮುದುಕನಾಗಿ. ನಮ್ಮ ಮೇಲೆ ಧಾಳಿ ಮಾಡಿದ ಉಗ್ರರಿಗೇ ರಾಜಾತಿಥ್ಯ ನೀಡುವ ನಾವು, ಅಂಥ ಕಾಳಜಿಯ ಸ್ವಲ್ಪ ಭಾಗವನ್ನಾದರೂ ದೇಶದ ಹಿತಾಸಕ್ತಿ ಕಾಯುವುದಕ್ಕೆ ಹೋದ ಇಂಥವರ ಕುಟುಂಬಗಳನ್ನು ನೋಡಿಕೊಳ್ಳುವುದಕ್ಕೆ ನೀಡಿದ್ದೇ ಆದಲ್ಲಿ ಖಂಡಿತ ಸುರ್ಜೀತ್ ಬಾಯಿಂದ ಆ ಮಾತುಗಳು ಹೊರಡುತ್ತಿರಲಿಲ್ಲ.
ಪಾಕಿಸ್ತಾನಕ್ಕೆ ಯುದ್ಧ ಕೈದಿಯಾಗಿ ಸೆರೆಯಾದ ವಿಜಯ್ ತಂಬೆ ಬಿಡುಗಡೆ ಇನ್ನೂ ಸಾಧ್ಯವಾಗಿಲ್ಲ. ಅವರು ಪಾಕಿಸ್ತಾನದ ಯಾವ ಜೈಲಿನಲ್ಲಿದ್ದಾರೆ ಎಂಬುದೂ ಗೊತ್ತಿಲ್ಲ. ಕಳೆದ ನಲವತ್ತು ವರ್ಷಗಳಿಂದ ಪತ್ನಿ ದಮಯಂತಿ ತಂಬೆ ಗಂಡನ ಆಗಮನ ನೋಡುತ್ತಿದ್ದಾಳೆ. ಅವರಂತೆ ಎಷ್ಟೋ ಭಾರತೀಯರು ಕೈದಿಗಳಾಗಿ ಕೊಳೆಯುತ್ತಿದ್ದಾರೆ. ಬಾಂಗ್ಲಾದೇಶದ ಯುದ್ಧದಲ್ಲಿ ಭಾರತ ಸೇನೆಗೆ ಸೆರೆ ಸಿಕ್ಕಿದ್ದ 93 ಸಾವಿರ ಪಾಕ್ ಯೋಧರನ್ನು ಕದನ ಮುಗಿಯುತ್ತಿದ್ದಂತೆ ಬಿಡುಗಡೆ ಮಾಡಲಾಗಿತ್ತು. ಆ ಔದಾರ್ಯದ ಚೂರುಭಾಗವನ್ನೂ ಪಾಕಿಸ್ತಾನ ತೋರಿಸುತ್ತಿಲ್ಲ. ನಮಗೂ ಸಹ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಮ್ಯಾಚ್ ಆಡುವುದರಲ್ಲಿ ಇರುವ ಆಸಕ್ತಿ ಇವರೆಲ್ಲರ ಬಿಡುಗಡೆಗೆ ನಿರಂತರ ಪ್ರಯತ್ನ ಮಾಡುವುದರಲ್ಲಿಲ್ಲ.
ನಮ್ಮ ವ್ಯವಸ್ಥೆಯಿಂದ ದೇಶಪ್ರೇಮ ಹೊರಹೊಮ್ಮುವುದಕ್ಕೆ ಅಡ್ಡಿಯಾಗುತ್ತಿರುವುದಾದರೂ ಏನು ಎಂಬುದನ್ನು ಕಾರ್ಗಿಲ್್ನ ಹುತಾತ್ಮ ಯೋಧ, ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ಪಡೆದ ಕ್ಯಾಪ್ಟನ್ ಅಂಜು ನಯ್ಯರ್ ಅವರ ತಂದೆಯ ಮಾತುಗಳನ್ನು ಕೇಳಿಸಿಕೊಂಡಾಗ ಸ್ಪಷ್ಟವಾಗುತ್ತದೆ. ಕಾರ್ಗಿಲ್ ಸಮರ ಅಂತ್ಯಗೊಂಡು ಪುತ್ರಶೋಕ ಹಾಗೂ ಮಗನ ತ್ಯಾಗದ ಹೆಮ್ಮೆಯನ್ನು ಅನುಭವಿಸುತ್ತಿರುವಾಗಲೇ ಅವರು ಹೇಳಿದ್ದರು- ‘ಆತ ‘ಯುದ್ಧರೀತಿ’ಯ ವಾತಾವರಣದಲ್ಲಿ ಸಾಯಬೇಕಿರಲಿಲ್ಲ. ಸಾವಿನಂಥ ಸ್ಥಿತಿ ಎಂಬುದಿಲ್ಲ. ಒಂದೋ ಸಾವು ಇಲ್ಲವೇ ಬದುಕು. ಹಾಗೆಯೇ ನಿರ್ಣಾಯಕ ಗಳಿಗೆಯಲ್ಲಿ ಯುದ್ಧ ಇಲ್ಲವೇ ಶಾಂತಿ ಎಂಬ ಸ್ಪಷ್ಟ ಧೋರಣೆ ಇರಬೇಕು. ನಮ್ಮ ದೇಶಕ್ಕೆ ಇಷ್ಟು ಸುಲಭವಾಗಿ ಒಳನುಗ್ಗುತ್ತಿರುವ ಉಗ್ರರನ್ನು ಹಿಡಿದು ಶಿಕ್ಷಿಸುವುದಕ್ಕೆ ಸರ್ಕಾರಕ್ಕೆ ಆಗುವುದಿಲ್ಲವೇ?’ ಇವರ ಮಾತನ್ನೇ ಮುಂದುವರಿಸುತ್ತ ಅವರ ಸಂಬಂಧಿಯೊಬ್ಬರು ಹೇಳಿದ್ದರು- ‘ಅಂಜು ನಯ್ಯರ್ ಬಲಿದಾನಕ್ಕೆ ನಮಗೆ ಹೆಮ್ಮೆಯಿದೆ. ಆದರೆ ಯಕಶ್ಚಿತ್ ಒಳನುಸುಳುಕೋರರಿಂದ ಸಮರಸದೃಶ ಸ್ಥಿತಿ ಉಂಟಾಗಿ ಪ್ರಾಣ ತೆರಬೇಕಾಯ್ತಲ್ಲ ಎಂಬ ಕಟು ವಾಸ್ತವ ನಮ್ಮ ದುಃಖವನ್ನು ಹೆಚ್ಚಿಸಿದೆ’.
ಈ ಎಲ್ಲ ಗೋಜಲುಗಳು ಎದುರು ನಿಂತಾಗ ಸಾಂತ್ವನ ಹೇಳುವುದು ಇಸ್ರೇಲ್ ಮಾದರಿ. ಆ ದೇಶದಲ್ಲಿ ಪ್ರತಿಯೊಬ್ಬರೂ ನಿಯಮಿತ ಅವಧಿಗೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಅದನ್ನು ತಮ್ಮ ಆದ್ಯ ಕರ್ತವ್ಯವೆಂದೂ, ಹೆಮ್ಮೆಯೆಂದೂ ಭಾವಿಸುತ್ತಾರೆ. ಕಾರ್ಗಿಲ್ ವಿಜಯ ದಿನದ ಈ ಅಭಿಮಾನದ ಗಳಿಗೆಯಲ್ಲಾದರೂ ನಮ್ಮಲ್ಲಿ ಅಂಥದೊಂದು ದೇಶಾಭಿಮಾನದ ಒರತೆ ಹನಿಯಲಿ ಅಲ್ಲವೇ?

Tuesday 11 August 2015

ಭಾರತೀಯ ಚಿಂತನೆಗಳು ಜಗವನ್ನೆ ಆಳಲಾರಂಭಿಸಿವೆ…!

ರಮಣ ಮಹರ್ಷಿಗಳ ಬದುಕಿನ ಈ ಘಟನೆ ಬಲು ಜನಜನಿತ. ಅದೊಮ್ಮೆ ಅವರು ಭಕ್ತರೊಂದಿಗೆ ಮಾತಾಡುತ್ತ ಕುಳಿತಿದ್ದರು. ಅವರ ತೋಳಿನ ಹುಣ್ಣಿಗೆ ಚಿಕಿತ್ಸೆ ನೀಡಲೆಂದು ಅದೇ ಹೊತ್ತಿಗೆ ವೈದ್ಯರು ಬಂದರು. ಚಿಕಿತ್ಸೆ ಸಮಯದಲ್ಲಿ ತೀವ್ರ ನೋವು ಉಂಟಾಗುತ್ತದೆಯಾದ್ದರಿಂದ ಅರೆವಳಿಕೆ ಮದ್ದು ಕೊಡುವುದು ಒಳ್ಳೆಯದೆಂದು ವೈದ್ಯರ ಅಭಿಮತ. ರಮಣರು ನಿರಾಕರಿಸಿದರು.

ramana01

“ತೋಳಿನಿಂದ ಮನಸ್ಸನ್ನು ತೆಗೆದುಬಿಡುತ್ತೇನೆ. ಆಮೇಲೆ ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಒಂದು ನಿಮಿಷ ಕಣ್ಮುಚ್ಚಿ ತೆರೆದರು. ಭಕ್ತರೊಂದಿಗೆ ಮಾತುಕತೆ ಮುಂದುವರೆಯಿತು. ಅತ್ತ ವೈದ್ಯರು ತಮ್ಮ ಉಪಚಾರ ಶುರು ಮಾಡಿದರು. ರಮಣರ ಮುಖದಲ್ಲಿ ಒಂದು ಗುಲಗಂಜಿಯಷ್ಟೂ ನೋವು ಕಾಣಿಸಲಿಲ್ಲ. ಎಲ್ಲ ಮುಗಿಯಿತೆಂದು ವೈದ್ಯರು ಹೇಳಿದ ಮೇಲೆ ರಮಣರು ನಕ್ಕು ನಮಸ್ಕರಿಸಿದರು, ಅಷ್ಟೆ.

ಮೊದಲೆಲ್ಲ ಇದು ಭಕ್ತರ ಕಪೋಲಕಲ್ಪಿತ ಕತೆ ಎಂದು ನಾನು ಭಾವಿಸಿದ್ದೆ. ನನಗೆ ಗೊತ್ತು, ನಿಮ್ಮಲ್ಲನೇಕರು ಈ ಕಥೆ ಓದುತ್ತ ಮೂಗು ಮುರಿದಿರುತ್ತೀರಿ. ಆದರೆ ಹಿಮಾಲಯದ ಪರ್ವತಗಳಲ್ಲಿ ಕೊರೆವ ಚಳಿಯಲ್ಲಿ ಮಂಜಿನ ರಾಶಿಯ ನಡುವೆ ನಗುನಗುತ್ತ ಕೌಪೀನದಲ್ಲಿ ಕುಳಿತಿರುವ ಸಾಧುಗಳನ್ನು ಕಂಡ ಮೇಲೆ ಈ ಪ್ರಕ್ರಿಯೆ ಸಾಧ್ಯವೆನ್ನಿಸಿತ್ತು. ನಾನು – ನೀವು ನಂಬುವುದನ್ನು ಬಿಡಿ. ಪಶ್ಚಿಮದ ಅನೇಕ ವಿಜ್ಞಾನಿಗಳು ಇಂದು ನಂಬಲು ಶುರು ಮಾಡಿದ್ದಾರೆ. ಮೆದುಳಿನ ಅಧ್ಯಯನದ ವಿಜ್ಞಾನ ಬೆಳೆದಂತೆಲ್ಲ ಭಾರತೀಯ ಚಿಂತನೆಗಳು ಜಗತ್ತನ್ನು ಆಳಲಾರಂಬಿಸಿವೆ.
ಹಾಗೆ ನೋಡಿದರೆ ಅಮೆರಿಕಾ – ಯುರೋಪಿನ ಬುದ್ಧಿವಂತ ವರ್ಗದ ಬುಡವನ್ನು ಮೊದಲ ಬಾರಿಗೆ ತೀವ್ರವಾಗಿ ಅಲುಗಾಡಿಸಿದವರು ಸ್ವಾಮಿ ವಿವೇಕಾನಂದರೇ. ನಿಕೊಲಸ್ ಟೆಸ್ಲಾರಂತಹ ವಿಜ್ಞಾನಿಗಳ ಮೇಲೆ ಅವರ ಪ್ರಭಾವ ಹೇಳತೀರದಷ್ಟು. ಇನ್ನು, ನಮ್ಮ ಕಾಲದಲ್ಲಿ ವೈಜ್ಞಾನಿಕ ಲೋಕದ ದೃಷ್ಟಿಕೋನ ಬದಲಾಯಿಸಿದವರು ದಲೈ ಲಾಮಾ.
ಹೌದು. ಸುಮಾರು 2 ದಶಕಗಳ ಹಿಂದಿನ ಮಾತು. ನರ ವಿಜ್ಞಾನಿ ರಿಚರ್ಡ್ ಡೇವಿಡ್ಸನ್ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ದಲೈ ಲಾಮಾರನ್ನು ಭೇಟಿಯಾಗಿದ್ದ. ಅದುವರೆಗೂ ಆತನಿಗೆ ಸಮಸ್ಯೆಗಳಿಗೆ ಮೆದುಳು ಪ್ರತಿಕ್ರಿಯಿಸುವ ರೀತಿಯ ಬಗ್ಗೆ ಬಲವಾಗಿ ಗೊಂದಲಗಳಿದ್ದವು. ದಲೈಲಾಮಾ ಮೊದಲ ಭೇಟಿಯಲ್ಲೇ ಅವನನ್ನು ಪ್ರಶ್ನಿಸಿದರು. “ಆಧುನಿಕ ನರವಿಜ್ಞಾನ ಬಳಸಿ ಮಾನವನ ದುಗುಡ, ದುಃಖ, ಕೋಪ, ಖಿನ್ನತೆಯನ್ನೆಲ್ಲ ಅಧ್ಯಯನ ಮಾಡುತ್ತಿದ್ದೀರಿ. ನೀವೇಕೆ ಕರುಣೆ, ದಯೆಗಳನ್ನೂ ಪರೀಕ್ಷೆಗೆ ಒಳಪಡಿಸಬಾರದು?” ಡೇವಿಡ್ಸನ್ ಗೊಂದಲಕ್ಕೀಡಾದ. ಕರುಣೆ – ದಯೆಗಳು ಪಶ್ಚಿಮಕ್ಕೆ ಗಮನಿಸಬೇಕಾದ ಅಂಶವೆನ್ನಿಸಿರಲಿಲ್ಲ. ಆದರೆ ಭಾರತ ಮೂಲದ ಚಿಂತನೆಯ ಪ್ರಕಾರ ಇತರರನ್ನು ಪ್ರೀತಿಯಿಂದ ಕಂಡರೆ ದುಗುಡ, ದುಃಖ, ಕೋಪಗಳೆಲ್ಲ ಮರೆಯಾಗುತ್ತವೆ. ಇದನ್ನೇ ಹೇಳುವ ಪ್ರಯತ್ನ ಮಾಡಿದ್ದರು ದಲೈ ಲಾಮಾ!
ಭಾರತದ ಬುದ್ಧಿಜೀವಿಗಳೋ, ಮಾಧ್ಯಮದವರೋ ಆಗಿದ್ದರೆ ದಲೈ ಲಾಮಾರನ್ನು ಆಡಿಕೊಂಡು ನಕ್ಕುಬಿಡುತ್ತಿದ್ದರೇನೋ. ಡೇವಿಡ್ಸನ್ ಹಾಗೆ ಮಾಡಲಿಲ್ಲ. ತನ್ನ ಪ್ರಯೋಗ ಶಾಲೆಗೆ ಧ್ಯಾನದಲ್ಲಿ ಸಾಕಷ್ಟು ಮುಂದುವರೆದ ಬುದ್ಧ ಸನ್ಯಾಸಿಗಳನ್ನು ಕರೆದೊಯ್ದು ಅಧ್ಯಯನ ಶುರು ಮಾಡಿದ. 34 ಸಾವಿರ ಗಂಟೆಗಳಷ್ಟು ಕಾಲ ಮನಸ್ಸನ್ನು ಕೇಂದ್ರೀಕರಿಸುವ ತರಬೇತಿ ಪಡೆದುಕೊಂಡ ಸಿದ್ಧರಿವರು. ಬೇಕಾದಾಗ ಮನಸ್ಸನ್ನು ಬೇಕಾದೆಡೆ ಕೇಂದ್ರೀಕರಿಸಿಕೊಳ್ಳುವುದಷ್ಟೇ ಅಲ್ಲ, ಚಿಟಿಕೆ ಹೊಡೆಯುವಷ್ಟರಲ್ಲಿ ಮನಸ್ಸು 17 ಬೇರೆ ಬೇರೆ ವಸ್ತುಗಳ ಮೇಲೆ ಕೇಂದ್ರೀಕರಿಸಬಲ್ಲ ಶಕ್ತಿ ಇವರಿಗಿತ್ತು.
ಈ ಎಂಟು ಜನರ ಮೆದುಳನ್ನು ಅಧ್ಯಯನ ಮಾಡಿದಾಗ ದೇಹ ಮತ್ತು ಮಿದುಳಿನ ನಡುವಿನ ಹೊಂದಾಣಿಕೆಗಳು ನಡೆಯುವ ಸ್ಥಳ ಜಾಗೃತವಾಗಿರುವುದು ಕಂಡುಬಂತು. ಅಷ್ಟೇ ಅಲ್ಲ, ಧ್ಯಾನಸಿದ್ಧರ ಮೆದುಳಿನ ಕೆಲವು ವಿಕಿರಣಗಳು ಅವರಿಗೆ ಎಲ್ಲ ಸಮಸ್ಯೆಗಳನ್ನು ಎದುರಿಸಬಲ್ಲ ಸ್ಥಿತಿಸ್ಥಾಪಕತ್ವ ಗುಣ ತಂದುಕೊಟ್ಟಿತು. ಅವರ ಅಚ್ಚರಿಗೆ ಕಾರಣವಾದ ಮತ್ತೊಂದು ಸಂಗತಿ ಎಂದರೆ, ಒಂದು ವಾರ ಕಾಲ ಧ್ಯಾನ ಅಭ್ಯಾಸ ಮಾಡಿದವರ ದೇಹದ ರೋಗನಿರೋಧಕ ಶಕ್ತಿಯೂ ವೃದ್ಧಿಯಾಗಿತ್ತು.
ಧ್ಯಾನವೆನ್ನೋದು ಎಲ್ಲರನ್ನೂ ಕರುಣೆಯಿಂದ ನೋಡುವ ಪ್ರಕ್ರಿಯೆ ಎಂದರಿತ ಡೇವಿಡ್ಸನ್ ಒಂದು ಹಂತದಲ್ಲಂತೂ ಕರುಣೆಯ ತರಬೇತಿ ಶಿಬಿರ ಆಯೋಜಿಸುವ ಚಿಂತನೆ ಮಾಡಿಬಿಟ್ಟಿದ್ದ!
ನಮ್ಮ ಪ್ರಾಚೀನ ಋಷಿಗಳ ಚಿಂತನೆಗಳು ಈಗ ಮತ್ತೆ ಜೀವಂತಗೊಂಡಿದ್ದವು. “ಭಗವಂತ ಪ್ರತಿಯೊಬ್ಬ ಜೀವಿಯಲ್ಲೂ ವಾಸಿಸಿದ್ದಾನೆ. ಹೀಗಾಗಿ ‘ಜೀವದಯೆ’ ಇಡಬೇಕು” ಎಂಬುದು ವೈಷ್ಣವ ಸಿದ್ಧಾಂತದ ಮೂಲ ಚಿಂತನೆ. ಅದನ್ನೂ ಬಿಡಿ. “ಸರ್ವೇ ಭವನ್ತು ಸುಖಿನಃ” ಪ್ರಾರ್ಥನೆ ನಮ್ಮ ಮೂಲ ಮಂತ್ರ. ಸಕಲ ಜೀವಜಂತುಗಳೂ ಸುಖವಾಗಿ , ಆರೋಗ್ಯವಾಗಿರುವಂತೆ ಪ್ರಾರ್ಥಿಸುವ ಪರಂಪರೆ ನಮ್ಮದು. ಹೀಗಾಗಿ ದಯೆ, ಕರುಣೆ ಈ ನಾಡಿನ ಪ್ರತಿಯೊಬ್ಬರ ನರನಾಡಿಯಲ್ಲಿಯೂ ಸಹಜವಾಗೇ ಹರಿಯುತ್ತಿದೆ. ಅದು ನಮ್ಮ ಪಾಲಿಗೆ ನಿತ್ಯಧ್ಯಾನ.
ಆದರೆ ವಿಷಯ ಅದಲ್ಲ. ಡೇವಿಡ್ಸನ್ನನ ಪ್ರಯೋಗಗಳ ನಂತರ ವಿಜ್ಞಾನ ಲೋಕ ಅಚ್ಚರಿಗೆ ಬಿತ್ತು. ಮೆದುಳಿನ ಸಂದೇಶವಾಹಕವಾದ ಅತ್ಯಂತ ಸೂಕ್ಷ್ಮ ಘಟಕ ನ್ಯೂರಾನುಗಳ ಕುರಿತಂತೆ ವಿಸ್ತøತ ಅಧ್ಯಯನ ಶುರುವಾಯ್ತು. ಒಂದೇ ಆಲೋಚನೆಗೆ ಕಾರಣವಾಗುವ ನ್ಯೂರಾನುಗಳು ಒಂದಕ್ಕೊಂದು ಬೆಸೆದುಕೊಳ್ಳುವ, ಗಟ್ಟಿಯಾಗುವ, ಆಗಾಗ ಪ್ರಭಾವಿಯಾಗುವ ಪ್ರಕ್ರಿಯೆಯೂ ಬೆಳಕಿಗೆ ಬಂತು. ವೈದ್ಯಲೋಕ ಅದನ್ನು ನ್ಯೂರಾನ್ಸ್ ಫೈರ್ ಟುಗೆದರ್ ವೈರ್ ಟುಗೆದರ್ ಅನ್ನುತ್ತದೆ. ಅರ್ಥವಾಗುವಂತೆ ಹೇಳಬೇಕೆಂದರೆ, ನಿಮಗೆ ಆರೋಗ್ಯ ಸರಿಯಿಲ್ಲ ಎಂದುಕೊಳ್ಳಿ. ಮಿತ್ರರೊಬ್ಬರು ಬಂದು ನಿಮಗೆ ಯಾರೋ ಮಾಟ ಮಂತ್ರ ಮಾಡಿಸಿರಬಹುದು ಅನ್ನುತ್ತಾರೆ. ನೀವು ಅದನ್ನು ತೀವ್ರವಾಗಿ ನಂಬದಿದ್ದರೂ ಧಿಕ್ಕರಿಸುವುದೂ ಇಲ್ಲ. ಒಂದಷ್ಟು ನ್ಯೂರಾನುಗಳು ಈಗ ಒಟ್ಟಾದವು. ಕೆಲವು ದಿನಗಳ ನಂತರ ಅಂಗಡಿಯಲ್ಲಿ ವ್ಯಾಪಾರ ಸ್ವಲ್ಪ ಕಡಿಮೆ ಆಯಿತು ಅಂದುಕೊಳ್ಳಿ. ಮಂತ್ರ ಮಾಡಿಸಿರಬಹುದು ಅನ್ನುವ ಭಾವನೆಯ ನ್ಯೂರಾನುಗಳು ಮತ್ತಷ್ಟು ಬಲವಾದವು. ಈಗ ನೀವು ಸಆಗುತ್ತಿರುವ ವಾಹನ ಅವಘಡಕ್ಕೆ ತುತ್ತಾಗಿಬಿಟ್ಟರಂತೂ ಮುಗಿದೇಹೋಯ್ತು. ಮಂತ್ರ ಮಾಡಿಸಿದ್ದಾರೆಂಬ ಯೋಚನೆಯ ನ್ಯೂರಾನುಗಳು ಹಗ್ಗದಂತೆ ಹೊಸೆದುಕೊಂಡುಬಿಡುತ್ತವೆ. ಅಲ್ಲಿಂದಾಚೆಗೆ ಕಂಡವರನ್ನೆಲ್ಲ ಅನುಮಾನದಿಂದ ನೋಡುವ ಪ್ರವೃತ್ತಿ ಶುರುವಾಗುತ್ತದೆ. ಮನಸ್ಸು ಖಿನ್ನತೆಗೆ ಒಳಗಾಗಿಬಿಡುತ್ತದೆ. ಈ ಸ್ಥಿತಿಯಿಂದ ಮರಳಿ ತರುವ ಮಾರ್ಗ ಯಾವುದು? ಯಾವ ಮಾತ್ರೆಗಳೂ ಹಗ್ಗವಾಗಿರುವ ನ್ಯೂರಾನುಗಳನ್ನು ಸಡಿಲಿಸಲಾರವು. ಇರುವುದು ಒಂದೇ ಮಾರ್ಗ. ಯಾವ ಮಾರ್ಗದಲ್ಲಿ ನ್ಯೂರಾನುಗಳು ಬೆಸೆದಿವೆಯೋ ಅದಕ್ಕೆ ಪರ್ಯಾಯವಾದ ಮತ್ತೊಂದು ಧನಾತ್ಮಕ ಮಾರ್ಗ ಹುಡುಕುವ ಚಿಂತನೆ ಮಾತ್ರ! ನ್ಯೂರೋ ಪ್ಲಾಸ್ಟಿಸಿಟಿಯೇ ಮೊದಲಾದ ಹೊಸ ಪದಗಳು ವಿಜ್ಞಾನಿಗಳ ಬಾಯಲ್ಲಿ ಹರಿದಾಡಿದವು. ಅಧ್ಯಯನ ಮುಂದುವರೆದಂತೆಲ್ಲ ಭಾರತೀಯ ಚಿಂತನೆಗಳು ಬಲವಾಗಿ ಬೇರುಬಿಡುತ್ತ ನಡೆದವು. ಈ ಹಿಂದೆ ಬೌದ್ಧ ಭಿಕ್ಷುಗಳು ಚೀನಾದ ದಬ್ಬಾಳಿಕೆಯ ವಿರುದ್ಧದ ಕದನದ ಕಾವನ್ನು ಉಳಿಸಲು ತಾವೇ ಬೆಂಕಿ ಇಟ್ಟುಕೊಂಡು ಉರಿದು ಬೂದಿಯಾಗಿಬಿಡುವುದನ್ನು ಅವರು ಗಮನಿಸಿದ್ದರು. ದೇಹ ಉರಿದುಹೋಗುವಾಗಲೂ ಅವರ ಮುಖ ಮಾತ್ರ ಮಂದಸ್ಮಿತವಾಗಿಯೇ ಇರುತ್ತಿದ್ದುದು ಅವರ ಅಚ್ಚರಿಗೆ ಕಾರಣವಾಗಿತ್ತು. ಈಗ ಎಲ್ಲವೂ ನಿಚ್ಚಳವಾಯ್ತು. ಬೆಂಕಿಯ ಕಾವನ್ನು ಚರ್ಮ ಸುಡುತ್ತಿರುವ ಸಂವೇದನೆಯನ್ನೂ ಮೆದುಳಿಗೊಯ್ಯುವ ನರಗಳನ್ನು ಮಾನಸಿಕವಾಗಿ ನಿಸ್ತಂತುಗೊಳಿಸಿಕೊಂಡರಾಯ್ತು. ಕೇಳುವುದಕ್ಕೆ ಸುಲಭವೆನಿಸಬಹುದು, ಆಚರಣೆ ಕಷ್ಟಸಾಧ್ಯ. ನಿರಂತರ ಸಾಧನೆ ಬೇಕು. ಇದನ್ನೇ ಅಂದು ರಮಣರು ಮಾಡಿದ್ದು. ವಿಜ್ಞಾನ ಲೋಕ ಇದಕ್ಕೆ ಒಪ್ಪಿಗೆಯ ಮುದ್ರೆ ಹಾಕುವುದು ಅನಿವಾರ್ಯವಾಯ್ತು.

dalai-lama-climate-changeಧ್ಯಾನ ಮಾಡುವ ಸನ್ಯಾಸಿಗಳನ್ನು ಮತ್ತಷ್ಟು ಅಧ್ಯಯನಕ್ಕೆ ಒಳಪಡಿಸಲಾಯಿತು. ಮನಸ್ಸನ್ನು ಸತತವಾಗಿ ನಿಯಂತ್ರಣಕ್ಕೊಳಪಡಿಸಿ ಬೇಕಾದಂತೆ ದುಡಿಸಿಕೊಳ್ಳಬಹುದೆಂದು ವಿಜ್ಞಾನಿಗಳು ಈಗ ನಂಬಲಾರಂಭಿಸಿದರು. ಇದು ಪರಿಣಾಮಕಾರಿ ಔಷಧ ಎಂದು ಹೇಳಿ ಔಷಧದ ಅಂಶವೇ ಇಲ್ಲದ ಮಾತ್ರೆಗಳನ್ನು ರೋಗಿಗಳಿಗೆ ಕೊಟ್ಟು ಬೇಕಾದ ಫಲಿತಾಂಶವನ್ನೆ ಪಡೆಯಲಾಯಿತು. ಈ ಪ್ರಯೋಗ ಮೊಣಕಾಲಿನ ಚಿಪ್ಪಿನ ಶಸ್ತ್ರಚಿಕಿತ್ಸೆಯ ಮೇಲೂ ಯಶಸ್ವಿಯಾಗಿ ಆಯಿತೆಂದು ಅಮೆರಿಕಾದಿಂದ ಮರಳಿ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ನರ ವಿಜ್ಞಾನಿ ಉಷಾ ವಸ್ತಾರೆ ಹೇಳಿದ್ದು ನನಗೆ ನೆನಪಿದೆ. ಅಂದಮೇಲೆ, ಮನಸ್ಸನ್ನು, ಆ ಮೂಲಕ ಮೆದುಳನ್ನು ನಿಯಂತ್ರಿಸಿ ಏನನ್ನು ಬೇಕಾದರೂ ಸಾಧಿಸಿಕೊಳ್ಳುವ ನಮ್ಮ ಚಿಂತನೆ ಸತ್ಯವಾಯಿತು. ಈ ಹಿನ್ನೆಲೆಯಲ್ಲಿಯೇ ನಮ್ಮಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಯಮದ ಪಾಠ ಹೇಳಿಕೊಡುವುದು. “ಸ್ನಾನ ಮಾಡದೆ ತಿಂಡಿ ತಿನ್ನಲಾಗದು; ಹಬ್ಬದ ದಿನಗಳಲ್ಲಿ ಪೂಜೆ ಇಲ್ಲದೆ ಊಟವಿಲ್ಲ, ಭಗವಂತನಿಗೆ ನೈವೇದ್ಯವಿಲ್ಲದೆ ಸಿಹಿಯನ್ನು ಮುಟ್ಟುವಂತೆಯೂ ಇಲ್ಲ”. ಈ ಎಲ್ಲ ಚೌಕಟ್ಟು ಬೇಕಾದ ನ್ಯೂರಾನುಗಳನ್ನು ಹೊಸೆದು ಹಗ್ಗ ಮಾಡುವ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ. ಹೀಗೆ ಮಾಡುವಾಗ ಅದು ಒರಟಾದ ಪಾಠವಾಗಿ ಹಠಯೋಗವಾಗದೆ, ಪ್ರೇಮದ ನಿವೇದನೆಯಾಗಲೆಂದೇ ಭಗವಂತನನ್ನು ಎದುರಿಗಿಟ್ಟು ಭಕ್ತಿಯ ಆಚರಣೆ ಮಾಡಿಸೋದು.
ಕಳೆದ ಹತ್ತಾರು ಸಾವಿರ ವರ್ಷಗಳಲ್ಲಿ ಋಷಿ ಮುನಿಗಳು, ಸಂತರೆಲ್ಲ ಸೇರಿ ಸಾಮಾನ್ಯ ಮನುಷ್ಯರೂ ಆಚರಿಸಿ ಫಲಿತಾಂಶ ಪಡೆಯಬಹುದಾದ ವ್ಯವಸ್ಥೆ ರೂಪಿಸಿಕೊಟ್ಟರಲ್ಲ, ಅದಕ್ಕೇ ಇಲ್ಲಿ ಮಾನಸಿಕ ಖಿನ್ನತೆಗೊಳಗಾದವರು ಕಡಿಮೆ ಕಾಣುತ್ತಿದ್ದುದು. ನೈತಿಕ ಪ್ರಜ್ಞೆ ಅತ್ಯುಚ್ಚ ಮಟ್ಟದಲ್ಲಿ ಇದ್ದುದರಿಂದ ವ್ಯಕ್ತಿ ಸ್ವಲ್ಪ ಜಾರಿದರೂ ಅವನನ್ನು ಪರಿಹಾರ ಮಾರ್ಗಗಳ ಮೂಲಕ ಮೇಲೆತ್ತಿ ಮನಸ್ಸಿನ ಸ್ತಿಮಿತ ಕಾಯ್ದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿತ್ತು. ವಿಜ್ಞಾನ ನ್ಯೂರಾನುಗಳ ಬಗ್ಗೆ ಮಣಗಟ್ಟಲೆ ಹೇಳಬಹುದು; ಆದರೆ ಸೂಕ್ತ ನ್ಯೂರಾನುಗಳನ್ನು ಒಂದಕ್ಕೊಂದು ಜೋಡಿಸಲು ಧರ್ಮ ಮಾರ್ಗವೇ ಬೇಕು!
ಅದು ಬಿಡಿ. ನರವಿಜ್ಞಾನಿಗಳ ಸಂಶೋಧನೆ ಮುಂದುವರೆಯುತ್ತ ಹೋದಂತೆ ಭಾವಸಮಾಧಿಯ ಕಲ್ಪನೆಗಳೂ ನಿಚ್ಚಳಗೊಂಡವು. ರಾಮಕೃಷ್ಣ ಪರಮಹಂಸರಂತಹ ಮಹಾಮಹಿಮರು ಯಾವ ಮಟ್ಟಕ್ಕೇರುತ್ತಿದ್ದರು ಅಂರೆ, ಎದುರಿಗಿನ ವ್ಯಕ್ತಿ ತಾನೇ ಆಗಿ, ಅವರ ರೋಗ ರುಜಿನಗಳನ್ನೂ ಸ್ವೀಕರಿಸಬಲ್ಲವರಾಗಿಬಿಡುತ್ತಿದ್ದರು. ಕೆಲವೊಮ್ಮೆ ಅವರು ತದೇಕಚಿತ್ತರಾಗಿ ಹುಲ್ಲನ್ನು ನೋಡುತ್ತ ನಿಂತರೆ ತಾನೇ ಹುಲ್ಲಿನ ಹಾಸಾಗಿಬಿಡುತ್ತಿದ್ದರು. ಯಾರಾದರೂ ಹುಲ್ಲಿನ ಮೇಲೆ ನಡೆದುಕೊಂಡು ಹೋದರೆ ತಮ್ಮ ಎದೆಯ ಮೇಲೆ ಕಾಲಿಟ್ಟಷ್ಟು ವೇದನೆ ಅವರಿಗಾಗುತ್ತಿತ್ತು. ಭಾರತೀಯರು ನಾವಿಂದು ಇದನ್ನು ಭಕ್ತಿ – ಶ್ರದ್ಧೆ ಎಂದು ತೇಲಿಸಿಬಿಡುತ್ತೇವೇನೋ? ಆದರೆ ಪಶ್ಚಿಮದ ವಿಜ್ಞಾನಿಗಳು ಇದನ್ನು ಮಿರರ್ ನ್ಯೂರಾನ್ ಅಂತಾರೆ.
ಯಾರಾದರೂ ಅಪಘಾತದಲ್ಲಿ ಕಾಲು ಮುರಿದುಕೊಂಡು ಬಿದ್ದಿದ್ದರೆ, ಒಂದು ಕ್ಷಣ ನಮ್ಮ ಕಾಲು ಮುರಿದುಕೊಂಡು ನೋಯುತ್ತಿದೆಯೇನೋ ಅನ್ನಿಸುತ್ತದೆಯಲ್ಲ, ಅದು ಇದೇ ಮಿರರ್ ನ್ಯೂರಾನುಗಳ ಕಾರಣದಿಂದ. ಮನುಷ್ಯ ಹೆಚ್ಚುಹೆಚ್ಚು ಕರುಣಾಮಯಿಯಾದಷ್ಟೂ ಅವನ ಮೆದುಳಿನಲ್ಲಿ ಈ ನ್ಯೂರಾನುಗಳ ಕನ್ನಡಿ ಹೆಚ್ಚು ಹೆಚ್ಚು ಸ್ಫುಟವಾಗಿರುತ್ತದೆ. ತಾಯಿಗೆ ಮಗನ ಮೇಲಿನ ಮಮತೆ ಅದೆಷ್ಟೆಂದರೆ, ಆತನ ಎಲ್ಲ ನೋವುಗಳನ್ನೂ ತಾನೇ ಅನುಭವಿಸುತ್ತಾಳೆ. ಅದಕ್ಕೇ ನಮ್ಮ ಪರಂಪರೆ ಆಕೆಗೆ ಉನ್ನತ ಸ್ಥಾನ ಕೊಟ್ಟಿರೋದು. ಇನ್ನು ಮೇಲೆ ಅಮ್ಮನೊಂದಿಗೆ ಕರುಳ ಸಂಬಂಧ ಅನ್ನೋದರ ಜೊತೆಗೆ ಮಿರರ್ ನ್ಯೂರಾನುಗಳ ಸಂಬಂಧವನ್ನೂ ಹೇಳಬಹುದು!
ದಲೈ ಲಾಮಾರ ಒಂದು ಸವಾಲು ವಿಜ್ಞಾನಿಗಳ ಆಲೋಚನೆಯ ದಿಕ್ಕನ್ನೇ ಬದಲಿಸಿಬಿಟ್ಟಿತ್ತು. 2005ರಲ್ಲಿ ನರ ವಿಜ್ಞಾನಿಗಳ ಸಮಾವೇಶ ನಡೆದಾಗ ಅವರನ್ನು ಉಪನ್ಯಾಸಕ್ಕಾಗಿ ಆಹ್ವಾನಿಸಲಾಗಿತ್ತು. ಕೆಲವು ವಿಜ್ಞಾನಿಗಳು ಧಾರ್ಮಿಕ ಮುಖಂಡರನ್ನು ವಿಜ್ಞಾನದ ಅಧಿವೇಶನಕ್ಕೆ ಕರೆಯುವುದನ್ನು ವಿರೋಧಿಸಿದ್ದರು, ರಾದ್ಧಾಂತವೆಬ್ಬಿಸಿದ್ದರು. ಉಳಿದವರು ತಲೆ ಕೆಡಿಸಿಕೊಳ್ಳಲಿಲ್ಲ. ದಲೈ ಲಾಮಾ ತಮ್ಮ ಭಾಷಣದಿಂದ ರಂಗು ತುಂಬಿದ್ದಲ್ಲದೆ, ಪೂರ್ವದ ಚಿಂತನೆಯ ಮತ್ತೊಮ್ಮೆ ಜಗತ್ತನ್ನೆ ಆಳುವುದಕ್ಕೆ ವೇದಿಕೆ ರೂಪಿಸಿಕೊಟ್ಟರು.
ಹಾಗೆ ನೋಡಿದರೆ, ದಲೈ ಲಾಮಾಗೆ ಹುಟ್ಟಿಕೊಂಡ ಪ್ರಶ್ನೆ ಹೊಚ್ಚ ಹೊಸತೇನಲ್ಲ. ಚಕ್ರವರ್ತಿಯಾಗುವ ಎಲ್ಲ ಭಾಗ್ಯವನ್ನು ಪಡಕೊಂಡು ಬಂದಿದ್ದ ಬುದ್ಧ ವೃದ್ಧ, ರೋಗಿ, ಶವಗಳನ್ನು ನೋಡಿದನಲ್ಲ; ಅಂದೇ ಇವೆಲ್ಲವುಗಳಿಂದಲೂ ಪಾರಾಗುವ ಮಾರ್ಗ ಹುಡುಕಿಕೊಂಡು ವೈಭೋಗದ ಅರಮನೆ ಬಿಟ್ಟು ನಡೆದಿದ್ದ. ಅತ್ಯಂತ ಕಠಿಣ ತಪಸ್ಸು ಮಾಡಿ ದೇಹ ದಂಡಿಸಿ ಮೂಳೆ ಚಕ್ಕಳವಾದ. ಕೊನೆಗೆ ಭೋಗದ ಮತ್ತು ಹಠಯೋಗದ ನಡುವಿನ ಯೋಗ ಮಾರ್ಗ ಅರಸಿದ. ಇದೂ ಹೊಸತಾದುದೇನೂ ಆಗಿರಲಿಲ್ಲ. ಸ್ವತಃ ಬುದ್ಧನೇ ಹೇಳಿದ, “ನನ್ನಂತಹ ಬುದ್ಧರು ಹಿಂದೆಯೂ ಇದ್ದರು, ಮುಂದೆಯೂ ಬರುವರು”.
ಪತಂಜಲಿಯ ಯೋಗಸೂತ್ರಗಳು ಚಿತ್ತನಿಗ್ರಹದ ಬಗ್ಗೆಯೇ ಹುಟ್ಟಿಕೊಂಡ ವಿಜ್ಞಾನ. ಹಾಗಂತ ಪತಂಜಲಿಯೇ ಯೋಗದ ಜನಕನೇನು? ಖಂಡಿತ ಅಲ್ಲ. ಮಹಾಭಾರತದಲ್ಲಿ ಕೆಲವೆಡೆ ಸನತ್ಕುಮಾರ ಋಷಿ, ಜೈಗೀಷವ್ಯ ಋಷಿಗಳ ಕುರಿತಂತೆಯೂ ಉಲ್ಲೇಖವಿದೆ. ಅಲ್ಲಿಗೂ ನಿಲ್ಲದೆ ಭಾರತೀಯ ಪರಂಪರೆ ಎಲ್ಲ ವಿದ್ಯೆಗಳೂ ಸಾಕ್ಷಾತ್ ಪರಬ್ರಹ್ಮ ಮುಖಿಯೆಂದೇ ಒಪ್ಪುತ್ತವೆ. ಹೀಗಾಗಿ ಪರಬ್ರಹ್ಮನಿಂದ ಶುರು ಮಾಡಿ ದಲೈ ಲಾಮಾವರೆಗೆ ನಿರಂತರವಾಗಿ ಹರಿದು ಬಂದ ಯೋಗಪ್ರವಾಹ ಇದು. ಈ ಕುರಿತ ಒಂದು ಜಿಜ್ಞಾಸೆಯೇ ಪಶ್ಚಿಮದ ವಿಜ್ಞಾನಿಗಳ ತಲೆ ಇಷ್ಟು ಕೆಡಿಸಿರಬಹುದಾದರೆ, ಇನ್ನು ಪೂರ್ಣ ಭಾರತದ ಯೋಗವಿಜ್ಞಾನ ಅದೆಂತಹ ಬದಲಾವಣೆ ತರಬಲ್ಲದು! ಅನೇಕ ಬಾರಿ ಯೋಚಿಸಿಯೇ ರೋಮಾಂಚಿತನಾಗಿಬಿಡುತ್ತೇನೆ!

Wednesday 5 August 2015

ಆಲೋಚನೆಗಳ ಹಿಂದಿನ ಚಿತ್ತ ವಿಚಿತ್ರ

ನಾನು ಖಂಡಿತವಾಗಿ ವಿಜ್ಞಾನದ ವಿರೋಧಿಯಲ್ಲ. ಆದರೆ ಎಲ್ಲ ಪ್ರಶ್ನೆಗೂ ಭೌತಿಕ ವಿಜ್ಞಾನ ಉತ್ತರಿಸಬಲ್ಲದು ಎಂಬುದನ್ನು ಒಪ್ಪಲಾರೆ ಅಷ್ಟೇ. ಮತ್ತೆ ಮತ್ತೆ ಒತ್ತಿ ಹೇಳುತ್ತೇನೆ; ಯಾವ ಪ್ರಶ್ನೆಗೆ ವಿಜ್ಞಾನ ಉತ್ತರಿಸುವುದನ್ನು ನಿಲ್ಲಿಸುವುದೋ, ಅಲ್ಲಿಂದಾಚೆಗೆ ಅಧ್ಯಾತ್ಮ ಶುರುವಾಗುತ್ತದೆ.
ಸುಮ್ಮನೆ ಚರ್ಚೆ ಯಾಕೆ? ಸೈನಿಕರಾಗಿದ್ದ ಹಜಾರೆ, ಜೀವನದಲ್ಲಿ ನೊಂದು ಬೆಂದು ಆತ್ಮಹತ್ಯೆಯ ತಯಾರಿಯಲ್ಲಿದ್ದಾಗ ವಿವೇಕಾನಂದರ ಮಾತಿನ ಸಾಲುಗಳಿಂದ ಪ್ರಭಾವಿತರಾಗಿ ಬದುಕು ಬದಲಿಸಿಕೊಂಡರು – ಹಾಗಂತೆ ಓದಿದ್ದೇವೆ, ಅಣ್ಣಾ ಬಾಯಿಂದಲೂ ಕೇಳಿದ್ದೇವೆ. ಈಗ ಹೇಳಿ. ಅಣ್ಣಾ ವಿವೇಕಾನಂದರಿಂದ ಪ್ರಭಾವಿತರಾದ ದಿನ ವೈಜ್ಞಾನಿಕವಾಗಿ ಆದದ್ದೇನು? ಅಣ್ಣಾ ದೇಹದಲ್ಲಿ ಆಮ್ಲಜನಕ ಹೆಚ್ಚಾಯ್ತೆ? ಜಲಜನಕವೋ? ಪ್ರಭಾವವಾಗಿದ್ದು ಇಂದ್ರಿಯಗಳ ಮೇಲೋ, ದೇಹದ ಮೇಲೋ, ರಕ್ತ – ಮೂಳೆ, ಮಾಂಸಗಳ ಮೇಲೋ? ಮನಸ್ಸು ಅಂದೀರಿ ಜೋಕೆ! ಅದು ಕಣ್ಣಿಗೆ ಕಾಣದಿರುವುದರಿಂದ ಮೂಸಿ ನೋಡಲು, ಸ್ಪಶರ್ಿಸಲು ಸಾಧ್ಯವಿಲ್ಲದಿರುವುದರಿಂದ ವೈಜ್ಞಾನಿಕವಾಗಿ ಅದು ಇಲ್ಲ! ಅದು ಬಿಡಿ. ತೂಕ ನೋಡುವ ಯಂತ್ರದಲ್ಲಿ ನಿಮ್ಮ ದೇಹದ ತೂಕ ಲೆಕ್ಕ ಹಾಕಿ. ಈಗ ಮನಮೋಹಿಸುವ ಹಾಡೊಂದನ್ನು ಕೇಳಿ. ಐದಾರು ನಿಮಿಷ ಮೈಮರೆತ ನೀವು ಯಾವುದೋ ಲೋಕದಲ್ಲಿ ತೇಲಾಡಿಬಿಡುತ್ತೀರಿ. ಈಗ ಮತ್ತೆ ನಿಮ್ಮ ತೂಕ ಲೆಕ್ಕ ಹಾಕಿ. ಬದಲಾಗುವುದೇನು? ನಿಮ್ಮ ದೇಹದಲ್ಲಿನ ರಕ್ತ, ಮೂಳೆ, ಮಾಂಸಗಳ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುವುದೇನು? ಮತ್ತೆ ಐದಾರು ನಿಮಿಷಗಳಲ್ಲಿ ನಿಮ್ಮೊಳಗೆ ಬದಲಾವಣೆಯಾಗಿದ್ದು ವಾಸ್ತವವಾಗಿ ಏನದು? ಹಾ! ಸರಿಯಾಗಿ ಯೋಚಿಸಿದರಿ. ಇಲ್ಲಿಂದಾಚೆಗೇ ಅಧ್ಯಾತ್ಮದ ಪರಿಧಿ.086ea18ಪಂಚೇಂದ್ರಿಯಗಳ ಸಾಮರ್ಥ್ಯಕ್ಕೆ ನಿಲುಕದ ಅನೇಕ ಸಂಗತಿಗಳು ನಿತ್ಯವೂ ನಮ್ಮೆದುರಿಗೆ ನಡೆದೇ ಇರುತ್ತವೆ. ಅವುಗಳನ್ನು ಗಮನಿಸುವಲ್ಲಿ ನಾವು ಎಡವುತ್ತೇವೆ ಅಷ್ಟೆ. ವಾಸ್ತವವಾಗಿ ನಮ್ಮಲ್ಲಿ ಆಲೋಚನೆಗಳು ಹುಟ್ಟುತ್ತವಲ್ಲ, ಅದಾದಮೇಲೆ ಮೆದುಳಿನ ಯಾವಯಾವ ಭಾಗದಲ್ಲಿ ಯಾವಯಾವ ಬಗೆಯ ಕ್ರಿಯೆಗಳು ಜರುಗುತ್ತವೆಂಬ ವಿಸ್ತಾರವಾದ ಅಧ್ಯಯನವನ್ನು ಮಾಡಿದ್ದಾರೆ. ಆದರೆ ಮೂಲಭೂತವಾದ ಆಲೋಚನೆಗಳು ಹೇಗೆ ಹುಟ್ಟುತ್ತವೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ.
ವಿಜ್ಞಾನಿಗಳು ಇನ್ನೂ ತಿಣುಕಾಡುತ್ತಿದ್ದಾರೆ. ಹಾಗೇ ಸುಮ್ಮನೆ ಒಮ್ಮೆ ಕಣ್ಮುಚ್ಚಿ ಕುಳಿತು ನೋಡಿ. ಬಗೆಬಗೆಯ ಆಲೋಚನೆಯ ಬುಗ್ಗೆಗಳು ನಿಮ್ಮೊಳಗೆ ಏಳುವುದನ್ನು ಗಮನಿಸಿ. ಎಲ್ಲಿ ಅಡಗಿಕೊಂಡಿದ್ದವು ಅವು? ಒಳಿತು, ಕೆಡುಕು, ಅತಿ ಕೆಡುಕು ಎಲ್ಲ ಬಗೆಯ ಚಿಂತನಾತರಂಗಗಳ ಪ್ರವಾಹ. ಅವುಗಳಿಗೆ ಹೀಗೇ ಉತ್ಪಾದನೆಯಾಗಬೇಕೆಂಬ ಕ್ರಮವಿಲ್ಲ. ಮೇಲ್ನೋಟಕ್ಕೆ ಕಾಣುವ ನಿಮ್ಮ ವ್ಯಕ್ತಿತವಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಮತ್ತೆ ಈ ಚಿಂತನೆಗಳ ಉತ್ಪಾದನೆಯ ಕಾರ್ಖಾನೆ ಅದಾವುದು? ಈ ಚರ್ಚೆ ಅದೇಕೆ ಮುಖ್ಯವೆಂದರೆ, ಈ ಕಾರ್ಖಾನೆಯ ಉತ್ಪನ್ನದ ಗುಣಮಟ್ಟದ ಆಧಾರದ ಮೇಲೆಯೇ, ವ್ಯಕ್ತಿಯ ಗುಣಮಟ್ಟ ನಿರ್ಧಾರವಾಗುತ್ತದೆ.

ನೀವು ಯಾವಾಗಲಾದರೂ ‘ಚಿತ್ತ’ ಎನ್ನು ಪದವನ್ನು ಕೇಳಿದ್ದೀರಾ? ಇದು ಮನಸಿಗಿಂತ ಸ್ವಲ್ಪ ಸೂಕ್ಷ್ಮವಾದುದು. ಆಲೋಚನೆಗಳು ಹುಟ್ಟುವ ಮತ್ತು ಪರ್ಯವಸಾನಗೊಳ್ಳುವ ತಾಣವಿದು. ಚಿತ್ತ ಒಂದು ರೀತಿ ಸಿಡಿ ತಟ್ಟೆಯಿದ್ದಂತೆ. ಅದು ಹಿಂದಿನ ಜನ್ಮಗಳಿಂದ ಬಂದ ಅನುಭವದ ಎಲ್ಲ ಅಂಶಗಳನ್ನು ದಾಖಲಿಸಿಟ್ಟುಕೊಂಡಿದೆ. ಅಷ್ಟೇ ಅಲ್ಲ, ಈಗಿನ ಸಂಗತಿಗಳನ್ನೂ ದಾಖಲಿಸುತ್ತಲೇ ಹೋಗುತ್ತದೆ. ಕಂಪ್ಯೂಟರಿನ ದೃಷ್ಟಿಯಿಂದ ಇದು ‘ರೀಡ್ ಓನ್ಲಿ ಮೆಮೊರಿ’ಯಂತೆ. ಇಲ್ಲಿ ದಾಖಲು ಮಾಡಬಹುದು, ದಾಖಲಾಗಿದ್ದನ್ನು ಓದಬಹುದು, ಆದರೆ ಅಳಿಸುವುದು ಸಾಧ್ಯವಿಲ್ಲ. ಇದಕ್ಕಿಂತಲೂ ಸ್ಥೂಲಮಟ್ಟದ ಮನಸ್ಸು ಇಲ್ಲಿ ದಾಖಲಾಗಿದ್ದನ್ನು ಓದುತ್ತದೆ. ಮೆದುಳಿಗೆ ಮುಟ್ಟಿಸುವ ಕೆಲಸ ಮಾಡುತ್ತದೆ. ಇಲ್ಲಿ ಮನಸ್ಸು ರ್ಯಾಂಡಮ್ ಅಕ್ಷೆಸ್ ಮೆಮೊರಿ ಇದ್ದಂತೆ. ಅದು ಬರೆಸಿಕೊಂಡಷ್ಟೆ ವೇಗವಾಗಿ ಅಳಿಸಿಕೊಂಡೂ ಬಿಡುತ್ತದೆ. ಅದಕ್ಕೇ ನಮ್ಮ ಪೂರ್ವಜರು ಈ ಮನಸ್ಸನ್ನು ಚಂಚಲ ಎಂದಿದ್ದು, ಮರ್ಕಟಕ್ಕೆ ಹೋಲಿಸಿದ್ದು.
ಹೀಗೆ ಮನಸ್ಸು ಚಿತ್ತದ ಬತ್ತಳಿಕೆಯಿಂದ ಬಾಣಗಳನ್ನು ಮೊಗೆಮೊಗೆದು ಹುಚ್ಚಾಪಟ್ಟೆ ಮೆದುಳಿನತ್ತ ಎಸೆಯುತ್ತಿದ್ದರೆ ಪಂಚೇಂದ್ರಿಯಗಳು ಅದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ಹೊರಜಗತ್ತಿನಲ್ಲಿ ಮಾಡುತ್ತ ಹೋಗುತ್ತವೆ. ಮತ್ತೆ ಈ ಕ್ರಿಯೆಗಳೆಲ್ಲ ಚಿತ್ತದಲ್ಲಿ ಅಚ್ಚೊತ್ತಿಕೊಳ್ಳುತ್ತವೆ. ಇವು ಮತ್ತಷ್ಟು ಆಲೋಚನೆಗಳಿಗೆ ಕಾರಣವಾಗುತ್ತವೆ. ಎಲ್ಲ ಆಧ್ಯಾತ್ಮಿಕ ಪ್ರವಚನಗಳೂ ಜನನ ಮರಣ ಚಕ್ರದಿಂದ ಪಾರಾಗುವ ಕುರಿತಂತೆ ಮಾತಾಡುತ್ತವಲ್ಲ, ಅದರಲ್ಲಿ ಚಿತ್ತದಲ್ಲಿ ದಾಖಲಾಗದಂತೆ ತಡೆಯುವುದೂ ಒಂದು! ಇದಕ್ಕಾಗಿಯೇ ಬಗೆಬಗೆಯ ಸಾಧನೆಗಳು ರೂಪುಗೊಂಡಿರೋದು. ಚಿತ್ತದಿಂದ ಉಮ್ಮಳಿಸಿದ ಚಿಂತನೆಯನ್ನು ಮನಸ್ಸು ಮೆದುಳಿನತ್ತ ಎಸೆಯುತ್ತಲ್ಲ, ಆಗ ನಾವು ಮಾಡುವ ಕೆಲಸವನ್ನು ಪ್ರಯತ್ನಪೂರ್ವಕವಾಗಿ ನಿಯಂತ್ರಿಸಿದರೆ ಅದು ಕರ್ಮಯೋಗವಾಗಿಬಿಡುತ್ತದೆ. ಆಲೋಚನೆಯ ಮೂಲವನ್ನು ಹುಡುಕುತ್ತ ಅದರ ವಿಶ್ಲೇಷಣೆಗೆ ನಿಂತರೆ, ಅದು ಜ್ಞಾನಯೋಗ. ಚಿಂತನೆಗಳು ಮನಸ್ಸಿಗೆ ಬರದಂತೆ ಮನಸ್ಸನ್ನು ಶೂನ್ಯವಾಗಿಸುವ ಪ್ರಯತ್ನವಿದೆಯಲ್ಲ, ಅದನ್ನು ಧ್ಯಾನದ ರಾಜಮಾರ್ಗ, ರಾಜಯೋಗ ಅಂತಾರೆ ಅಷ್ಟೆ.
ಮನಸ್ಸನ್ನು ನಿಯಂತ್ರಿಸೋದೇ ಎಲ್ಲ ಯೋಗದ ಮೂಲ. ಇನ್ನೂ ಸ್ಪಷ್ಟಪಡಿಸಬೇಕೆಂದರೆ, ಯೋಗ ‘ಚಿತ್ತವೃತ್ತಿಗಳ ನಿರೋಧ’. ಹಾಗಂತ ಹೇಳುತ್ತೆ ಪತಂಜಲಿಯ ಸೂತ್ರ. ಚಿತ್ತದಲ್ಲಿ ಬಗೆಬಗೆಯ ಬುಗ್ಗೆಗಳು ಏಳದಂತೆ ನೋಡಿಕೊಂಡರಾಯ್ತು. ಹಾಗಾಗಬೇಕೆಂದರೆ ಮನಸ್ಸು ಹಿಡಿತಕ್ಕೆ ಬರಲೇಬೇಕು. ಅದಕ್ಕೆ ಕಠೋಪನಿಷತ್ತಿನಲ್ಲಿ ಯಮ ನಚಿಕೇತನಿಗೆ ಹೇಳುವ ಬೋಧೆಯಲ್ಲಿ ದೇಹವೆಂಬ ರಥದ ಸಾರಥಿಯಾಗಿ ಬುದ್ಧಿಯನ್ನು ಸಂಕೇತಿಸಿದರೆ, ಮನಸ್ಸನ್ನು ಲಗಾಮಿನಂತೆ ಚಿತ್ರಿಸುತ್ತಾನೆ. ಅರ್ಥ ಬಲು ಸ್ಪಷ್ಟ. ಬುದ್ಧಿಯ ಅಡಿ ಮನಸ್ಸಿದ್ದರೆ ಬದುಕು ಸುಂದರ; ಮನಸ್ಸು ಹೇಳಿದಂತೆ ಬುದ್ಧಿ ಕೇಳಿದರೆ ಬಲು ದುರ್ಭರ.

ನೀವು ಜಗತ್ತಿನ ಯಾವ ಮತಪಂಥಗಳನ್ನೆ ಗಮನಿಸಿ, ಅವುಗಳ ಮೂಲ ವ್ಯತ್ಯಾಸ ಇರುವುದು ಚಿತ್ತದ ಅಲೆಗಳ ಬಿಂಬವಾದ ಮನಸ್ಸನ್ನು ಸಂಭಾಳಿಸುವ ರೀತಿಯಲ್ಲೇ. ಭಕ್ತಿ ಮಾರ್ಗದ ಮೂಲಕ ಮನಸ್ಸನ್ನು ಎತ್ತರಕ್ಕೇರಿಸುವ ಹಾದಿ ತೋರುತ್ತದೆ. ಇನ್ನೂ ಕೆಲವು ಪಂಥಗಳು ಭಗವಂತ – ಭಕ್ತರಲ್ಲಿ ಭೇದವೇ ಇಲ್ಲವೆನ್ನುತ್ತ ಉನ್ನತ ಆಲೋಚನೆಗಳಿಗೆ ಪ್ರೇರೇಪಿಸುತ್ತವೆ. ಈ ಮೂಲ ಸತ್ವವನ್ನು ಮರೆತವರು ತಾವು ಹಿಡಿದ ಹಾದಿಯೇ ಶ್ರೇಷ್ಠ ಎನ್ನು ಜಿದ್ದಿಗೆ ಬಿದ್ದರು.
ಬೇರೆ ಮಾರ್ಗದಲ್ಲಿದ್ದವರನ್ನು ಹೀಯಾಳಿಸಿದರು. ಕೆಲವು ಮತಗಳಂತೂ ತಾವು ಶ್ರೇಷ್ಠ ಎನ್ನುವುದಕ್ಕಾಗಿ ಇತರರನ್ನು ಕೊಲ್ಲುವುದಕ್ಕೂ ಹಿಂದೆ ಮುಂದೆ ನೋಡಲಿಲ್ಲ. ಜಗತ್ತನ್ನು ಆವರಿಸುತ್ತಿರುವ ಅನೇಕ ಪಂಥಗಳು ಇಂಥವೇ.
ಒಟ್ಟಾರೆಯಾಗಿ ಒಂದಂತೂ ಸತ್ಯ. ಎಲ್ಲ ಮತಗಳೂ ಹುಟ್ಟಿರೋದು ಆಯಾ ಮತಗಳ ಮೂಲ ಪುರುಷರ ಚಿಂತನೆಗಳ ಕಾರಣದಿಂದಾಗಿಯೇ. ಮತ್ತು ಈ ಚೀಮತನೆಗಳ ಮೂಲ ಸ್ರೋತ ಚಿತ್ತವೇ! ಈ ಚಿತ್ತ ಸದಾ ಕಾಲ ತನ್ನನ್ನು ಓದುವಂತೆ ಮನಸ್ಸಿಗೆ ಪ್ರಚೋದನೆ ಕೊಡುತ್ತಲೇ ಇರುತ್ತದೆ. ಆದರೆ ನಾವು ಎಚ್ಚರವಾಗಿದ್ದಾಗ, ಐದೂ ಇಂದ್ರಿಯಗಳೂ ಕೆಲಸ ಮಾಡುತ್ತವಾದ್ದರಿಂದ ಮನಸ್ಸು ಆಗ ಹೊರಗಣ ಕೃತಿಗಳನ್ನು ಚಿತ್ತದಲ್ಲಿ ದಾಖಲಿಸುತ್ತಿರುತ್ತದೆ. ಒಮ್ಮೆ ಕಣ್ಮುಚ್ಚಿ ಕುಳಿತೊಡನೆ ಹಳೆಯದ್ನು ಕೆದುಕಲು ಶುರು ಮಾಡುತ್ತದೆ. ಅದಕ್ಕೇ ನಿದ್ದೆಯಲ್ಲೂ ಸ್ವಪ್ನಗಳು ನಮ್ಮನ್ನು ಕಾಡೋದು. ಹೀಗೆ ಜಾಗೃತಾವಸ್ಥೆ ಮತ್ತ ಸ್ವಪ್ನವಸ್ಥೆಯಲ್ಲಿ ಕಂಡ ಸತ್ಯಗಳನ್ನು ಸಮಾಜಕ್ಕೆ ಮುಟ್ಟಿಸಿ ಕೆಲವರು ಪಂತಗಳನ್ನು ಸ್ಥಾಪಿಸಿದರೆ, ಭಾರತೀಯ ಋಷಿಗಳುಇವೆರಡನ್ನೂ ಮೀರಿ ಸುಷುಪ್ತಿಯ ಅವಸ್ಥೆಗೇರಿದರು. ಅಲ್ಲಿ ಮನಸ್ಸನ್ನು ಇಲ್ಲವಾಗಿಸಿ ಚಿತ್ತಾಕಾಶದಲ್ಲಿಯೇ ವಿಹರಿಸಿದರು. ಆಗ ಅವರಿಗೆ ಅನೇಖ ಶಾಶ್ವತ ಸತ್ಯಗಳು ಗೋಚರವಾದವು. ಅದನ್ನು ಸಮಾಝದ ಮುಂದಿರಿಸಿದರು. ಹೀಗೆ ಚಿತ್ತಾಕಾಶದೊಂದಿಗೆ ಒಂದಾದಾಗ ಗೋಚರಿಸಿದ ಸತ್ಯವಾದ್ದರಿಂದ, ಋಷಿಗಳು ಎಂದಿಗೂ ಮಂತ್ರಗಳನ್ನು ಕಂಡುಹಿಡಿದೆ ಎನ್ನಲಿಲ್ಲ, ಬದಲಿಗೆ ‘ದರ್ಶನವಾಯ್ತು’ ಎಂದರು. ಈ ದರ್ಶನದ ವೇಳೆಗೆ ಮನಸ್ಸು ಇಲ್ಲವಾಗಿದ್ದರಿಂದ, ಅಸ್ತಿತ್ವದ ಭಾವನೆಯೇ ಲಯವಾಗಿತ್ತು. ಹೀಗಾಗಿಯೇ ಅವರು ಕಂಡುಕೊಂಡ ಸತ್ಯಗಳ ಸಂಕಲನ ‘ವೇದ’ ಅಪೌರುಷೇಯವಾಯಿತು.

ಚಿತ್ತದಿಂದ ಹೊರಟ ಪ್ರತಿಯೊಂದು ಆಲೋಚನೆಗೂ ಅಪಾರವಾದ ಶಕ್ತಿ ಇದೆ. ಆಡಿದ ಮಾತಿಗಿಂತ ಹೆಚ್ಚು ಶಕ್ತಿಶಾಲಿ ಆಡದ ಆಲೋಚನೆಯೇ. ಸ್ವಾಮಿ ವಿವೇಕಾನಂದರಂತೂ ನೀವು ಗುಹೆಯೊಂದರಲ್ಲಿ ಕುಳಿತು ಬಲವಾದ ಚಿಂತನೆಯೊಂದನ್ನು ಹೊರಹಾಕಿ. ಅದು ಆ ಗುಹೆಯ ಗೋಡೆಗಳನ್ನೂ ಮುರಿದುಕೊಂಡು ಜಗತ್ತನ್ನು ಆವರಿಸುತ್ತದೆ ಎನ್ನುತ್ತಾರೆ. ಬಹುಶಃ ನಮ್ಮಿಂದ ಹೊರಬಿದ್ದ ಚಿಂತನೆ ವಿಜ್ಞಾನ ಇನ್ನೂ ಗುರುತಿಸಲಾಗದ ಯಾವುದೋ ಬಗೆಯ ವಿಕಿರಣವಿರಬೇಕು. ಅದು ವಿದ್ಯುತ್ ಕಿರಣಗಳಿಗಿಂತಲೂ ಕಾಂತೀಯ ಕಿರಣಗಳಿಗಿಂತಲೂ ಬಲಾಢ್ಯವಾದುದೇ ಆಗಿರಬೇಕು. ಮನಸ್ಸು ಎಷ್ಟು ಶುದ್ಧವೋ ಅಷ್ಟು ಗಟ್ಟಿಯಾದ ಆಲೋಚನೆ. ಆಲೋಚನೆ ಎಷ್ಟು ಗಟ್ಟಿಯೋ ಅಷ್ಟು ದೀರ್ಘಕಾಲ ಬಾಳಿಕೆ ಮತ್ತು ಸುದೀರ್ಘ ದೂರ ಪಯಣ ಅದರದ್ದು. ಹೀಗಾಗಿಯೇ ಉಪನಿಷತ್ ಕಾಲದ ಋಷಿ ಹೇಳಿದ ವಾಕ್ಯವೊಂದು ಜರ್ಮನಿಯ ತತ್ತ್ವಶಾಸ್ತ್ರಜ್ಞ ಶೋಫನ್ ಹೋವರ್ನನ್ನು ಅಲುಗಾಡಿಸಬಲ್ಲದು. ಹಾಗೆ ನೋಡಿದರೆ ನಮ್ಮ ಸುತ್ತಲೂ ಮೊಬೈಲ್ ಸಂದೇಶ ಹೊರುವ ಸಿಗ್ನಲ್ಗಳು ಎಷ್ಟಿವೆಯೋ ಅದ್ಕಿಂತಲೂ ಸಾವಿರಾರು ಹೆಚ್ಚುಪಟ್ಟು ಚಿಂತನೆಯ ತರಂಗಗಳು ಸುತ್ತುತ್ತಿವೆ. ಇದರಲ್ಲಿ ಋಷಿಗಳ ಕಾಲದ ಆಲೋಚನೆಗಳಿವೆ, ಆಧುನಿಕ ಸುಧಾರಕರ ಆಲೋಚನೆಗಳಿವೆ. ಕೊನೆಗೆ ನಮ್ಮ ಪರಿಚಿತರ, ಗುರುತೇ ಇಲ್ಲದವರ ಚಿಂತನೆಗಳೂ ಸೇರಿಕೊಂಡಿವೆ. ಮನಸ್ಸು, ಚಿತ್ತ ಮತ್ತು ಈ ಸಂಜ್ಞೆಗಳನ್ನು ಬೆಸೆದರೆ ನೀವು ಊಹಿಸಲೂ ಸಾಧ್ಯವಿಲ್ಲದ ಹೊಸಹೊಸ ಆಲೋಚನೆಗಳು ನಿಮ್ಮೊಳಗಿಂದ ಉಮ್ಮಳಿಸಿಬರುತ್ತವೆ. ಕೆಲವೊಮ್ಮ ಗಣಿತದ ಸಮಸ್ಯೆಗೆ ಪರಿಹಾರ ಸಿಗದೆ ತಿಣುಕಾಡುತ್ತಿರುವಾಗ ಇದ್ದಕ್ಕಿದ್ದಂತೆ ಉತ್ತರ ಹೊಳೆಯುವ ಐಂದ್ರಜಾಲಿಕ ಪ್ರಕ್ರಿಯೆ ಗಮನಿಸಿದ್ದೀರ? ಉತ್ತರ ಅದೆಲ್ಲಿತ್ತು? ಮತ್ತದು
ತತ್ ಕ್ಷಣಕ್ಕೆ ಹೊಳೆದದ್ದು ಯಾಕೆ ಎಂಬುದಕ್ಕೆ ಉತ್ತರ ಏಕಾಗ್ರಗೊಂಡ ಮನಸ್ಸು ಮಾತ್ರ.

ಇದೊಂದು ರೀತಿ ರೇಡಿಯೋ ಟ್ಯೂನಿಂಗ್ ಇದ್ದಂತೆ. ರೇಡಿಯೋ ಸಂಕೇತಗಳನ್ನು ಟ್ಯೂನ್ ಮಾಡಿಕೊಂಡು ಬೇಕಾದ ಸಂಗೀತವನ್ನು ಕೇಳುವುದಿಲ್ಲವೆ? ಹಾಗೆ. ದೇಹವೇ ರೇಡಿಯೋ ಆದರೆ, ಮನಸ್ಸು ಟ್ಯೂನರ್. ಸುತ್ತಲೂ ಚದುರಿರುವ ಆಲೋಚನೆಗಳ ತರಂಗಗಳನ್ನು ಟ್ಯೂನ್ ಮಾಡಿ ಒಳಗೆಳೆದುಕೊಳ್ಲಬಹುದು. ಮನಸ್ಸು ಶೂನ್ಯಕ್ಕೆ ಹತ್ತಿರ ಹೋದಷ್ಟೂ ನಮ್ಮಲ್ಲಿ ಹುಟ್ಟುವ ಆಲೋಚನೆಗಳು ಘನವಾಗುತ್ತ ಸಾಗುತ್ತವೆ. ನಮ್ಮ ಸನಾತನ ಧರ್ಮದ ಉಗಮದ ಕಲ್ಪನೆ ಹೀಗೇ. ಸೃಷ್ಟಿಯ ಆದಿಯಲ್ಲಿ ಹುಟ್ಟಿಕೊಂಡ ಶಬ್ದವನ್ನು ಋಷಿಗಳು ಹೀಗೇ ಗ್ರಹಿಸಿದ್ದು. ವೇದಗಳ ಗ್ರಹಿಕೆಯ ಮಾರ್ಗವೂ ಇದೇ ಎನ್ನಲಾಗುತ್ತದೆ. ಹೀಗೆ ತನ್ನರಿವು ಕಳೆದುಕೊಂಡ ಮೇಲೆ ದರ್ಶನ ಪಡಕೊಂಡ ಶ್ರೇಷ್ಠ ವಿಚಾರಗಳಾದ್ದರಿಂದ ವೇದಗಳ ಮಾತು ಇಂದಿಗೂ ಸತ್ಯವಾಗಿವೆ. ಹೀಗೆ ಯಾವ ಮತವು ಶಾಶ್ವತ
ಸತ್ಯವನ್ನು ಪ್ರತಿಪಾದಿಸುವುದೋ ಅದು ‘ಧರ್ಮ’ವಾಗುತ್ತದೆ ಮತ್ತು ವಿಶ್ವಗುರು ಯೋಗ್ಯತೆ ಪಡೆದುಕೊಳ್ಳುತ್ತದೆ.

ಈಗ ಒಂದು ಪುಟ್ಟ ಪ್ರಯೋಗ ಮಾಡಿ. ಕಣ್ಮುಚ್ಚಿ ಕುಳಿತುಕೊಳ್ಳಿ. ನಿಮ್ಮ ಪ್ರಯತ್ನವೇ ಇಲ್ಲದೆ ಹುಟ್ಟುವ ಆಲೋಚನೆಯ ತರಂಗಗಳನ್ನು ಗಮನಿಸಿ. ಅವು ಸಾಗುವ ಹಾದಿಯ ಅವಲೋಕನ ಮಾಡಿ. ನೀವು ಅವುಗಖನ್ನು ತಡೆಯಲು ಪ್ರಯತ್ನಿಸಿದಷ್ಟೂ ಅವು ಹೆಚ್ಚುಹೆಚ್ಚು ಗೊಂದಲ ಎಬ್ಬಿಸುವುದನ್ನು ಕಾಣುವಿರಿ. ಅಷ್ಟೇ ಅಲ್ಲ, ಒಂದು ಆಲೋಚನೆ ಮತ್ತೊಂದಕ್ಕೆ ಬೆಸೆದುಕೊಳ್ಳುತ್ತಾ ಇದು ಸರಪಳಿಯಾಗುವುದು ನಿಮ್ಮ ಅನುಭವಕ್ಕೆ ಬರುತ್ತದೆ. ಈಗ ಸ್ವಲ್ಪ ಹೊತ್ತಿನ ಬಳಿಕ ಇದು ಹುಟ್ಟುತ್ತಿರುವುದು ಎಲ್ಲಿ ಎಂದು ಹುಡುಕಾಟ ಶುರು ಮಾಡಿ. ಈಗ ಮನಸ್ಸನ್ನು ದಾಟಿ ಹೋಗುವ ಪ್ರಯತ್ನ ಶುರುವಾಗುತ್ತದೆ. ನೀವು ಏಕಾಗ್ರರಾಗಲು
ಸಾಧ್ಯವಾದಷ್ಟೂ ವಿಶ್ವಚಿತ್ತ ನಿಮ್ಮೆದುರು ತೆರೆದುಕೊಳ್ಳುತ್ತದೆ. ನೀವು ಅವಾಕ್ಕಾಗೋದು ಖಚಿತ.
ಊಹೂಂ.. ಈ ಎಲ್ಲ ಪ್ರಯೋಗಗಳಿಗೂ ನೀವೇ ಪ್ರಯೋಗಾಲಯ. ನಿಮಗಾಘುವ ಬಗೆಬಗೆಯ ಅನುಭೂತಿಯನ್ನು ನೀವು ಯಾರಿಗೂ ವಿವರಿಸಲಾರಿರಿ. ಈ ಕಾರಣಕ್ಕೆ ಇದು ಸುಳ್ಳೆಂದು ನೀವು ವಾದಿಸುವುದೂ ಆಗದು. ವಿಜ್ಞಾನಕ್ಕೆ ಇವುಗಳನ್ನು ಸಾಧಿಸುವುದು ಸಾಧ್ಯವಾಗದು. ಜಗತ್ತಿನ ಸೂಕ್ಷ್ಮ ಮನಸ್ಸಿನ ವಿಜ್ಞಾನಿಗಳನೇಕರು ಇಂದು ಇದಕ್ಕಾಗಿ ತಿಣುಕಾಡುತ್ತಿದ್ದಾರೆ. ನರವಿಜ್ಞಾನವಂತೂ ಭಾರತೀಯ ಚಿಂತನೆಗಳತ್ತ ವಾಲಿಬಿಟ್ಟಿದೆ. ಅದರ ಆಧಾರದ ಮೇಲೆ ಪೂರ್ಣ
ಜಗತ್ತು ಭಾರತಕ್ಕೆ ನತಮಸ್ತಕವಾಗುವ ದಿನ ದೂರವಿಲ್ಲ.

Tuesday 21 July 2015

ಒಮ್ಮೆ ಸತ್ತ ಮೇಲೆ ಮತ್ತೆ ಹುಟ್ಟುತ್ತೇವಾ?

'ಅಧ್ಯಾತ್ಮ ಚರ್ಚೆ’ ಅಂತೇನಾದರೂ ಅಂದರೆ ಅನೇಕರು ಆಗಿಂದಾಗ್ಯೆ ಕಿವಿ ಕಣ್ಣುಗಳನ್ನು ಮುಚ್ಚಿಕೊಂಡು ಜಾಗ ಖಾಲಿ ಮಾಡಿಬಿಡುತ್ತಾರೆ. ಆದರೆ ಚರ್ಚೆ ಮಾಡಲಿ, ಬಿಡಲಿ.. ಆತ್ಮದಿಂದಲೇ ಜಗತ್ತು ವ್ಯಾಪ್ತಗೊಂಡಿರುವುದನ್ನು ಮರೆತೇಬಿಡುತ್ತಾರೆ. ಒಂದೇ ಒಂದು ನಿಮಿಷ ಸುಮ್ಮನೆ ಕಣ್ಮುಚ್ಚಿ ಕುಳಿತುಕೊಂಡು ನಾನು ಹೇಳುವ ವಿಚಾರಗಳ ಕುರಿತಂತೆ ಆಲೋಚಿಸಿ. ನೀವು ಖಂಡಿತ ಅಚ್ಚರಿಗೊಳಗಾಗುವಿರಿ.
ನಮ್ಮ ಸುತ್ತಲೂ ನಡೆಯುವ ಅನೇಕ ಸಂಗತಿಗಳನ್ನು ವಿಜ್ಞಾನ ಆಕಸ್ಮಿಕವೆಂದು ಕರೆದು ಬದಿಗಿಟ್ಟುಬಿಟ್ಟಿದೆ. ಉದಾಹರಣೆಗೆ, ಭೂಮಿಯೇ ಮೊದಲಾದ ಗ್ರಹಗಳು ಸೂರ್ಯನ ಸುತ್ತ ಸುತ್ತುವುದಲ್ಲ ಹಾಗೆ ಎಲ್ಲ ಗ್ರಹಗಳನ್ನು ಅಧೀನದಲ್ಲಿ ಇಟ್ಟುಕೊಂಡು ತನ್ನ ಸುತ್ತ ಸುತ್ತಿಸಿಕೊಳ್ತಿರುವ ವಿಶ್ವ ಪ್ರಜ್ಞೆಯನ್ನು ಸೂರ್ಯನಿಗೆ ಅದಾರು ಕೊಟ್ಟರು? ‘ಆಕಸ್ಮಿಕ’. ಬೀಜವೊಂದು ಮೊಳಕೆಯೊಡೆದು ಸಸಿಯಾಗುವ ಹಂತವೆಲ್ಲ ನಮಗೆ ಗೊತ್ತು. ಆದರೆ ಆ ಬೀಜಕ್ಕೆ ಮೊಳಕೆಯೊಡೆಯಬೇಕೆಂಬ ಪ್ರಜ್ಞೆ ಎಲ್ಲಿಂದ ಬಂತು? ಆಕಸ್ಮಿಕ. ಒಂದೆರಡು ವರ್ಷದ ಮಗುವನ್ನು ನೀರಿಗೆ ತಳ್ಳಿದರೆ ಉಸಿರು ಬಿಗಿ ಹಿಡಿಯಬೇಕೆಂಬ ಸಹಜ ಸಿದ್ಧಾಂತ ಅದರೊಳಗೆ ಕೂಡಲೇ ಜಾಗೃತವಾಗುತ್ತದೆ. ಹೇಳಿಕೊಟ್ಟಿದ್ದು ಯಾರು? ‘ಆಕಸ್ಮಿಕ. ಹುಟ್ಟಿದಾಕ್ಷಣ ಮಗು ತಾಯಿಯ ಮೊಲೆಯನ್ನು ಚೀಪಿ ಹಾಲು ಕುಡಿಯುತ್ತದಲ್ಲ, ತರಬೇತಿ ಕೊಟ್ಟ ಗುರು ಯಾರು? ‘ಆಕಸ್ಮಿಕ’!
ನಾನಂತೂ ಇಂತಹ ನೂರಾರು ವಿಸಮ್ಯಗಳನ್ನು ದಾಖಲಿಸಬಲ್ಲೆ. ಇಷ್ಟೊಂದು ಸಂಗತಿಗಳು ಆಕಸ್ಮಿಕವಾದರೂ ಹೇಗೆ? ನಾನು ಉಲ್ಲೇಖಿಸಿರುವ ಘಟನೆಗಳಲ್ಲೆಲ್ಲಾ ಸೂಕ್ಷ್ಮವಾದ ವಸ್ತುವೊಂದು ತನ್ನಿಚ್ಛೆಗೆ ತಕ್ಕಂತೆ ಎಲ್ಲವನ್ನೂ ನಿಯಂತ್ರಿಸುತ್ತದೆ ಅಂತ ನಿಮಗೆ ಅನಿಸುತ್ತಿಲ್ಲವೆ?
ಹೋಗಲಿ. ಯಾರಾದರೂ ತೀರಿಕೊಂಡಾಗ ನಾವೇನೆನ್ನುತ್ತೇವೆ ಹೇಳಿ. ಜೀವ ಹೋಯ್ತು ಅಂತ ತಾನೆ? ಅದು ಆಡು ಭಾಷೆಯಾಯ್ತು. ವೈದ್ಯಕೀಯ ಭಾಷೆಯಲ್ಲಿ ಜೀವ ಹೋಗೋದು ಅಂದರೆ ಉಸಿರು ನಿಲ್ಲೋದು, ಹೃದಯ ಸ್ತಬ್ಧವಾಗೋದು ಮತ್ತು ಮೆದುಳು ನಿಷ್ಕ್ರಿಯವಾಗೋದು ಅಂತ! ಇವನ್ನೇ ಆಧಾರವಾಗಿಟ್ಟುಕೊಂಡು `ಮರವೊಂದು ಸತ್ತಿದೆ’ ಎನ್ನುವುದನ್ನು ಹೇಗೆ ಹೇಳಬಹುದು? ಯೋಚಿಸಿ ನೋಡೋಣ. ಅಲ್ಲಿ ಹೃದಯವಿಲ್ಲ, ಮೆದುಳಿಲ್ಲ. ನಾವೆಂದುಕೊಂಡಂತಹ ಉಸಿರಾಟವೂ ನಡೆದಿಲ್ಲ. ಮತ್ತೆ ಸತ್ತಾಗ ಆದದ್ದಾದರೂ ಏನು? 12
ಮನುಷ್ಯರ ವಿಚಾರದಲ್ಲಿಯೂ ಹಾಗೆಯೇ. ಆತ ಸತ್ತು ಆರು ಗಂಟೆಗಳ ವರೆಗೆ ಕಣ್ಣು ದಾನಕ್ಕೆ ಯೋಗ್ಯವಾಗಿರುತ್ತದೆ; ಜಠರ ಕೆಲಸ ಮಾಡುತ್ತಿರುತ್ತದೆ. ಅದರರ್ಥ ಜೀವ ಹೋಯಿತೆಂದು ನಾವು ಉದ್ದೇಶಿಸಿದ ನಂತರವೂ ದೇಹದ ಅನೇಕ ಅಂಗಗಳು ಜೀವಂತವಾಗಿರುತ್ತದೆ. ಹಾಗಿದ್ದರೆ ನಿಜವಾಗಿಯೂ ಹೋದದ್ದೇನು? ಅದನ್ನೇ `ಆತ್ಮ’ ಎಂದರು ನಮ್ಮವರು. ಕೆಲವರು ಪ್ರಾಣಶಕ್ತಿ ಅಂತ ಕರೆದಿದ್ದೂ ಅದನ್ನೇ! ಇದೇ ಆತ್ಮ ಶಕ್ತಿ ಎಲ್ಲರೊಳಗಿದ್ದುಕೊಂಡು ವಿಶ್ವದ ನಿಯತಿಗೆ ಕಾರಣವಾಗಿದೆಯಲ್ಲ, ಇದನ್ನು ಅರಿಯುವ ಪ್ರಯತ್ನವನ್ನೆ ಅಧ್ಯಾತ್ಮ ಎಂದು ಕರೆದದ್ದು. ಇದೇ ಆತ್ಮಶಕ್ತಿ ನಮ್ಮೊಳಗಿದ್ದುಕೊಂಡು ಹೃದಯ ಬಡಿಯಲು ಪ್ರೇರಣೆ ಕೊಟ್ಟರೆ, ಇದೇ ಆತ್ಮಶಕ್ತಿಸೂರ್ಯನ ಸುತ್ತ ಇಷ್ಟೇ ವೇಗದಲ್ಲಿ ಸುತ್ತಬೇಕೆಂದು ಭೂಮಿಗೆ ಹೇಳಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ತತ್ತ್ವಶಾಸ್ತ್ರ ತನ್ನ ತಾನರಿತರೆ ಜಗವನ್ನೇ ಅರಿತಂತೆ ಎಂದು ಹೇಳಿರುವುದು.
ಛಾಂದೋಗ್ಯ ಉಪನಿಷತ್ತಿನಲ್ಲಿ ಶ್ವೇತಕೇತು ಮತ್ತು ಅವನ ತಂದೆ ಉದ್ಧಾಲಕನ ನಡುವಿನ ಸಂವಾದದ ಸಾರವೇ ಇದು. ‘ಯಾವುದನ್ನು ಅರಿತ ಮೇಲೆ ಜಗತ್ತಿನಲ್ಲಿ ಮತ್ತೇನನ್ನೂ ತಿಳಿಯುವ ಅಗತ್ಯವಿಲ್ಲವೋ ಅದಾವುದು?’ ಎಂಬ ಪ್ರಶ್ನೆಗೆ ತಂದೆಯ ಉತ್ತರ `ತತ್ತ್ವಮಸಿ’ ಅಂತ. ಅದರರ್ಥ ‘ಅದು ನೀನೇ ಆಗಿರುವೆ’. ‘ನಿನ್ನ ನೀನು ಅರಿತರೆ ಜಗತ್ತಿನ ಎಲ್ಲವೂ ನಿನ್ನ ಪದತಲದಲ್ಲಿ’ ಎಂದಿದ್ದ ಉದ್ಧಾಲಕ. ಮತ್ತು ಇದನ್ನು ಅರಿಯಲು ಇರುವ ಏಕೈಕ ಮಾರ್ಗ ಕಣ್ಣು ಮುಚ್ಚುವುದು ಮಾತ್ರ. ವಿಜ್ಞಾನದ ಮಿತಿ ಇರೋದು ಇಲ್ಲೇ. ಅದು ತನ್ನಿಂದ ಹೊರಗಿರುವ ಎಲ್ಲವನ್ನೂ ಅಧ್ಯಯನ ಮಾಡಬಲ್ಲದು. ಚಂದ್ರನ ಮೇಲಿನ ಕಲ್ಲುಗಳು, ಭೂಮಿಯ ಕೆಳಪದರದಲ್ಲಿರುವ ಹಳೆಯ ಕಟ್ಟಡಗಳು, ಪಶು – ಪ್ರಾಣಿ – ಕ್ರಿಮಿ ಕೀಟ ಎಲ್ಲವನ್ನೂ ವಿಜ್ಞಾನಿ ಅಧ್ಯಯನ ಮಾಡಬಲ್ಲ. ಅವನಿಗೆ ತನ್ನ ಹೃದಯದ ಬಗ್ಗೆ ತಿಳಿಯಬೇಕೆಂದರೂ ಸತ್ತ ವ್ಯಕ್ತಿಯ ದೇಹವನ್ನು ಕತ್ತರಿಸಿಯೇ ನೋಡಬೇಕು.
ಒಟ್ಟಿನಲ್ಲಿ, ತನ್ನಿಂದ ಹೊರಗಿರುವ ಎಲ್ಲವನ್ನೂ ಪ್ರಯೋಗಕ್ಕೆ ಒಳಪಡಿಸುವುದನ್ನು ಭೌತಿಕ ವಿಜ್ಞಾನ ಎನ್ನಬಹುದಾದರೆ, ತನ್ನ ತಾನು ಅರಿತುಕೊಳ್ಳುವುದನ್ನು ಆಧ್ಯಾತ್ಮಿಕ ಅಥವಾ ಆತ್ಮವಿಜ್ಞಾನ ಎನ್ನಬಹುದು ಅಷ್ಟೆ. ಇವೆರಡರಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಂಡು ಸಂಪೂರ್ಣ ತೊಡಗಿಸಿಕೊಂಡು ಮುಳುಗಿಬಿಟ್ಟರೆ ಮತ್ತೊಂದು ಹಿಂಬಾಲಿಸಿಯೇ ಹಿಂಬಾಲಿಸುತ್ತದೆ, ಅನುಮಾನವಿಲ್ಲ. ನಮ್ಮ ಋಷಿಗಳು ಆತ್ಮವಿಜ್ಞಾನದಲ್ಲಿ ಆಳಕ್ಕಿಳಿದರು, ಭೌತಿಕ ವಿಜ್ಞಾನ ಅವರನ್ನು ಬಾಯ ಮೇಲೆ ಬೆರಳಿಟ್ಟುಕೊಂಡು ಅನುಸರಿಸಿತು. ಹೀಗಾಗಿಯೇ ಇಂದಿನ ವಿಜ್ಞಾನಿಯೂ ಗಾಬರಿಗೊಳಗಾಗುವಂತಹ ಖಗೋಳ, ಭೂಗೋಳ, ಗಣಿತ, ರಸಾಯನ ಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆ ಸಾಧ್ಯವಾಗಿದ್ದು. ಅದೇ ಸಮಯಕ್ಕೆ ಐನ್‍ಸ್ಟೀನ್, ಹೀಸನ್‍ಬರ್ಗ್‍ರಂತಹ ವಿಜ್ಞಾನಿಗಳು ಭೌತವಿಜ್ಞಾನದಲ್ಲಿ ಸಾಧನೆ ಮಾಡ ಮಾಡುತ್ತಲೇ ಆತ್ಮತತ್ತ್ವದ ಅರಿವು ಬೆಳೆಸಿಕೊಂಡುಬಿಟ್ಟರು. ಸ್ಟೀಫನ್ ಹಾಕಿಂಗ್ ಮಾತನ್ನು ಕೇಳುವಾಗ ಆತ ಆತ್ಮವೆಂಬ ಪದವೊಂದನ್ನು ಬಳಸುವುದಿಲ್ಲ ಬಿಟ್ಟರೆ, ಉಳಿದವೆಲ್ಲ ಋಷಿವಾಕ್ಯಗಳ ಪುನರ್‍ಸ್ಮರಣೆಯೇ!
ಆತ್ಮ ಜೀವದೊಂದಿಗೆ ಬೆಸೆದುಕೊಂಡಿರುವವರೆಗೂ ಈ ದೇಹ ಜೀವಂತ. ಆತ್ಮ ದೇಹವನ್ನು ಬಿಡಲು ನಿಶ್ಚಯಿಸಿದರೆ, ಜೀವದೊಂದಿಗಿನ ತನ್ನ ಸಂಬಂಧವನ್ನು ಕಳೆದುಕೊಳ್ಳಲು ನಿಶ್ಚಯಿಸಿದರೆ, ಜೀವದೊಂದಿಗಿನ ತನ್ನ ಸಂಬಂಧವನ್ನು ಕಳೆದುಕೊಳ್ಳಲು ನಿಶ್ಚಯಿಸಿದರೆ ದೇಹದ ಕತೆ ಮುಗಿದಂತೆಯೇ. ಅದಕ್ಕೇ ಅವತ್ತು ಸಿದ್ಧಾರ್ಥನು ವೃದ್ಧಾಪ್ಯಕ್ಕೆ ಒಳಗಾದವರನ್ನೂ, ಅನಾರೋಗ್ಯಕ್ಕೆ ಒಳಗಾದವರನ್ನೂ, ಮೃತರನ್ನೂ ಕಂಡು ಶಾಶ್ವತ ವಸ್ತುವನ್ನು ಅರಸಿ ಹೊರಟಿದ್ದು. ಆತ್ಮಬೋಧೆಯಾದ ಮೇಲೆ ಬುದ್ಧನಾಗಿ ಮರಳಿದ್ದು. ದೇಹ ಸಾಯುವುದಕ್ಕೆ ಅಣಿಯಾಯಿತೆಂದರೆ ಆಗುವ ಪ್ರಕ್ರಿಎಯ ಗಮನಿಸಿ. ಅದುವರೆಗೂ ರುಚಿಸುತ್ತಿದ್ದುದು ಈಗ ಇಷ್ಟವಾಗುವುದಿಲ್ಲ. ಅದುವರೆಗೂ ಯಾವ ವಿಚಾರಗಳು ಪ್ರಚೋದಿಸುತ್ತಿದ್ದವೋ ಈಗ ಅವು ನಮ್ಮ ಗಮನಕ್ಕೂ ಬರುವುದಿಲ್ಲ. ಕೊನೆಗೆ ಔಷಧಗಳೂ ದೇಹದ ನರಗಳನ್ನು ಉದ್ದೀಪಿಸುವಲ್ಲಿ ಸೋಲುತ್ತವೆ. ಅಲ್ಲಿಗೆ ಆತ್ಮವೆಂಬುದು ಹೊರಡುವ ಸಿದ್ಧತೆ ಮಾಡಿಕೊಂಡಿದೆ ಎಂಬುದು ಖಾತ್ರಿ. ಈ ಆಥ್ಮ ಸುಮ್ಮನೆ ಹೋಗಿಬಿಡುವುದಿಲ್ಲ. ಈ ದೇಹವನ್ನು ಬಿಟ್ಟು ಮತ್ತೊಂದು ಹೊಸ ದೇಹದ ಅನ್ವೇಷಣೆ ಶುರು ಮಾಡುತ್ತದೆ ಅಷ್ಟೇ.
ಐತರೇಯ ಉಪನಿಷತ್ತು ಇದನ್ನು ಬಹಳ ಸುಂದರವಾಗಿ ವರ್ಣಿಸುತ್ತದೆ. ಆತ್ಮಧಾರಣೆ ಮಾಡಿದ ಪುರುಷನ ರೇತಸ್ಸು ಅಂಡಾಣುವನ್ನು ಹೊಕ್ಕುವುದು ಮೊದಲನೆ ಜನ್ಮವಂತೆ. ಈ ಆತ್ಮರೂಪವನ್ನು ತನ್ನ ಗರ್ಭದೊಳಗೆ ಪಾಳಿಸಿದ ಸ್ತ್ರೀ ಒಂಭತ್ತು ತಿಂಗಳ ನಂತರ ಭುವಿಗೆ ತರುವಳಲ್ಲ, ಅದು ಎರಡನೇ ಜನ್ಮ. ಇನ್ನು ಜರಾಜೀರ್ಣವಾಗಿ ದೇಹ ಬಿಟ್ಟೊಡನೆ ಆತ್ಮ ಪಡೆಯುವ ಹೊಸ ದೇಹ ಮೂರನೆ ಜನ್ಮವಂತೆ! ಈ ಮೂರನೆಯ ಜನ್ಮವನ್ನು ನಾವು ಪುನರ್ಜನ್ಮ ಅಂತ ಕರೆಯುತ್ತೇವೆ. ಹೊಸ ದೇಹಕ್ಕೆ ಹೋಲಿಸಿಕೊಂಡಾಗ ಈ ಹಳೆಯ ಜನ್ಮಗಳು ಪೂರ್ವಜನ್ಮ ಎನ್ನಿಸಿಕೊಳ್ಳುತ್ತವೆ.
ಪಶ್ಚಿಮದ ಮತಗಳಿಗೂ ಹಿಂದೂ ಧರ್ಮಕ್ಕೂ ವ್ಯತ್ಯಾಸ ಇಲ್ಲಿಯೇ. ಅವರ ಪ್ರಕಾರ ಹುಟ್ಟುವುದೂ ಒಮ್ಮೆ, ಸಾಯುವುದೂ ಒಮ್ಮೆಯೇ. ಸತ್ತಮೇಲೆ ಭಗವಂತ ಎಲ್ಲರನ್ನೂ ಅದೊಂದು ದಿನ ಎಬ್ಬಿಸಿ ಅವರವರ ಬದುಕಿಗೆ ತಕ್ಕಂತೆ ಸ್ವರ್ಗ ನರಕಗಳನ್ನು ದಯಪಾಲಿಸುತ್ತಾನೆ. ಪ್ರವಾದಿ ಮೆಚ್ಚುವಂತಹ ಕೆಲಸ ಮಾಡಿದವರು ಸ್ವರ್ಗಕ್ಕೆ, ಉಳಿದವರು ನರಕಕ್ಕೆ. ಮತ್ತು ಈ ಸ್ವರ್ಗ – ನರಕಗಳು ಶಾಶ್ವತವಾದವುಗಳು. ಅಲ್ಲಿ ತಿದ್ದಿಕೊಳ್ಳಲು ಅವಕಾಶವೇ ಇಲ್ಲ. ಆದರೆ ಸನಾತನ ಧರ್ಮ ಹಾಗಲ್ಲ. ಆತ್ಮ ಹಿಂದಿನ ಜನ್ಮದ ಕರ್ಮಗಳಿಗೆ ತಕ್ಕಂತೆ ಹೊಸದಾದ ದೇಹ ಪಡೆಯುತ್ತದೆ. ಅನುಭವಿಸಬೇಕಾದ್ದನ್ನು ಅನುಭವಿಸುತ್ತದೆ. ಮುಂದಿನ ಜನ್ಮಕ್ಕೆ ಅಣಿಯಾಗುತ್ತದೆ. ನಮ್ಮದು ಚಕ್ರೀಯ ಗತಿ. ಹುಟ್ಟು, ಸಆವು ಮತ್ತು ಮರು ಹುಟ್ಟು ಒಂದನ್ನೊಂದು ಹಿಂಬಾಲಿಸುತ್ತಲೇ ಇರುತ್ತವೆ. ಒಮ್ಮೆ ಆತ್ಮತತ್ತ್ವ ಎಲ್ಲದರೊಳಗೂ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಅರಿತರೆ, ಈ ಚಕ್ರದಿಂದ ಮುಕ್ತಿ ಎಂಬುದು ನಮ್ಮ ಚಿಂತನೆ.
ಬಿಡಿ. ಅದನ್ನು ಮತ್ತೊಮ್ಮೆ ಯಾವಾಗಲಾದರೂ ದೀರ್ಘವಾಗಿ ಚರ್ಚಿಸೋಣ. ಪುನರ್ಜನ್ಮವನ್ನು ಒಪ್ಪಿಕೊಂಡ ಮೇಲೆ ಆತ್ಮ ಮರುಹುಟ್ಟಿಗೆ ದೇಹವನ್ನು ಆಯ್ದುಕೊಳ್ಳುವ ಪರಿಯನ್ನೂ ಆಲೋಚಿಸಲೇಬೇಕಲ್ಲವೆ? ಇದೊಂದು ಬಗೆಯ ಸ್ವಯಂವರದಂತೆ ನಡೆಯುವ ಪ್ರಕ್ರಿಯೆ. ಹಳೆಯ ಜನ್ಮದ ಕರ್ಮಗಳನ್ನು ಅನುಸರಿಸಿ ಸೂಕ್ತ ತಂದೆ ತಾಯಿಯರನ್ನು ಆಯ್ದುಕೊಳ್ಳುವ ಅಪರೂಪದ ವಿಧಾನ. ಹೀಗಾಗಿ ಎಲ್ಲಿ – ಯಾವಾಗ – ಯಾರಿಗೆ ಹುಟ್ಟಬೇಕೆಂಬುದಕ್ಕೆ ಸ್ಪಷ್ಟ ನಿಯಮಗಳೇ ಇವೆ. ಇವುಗಳನ್ನೇ ನಮ್ಮ ಹಿರಿಯರು ಕರ್ಮಸಿದ್ಧಾಂತ ಎಂದಿದ್ದು. ನೀವು ಒಪ್ಪಿ – ಬಿಡಿ. ಏನಾದರೂ ಅವಘಡ ಸಂಭವಿಸಿದೊಡನೆ ಅಯಾಚಿತವಾಗಿ ‘ಎಲ್ಲಾ ನನ್ನ ಕರ್ಮ’ ಎಂದುಬಿಡುತ್ತೇವಲ್ಲ; ಅದು ಇದೇ ಸಿದ್ಧಾಂತದ ಪ್ರತಿಫಲ.
ಮೂರು ಬಗೆಯ ಕರ್ಮಗಳಿವೆ. ಸಂಚಿತ ಕರ್ಮ, ಪ್ರಾರಬ್ಧ ಕರ್ಮ ಮತ್ತು ಆಗಾಮಿ ಕರ್ಮ ಅಂತ. ಹಿಂದಿನ ಜನ್ಮದಲ್ಲಿ ಮಾಡಿದ ಒಳಿತುಕೆಡುಕುಗಳ ಕಂತೆ ಸಂಚಿತವಾಗಿ ಮುಂದಿನ ಜನ್ಮಕ್ಕೆ ವರ್ಗಾವಣೆಯಾಗುತ್ತದೆ; ಥೇಟು ಬ್ಯಾಂಕ್ ಬ್ಯಾಲೆನ್ಸಿನಂತೆ. ಇನ್ನು ಪ್ರಾರಬ್ಧ ಕರ್ಮ ಈ ಜನ್ಮದಲ್ಲಿ ನಾವು ಮಾಡಿದ ಸತ್ಕರ್ಮ – ದುಷ್ಕರ್ಮಗಳ ಲೆಕ್ಕಾಚಾರ. ಇದು ಹಳೆಯದನ್ನು ಕೆಲವೊಮ್ಮೆ ಮೀರಿ ನಿಂತು ಫಲ ಕೊಡಬಹುದು. ಈ ಪ್ರಾರಬ್ಧದಲ್ಲಿ ಕೆಲವು ಕರ್ಮಗಳು ಮುಂದಿನ ಜನ್ಮಕ್ಕೆ ಮೀಸಲಾಗಿಡಬಹುದು. ಆಗ ಅದು ಆಗಾಮಿಯಾಗುತ್ತದೆ, ಅಷ್ಟೇ.
ಹಳೆಯ ಜನ್ಮದಲ್ಲಿ ಸಂಗೀತಗಾರನಾಬೇಕೆಂದು ಪ್ರಯತ್ನಪಟ್ಟು, ಸಾಧನೆ ಮಾಡಿ ಕೀರ್ತಿ ಪಡೆಯುವ ಮುನ್ನ ದೇಹ ಬಿಟ್ಟ ಆತ್ಮವು ಈ ಜನ್ಮದಲ್ಲಿ ಸಂಗೀತದ ವಾತಾವರಣವಿರುವ ಮನೆಯಲ್ಲಿ ಹುಟ್ಟುತ್ತದೆ. ಬಾಲ್ಯದಲ್ಲಿಯೇ ಶ್ರೇಷ್ಠ ಸಂಗೀತಗಾರನೆಂಬ ಕೀರ್ತಿಯನ್ನು ಪಡೆದುಬಿಡುತ್ತದೆ. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ. ಗೀತೆಯಲ್ಲಿ ಶ್ರೀಕೃಷ್ಣನು ಇದನ್ನು ಅನುಮೋದಿಸುತ್ತಾನೆ ಕೂಡ. ಯೋಗಭ್ರಷ್ಟನಾದ ಸಾಧಕನಿಗೆ ಮರುಜನ್ಮದಲ್ಲಿ ಸೂಕ್ತ ಪರಿಸರ ಒದಗಿಸಿಕೊಡುವ ಭರವಸೆಯನ್ನು ಕೊಡುತ್ತಾನೆ. ಅದಕ್ಕೇ ಸನಾತನ ಧರ್ಮ ತನ್ನ ಪ್ರತಿಯೊಂದು ಸಾಹಿತ್ಯದಲ್ಲೂ ನೈತಿಕ ಚೌಕಟ್ಟಿನ ನಿಯಮಗಳನ್ನು ರಾಶಿರಾಶಿಯಾಗಿ ಹೇರುತ್ತದೆ. ಇಲ್ಲಿ – ಈಗ ಮಾಡುವ ಸಣ್ಣ ತಪ್ಪೂ ಮುಂದಿನ ಜನ್ಮದಲ್ಲಾದರೂ ಫಲವುಣ್ಣುವಂತೆ ಮಾಡದೆ ಬಿಡುವುದಿಲ್ಲಎಂದೂ ಎಚ್ಚರಿಸುತ್ತದೆ.
ಹಾಗಿದ್ದ ಮೇಲೆ ನಮ್ಮ ಪೂರ್ವಜನ್ಮವನ್ನು ನಾವು ಇಣುಕಿ ನೋಡುವುದು ಸಾಧ್ಯವೆ? ಖಂಡಿತ ಸಾಧ್ಯ ಎನ್ನುತ್ತದೆ ಭಾರತೀಯ ಯೋಗಶಾಸ್ತ್ರ. ಸ್ವಾಮಿ ಅಭೇದಾನಂದರು ತಮ್ಮ ಪುನರ್ಜನ್ಮವೆಂಬ ಕೃತಿಯಲ್ಲಿ ಸುಂದರವಾದ ಉಲ್ಲೇಖವೊಂದನ್ನು ಕೊಡುತ್ತಾರೆ. ಕತ್ತಲ ಕೋಣೆಯಲ್ಲಿ ಸಿನೆಮಾ ಪರದೆಯ ಮೇಲೆ ಪ್ರೊಜೆಕ್ಟರ್ ಮೂಲಕ ಚಿತ್ರವೊಂದು ಮೂಡಿಬರುತ್ತಿದೆಯೆಂದು ಭಾವಿಸಿ. ಈಗ ಕೋಣೆಯ ಎಲ್ಲ ಬಾಗಿಲುಗಳನ್ನು ತೆರೆದುಬಿಡಿ. ಒಂದು ಕ್ಷಣ ಪರದೆಯ ಮೇಲೆ ಚಿತ್ರ ಮೂಡುವುದು ನಿಂತಿದೆ ಎನ್ನಿಸುತ್ತದೆ. ಆದರೆ ಹಾಗಾಗಿಲ್ಲ. ಕೋಣೆಯಲ್ಲಿ ಬೆಳಕು ಹೆಚ್ಚಾಗಿದೆ ಅಷ್ಟೇ. ಹಾಗೆಯೇ ಹೊಸ ಬದುಕಿನಲ್ಲಿ ಬಲವಾಗಿ ಮೈಮರೆತ ನಮಗೆ ಹಳೆಯ ಜನ್ಮ ಮರೆತುಹೋಗಿದೆ. ಇಂದ್ರಿಯಗಳನ್ನು ಹೊಸ ಬದುಕಿನಿಂದ ಒಳಗೆಳೆದುಕೊಂಡು ಮನಸ್ಸಿನ ಲೋಕವನ್ನು ಪದರಪದರವಾಗಿ ತೆರೆಯಲು ಶುರು ಮಾಡಿದರೆ ಹಳೆಯದೆಲ್ಲ ಉಮ್ಮಳಿಸಿ ಬರಲಾರಂಭಿಸುತ್ತದೆ.
ನಮ್ಮ ಋಷಿ ಮುನಿಗಳು ಇವುಗಳೆಲ್ಲದರ ಅಧ್ಯಯನಕ್ಕೆಂದೇ ವಿಸ್ತಾರವಾದ ವಿಜ್ಞಾನವನ್ನು ಅಭಿವೃದ್ಧಿಪಡಿಸಿದರು. ವೇದಗಳಲ್ಲಿ ಹೇಳಿರುವ ಆತ್ಮ ತತ್ತ್ವವನ್ನು ಉಪನಿಷತ್ತು ಸುದೀರ್ಘವಾಗಿ ಚರ್ಚಿಸಿತು. ಪುರಾಣಗಳು ಸಾಮಾನ್ಯ ಜನರಿಗೆ ಇವುಗಳನ್ನು ಕಥಾ ರೂಪದಲ್ಲಿ ತಲುಪಿಸಿದವು. ಈ ಸತ್ಯಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಜಿಜ್ಞಾಸೆ ಇದ್ದವರಿಗಾಗಿ ಅನೇಕ ಹೊಸಹೊಸ ಮಾರ್ಗಗಳು ಅನ್ವೇಷಣೆಗೊಂಡವು. ಯೋಗ ಅಂತಹುದೇ ಒಂದು ರಾಜಪಥ.
ಯೋಗವೆಂದಾಗ ದೇಹ ಕರಗಿಸುವ, ಆರೋಗ್ಯ ಹೆಚ್ಚಿಸುವ ನಾಲ್ಕೈದು ಆಸನಗಳಷ್ಟೇ ಎಂದು ಭಾವಿಸಬೇಡಿ. ಯೋಗ ಆತ್ಮತತ್ತ್ವವನ್ನು ಅರಿಯುತ್ತ ವಿಶ್ವಪ್ರಜ್ಞೆಯೊಂದಿಗೆ ನಮ್ಮ ಪ್ರಜ್ಞೆಯನ್ನು ಆತ್ಮಸಾತ್ ಮಾಡಿಕೊಳ್ಳುವ ಪ್ರಯತ್ನ. ಜೂನ್ 21ಕ್ಕೆ ಜಗತ್ತು ಯೋಗ ಮಾಡಿದೆ ಎಂದರೆ ಋಷಿಗಳ ಆ ಎಲ್ಲ ಪ್ರಯೋಗಗಳನ್ನು ಅನುಸರಿಸಲು ವಿಶ್ವಸಿದ್ಧವಾಯಿತೆಂದೇ ಅರ್ಥ. ವಿಶ್ವಕುಟುಂಬವಾಗುವುದು ಹೀಗೆಯೇ.

Wednesday 15 July 2015

ಧೀಶಕ್ತಿ ಪ್ರಚೋದಕನಿಗೆ ಕೋಟಿ ನಮಸ್ಕಾರ…

ಬೆಳಗ್ಗೆ ಎಷ್ಟು ಗಂಟೆಗೆ ಏಳಬೇಕು?” ಹಾಗಂತರಾಮಕೃಷ್ಣಆಶ್ರಮದ ಸ್ವಾಮಿ ಪುರುಷೋತ್ತಮಾನಂದರನ್ನು ಭಕ್ತರೊಬ್ಬರು ಕೇಳಿದರಂತೆ. ಸ್ವಾಮೀಜಿತಮ್ಮ ಎಂದಿನ ಧಾಟಿಯಲ್ಲಿ, “ಎಷ್ಟು ಗಂಟೆಗಾದರೂ ಎದ್ದೇಳಿ, ಎದ್ದ ಮೇಲೆ ಪೂರ್ಣವಾಗಿಎದ್ದಿರಿ”ಎಂದಿದ್ದರಂತೆ. ಅದೂ ಸತ್ಯವೇ. ಏಳುವುದು ಅಂದರೆ ಹಾಸಿಗೆ ಬಿಟ್ಟು ಏಳುವುದು ಅಂತಲ್ಲ. ದೇಹದ ಪ್ರತಿಯೊಂದುಜೀವಕೋಶವೂ ಚೈತನ್ಯಶೀಲಗೊಳ್ಳುವುದು ಎಂದರ್ಥ. ಮಲಗುವ ಕೋಣೆಯನ್ನುಕತ್ತಲ ಕೂಪವಾಗಿಸಿ, ಕೆಲಸದಕಚೇರಿಯನ್ನು ಸದಾ ಬೆಳಕಿನ ಗೋಳವಾಗಿಸಿ ಹಗಲು ರಾತ್ರಿಗಳ ಕಲ್ಪನೆಯನ್ನೇ ಕಳೆದುಕೊಂಡಿರುವ ನಮಗೆ ಋಷಿ ಮುನಿಗಳು ಉಲ್ಲೇಖ ಮಾಡಿರುವ ಅನೇಕ ಸಂಗತಿಗಳನ್ನು ಅರ್ಥೈಸಿಕೊಳ್ಳುವುದು ಬಿಡಿ, ಕಲ್ಪಿಸಿಕೊಳ್ಳುವುದೂ ಅಸಾಧ್ಯ.
sun3
ನಾವು ಬ್ರಾಹ್ಮೀ ಮುಹೂರ್ತವೊಂದರ ಬಗ್ಗೆ ಬಹುವಾಗಿ ಚರ್ಚಿಸುತ್ತೇವೆ. ಸೂರ್ಯೋದಯಕ್ಕೂ ಮುನ್ನಿನ ಸಮಯವದು. ಮನು ತನ್ನ ಸ್ಮøತಿಗ್ರಂಥದಲ್ಲಿ ಸ್ಪಷ್ಟಪಡಿಸುತ್ತಾನೆ, “ನಕ್ಷತ್ರಗಳು ಕಾಣುತ್ತಿರುವಾಗಲೇಎದ್ದು ಸೂರ್ಯ ನಮನಗೈಯುವುದು ಉತ್ತಮ. ನಕ್ಷತ್ರಗಳು ಅಸ್ತಮಿಸಿ ಸ್ವಲ್ಪವಷ್ಟೆ ಬೆಳಕು ಕಾಣುವಾಗಿನ ಉಪಾಸನೆ ಮಧ್ಯಮ. ಇನ್ನು ಸೂರ್ಯೋದಯವಾದ ಮೇಲೆ ಎದ್ದುಆತನಿಗೆಅಭಿವಂದಿಸುವುದುಅಧಮ”.
ಬ್ರಾಹ್ಮೀ ಮುಹೂರ್ತಅಂತರ್ಮುಖಿಯಾಗಿ ಬ್ರಹ್ಮನನ್ನುಅರಿಯಲುಅತ್ಯಂತ ಸೂಕ್ತ ಸಮಯ. ಇದನ್ನೇ ಉಷಃ ಕಾಲ ಅಂತಲೂಕರೆಯುತ್ತಾರೆ. ಉಷೆ ಸೂರ್ಯನ ಪತ್ನಿಯಂತೆ. ಸೂರ್ಯ ಬೆಳಗ್ಗೆ ಎದ್ದುಆಕೆಯನ್ನೇ ಹಿಂಬಾಲಿಸಿ ಬರುತ್ತಾನಂತೆ! ಹಾಗಂತ ಪುರಾಣಗಳು ಬಣ್ಣಿಸುತ್ತವೆ. ಇಷ್ಟಕ್ಕೂ ರಾತ್ರಿ ಕಳೆದು ಹಗಲಾಗುವಾಗ ಮತ್ತು ಹಗಲು ಮುಗಿದುರಾತ್ರಿಆರಂಭವಾಗುವಾಗಿನ ಈ ಸಂಧಿ ಕಾಲವನ್ನು ಹೇಗೆ ಸಂಬೋಧಿಸಬೇಕೆಂಬ ಕಲ್ಪನೆಯೂಜಗತ್ತಿನಲ್ಲಿಯಾರಿಗೂಇರಲಿಲ್ಲ. ಭಾರತ ಈ ಸಂಧ್ಯಾಕಾಲಗಳನ್ನು ಗುರುತಿಸಿ ಉಪಾಸನೆಗೆ ಅವನ್ನು ಸೂಕ್ತ ಸಮಯವೆಂದು ನಿರ್ಧಾರ ಮಾಡಿತು. ಈ ಹೊತ್ತಿನಲ್ಲಿಯೇ ಸಾವಿರಾರುಜನ ನದಿ ದಂಡೆಯಲ್ಲಿ ನಿಂತು ಸೂರ್ಯನಿಗೆಅಘ್ರ್ಯ ನೀಡುತ್ತಿದ್ದುದಲ್ಲದೇಗಾಯತ್ರೀ ಮಂತ್ರೋಪಾಸನೆಯನ್ನೂ ಮಾಡುತ್ತಿದ್ದರು. ಸೂರ್ಯನ ಬೆಳಕಿನಲ್ಲಿರುವ ಶಖ್ತಿಯಅರಿವುಅವರಿಗೆಖಂಡಿತವಾಗಿಯೂಇತ್ತು. ಬೆಳಗಿನ ಸೂರ್ಯ ಕಿರಣಗಳಿಗೆ ಮೈಯೊಡ್ಡಿದರೆಇಡಿಯ ದಿನಕ್ಕೆ ಬೇಕಾದ ಶಕ್ತಿ ಸಂಗ್ರಹವಾಗುವುದರಕುರಿತುಅವರು ತಿಳಿದೇ ಇದ್ದರು.
ಆಧುನಿಕ ವಿಜ್ಞಾನದ ಪ್ರಕಾರ ನಮ್ಮ ನಿದ್ದೆಮತ್ತುಎಚ್ಚರದಚಕ್ರಜಾಗೃತವಾಗಿರೋದೇ ಸೂರ್ಯನಿಂದ. ಸೂರ್ಯನ ಕಿರಣಗಳು ನಮ್ಮ ಮಿದುಳಿನ ಬೆಳಕನ್ನು ಗ್ರಹಿಸುವ ನರದ(ಆಪ್ಟಿಕ್ ನರ್ವ್)ಮೇಲೆ ಬಿದ್ದೊಡನೆ ಮಿದುಳು ನಿದ್ದೆತರುವ ಮೆಲಟೋನಿನ್ ಹಾರ್ಮೋನು ಸ್ರವಿಸುವುದನ್ನು ನಿಲ್ಲಿಸಿಬಿಡುತ್ತದೆ. ಅದರೊಟ್ಟಿಗೇ ಸೆರಿಟೋನಿನ್ ಎಂಬ ದ್ರವ ಹೆಚ್ಚು ಸ್ರವಿಸಲಾರಂಭಿಸಿ ಜಾಗೃತಾವಸ್ಥೆಯಲ್ಲಿ ನಮ್ಮನ್ನುಇಡುವುದಲ್ಲದೆ, ಸಂತೋಷವಾಗಿರುವಂತೆಯೂ ನೋಡಿಕೊಳ್ಳುತ್ತದೆ. ಅದಕ್ಕಾಗಿಯೇ ನಮ್ಮವರು ಮುಂಜಾವಿನ ಸೂರ್ಯನೆದುರು ಕುಳಿತಿರುತ್ತಿದ್ದುದು. ಸುಮ್ಮನೆ ಕುಳಿತಿರುವುದು ಬೇಡವೆಂದೇಧರ್ಮದಚೌಕಟ್ಟು ಜೋಡಿಸಿ ಸೂರ್ಯಶಕ್ತಿಯನ್ನು ಪ್ರಚೋದಕ ಶಕ್ತಿಯಾಗಿಸುವಉಪಾಯ ತೋರಿಸಿಕೊಟ್ಟಿದ್ದು.
ನಾವು ಬಹಳ ದೂರ ಬಂದಿದ್ದೇವೆ. ರಾತ್ರಿಯಕಣ್ಣುಕೋರೈಸುವ ಬೆಳಕು ನಮ್ಮ ಬೆಳಕನ್ನು ಗ್ರಹಿಸುವ ನರಗಳಲ್ಲಿ ಗೊಂದಲವೆಬ್ಬಿಸಿಬಿಡುತ್ತದೆ. ಅದಕ್ಕೆಯಾವುದು ಬೆಳಗು –ರಾತ್ರಿ ಎಂಬುದರ ಅರಿವಾಗದೇ ದೇಹದೊಳಗಿನ ಗಡಿಯಾರ ಏರುಪೇರಾಗಿಬಿಡುತ್ತದೆ. ಜೀವಕೋಶಗಳು ಬಲುಬೇಗ ಸ್ವಾಸ್ಥ್ಯ ಕಳೆದುಕೊಂಡುಬಿಡುತ್ತವೆ. ಹೀಗಾಗಿಯೇ ನಾವು ಸದಾರೋಗಿಷ್ಠರು. ಅದಕ್ಕೆಂದೇ ವೈದ್ಯರು ಬೆಳಗಾಗೆದ್ದು ಸೂರ್ಯನ ಕಿರಣಗಳಿಗೆ ಮೈಯೊಡ್ಡಿಅಂತ ಹೇಳಿದ್ದು. ದೇಹಜರ್ಝರಿತವಾದ ಮೇಲೆ ವೈದ್ಯರ ಮಾತು ಕೇಳಲು ಹಿಂದೆ ಮುಂದೆ ನೋಡದ ನಾವು, ಬಾಲ್ಯದಲ್ಲಿಯೇ ಋಷಿಗಳ ಮಾತು ಪಾಲಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಅಲ್ಲವೇ?
ವಿಜ್ಞಾನದ ಅಮಲಿನಲ್ಲಿರುವಅಮೆರಿಕನ್ನರಿಗೂಇದರಅರಿವಾಗಿದೆ. ಸೂರ್ಯಕಾಣದ ಚಳಿಗಾಲದ ಹೊತ್ತಲ್ಲಿಅಮೆರಿಕದ ಶೇಕಡಾ 10ರಷ್ಟು ಜನಮಿದುಳಿನಲ್ಲಿ ಆಗುವ ರಾಸಾಯನಿಕಗಳ ಬದಲಾವಣೆಯಿಂದ ತೊಂದರೆಗೊಳಗಾಗುತ್ತಾರೆ. ಕೆಲಸ ಮಾಡಲಾಗದೆ ತೊಳಲಾಡುತ್ತಾರೆ. ಆಗೆಲ್ಲ ಸಊರ್ಯನಂತೆ ಭಾಸವಾಗುವದೊಡ್ಡದೊಡ್ಡ ಬಲ್ಬುಗಳನ್ನು ಅವರಎದುರಿಗಿಟ್ಟು ಸೆರಿಟೊನಿನ್ ಸ್ರವಿಸುವಂತೆ ಮಾಡಲಾಗುತ್ತದೆ. ಅನೇಕ ಬಾರಿ ಈ ಪ್ರಯೋಗಕೈಕೊಟ್ಟುಅನೇಕರು ಮಾನಸಿಕ ಖಿನ್ನತೆಗೆ ಒಳಗಾಗಿ ಹುಚ್ಚರೂಆಗಿಬಿಡುತ್ತಾರೆ!
ಸೂರ್ಯನನ್ನು ನಮ್ಮವರು ಗತಿಶೀಲ ಎಂದದ್ದು ಅದಕ್ಕೇ. ಆತತಾನಷ್ಟೆ ಚಲಿಸುವುದಿಲ್ಲ; ಎಲ್ಲರೊಳಗೂ ತಾನೇ ಹೊಕ್ಕು ಚಲಿಸುವಂತೆ ಮಾಡುತ್ತಾನೆ. ಬೆಳಗಾಗುವುದರೊಂದಿಗೆ ಉತ್ಸಾಹ ಮೂಡುವುದುಇದರಿಂದಲೇ. ಸಂಜೆಯಾಗುತ್ತದಣಿದದೇಹ ಮಲಗಿಕೊಳ್ಳಲು ಕಾತರಿಸುವುದುಇದಕ್ಕೇ. ದೇಹದಣಿಯಲು ಕೆಲಸ ಮಾಡಲೇಬೇಕೆಂದಿಲ್ಲ, ಸೂರ್ಯ ಅಸ್ತಮಿಸಿದರೆ ಸಾಕು! ಹೀಗಿದೆ ಸೂರ್ಯ ಮತ್ತು ನಮ್ಮದೇಹದ ಸಂಬಂಧ.
ಹೌದು.‘ಆರೋಗ್ಯ ಮತ್ತು ಸೂರ್ಯ’ ಈ ಕುರಿತಂತೆಯಾರಿಗೂ ಅನುಮಾನವೇಇಲ್ಲ. ಆದರೆ ಭಾರತೀಯರುಒಂದು ಹೆಜ್ಜೆ ಮುಂದೆಹೋಗಿ, ಅವನನ್ನು ಬುದ್ಧಿಶಕ್ತಿಯ ಪ್ರಚೋದಕ ಎಂತಲೂ ಭಾವಿಸಿ ಆರಾಧಿಸುತ್ತಾರೆ. ಒಟ್ಟಾರೆ ಗಾಯತ್ರಿ ಮಂತ್ರದ ಅರ್ಥವೇ ಧೀಶಕ್ತಿಯನ್ನು ಪ್ರಚೋದಿಸುವುದು ಅಂತ. ಭಗವದ್ಗೀತೆಯ ನಾಲ್ಕನೆ ಅಧ್ಯಾಯ ಶುರುವಾಗುವುದೇ ಕೃಷ್ಣನ ಅಚ್ಚರಿಯ ಮಾತುಗಳಿಂದ, “ನಾನು ಅವಿನಾಶಿಯಾದ ಈ ಯೋಗವನ್ನುಕಲ್ಪದಆದಿಯಲ್ಲಿ ಸೂರ್ಯನಿಗೆ ಹೇಳಿದೆ. ಸೂರ್ಯ ಮನುವಿಗೆ, ಮನು ಇಕ್ಷ್ವಾಕುವಿಗೆ ಹೇಳಿದ”–ಎಂದು ಮುಂದುವರೆಯುತ್ತದೆ. ತೈತ್ತಿರೀಯ ಬ್ರಾಹ್ಮಣವೂ“ಸೂರ್ಯ ಮುಂಜಾನೆಋಗ್ವೇದದೊಂದಿಗೆ ಉದಯಿಸಿದರೆ, ಯಜುರ್ವೇದದೊಂದಿಗೆ ಮಧ್ಯೆ ನಿಂತಿರುತ್ತಾನೆ. ಅಸ್ತಂಗತನಾಗುವ ವೇಳೆಗೆ ಸಾಮವೇದದಿಂದ ಪರಿಪುಷ್ಟವಾಗಿರುತ್ತಾನೆ”ಎಂದುಅಭಿಪ್ರಾಯಪಡುತ್ತದೆ.
ಶ್ರೇಷ್ಠ ಋಷಿ ಯಾಜ್ಞವಲ್ಕ್ಯರಂತೂ ಸೂರ್ಯನ ಶಿಷ್ಯರೇ! ಆಕತೆಯೇ ಸ್ವಾರಸ್ಯಕರ. ವೈಶಂಪಾಯನರ ಶಿಷ್ಯರಾಗಿದ್ದ ಯಾಜ್ಞ್ಯವಲ್ಕ್ಯರು ಸಣ್ಣ ವಿಚಾರವೊಂದಕ್ಕೆ ಗುರುಗಳೊಂದಿಗೆ ಜಿದ್ದಿಗೆ ಬಿದ್ದರು. ಕೋಪದಿಂದ ಗುರುಗಳು ತಾವುಕೊಟ್ಟ ವಿದ್ಯೆ ಮರಳಿ ಕೊಡಲು ಆಗ್ರಹಿಸಿದರು. ಯಾಜ್ಞವಲ್ಕ್ಯರೇನೂಕಡಿಮೆ ಸಾಧ್ಯತೆಯವರಲ್ಲ. ಅಲ್ಲಿಯೇ ಇದ್ದ ತಿತ್ತಿರಿಯೇ ಮೊದಲಾದ ಋಷಿಗಳೆದುರಿಗೆ ಇಷ್ಟೂ ದಿನ ಕಲಿತಿದ್ದನ್ನು ಹಾಗು ಹಾಗೆಯೇ ಒಪ್ಪಿಸಿಯೂಬಿಟ್ಟರು. ಹೀಗೆ ಪಡೆದುಕೊಂಡಿದ್ದನ್ನು ಆ ಋಷಿಗಳು ಮುಂದಿನ ಪೀಳಿಗೆಗೆ ಮುಟ್ಟಿಸಿದರು.ಅದು ಕೃಷ್ಣ ಯಜುರ್ವೇದವೆನಿಸಿತು. ಇತ್ತ ಯಾಜ್ಞವಲ್ಕ್ಯರು ಸೂರ್ಯನನ್ನೆ ಆರಾಧಿಸಿ ತಪಗೈದು ಒಲಿಸಿಕೊಂಡರು. ಅವರ ಜ್ಞಾನದ್ವಾರಗಳು ತೆರೆದುಕೊಂಡವು. ನಾರಾಯಣಪ್ರಣೀತವಾದಯಜುರ್ವೇದಅವರೆದುರಿಗೆಅನಾವರಣಗೊಂಡಿತು. ಅದು ಶುಕ್ಲಯಜುರ್ವೇದವಾಯ್ತು. ಹಾಗೆಂದು ವೇದಕಥೆಗಳು ಹೇಳುತ್ತವೆ.
ಸೂರ್ಯನಿಗೆ ನಮ್ಮ ಬುದ್ಧಿಯನ್ನು ಪ್ರಚೋದಿಸುವ ಶಕ್ತಿ ಇದೆಯೇ? ಈ ಪ್ರಶ್ನೆಕಾಡುವಂಥದ್ದೇ. ಇದನ್ನರಿಯಲು ಸ್ವಲ್ಪ ಮೆದುಳಿನ ಸಂರಚನೆ ತಿಳಿಯಬೇಕಾದ್ದು ಅನಿವಾರ್ಯ. ನಮ್ಮ ಮೆದುಳನ್ನು ಸ್ಥೂಲವಾಗಿ ಮೂರು ಭಾಗ ಮಾಡಬಹುದು. ಮುಂಭಾಗ, ಮಧ್ಯಭಾಗ ಮತ್ತು ಹಿಂಭಾಗ. ಮೆದುಳಿನ ಹಿಂಭಾಗ ಬೆನ್ನ ಹುರಿಗೆ ಹೊಂದಿಕೊಂಡಂತೆಇದೆ. ಇದುಎಲ್ಲಕಶೇರುಕ (ಬೆನ್ನ ಹುರಿಇರುವ ಪ್ರಾಣಿ)ಗಳಲ್ಲಿ ಇರುವಂಥದ್ದು. ನಾವು ತಲೆ ಹಾಕುವ ಅಗತ್ಯವೇಇಲ್ಲದ ಉಸಿರಾಟ, ಹೃದಯ ಬಡಿತದಂಥ ಕೆಲಸವನ್ನೆಲ್ಲಇದೇ ಮಾಡಿಸುತ್ತದೆ. ಇದಕ್ಕೆ ಸೇರಿಕೊಂಡ ಮೇಲ್ಭಾಗವೇ ಮೆದುಳಿನ ಮಧ್ಯಭಾಗ. ಇದು ಪ್ರತಿಕ್ರಿಯಾತ್ಮಕ ಕ್ರಿಯೆಗಳನ್ನು ನಡೆಸುತ್ತದೆ. ನೊಣ ಬಂದೊಡನೆಕಣ್ಮುಚ್ಚುತ್ತೇವಲ್ಲ, ಹಗ್ಗ ಕಂಡೊಡನೆ ಹಾವೆಂದು ಸರಕ್ಕನೆ ಹಿಂದೆ ಸರಿದುಬಿಡುತ್ತೇವಲ್ಲ, ಅಷ್ಟು ವೇಗದ ಪ್ರತಿಕ್ರಿಯೆ ಮೆದುಳಿನ ಮದ್ಯಭಾಗದಕೊಡುಗೆ. ಇನ್ನು, ಮಾನವ ಮೆದುಳಿನ ಅತ್ಯಂತ ಮುಂದುವರೆದ ಭಾಗವೇ ಮೆದುಳಿನ ಮುಂಭಾಗ. ಮೆದುಳು ಅಂತ ನಾವು ನೋಡೋದುಇದೇ ಭಾಗವನ್ನೆ. ಈ ಭಾಗ ಕ್ರಿಯಾಶೀಲವಾಗಿದ್ದಷ್ಟೂ ನಮ್ಮ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಯೋಜನೆರೂಪಿಸುವ ಕ್ಷಮತೆ ಬಲಿಯುತ್ತದೆ. ಕಲ್ಪನೆಯ ಶಕ್ತಿ, ಆಲೋಚನಾ ಶಕ್ತಿ ಹೆಚ್ಚುವುದಕ್ಕೂ ಮೆದುಳಿನ ಈ ಭಾಗದಕೊಡುಗೆಯೇದೊಡ್ಡದು! ಮೆದುಳಿನ ಈ ಭಾಗಜೀವಂತಿಕೆಯಿಂದಕೂಡಿದ್ದಷ್ಟೂ ಮನುಷ್ಯ ಹೆಚ್ಚು ಕಲೆಗಾರನಾಗುತ್ತಾನೆ, ವಿಜ್ಞಾನಿಯಾಗುತ್ತಾನೆ, ಋಷಿಯೂಆಗುತ್ತಾನೆ! ಇದರ ಸಾಮರ್ಥ್ಯ ಕಡಿಮೆಯಾದಂತೆಲ್ಲ ಆತ ಪಶುವಿನಂತಾಗುತ್ತಾನೆ. ಕೋಪ – ದರ್ಪಗಳು ಹೆಚ್ಚಾಗುತ್ತವೆ. ಹಾಗಂತ ಹೇಳಿರೋದು, ಪುರಾಣಕಾರರಲ್ಲ, ಸ್ಮೃತಿಕಾರರೂ ಅಲ್ಲ, ಅಮೆರಿಕಾದ ನರರೋಗಅಧ್ಯಯನ ಸಂಸ್ಥೆಯ ವಿಜ್ಞಾನಿಗಳು!
ಇದರ ಪರಿಪೂರ್ಣಜ್ಞಾನದಿಂದಾಗಿಯೇ ನಮ್ಮವರು ಮೆದುಳಿನ ಭಾಗಕ್ಕೆ ಶಕ್ತಿ ತುಂಬಲೆಂದು ಸೂರ್ಯನಿಗೆ ನಮಸ್ಕರಿಸುವ ಪದ್ಧತಿ ಅಭಿವೃದ್ಧಿಪಡಿಸಿದರು. ಸೂರ್ಯ ಶಕ್ತಿಯ ಕ್ರೋಢೀಕರಣಕ್ಕೆ ಛಂದಸ್ಸುಗಳು ಹುಟ್ಟಿಕೊಂಡವು. ಮಂತ್ರಗಳ ರಚನೆಯಾಯ್ತು. ಸೂರ್ಯ ರಶ್ಮಿಗಳನ್ನು ವಿದ್ಯುತ್ ಆಗಿ ಪರಿವರ್ತಿಸಲು ಮಾಳಿಗೆಯ ಮೇಲೆ ಫೋಟೋವೋಲ್ಟಾಯಿಕ್ ಸೆಲ್‍ಗಳ ಪ್ಯಾನೆಲ್‍ಜೋಡಿಸುವುದಿಲ್ಲವೆ? ಮಂತ್ರಗಳೂ ಅದೇ ಕೆಲಸವನ್ನು ದೇಹದೊಳಗೆ ಮಾಡುತ್ತವೆ, ಬೌದ್ಧಿಕ ಶಕ್ತಿಯನ್ನು ಪ್ರಚೋದಿಸುತ್ತವೆ. ಮಂತ್ರಗಳು – ಛಂದಸ್ಸುಗಳು ನರಗಳ ಮೇಲೆ ಬೀರುವ ಪ್ರಭಾವಗಳ ಅಧ್ಯಯನಕ್ಕೆ ಸೂಕ್ತಯಂತ್ರಗಳನ್ನು ಕಂಡುಹಿಡಿದರೆ, ಈ ಸತ್ಯ ಅನಾವರಣಗೊಳ್ಳಬಹುದು. ಅದನ್ನು ಅರ್ಥೈಸಿಕೊಳ್ಲಬಲ್ಲಷ್ಟು ವಿಜ್ಞಾನವೇ ಬೆಳೆಸಿಲ್ಲದಿರುವಾಗ ಅರೆಬರೆಜ್ಞಾನದಿಂದ ಮಂತ್ರದೊಳಗೆ ಶಕ್ತಿಯಿಲ್ಲವೆನ್ನುವುದು ಸರಿಯಾ?
ಗಾಯತ್ರಿ ಮಂತ್ರವನ್ನುಕಂಡವರು ವಿಶ್ವಾಮಿತ್ರರಂತೆ. ತಪಸ್ಸಿಗೆ ಕುಳಿತು ಮೇನಕೆಯಿಂದಾಗಿ ವ್ರತಭಂಗವಾಗಿ ಮತ್ತೆ ಹಠದಿಂದ ಬ್ರಹ್ಮಬಲ ಸಆಕ್ಷಾತ್ಕರಿಸಿಕೊಂಡ ವಿಶ್ವಾಮಿತ್ರರು ವಸಿಷ್ಠರ ಪಾದಗಳಿಗೆ ಎರಗಿದಾಗ ಹೊರಬಂದ ಶ್ರೇಷ್ಠ ಮಂತ್ರವಂತೆಇದು. ಸಂಧ್ಯಾ ಕಾಲದಲ್ಲಿ ಇದನ್ನು ಉಚ್ಚರಿಸುವಾಗ ಮೆದುಳಿನ ಮುಂಭಾಗದ ಮೇಲೆ ವಿಶೇಷ ಪರಿಣಾಮ ಉಂಟು ಮಾಡುತ್ತದೆಎಂಬುದನ್ನು ನಮ್ಮವರುಒಪ್ಪಿದ್ದರು, ಸಿದ್ಧಪಡಿಸಿಕೊಂಡಿದ್ದರು. ಆಧುನಿಕ ವಿಜ್ಞಾನ ಇದನ್ನೇ ಬೇರೆ ಬೇರೆ ಮಾರ್ಗಗಳಿಂದ ಸಾಧಿಸಿಕೊಳ್ಳಲು ಯತ್ನಿಸುತ್ತಿದೆ. 1910ರಲ್ಲಿ ಲಂಡನ್ನಿನ ಕೆಲವು ವಿಜ್ಞಾನಿಗಳು ತಲೆಯ ಹೊರಭಾಗಕ್ಕೆಕೊಟ್ಟ ವಿದ್ಯುತ್ ಶಾಕ್‍ನಿಂದ ನರಗಳು ಪ್ರಭಾವಕ್ಕೆ ಒಳಗಾಗುವುದನ್ನು ಗುರುತಿಸಿದರು. 1985ರಲ್ಲಿ ಇನ್ನಷ್ಟು ವಿಜ್ಞಾನಿಗಳು ಪ್ರಯೋಗ ಮಾಡಿ ನೇರ ವಿದ್ಯುತ್ ಬಳಕೆಯ ಬದಲುಕಾಂತೀಯ ವಿದ್ಯುತ್(ಎಲೆಕ್ಟ್ರೋ ಮ್ಯಾಗ್ನೆಟ್) ಅನ್ನು ಬಳಸಿ ಬೇಕಾದ ನರಗಳನ್ನು ಚುರುಕುಗೊಳಿಸುವ ಪದ್ಧತಿ ಹುಡುಕಿದರು. ಇದನ್ನೇಇಂದು ವೈದ್ಯಕೀಯ ವಿಭಾಗದಲ್ಲಿಟ್ರಾನ್ಸ್‍ಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಷನ್ ಅನ್ನೋದು. ಮಾನಸಿಕ ಖಿನ್ನತೆ, ಸ್ಕಿಜೋಫ್ರೇನಿಯಾದಂತಹ ರೋಗಗಳಿಗೆ ಸೂಕ್ತ ಪರಿಹಾರಇದೆಂದು ವೈದ್ಯರು ಹೇಳುತ್ತಾರೆ. ಪ್ರಯೋಗದಲ್ಲಿ ಸ್ವಲ್ಪಎಡವಟ್ಟಾದರೂವ್ಯಕ್ತಿ ಮೂರ್ಛೆ ಹೋಗುವ ಅಥವಾ ಮೆದುಳು ಸ್ವಾಧೀನ ಕಳೆದುಕೊಳ್ಳುವ ಸಥಿತಿಗೂತಲುಪಬಹುದೆಂದುಎಚ್ಚರಿಕೆಯನ್ನೂಕೊಡುತ್ತಾರೆ.
ಈಗ ಸಊರ್ಯನತ್ತ ಮರಳಿ ಬನ್ನಿ. ವಿದ್ಯುತ್ತನ್ನುಕೊಟ್ಟು ನರಗಳನ್ನು ಉದ್ದೀಪಿಸುವ ಪ್ರಯತ್ನಇಂದು ವಿಜ್ಞಾನಿಗಳು ಮಾಡುತ್ತಿದ್ದಾರೆ; ವಿದ್ಯುತ್ತಿನ ಮೂಲಸ್ರೋತವಾದ ಸೂರ್ಯನೆದುರಿಗೆ ನಿಂತು ನರಗಳನ್ನು ಪ್ರದೀಪ್ತಗೊಳಿಸುವ ಶ್ರೇಷ್ಠ ಪದ್ಧತಿಯನ್ನು ನಮ್ಮವರುಅಂದೇ ವಿಕಾಸಗೊಳಿಸಿದ್ದರು. ನಮ್ಮ ಉಪಾಸನೆ ಪರಿಸರಕ್ಕೆಅದೆಷ್ಟು ಪೂರಕವೆಂದರೆ, ಅಲ್ಲಿ ದುಷ್ಪರಿಣಾಮಗಳಾಗುವ ಹೆದರಿಕೆಯೇಇಲ್ಲ!
ಅಂದಹಾಗೆಗೀತೆಯಲ್ಲಿ ಶ್ರೀಕೃಷ್ಣತಾನು ವೈಶ್ವಾನರನಾಗಿಜಠರದಲ್ಲಿ ಕುಳಿತಿರುತ್ತೇನೆ ಅಂದಿರೋದನ್ನು ಕೇಳಿದ್ದೀರಲ್ಲಾ! ವೈದ್ಯಕೀಯಜಗತ್ತು ಹೊಟ್ಟೆಯನ್ನು ಸೆಕೆಂಡ್ ಬ್ರೈನ್ (ಎರಡನೇ ಮೆದುಳು) ಎನ್ನುತ್ತವೆ. ಮೆದುಳಿನಲ್ಲಿ ಉ0ಟಾಗುವ ಎಲ್ಲ ಬಗೆಯರಾಸಯನಿಕ ಪ್ರಕ್ರಿಯೆಗಳು ಹೊಟ್ಟೆಯಲ್ಲಾಗುತ್ತವೆ0ನ್ದರ್ಥ . ಅದ್ದಕ್ಕೆ ಹೊಟ್ಟೆ ಸರಿಯಾಗಿದ್ದರೆಆರೋಗ್ಯ ಎ0ದು ಹೇಳಿ ನಮ್ಮವರುಅದರರಕ್ಷಣೆಗೂ ಅಷ್ಟೆ ಗಮನ ಕೊಟ್ಟಿದ್ದರು.
ಹೌದು. ಭಾರತದ ವಿಶ್ವಗುರುತ್ವದ ಹಿಂದಿನ ಶಕ್ತಿಯೇಅದು. ನಾವು ಪ್ರಕೃತಿಯ ರಹಸ್ಯಗಳನ್ನು ಭೇದಿಸಿದರೆï,ಜಗತ್ತಿನಜನರೆಲ್ಲ ಸುತ್ತಣ ಪ್ರಕೃತಿ ನಮ್ಮ ಅಡಿಯಾಳೆಂಬಂತೆ ಶೋಷಿಸಿ ಪ್ರಭುತ್ವ ಸ್ಥಾಪಿಸಲು ಹೆಣಗಾಡುತ್ತಿದ್ದಾರೆ. ಭಾರತ ಪ್ರಕೃತಿಯನ್ನು ಪ್ರೀತಿಸಿ ಅದನ್ನು ಒಲಿಸಿಕೊಂಡೇ ಬದುಕು ನಡೆಸುವುದನ್ನು ಹೇಳಿಕೊಟ್ಟಿದೆ. ಹೀಗಾಗಿಯೇಇಲ್ಲಿದೇಹದಿಂದ ಹಿಡಿದು ವಿಶ್ವದವರೆಗೆಒಂದು ಸೂಕ್ಷ್ಮವಾದಅನುಬಂಧವಿದೆ. ದೇಹದ ಪ್ರತಿಯೊಂದುಜೀವಕೋಶವೂ ವಿಶ್ವದ ಮಹತ್ತಿನೊಂದಿಗೆ ಯಾರಿಗೂ ಕೇಳದ ಸೂಕ್ಷ್ಮ ಭಾಷೆಯಲ್ಲಿ ಸಂವಾದಿಸುತ್ತಇರುತ್ತದೆ. ಈ ಸೂಕ್ಷ್ಮ ಸಂವಾದದಿಂದಾಗಿಯೇ ಪ್ರಕೃತಿಯೂತನ್ನನ್ನುತಾನು ಅನಾವರಣಗೊಳಿಸಿಕೊಳ್ಳೋದು. ಅದಕ್ಕೇ ಇಲ್ಲಿಯಾವ ಋಷಿಯೂ ಮಂತ್ರವನ್ನು‘ಕಂಡುಹಿಡಿದ’ಅನ್ನುವುದಿಲ್ಲ. ಬದಲಿಗೆದರ್ಶನ ಮಾಡಿಕೊಂಡಎನ್ನಲಾಗುತ್ತದೆ. ಪ್ರಕೃತಿಯ ಸತ್ಯಅವನೆದುರಿಗೆಗೋಚರವಾದ ರೀತಿ ಅದು. ಇದರಿಂದಾಗಿಯೇ ಸಾವಿರಾರು ವರ್ಷಗಳ ಹಿಂದೆಅವರು ಹೇಳಿರುವುದನ್ನು ಇಂದು ಪ್ರಯೋಗಾಲಯಗಳಲ್ಲಿ ಸಿದ್ಧಪಡಿಸುವುದಷ್ಟೆ ನಮ್ಮ ಕೆಲಸ. ಅಷ್ಟೇ ಅಲ್ಲ, ಅವರು ಹಾಕಿಕೊಟ್ಟರಾಜಮಾರ್ಗದಿಂದದೂರ ಸರಿದಷ್ಟೂಅದೆಷ್ಟು ಕಷ್ಟಕೋಟಲೆಗಳನ್ನು ಅನುಭವಿಸುತ್ತಿದ್ದೇವೆಂಬ ಅರಿವೂ ನಮಗಾಗುತ್ತದೆ. ಪ್ರಪಂಚ ಮಾರ್ಗ ಸಾಕು, ಮುಕ್ತಿಯ ಯೋಗ ಮಾರ್ಗ ಬೇಕೆಂದುಜಗತ್ತಿಗೆ ಅನ್ನಿಸಿರೋದೂ ಅದ್ಕಕಾಗಿಯೇ.
ಮತ್ತೆ, ಈ ರೀತಿಯ ಬುದ್ಧಿ ಪ್ರಚೋದನೆಗೂ ಆ ಸೂರ್ಯದೇವನೇಕಾರಣ. ನಮಸ್ಕಾರ ಮಾಡೋರು ಮುಜುಗರವೆನ್ನಿಸಿದರೆ ಕೊನೆಪಕ್ಷ ಸಂಧ್ಯಾಕಾಲದಲ್ಲಿ ಸೂರ್ಯನೆದುರಿಗೆ ನಿಂತು ಬುದ್ಧಿ ಪ್ರಚೋದಕ ನರಗಳನ್ನು ಹುರಿಗೊಳಿಸಿ ಹೊಸೆದುಕೊಳ್ಳೋಣ. ಏನಂತೀರಿ?

Saturday 11 July 2015

ಸರ್ವಾಂತರ್ಯಾಮಿ, ಸರ್ವಪ್ರೇರಕ ಸೂರ್ಯ

ಕಾಲ ಗಣನೆಯ ಚರ್ಚೆ ಬಂದಾಗ ಜಗತ್ತಿನ ಯಾವ ವಿಜ್ಞಾನಿಯೂ ಭಾರತವನ್ನು ಕಡೆಗಣಿಸುವುದು ಸಾಧ್ಯವೇ ಇಲ್ಲ. ಈ ವಿಚಾರದಲ್ಲಿ ಜಗತ್ತಿನ ಆಧುನಿಕ ಮತಗಳೂ, ಮತ ಗ್ರಂಥಗಳೂ ಹಿಂದೂ ಚಿಂತನೆಗಳಿಗಿಂತ ಬಲು ಹಿಂದು! ಅನುಮಾನವೇ ಇಲ್ಲ. ‘ವಿಶ್ವದ ಕೇಂದ್ರ ಭೂಮಿ. ಸೂರ್ಯನೂ ಇದೇ ಭೂಮಿಯನ್ನು ಸುತ್ತುತ್ತಾನೆ’ ಹಾಗಂತ ಸೆಮೆಟಿಕ್ ಮತಗಳು ನಂಬಿದ್ದವು.  ದೇವರ ಮಕ್ಕಳು, ಪ್ರವಾದಿಗಳು ಇಲ್ಲಿ ಹುಟ್ಟುತ್ತಾರೆಂದರೆ ಇದೇ ಸರ್ವಶ್ರೇಷ್ಠವಾಗಿರಬೇಕೆಂಬ ಸಹಜ ಸಿದ್ಧಾಂತ ಅದು. ಜೊತೆಗೆ ಬೆಳಗಾಗಿ ಎದ್ದಾಗ ಪೂರ್ವಕ್ಕೆ ಕಾಣುವ ಸೂರ್ಯ ಸಂಜೆಯಾಗುವಾಗ ಪಶ್ಚಿಮದಲ್ಲಿ ಅಸ್ತಂಗತನಾಗುತ್ತಾನೆ. ಸಾಮಾನ್ಯನಾದ ಪ್ರತಿಯೊಬ್ಬನಿಗೂ ಸೂರ್ಯನೇ ನಮಗೆ ಪ್ರದಕ್ಷಿಣೆ ಹಾಕುತ್ತಿದ್ದಾನೆ ಅನ್ನಿಸುವುದರಲ್ಲಿ ತಪ್ಪೇನೂ ಇಲ್ಲ. ಪ್ರವಾದಿಗಳು ಅದನ್ನು ಹೇಳಿ ದೃಢಪಡಿಸಿ ಹೋದರು.  ಈಗಲೂ ಈ ವಾಕ್ಯಗಳನ್ನು ದೃಢವಾಗಿ ನಂಬಿರುವ ಅನೇಕರು “ಭೂಮಿ ತಿರುಗುವುದೇ ನಿಜವಾದರೆ ಮೇಲಕ್ಕೆಸೆದ ಚೆಂಡು ಕೆಳಗೆ ಬೀಳುವಾಗ ನಮ್ಮ ಕೈಗೇ ಬೀಳುವುದು ಹೇಗೆ? ಅದು ಪಕ್ಕದಲ್ಲೆಲ್ಲೋ ಹೋಗಿ ಬೀಳಬೇಕಲ್ಲವೆ? “ ಎಂದು ಬಾಲಿಶವಾಗಿ ಪ್ರಶ್ನಿಸುತ್ತಾರೆ. ಪಾಪ. ಇಂತಹವರ ವಿರುದ್ಧ ಅನೇಕ ಶತಮಾನಗಳ ಕಾಲ ವಿಜ್ಞಾನಿಗಳೂ ದನಿಯೆತ್ತಲಾಗದೆ ಕೊರಗಿದ್ದರು. ಕೋಪರ್ನಿಕಸ್, ಗೆಲಿಲಿಯೋರಂಥವರೆಲ್ಲ ಅದೇ ಸಾಲಿಗೆ ಸೇರಿದವರು.
su
ಆದರೆ ಈ ದೇಶ ಹಾಗಲ್ಲ. ಕಣ್ಣಿಗೆ ಕಾಣುವ ಈ ವಿಶ್ವದ ಕೇಂದ್ರ ಸೂರ್ಯನೇ ಎಂಬ ಅರಿವು ಇಲ್ಲಿನವರಿಗೆ ಇತ್ತು. ಸಕಲ ಚರಾಚರಗಳ ಪ್ರೇರಕ ಶಕ್ತಿಯೂ ಅವನೇ ಎಂಬುದೂ ಸ್ಪಷ್ಟವಾಗಿ ಗೊತ್ತಿತ್ತು. ಅದೂ ಒಂದೆರಡು ಸಾವಿರ ವರ್ಷಗಳ ಹಿಂದಲ್ಲ; ಋಗ್ವೇದ ಕಾಲದಿಂದಲೂ ಕೂಡ!
ಸಾಯಣರು ತಮ್ಮ ಋಗ್ವೇದ ಭಾಷ್ಯದಲ್ಲಿ `ಸೂರ್ಯ’ ಪದಕ್ಕೆ ಶ್ರೇಷ್ಠ, ಒಡೆಯ, ಸರ್ವಾಂತರ್ಯಾಮಿ, ಸರ್ವಪ್ರೇರಕ ಎಂಬೆಲ್ಲ ಅರ್ಥ ಹೇಳಿದರೆ; ಯಾಸ್ಕರು ತಮ್ಮ ನಿರುಕ್ತದಲ್ಲಿ ಸಂಚರಿಸುವವ, ಸೃಷ್ಟಿಸುವವ, ಪ್ರೇರೇಪಿಸುವವ ಎಂದೆಲ್ಲ ಗುಣಗಾನ ಮಾಡುತ್ತಾರೆ. ಅಲ್ಲಿಗೆ ಇಂದಿನ ವಿಜ್ಞಾನ ಸೂರ್ಯನ ಕುರಿತಂತೆ ನಡೆಸಿದ ಎಲ್ಲ ಸಂಶೋದನೆಗಳೂ ಇದರೊಳಗೆ ಸೇರಿಕೊಂಡಂತಾಯ್ತು. ನಮ್ಮ ಋಷಿಗಳು ಇಲ್ಲಿಗೇ ನಿಲ್ಲದೆ, ಸ್ಥಾವರ ಮತ್ತು ಜಂಗಮಾತ್ಮಕವಾದ ಪ್ರತಿಯೊಂದಕ್ಕೂ ಸೂರ್ಯನೇ ಅಂತರಾತ್ಮವೆಂದೂ ಬಣ್ಣಿಸಿ ಕೃತಾರ್ಥರಾಗಿದ್ದಾರೆ.
ಹಾಗಂತ ಈ ಲೇಖನ ಮಾಲೆಯುದ್ದಕ್ಕೂ ಬಣ್ಣಿಸಿದ ಸೃಷ್ಟಿಯ ಆದಿಪುರುಷ ಪರಬ್ರಹ್ಮ ಈ ಸೂರ್ಯನಲ್ಲವೆಂಬ ಜ್ಞಾನ ಋಷಿಗಳಿಗಿತ್ತು. ಭಗವದ್ಗೀತೆಯಂತೂ ಆ ಪರಮಾತ್ಮನೆದುರಿಗೆ ಈ ಸೂರ್ಯ ಕಳಾಹೀನವೆಂದು ಹೇಳಿದೆ. ಒಂದಂತೂ ಸ್ಪಷ್ಟ. ನಮ್ಮ ಕಣ್ಣೆದುರಿಗೆ ಕಾಣುವ ಗ್ರಹ – ಉಪಗ್ರಹಗಳ ಈ ಲೋಕಕ್ಕೆ ಸೂರ್ಯನೇ ಅಧಿಪತಿ. ಹೀಗೆ ಅನೇಕ ಲೋಕಗಳು ಸೇರಿ ನಿರ್ಮಾಣಗೊಂಡ ಮಹಾವಿಶ್ವದ ಅಧಿಪತಿ ಮಹಾಸೂರ್ಯ ಪರಮಾತ್ಮ ಎಂದಾಯ್ತು.
ಆ ವಿಶಿಷ್ಟ ಶಕ್ತಿಯಿಂದ ಪ್ರೇರಣೆ ಪಡೆದ ಈ ವಿಶ್ವ ಅದೆಷ್ಟು ಸರಳವಾಗಿದೆ ನೋಡಿ. ಪರಮಾತ್ಮ ತತ್ತ್ವದ ಸುತ್ತ ಸುತ್ತುವ ಇಡಿಯ ವಿಶ್ವ. ಅದರ ಮಿನಿಯೇಚರ್ ನಮ್ಮ ಸೌರ ಮಂಡಲ. ಇಲ್ಲಿ ಸೂರ್ಯನೇ ಪರಮಾತ್ಮ. ನೀವು ಅಣುವಿನ ಮಟ್ಟಕ್ಕೆ ಬಂದರೂ ಹಾಗೆಯೇ. ಪ್ರತಿಯೊಂದು ಪರಮಾಣುವಿನಲ್ಲೂ ಬಲಾಢ್ಯವಾದ ನ್ಯೂಕ್ಲಿಯಸ್ ಎಂಬ ಕೇಂದ್ರ, ಅದರ ಸುತ್ತಲೂ ಗಿರಗಿಟ್ಟಲೆಯಂತೆ ಸುತ್ತುವ ಎಲೆಕ್ಟ್ರಾನುಗಳು! ಇನ್ನು ನಮ್ಮ ವಿಚಾರಕ್ಕೆ ಬಂದರೆ, ಜೀವಕೋಶಗಳೂ ಹಾಗೆಯೇ. ಕೋಶಕ್ಕೊಂದು ಕೇಂದ್ರ, ಅದರ ಸುತ್ತಲೂ ರಚನೆಯಾಗಿರುವ ಜೀವ ಹಂದರ. ಪರಮಾತ್ಮ ತನ್ನಿರುವನ್ನು ಅಣುವಿನಿಂದ ಮಹತ್ತಿನವರೆಗೂ ಏಕಪ್ರಕಾರವಾಗಿ ತೊರಿಸಿಕೊಂಡಿದ್ದಾನೆ. ಹೀಗಾಗಿ “ಅಣೋರಣೀಯಾನ್ ಮಹತೋ ಮಹೀಯಾನ್” ಎಂದಾಗ ಇವೆಲ್ಲವೂ ಹಾದುಹೋಗುವುದು.
ನಮ್ಮ ಕಾಲ ಗಣನೆಯ ಕೇಂದ್ರ ಸೂರ್ಯ. ನಾವು ಹಗಲು ರಾತ್ರಿಗಳ ಲೆಕ್ಕಾಚಾರದಿಂದ ಶುರು ಮಾಡಿ ನಮ್ಮ ಆಯಸ್ಸು, ಭೂಮಿಯ ಆಯು, ವಿಶ್ವದ ಜೀವಾವಧಿಗಳನ್ನೆಲ್ಲ ಲೆಕ್ಕ ಹಾಕುತ್ತೇವಲ್ಲ, ಅದು ಸೂರ್ಯನ ಕಾರಣದಿಂದಲೇ. ಅವನಿಲ್ಲದ ಜಗತ್ತಿನ ಕಲ್ಪನೆ ಅಸಾಧ್ಯ. ನಮಗೆ ಹಗಲಿನ ಬೆಳಕೂ ಅವನದ್ದೇ; ರಾತ್ರಿ ಚಂದ್ರ ಪ್ರತಿಫಲಿಸುವ ಬೆಳಕೂ ಅವನದ್ದೇ! ರಾತ್ರಿಯ ವೇಳೆಗೆ ಮರತಪ್ರಾಯವಾಗುವ ಈ ಜಗತ್ತು ಬೆಳಕಾಗುವ ವೇಳೆಗೆ ಚೇತನವನ್ನು ಆವಾಹಿಸಿಕೊಂಡು ಜಾಗೃತವಾಗಲು ಆತನೇ ಕಾರಣ. ಭೂಮಿಯನ್ನು ಆತ ಆಕರ್ಷಿಸದೆ ಹೋಗಿದ್ದರೆ ಭೂಮಿ ಅದನ್ನು ಪ್ರತಿಭಟಿಸುವ ಜಗನ್ನಾಟಕ ನಡೆಯದೆ ಹೋಗಿದ್ದರೆ ಭೂಮಿಯ ಮೇಲೆ ಜೀವರಾಶಿಗಳು ಇರುತ್ತಲೇ ಇರಲಿಲ್ಲ. ಅರ್ಥವಾಗಲಿಲ್ಲವೆ? ವಿವರಿಸುತ್ತೇನೆ ಇರಿ.
ಭೂಮಿಯನ್ನು ಆದಿಶೇಷ ತಲೆಯ ಮೇಲೆ ಹೊತ್ತುಕೊಂಡಿದ್ದಾನೆ; ಅವನು ಅಲುಗಾಡಿದರೆ ಭೂಮಿಯ ನಾಶವೇ ಸರಿ ಅಂತ ಪುರಾಣಗಳಲ್ಲಿ ಹೇಳಿರುವುದನ್ನು ಕೇಳಿದ್ದು ನೆನಪಿದೆಯಾ? ನಾವೆಲ್ಲ ಇದನ್ನು ಆಡಿಕೊಂಡು ನಕ್ಕವರೇ. ಆದರೆ ವಿಜ್ಞಾನ ಅಧ್ಯಯನ ಹೆಚ್ಚಾದಂತೆ ಈ ಆದಿಶೇಷ ನಮ್ಮೆದುರು ಹೊಸತಾಗಿ ಅನಾವರಣಗೊಂಡ. ಭಾರತದಲ್ಲಿ ದೇವ ದಏವಿಯರ ಪರಿಕಲ್ಪನೆಗಳೆಲ್ಲವೂ ತಾತ್ತ್ವಿಕ ಹಿನ್ನೆಲೆಯುಳ್ಳವೇ ಎಂಬುದು ಅರಿವಾದರೆ, ಈ ಎಲ್ಲ ವೈಜ್ಞಾನಿಕ ಸತ್ಯಗಳ ಸುರುಳಿ ಬಿಚ್ಚುವುದು ಸುಲಭ.
ಸೂರ್ಯನ ಆಕರ್ಷಣ ಶಕ್ತಿ ಅದೆಷ್ಟೆಂದರೆ ಆತ ಭೂಮಿಯೂ ಸೇರಿದಂತೆ ಎಲ್ಲ ಗ್ರಹಗಳನ್ನು ತನ್ನೊಡಲೊಳಗೆ ಸೆಳೆದುಕೊಂಡುಬಿಡಲು ಸಿದ್ಧನಾಗಿಯೇ ಇರುತ್ತಾನೆ. ಅದಕ್ಕೇ ಅವನನ್ನು ಮಾರ್ತಾಂಡ ಎನ್ನೋದು. ಗೋಬಲ ಮಹರ್ಷಿಗಳ ಪ್ರಕಾರ ಮಾರ್ತಾಂಡ ಎಂದರೆ ಪ್ರಪಂಚದ ವಿಧ್ವಂಸಕ್ಕೆ ಕಾರಣನಾಗುವ ಪ್ರಳಯಕಾರಿ ಎಂದರ್ಥ. ಆತ ಸದಾ ಕಾಲ ಮಾರ್ತಾಂಡರೂಪೀ ಬಲವೊಂದನ್ನು ಭೂಮಿಯ ಮೇಲೆ ಹಾಕುತ್ತಲೇ ಇರುತ್ತಾನೆ. ಇತ್ತ ಭೂಮಿಯೂ ತನ್ನೊಡಲ ಸಾಮಥ್ರ್ಯವಷ್ಟನ್ನೂ ಬಗೆದು ಪ್ರಳಯವಾಗುವುದನ್ನು ತಡೆಗಟ್ಟುತ್ತಾಳೆ. ಸೂರ್ಯ ಭೂಮಿಯ ಮೇಲೆ ಹಾಕುವ ಬಲದಲ್ಲಿ ಭೂಮಿ ಸೂರ್ಯನ ಮೇಲೆ ಹಾಕುವ ಬಲವನ್ನು ಕಳೆದರೆ ಉಳಿಯುವ ಶೇಷವಿದೆಯಲ್ಲ. ಅದನ್ನೇ ನಮ್ಮವರು ಅತ್ಯಂತ ಪ್ರಾಚೀನವಾದ ‘ಆದಿಶೇಷ’ ಎಂದು ಕರೆದದ್ದು! ಈ ಆದಿಶೇಷವೇ ಭೂಮಿಯನ್ನು ಸೂಕ್ತ ಸ್ಥಾನದಲ್ಲಿ ಹಿಡಿದು ನಿಲ್ಲಿಸಿರೋದು. ಈ ಆದಿಶೇಷ ಏರುಪೇರಾದರೆ ಒಂದೋ ಭೂಮಿ ಸೂರ್ಯನೊಳಗೆ ಸೇರಿ ಹೋಗುತ್ತದೆ ಇಲ್ಲವೇ ಕಕ್ಷೆ ಬದಲಾಯಿಸಿಬಿಡುತ್ತದೆ. ಹೇಗಾದರೂ ಪ್ರಳಯ ಖಾತ್ರಿ. ಯಾವ ಜೀವಿಯೂ ಜೀವಿಸಲು ಭೂಮಿ ಯೋಗ್ಯವಾಗಿ ಉಳಿಯೋದಿಲ್ಲ.
ರಾಕ್ಷಸರ ಉಪಟಳ ಹೆಚ್ಚಾದಾಗ ಭೂದೇವಿ ಭಾರದಿಂದ ನಲುಗಿ ವಿಷ್ಣುವಿನ ಬಳಿ ಸಾಗಿ ಕಣ್ಣೀರ್ಗರೆಯುತ್ತಾಲೆಂಬುದನ್ನು ಎಲ್ಲ ಪುರಾಣಗಳಲ್ಲಿಯೂ ನೋಡುತ್ತೇವಲ್ಲ, ಅದು ಇದೇ ಆದಿಶೇಷ ಅಲುಗಾಡುವ ಪ್ರಸಂಗ. ಆಗಲೇ ಅವತಾರಗಳುದಿಸಿ ಕೆಡುಕನ್ನು ಕಡಿಮೆ ಮಾಡಿ ಭೂಮಿಯ ಶಕ್ತಿ ಹೆಚ್ಚಿಸುತ್ತಾರೆ. ರಾಮ ಕಾಡಿನಲ್ಲಿ ರಾಕ್ಷಸರ ಸಂಹಾರ ಮಾಡಿದನೆಂದರೆ ಕಾಡುಗಳ್ಳರ, ಮರ ಕಡಿಯುವವರ, ಪ್ರಾಣಿ ಹಿಂಸಕರನ್ನು ನಾಶ ಮಾಡಿದ ಎಂಬ ಅರ್ಥವೇ ಇರಬೇಕು; ಕೃಷ್ಣ ಯಮುನೆಯಲ್ಲಿ ಕಾಳಿಂಗನ ಮರ್ದಿಸಿದನೆಂದರೆ ನದಿಗೆ ವಿಷ ಕಕ್ಕುತ್ತಿದ್ದ ಜನರನ್ನು ನಾಶಗೈದಿರಬೇಕು. ಭೂಮಿಯನ್ನು ತಣಿಸಿ ಆಕೆಗೆ ಶಕ್ತಿಯನ್ನೇನೋ ಈ ರೀತಿ ತುಂಬಿಸಿದ್ದಾಯ್ತು. ಸೂರ್ಯನ ಮಾರ್ತಾಂಡರೂಪೀ ಬಲವನ್ನು ತಣಿಸುವುದು ಹೇಗೆ?
ಅದಕ್ಕೇ ಭಾರತದ ಋಷಿಗಳು ಉದಯಿಸುವ ಮತ್ತು ಅಸ್ತಮಿಸುವ ಸೂರ್ಯನಿಗೆ ಅಘ್ರ್ಯ ನೀಡುವ ಪರಂಪರೆ ತಂದರು. ಇದನ್ನೆ ಸಂಧ್ಯಾವಂದನೆ, ಸಂಧ್ಯಾ ಉಪಾಸನೆ ಎಂದು ಕರೆದರು. ತೈತ್ತಿರೀಯ ಆರಣ್ಯಕದ ಪ್ರಕಾರ ರಾಕ್ಷಸರು ಭಗವಂತನ ಕುರಿತು ತಪಸ್ಸು ಮಾಡಿ ಸೂರ್ಯನೊಡನೆ ಸದಾಕಾಲ ಕಾದಾಡುವ ವರ ಪಡೆದುಕೊಂಡರಂತೆ. ರಾಕ್ಷಸರನ್ನು ಕತ್ತಲಿಗೆ ಹೋಲಿಸುವುದಾದರೆ, ಕತ್ತಲು – ಬೆಳಕುಗಳ ಕದನವನ್ನೆ ಹಗಲು – ರಾತ್ರಿ ಎಂದು ಕರೆಯಬಹುದು ತಾನೆ? ಸಂಧ್ಯಾವಂದನೆ ಮಾಡುವಾಗ ನೀರನ್ನು ಅಭಿಮಂತ್ರಿಸಿ ತನ್ನೊಳಗಿನ ಪಾಪಪುರುಷನನ್ನು ನಾಶ ಮಾಡಿ ಪವಿತ್ರವಾಗುವ ವ್ಯಕ್ತಿ ಗಾಯತ್ರಿ ಮಂತ್ರದ ಉಚ್ಚಾರಣೆಯಿಂದಿಗೆ ಸೂರ್ಯನಿಗೆ ಅಘ್ರ್ಯ ಸಮರ್ಪಿಸುತ್ತಾನೆ. ಹೀಗೆ ಸಮರ್ಪಿಸಿದ ಅಘ್ರ್ಯವೇ ಸೂರ್ಯನಿಗೆ ವಜ್ರಕವಚದಂತೆ. ಅದರ ಮೂಲಕವೇ ಆತ ರಾಕ್ಷಸರೊಂದಿಗೆ ಕಾದಾಡಿ ಜಯಶೀಲನಾಗುತ್ತಾನಂತೆ. ಆತನ ಗೆಲುವು ನಮಗೆ ಬೆಳಕು!
ಹೌದು. ನನಗೆ ಗೊತ್ತು. ಇಷ್ಟನ್ನೂ ಕೇಳುವಾಗ ನಿಮಗೆ ನಗು ಬರುತ್ತಿರಬಹುದು. ನಾವು ಅಘ್ರ್ಯ ನೀಡದಿದ್ದರೆ ಬೆಳಕೇ ಆಗುವುದಿಲ್ಲವೇನೋ ಎಂದೂ ಕೇಳಬಹುದು. ನಾನು ಕೊಡುವ ಯಾವ ಉತ್ತರವೂ ನಿಮ್ಮನ್ನು ಸಮಾಧಾನ ಪಡಿಸಲಾರದು. ಆದರೆ ಒಂದಂತೂ ಸತ್ಯ. ಜಗತ್ತಿನ ಅನೇಕ ರಾಷ್ಟ್ರಗಳು ಪ್ರಖರ ಸೂರ್ಯ ರಷ್ಮಿಯಿಂದ ಬೆಂದು ಹೋಗಿವೆ. ಅಲ್ಲೆಲ್ಲ ಕುಡಿಯುವ ನೀರಿಗಿಂತ ಪೆಟ್ರೋಲೇ ಅಗ್ಗ. ಇನ್ನೂ ಕೆಲವು ದೇಶಗಳಲ್ಲಿ ಆತನ ಕಿರಣಗಳು ಅದೆಷ್ಟು ಕೋಮಲವೆಂದರೆ ಕುಡಿಯುವ ನೀರು ದ್ರವರೂಪದಲ್ಲಿರದೇ ಮಂಜುಗಡ್ಡೆಯಾಗಿಬಿಟ್ಟಿದೆ. ನೀರು ಬೇಕೆಂದರೆ ಮಂಜು ಕರಗಿಸಿ ಕುಡಿಯಬೇಕು.
ಭಾರತದ ಕಥೆಯೇ ಬೇರೆ. ಇಲ್ಲಿ ನದಿಗಳಿಗೆ ಕೊರತೆಯಿಲ್ಲ. ಫಲವತ್ತಾದ ಭೂಮಿಯ ಕೊರತೆಯಿಲ್ಲ. ಇಳುವರಿಯಂತೂ ಜಗತ್ತಿನ ಇತರ ಭಾಗಗಳಿಗಿಂತ ಹೆಚ್ಚು. ಏಕೆ ಹೀಗೆ? ಈಗೀಗ ಪರಿಸ್ಥಿತಿ ಬದಲಾಗುತ್ತಿದೆ. ನದಿಗಳು ಬತ್ತುತ್ತಿವೆ. ಭೂಮಿ ಬರಡಾಗುತ್ತಿದೆ. ಬೆಳೆಯ ಪ್ರಮಾಣ ನಿರೀಕ್ಷೆಯಷ್ಟಿಲ್ಲ. ಸೆಕೆ ತಡೆಯಲಾಗದಷ್ಟು ಹೆಚ್ಚುತ್ತಿದೆ. ಹೀಗೇಕೆ?
ವೈಜ್ಞಾನಿಕ ಬುದ್ಧಿಮತ್ತೆಯ ನೆಪದಲ್ಲಿ ಸೂರ್ಯನಿಗೆ ನಮಿಸುವ, ಭೂಮಿಯನ್ನು ತಣಿಸುವ ಆಚರಣೆಗಳನ್ನೆಲ್ಲ ಬಿಟ್ಟಿದ್ದೇ ಕಾರಣ ಇರಬಹುದಾ? ಹೌದೆಂದು ನಾನು ಹೇಳುತ್ತಿಲ್ಲ. ಪ್ರಶ್ನೆ ಕೇಳಿಕೊಂಡೆ ಅಷ್ಟೆ. ಹಾಗಂತ ಸೂರ್ಯನಿಗೆ ನಮಿಸುವ ಈ ಪರಂಪರೆ ಮೇಲ್ವರ್ಗದ ಜನರು ಹುಟ್ಟುಹಾಕಿದ್ದೆಂದು ಭಾವಿಸಬೇಡಿ. ಪ್ರಾಯಶಃ ಜಗತ್ತಿನ ಎಲ್ಲ ಬುಡಕಟ್ಟು ಜನಾಂಗಗಳೂ ಸೂರ್ಯನನ್ನು ಆರಾಧಿಸಿಯೇ ಆರಾಧಿಸುತ್ತವೆ. ಅರುಣಾಚಲ ಪ್ರದೇಶದಲ್ಲಿ ಈಗಲೂ ಮತಾಂತರಗೊಳ್ಳದ ಜನ ಪೂಜಿಸುವುದು ‘ಡೋನ್ಯೋ – ಪೋಲೋ’ ಎಂಬ ಸೂರ್ಯ – ಚಂದ್ರರ ಕಲ್ಪನೆಯನ್ನೇ. ಆ ಸೂರ್ಯನನ್ನು ಅವರು ಹಾಡಿ ಹೊಗಳುತ್ತಾರೆ. ಅವನಿಗಾಗಿ ಹಬ್ಬ ಆಚರಿಸುತ್ತಾರೆ. ಬಲಿ ಕೊಡುತ್ತಾರೆ ಎಲ್ಲವೂ! ಹಾಗೆ ಮಾಡದ ಕೆಲವರು ಇತ್ತೀಚೆಗೆ “ನಾವು ಪರಮಾತ್ಮನಿಗೆ ಮಾತ್ರ ನಮಿಸುತ್ತೇವೆ, ಸೂರ್ಯನಿಗಲ್ಲ” ಎಂದು ಹೊಸ ವಾದ ಹುಟ್ಟುಹಾಕಿದ್ದಾರೆ. ಟಾಟಾ ಮೋಟಾರ್ಸ್‍ನಲ್ಲಿ ಕೆಲಸ ಮಾಡುವವ “ನಾನು ನನ್ನ ಮ್ಯಾನೇಜರ್‍ಗೆ ಗೌರವ ಕೊಡಲಾರೆ, ರತನ್ ಟಾಟಾ ಮಾತು ಮಾತ್ರ ಕೇಳುತ್ತೇನೆ” ಎಂದರೆ ಎಷ್ಟು ಮೂರ್ಖತನವೋ ಅಷ್ಟೇ ಮೂರ್ಖತನದ ವಾದ ಇದು. ಅಂತಹ ಕೆಲಸಗಾರನನ್ನು ರತನ್ ಟಾಟಾ ಕೂಡ ಕಂಪನಿಯಿಂದ ಕಿತ್ತೆಸೆಯುವುದರಲ್ಲಿ ಅನುಮಾಣವೇ ಇಲ್ಲ. ಏನಂತೀರಿ?
ಸೂರ್ಯನನ್ನು ಅವಜ್ಞೆ ಮಾಡುವ ಪ್ರಮೇಯವೇ ಇಲ್ಲ. ಪರಿಸರಕ್ಕೆ ಪೂರಕವಾಗಿ ಬದುಕುವುದು ಎಂದರೆ ಸೂರ್ಯನ ಗಡಿಯಾರಕ್ಕೆ ಹೊಂದಿಕೊಳ್ಳುವುದೆಂದೇ ಅರ್ಥ. ಆತ ಅಸ್ತಂಗತನಾಗುವಾಗ ಇಡಿಯ ಪ್ರಕೃತಿಯೇ ಚೈತನ್ಯಶೂನ್ಯವಾಗುತ್ತದೆ. ಪಕ್ಷಿಗಳು ಗೂಡು ಸೇರುತ್ತವೆ, ಕ್ರಿಯಾಶೀಲವಾಗಿದ್ದ ಕೀಟ – ಭ್ರಮರಗಳು ಸದ್ದು ನಿಲ್ಲಿಸುತ್ತವೆ. ಗವ್ವೆನ್ನುವ ನೀರವತೆ. ಬೆಳಗಾಗುವ ಒಂದು ತಾಸು ಮುನ್ನ ಕಾಡಿನ ಬಳಿ ಇರುವ ಯಾವುದಾದರೂ ಗುಡ್ಡವನ್ನೇರಿ ಕುಳಿತುಬಿಡಿ. ಬೆಳಗಾಗುವ ಆ ಇಡಿಯ ಪ್ರಕ್ರಿಯೆ ನೋಡಿ ನೀವು ದಂಗಾಗದಿದ್ದರೆ ಕೇಳಿ. ಆದಿತ್ಯನ ಆಗಮನದ ಮುನ್ಸೂಚನೆ ಮೊದಲು ಕೀಟಗಳಿಗೆ ದೊರೆಯುತ್ತದೆ. ಅವುಗಳ ಸದ್ದು ನಿಧಾನವಾಗಿ ಇಡಿಯ ಕಾಡನ್ನು ವ್ಯಾಪಿಸಿ ಕಾಡನ್ನು ಜುಯ್ಯೆನ್ನಿಸಿಬಿಡುತ್ತದೆ. ಒಂದೊಂದೇ ಜಾತಿಯ ಪಕ್ಷಿಗಳು ಅನುಕ್ರಮವಾಗಿ ಚಿಂವ್‍ಗುಡಲಾರಂಭಿಸುತ್ತವೆ. ರೆಕ್ಕೆ ಝಾಡಿಸಿ ಮೈಕೊಡವಿಕೊಂಡು ಆಹಾರ ಅರಸಿ ಹೊರಟೇಬಿಡುತ್ತವೆ. ಈ ಎಲ್ಲ ಪಕ್ಷಿಗಳಲ್ಲಿ ಅತ್ಯಂತ ಕೊನೆಗೆ ಕೂಗುವುದು ಕೋಳಿ. ಮನುಷ್ಯರಾದ ನಾವು ಕೋಳಿ ಕೂಗಿದ ಮೇಲೆ ಬೆಳಗಾಯ್ತು ಎನ್ನುತ್ತೇವೆ!
ಸೂರ್ಯ ಸಣ್ಣ ಕೀಟದಿಂದ ಹಿಡಿದು ಮನುಷ್ಯನವರೆಗಿನ ಪ್ರತಿಯೊಂದನ್ನೂ ತನ್ನ ಶಕ್ತಿಯಿಂದ ಪ್ರಚೋದಿಸುತ್ತಾನೆ. ನಮ್ಮೊಳಗಿನ ಪ್ರತಿಯೊಂದು ಜೀವಕೋಶಗಳೂ ಆತನಿಂದ ಪುಷ್ಟಿಗೊಳ್ಳುತ್ತವೆ. ಸೂರ್ಯನ ಬೆಳಕು – ಶಾಖದಲ್ಲಿ ಆಗುವ ಸಣ್ಣ ಏರುಪೇರುಗಳೂ ನಮ್ಮಲ್ಲಿ ಅನೇಕ ರೋಗಗಳನ್ನು ಹುಟ್ಟುಹಾಕಬಹುದು. ಋಗ್ವೇದದ ಮಂತ್ರವೊಂದು ಸೂರ್ಯನನ್ನು ಶರೀರಗತ ಬಾಹ್ಯರೋಗವನ್ನೂ ಹೃದಯದ ಅಂತರ ರೋಗವನ್ನೂ ನಾಶಗೊಳಿಸೆಂದು ಪ್ರಾರ್ಥಿಸುತ್ತದೆ. ಪ್ರಸ್ಕಣ್ವ ಋಷಿಯು ಈ ಮಂತ್ರದ ಮೂಲಕ ಚರ್ಮಸಂಬಂಧಿ ಕಾಯಿಲೆಯಿಂದ ಮುಕ್ತಗೊಂಡರಂತೆ. ಸೂರ್ಯಕಿರಣಗಳ ಕೊರತೆಯಿಂದ ವಿಟಮಿನ್ ಡಿ ನಷ್ಟವಾಗಿ ರಿಕೆಟ್ಸ್ ಕಾಯಿಲೆ ಬರುವುದೆಂದು ಪ್ರಾಥಮಿಕ ಶಾಲೆಯಲ್ಲೇ ಓದಿದ್ದೇವಲ್ಲ!
ಸೂರ್ಯ ಕಥನ ಮುಗಿಯುವಂಥದ್ದಲ್ಲ. ಯಾರು ಏನಾದರೂ ಮಾಡಿಕೊಳ್ಳಲಿ, ನಾವು ಸೂರ್ಯನಮಸ್ಕಾರಕ್ಕೆ ಅಣಿಯಾಗೋಣ, ಶತ್ರುಂಜಯರಾಗೋಣ!

Thursday 9 July 2015

ಪುರಾಣಗಳೆಂದು ಜರಿಯದಿರಿ!

ಶಿವ’ ಯಾವಾಗಲೂ ಕಾಡುವ ದೇವರೇ. ಅವನ ಆಕಾರ, ಬಣ್ಣ, ವೇಷ, ವಾಸ ಸ್ಥಳ, ಆಭರಣ ಇವ್ಯಾವುವೂ ಸರಳವಾದುದಲ್ಲ. ಅತ್ಯಂತ ಗೂಢವಾದುದೇನನ್ನೋ ವಿವರಿಸುವ ಪ್ರಯತ್ನ ಅದರ ಹಿಂದಿದೆ. ಕೊರಳಲ್ಲಿ ಹಾವು, ಮೈ ಪೂರಾ ಭಸ್ಮ, ಸೊಂಟಕ್ಕೆ ವ್ಯಾಘ್ರ ಚರ್ಮ, ಕತ್ತಲ್ಲಿ ರುಂಡ ಮಾಲೆ. ತಲೆಯ ಮೇಲೆ ಗಂಗೆ, ಹಣೆಯಲ್ಲಿ ಉರಿವ ಕಣ್ಣು. ಸ್ಮಶಾನ ವಾಸಿ, ಹಿಮಾಲಯದ ಒಡೆಯ. ಉಫ್.. ಎಲ್ಲವೂ ವಿಚಿತ್ರ. ಆತನ ಲಿಂಗ ರೂಪವಂತೂ ಅನೇಕ ವೈಜ್ಞಾನಿಕ ಸತ್ಯಗಳ ಮೂರ್ತ ರೂಪ.
ಅಲ್ಲದೆ ಮತ್ತೇನು? ಪ್ರಳಯ ಕಾಲದಲ್ಲಿ ಮಹಾ ಗುರುತ್ವಕ್ಕೆ ಒಳಗಾಗಿ ಬಿಗ್ ಕ್ರಂಚ್ ಆಗುವುದೆಂಬ ಕಲ್ಪನೆಯನ್ನು ಭೌತ ವಿಜ್ಞಾನಿಗಳು ಮುಂದಿಡುತ್ತಾರಲ್ಲ, ಅದು ನಡೆದಾಗ ಇಡಿಯ ವಿಶ್ವ ತಾಳಬಹುದಾದ ರೂಪ ಶಿವ ಲಿಂಗದ್ದೇ! ಅದಕ್ಕೇ ಆತನನ್ನು `ಮಹಾ ಕಾಲ’ ಅಂತ ಕರೆಯೋದು. `ಲಿಂಗ’ ಶೂನ್ಯದ ಕಲ್ಪನೆ. ಶೂನ್ಯ ಎಂದರೆ ಖಾಲಿ. ಖಾಲಿ ಎಂದರೆ ಅಕ್ಷರಶಃ ಪೂರ್ಣ ಖಾಲಿ. ಇದೆಷ್ಟು ವಿಚಿತ್ರ ಅಲ್ಲವೆ? ಪೂರ್ಣ ಮತ್ತು ಖಾಲಿ ಎರಡೂ ಸೇರಿಕೊಂಡದ್ದೇ ಲಿಂಗಾಕೃತಿ. ಹೀಗಾಗಿಯೇ ಅದಕ್ಕೆ ಪೂಜೆ.
ಹೋಗಲಿ ಲಿಂಗವಲ್ಲದ್ದು ಪ್ರಕೃತಿಯಲ್ಲಿ ಏನಿದೆ ಹೇಳಿ. ನಮ್ಮ ಗೆಲಾಕ್ಸಿ ಕ್ಷೀರಪಥ, ಗ್ರಹಗಳು ಸೂರ್ಯನ ಸುತ್ತ ಸುತ್ತುವ ಪರಿ, ಕೊನೆಗೆ ಕಣ್ಣೆದುರು ಕಾಣುವ ಬೆಟ್ಟ ಗುಡ್ಡಗಳೂ ಭೂಮ ಲಿಂಗವೇ. ಅದಕ್ಕೇ ದ.ರಾ.ಬೇಂದ್ರೆ ‘ಗುಡ್ಡ ಗುಡ್ಡ ಸ್ಥಾವರ ಲಿಂಗ / ಅದಕ್ಕೆ ಮುಗಿಲಿನ ಅಭ್ಯಂಗ’ ಅಂತ ಕುಣಿಕುಣಿದು ಹಾಡಿದ್ದು. ಕೈಲಾಸ ಪರ್ವತ ಬಿಡಿ, ಹಿಮಾಲಯದುದ್ದಕ್ಕೂ ಹರಡಿರುವ ಪರ್ವತ ಶ್ರೇಣಿಗಳು ಬೃಹತ್ತಾದ ಶಿವ ಲಿಂಗದ್ದೇ ನೆನಪು ತರುತ್ತವೆ. ಹೀಗಾಗಿಯೇ ಲಿಂಗ ಪೂಜೆಯ ಪರಿಕಲ್ಪನೆ ಭಾರತದಲ್ಲಿ ಅವತೀರ್ಣಗೊಂಡಿರಬಹುದು ಅನ್ನುತ್ತಾರೆ ಬಹುತೇಕ ವಿದ್ವಾಂಸರು. ಆದರೆ ಕ್ರಿಸ್ತಾನುಯಾಯಿ ಪಂಡಿತರನೇಕರು ಈ ಲಿಂಗ ಪೂಜೆಯನ್ನು ಶಿಶ್ನ ಪೂಜೆಯೆಂದು ಲೇವಡಿ ಮಾಡುತ್ತಾರೆ. ಅಷ್ಟೇ ಅಲ್ಲ, ಪೀಠವನ್ನು ಯೋನಿಯ ಸಂಕೇತವೆಂದು ಕರೆದು, ಲಿಂಗಪೂಜೆಯನ್ನು ಲೈಂಗಿಕ ಕ್ರಿಯೆಯ ಪ್ರತೀಕ ಎಂದುಬಿಡುತ್ತಾರೆ. ಒಂದು ಸಂಸ್ಕøತಿಯು ನಂಬಿಕೊಂಡು ಬಂದಿರುವ ಆಚರಣೆಯನ್ನು ಅವಹೇಳನ ಮಾಡುವಲ್ಲಿ ಅವರೆಂದಿಗೂ ಹಿಂದುಮುಂದು ನೋಡುವುದಿಲ್ಲ. ಆದರೆ ಭಾರತದ ಯಾವೊಬ್ಬ ಚಳವಳಿಕಾರನೂ ಶಿಲುಬೆಯೇರಿದ ಏಸುಕ್ರಿಸ್ತನನ್ನು ನಮಸ್ಕರಿಸುವ ಜನರಿಗೆ ಶವ ನಮಸ್ಕಾರ ಮಾಡುವಿರೇಕೆ ಎಂದು ಪ್ರಶ್ನಿಸುವುದಿಲ್ಲ, ಅಲ್ಲವೆ? ಅದು ಮತ್ತೆ ನಮ್ಮ ಪರಂಪರೆಯ ಪಾಠ. ಪರಮಾತ್ಮ ತತ್ತ್ವ ಎಲ್ಲೆಡೆಯೂ ಇರುವುದರಿಂದ ಎಲ್ಲ ಮಾರ್ಗಗಳೂ ಅವನನ್ನೇ ಸೇರುತ್ತವೆ ಅಂತ!
Cosmic womb
ಇರಲಿ. ಈಗ ಪ್ರಶ್ನೆ ಇರೋದು ಮಹಾಕಾಲ ಶಿವನದ್ದು. ವಿಜ್ಞಾನಿಗಳನೇಕರಿಗೆ ದೀರ್ಘಕಾಲ ಕಾಡಿದ ಮತ್ತು ಕಾಡುತ್ತಲೇ ಇರುವ ಎರಡು ಸಂಗತಿಗಳು: ಒಂದು – ಆಕಾಶ, ಮತ್ತೊಂದು- ಕಾಲ. ಭಾರತದಲ್ಲಿ ಇವೆರಡಕ್ಕೂ ಶಿವನೇ ಉತ್ತರ. ಒಂದೆಡೆ ಚಿದಂಬರದ ನಟರಾಜ ಆಕಾಶ ತತ್ತ್ವದ ಪ್ರತೀಕವಾಗಿ ನಿಂತರೆ, ಮತ್ತೊಂದೆಡೆ ಉಜ್ಜಯಿನಿಯ ಮಹಾಕಾಲ. ಜ್ಯೋತಿರ್ಲಿಂಗವೊಂದಕ್ಕೆ ಮಹಾಕಾಲವೆಂದು ಹೆಸರಿಡುವುದೇ ರೋಮಾಂಚಕಾರಿ. ಅದರಲ್ಲೂ ಅದನ್ನು ನೆಲೆಗೊಳಿಸಲಾಗಿರುವ ಉಜ್ಜಯಿನಿಗೂ ಕಾಲಕ್ಕೂ ಇರುವ ಸಂಬಂಧ ಖಗೋಳದ ದೃಷ್ಟಿಯಿಂದ ವಿಶಿಷ್ಟ. ಹೀಗಾಗಿ ಆಕಾಶ ಕಾಯಗಳ ಕುರಿತಂತೆ ಆರ್ಯಭಟ ನಡೆಸಿದ ಅಧ್ಯಯನಕ್ಕೆ ಉಜ್ಜಯಿನಿಯೇ ಕೇಂದ್ರವಾಗಿತ್ತು. ಪ್ರಾಚೀನ ಭಾರತದಲ್ಲಿ ಕಾಲ ಗಣನೆಯ ಕೇಂದ್ರವಾಗಿದ್ದೂ ಉಜ್ಜಯಿನಿಯೇ. ಇಂದು ನಾವು ನಮ್ಮ ಮೊಬೈಲುಗಳಲ್ಲಿ ಗಡಿಯಾರ ಹೊಂದಿಸುವಾಗ ಆರಂಭದಲ್ಲಿ ಕೋಲ್ಕೊತ್ತಾಕ್ಕೋ ದೆಹಲಿಗೋ ಐಎಸ್‍ಟಿ ಹೊಂದಾಣಿಕೆ ಮಾಡುವುದಿಲ್ಲವಾ? ಹಾಗೆ ಇಡಿಯ ಭರತ ವರ್ಷದ ಕಾಲ ನಿರ್ಣಯ ಉಜ್ಜಯಿನಿಯ ಸಮಯಕ್ಕೆ ಹೊಂದಾಣಿಕೆಯಾಗಿರುತ್ತಿತ್ತಂತೆ. ಹೀಗಾಗಿ ಆತ ಮಹಾಕಾಲ!
ಹೀಗೆ ಅಕ್ಷಾಂಶ – ರೇಖಾಂಶಗಳಿಗೆ ಅನುಗುಣವಾಗಿ ಸಮಯ ಬೇರೆಬೇರೆ ಇರುತ್ತದೆ ಎನ್ನುವುದು ನಮ್ಮ ಪೂರ್ವಜರಿಗೆ ಯಾವಾಗಲೋ ಗೊತ್ತಿತ್ತು. ಅಷ್ಟೇ ಅಲ್ಲ, ಈ ಕಾಲ ನಾವು ನಿರ್ಧರಿಸಿದಂತೆ ಎಲ್ಲೆಡೆ ಅನ್ವಯವಾಗುವುದಿಲ್ಲ, ಬೇರೆ ಬೇರೆ ಗ್ರಹಗಳಲ್ಲಿ ಕಾಲಗತಿ ಬೇರೆ ಬೇರೆಯಾಗಿರುತ್ತದೆ ಎನ್ನುವುದನ್ನೂ ನಮ್ಮವರು ಅರಿತಿದ್ದರು. ಸ್ವಲ್ಪ ಗೊಂದಲವೆನ್ನಿಸುತ್ತಿದೆಯೇ? ವಿವರಿಸುತ್ತೇನೆ ಇರಿ.
ಭೂಮಿ ತನ್ನ ಅಕ್ಷದ ಮೇಲೆ ಒಂದು ಸುತ್ತು ಬರಲು 24 ಗಂಟೆ ತೆಗೆದುಕೊಳ್ಳುತ್ತದೆ. ಇದರಲ್ಲಿ ಅರ್ಧದಷ್ಟು ಹಗಲು, ಉಳಿದದ್ದು ರಾತ್ರಿ ತಾನೆ? ಹಾಗೆ ಬೇರೆಬೇರೆ ಗ್ರಹಗಳು ತನ್ನ ಸುತ್ತ ಸುತ್ತಲು ತೆಗೆದುಕೊಳ್ಳುವ ಕಾಲಾವಧಿ ಬೇರೆಬೇರೆ. ಅಲ್ಲಿ ನಾವು ಕೈಗೆ ಕಟ್ಟಿಕೊಂಡ ಗಡಿಯಾರ ಉಪಯೋಗಕ್ಕೆ ಬರುವುದಿಲ್ಲ. ಬುಧ ತನ್ನ ಕಕ್ಷೆಯ ಮೇಲೆ ವೇಗವಾಗಿ ತಿರುಗಿದರೆ, ಶನಿ, ಯುರೇನಸ್, ನೆಪ್ಚೂನ್‍ಗಳೆಲ್ಲ ಬಲು ನಿಧಾನವಾಗಿ ಸುತ್ತುತ್ತವೆ. ಭೂಮಿಯ ಮೇಲೆ ನಿಮಗೆ 35 ವರ್ಷ ಅಂತ ಭಾವಿಸಿ. ನಿಮ್ಮೊಡನೆ ಶುಕ್ರನ ಮೇಲೆ ಹುಟ್ಟಿದವನಿಗೆ 57 ವರ್ಷವಾಗಿರುತ್ತದೆ. ಆಥ ನೀವು ಇಲ್ಲಿ ಹುಟ್ಟಿದಾಗ ಬುಧನ ಮೇಲೆ ಹುಟ್ಟಿದರೆ ಅವನ ಈಗಿನ ಆಯಸ್ಸು 145 ವರ್ಷಗಳು! ಚಕಿತಗೊಳಿಸುವ ಸಂಗತಿಯೆಂದರೆ, ಯುರೇನಸ್, ನೆಪ್ಚೂನ್, ಫ್ಲೂಟೋಗಳ ಮೇಲೆ ಅವನಿಗಿನ್ನೂ ಒಂದು ವರ್ಷವೂ ತುಂಬಿರುವುದಿಲ್ಲ! ಸೂರ್ಯನನ್ನು ಗ್ರಹಗಳು ಸುತ್ತುವ ಕಾಲವನ್ನು ವರ್ಷವೆಂದು ಕರೆದರೆ, ಪಾಫ, ಅತ್ಯಂತ ದೂರದಲ್ಲಿರುವ ಈ ಗ್ರಹಗಳು ಒಂದು ಸುತ್ತು ಬರುವುದರೊಳಗೆ ಅದೆಷ್ಟೋ ಭೂ ವರ್ಷಗಳು ಕಳೆದು ಬಿಟ್ಟಿರುತ್ತವೆ!
ಇನ್ನು, ಊಹಿಸಿಯೇ ರೋಮಾಂಚನಗೊಳ್ಳುವಂಥ ಸಂಗತಿಯೊಂದಿದೆ. ಅದೇನು ಗೊತ್ತಾ? ನೀವು ಹುಟ್ಟಿದಾಕ್ಷಣ ಹೇಗೋ ಯುರೇನಸ್ ತಲುಪಿಕೊಂಡುಬಿಟ್ಟರೆ, ನಿಮಗೆ ಎರಡು ವರ್ಷ ತುಂಬಿ ಮರಳಿದಾಗ ನಿಮ್ಮೊಡನೆ ಹುಟ್ಟಿದವರಿಗೆ ಇಲ್ಲಿ 70 ವರ್ಷವಾದರೂ ಆಗಿರುತ್ತದೆ. ಅಂದರೆ, ಅವರ 70 ವರ್ಷ ನಿಮ್ಮ ಎರಡು ವರ್ಷಕ್ಕೆ ಸಮ!
ಭಾರತೀಯ ಶಾಸ್ತ್ರಗಳು ಬಲು ಹಿಂದೆಯೇ ಇದನ್ನು ಅರಗಿಸಿಕೊಂಡು ಸಮರ್ಥವಾಗಿ ಪ್ರತಿಪಾದಿಸಿದ್ದವು. ಕೆಲವೊಂದು ಮತಗಳು ಭೂಮಿಯ ಹುಟ್ಟಿನ ನಿಖರ ದಿನಾಂಕ ಹೇಳಿ ಅಪಹಾಸ್ಯಕ್ಕೀಡಾದರೆ, ಇನ್ನೂ ಕೆಲವು ಕೊನೆಗಾಲ ಬಂತೆಂದು ಬೊಬ್ಬೆ ಹೊಡೆದು ಲೇವಡಿಗೊಳಗಾಗಿವೆ. ಆದರೆ ಸನಾತನ ಧರ್ಮ ಮಾತ್ರ ಮಹಾಕಾಲದ ಕಲ್ಪನೆಯನ್ನು ಬಲು ಚುರುಕಾಗಿ ಕಟ್ಟಿಕೊಟ್ಟಿದೆ.
ಮನುಷ್ಯನ ದಿನಮಾನಕ್ಕಿಂತಲೂ ದೀರ್ಘ ದೇವತೆಗಳ ದಿನಮಾನಗಳು. ಅವಕ್ಕಿಂತಲೂ ದೀರ್ಘ ಬ್ರಹ್ಮನ ದಿನ – ರಾತ್ರಿಗಳು. ಬ್ರಹ್ಮನಿಗೆ ನೂರು ವರ್ಷಗಳಾದಾಗ ಪ್ರಳಯವಂತೆ. ಅಲ್ಲಿಗೆ ಎಲ್ಲವೂ ಸ್ತಬ್ಧ. ಆದರೆ ಮಹಾಕಾಲನ ಚಟುವಟಿಕೆ ನಡೆದೇ ಇರುತ್ತದೆ. ಆತನ ಕಾರಣದಿಂದಾಗಿ ನಟರಾಜ ಜಾಗೃತವಾಗಿ ಢಮರು ನಿನಾದವಾಗುತ್ತದೆ. ಪರಬ್ರಹ್ಮ ತತ್ತ್ವ ಸೃಷ್ಟಿಕಾರ್ಯಕ್ಕೆ ಅಣಿಯಾಘುತ್ತದೆ! ಒಟ್ಟೂ ಸೃಷ್ಟಿ ರಹಸ್ಯದ ಅಸ್ಥಿಪಂಜರವಿದು.
ಈಗ ಕಾಲಗಣನೆಯತ್ತ ಹೊರಳೋಣ. ವಿಷ್ಣು ಪುರಾಣದ ಪ್ರಕಾರ ಕಣ್ಣಿನ ರೆಪ್ಪೆ ಮಿಟುಕಿಸುವಷ್ಟು ಸಮಯವನ್ನು ನಿಮೇಷ ಎನ್ನಲಾಗುತ್ತದೆ. ಹದಿನೈದು ನಿಮೇಷಗಳಿಗೆ ಒಂದು ಕಾಷ್ಠ. ಮೂವತ್ತು ಕಾಷ್ಠಗಳಿಂದ ಒಂದು ಕಾಲ. 30 ಕಾಲಗಳಿಂದ ಒಂದು ಮುಹೂರ್ತ. ಇಂತಹ 30 ಮುಹೂರ್ತಗಳಿಂದ ಒಂದು ದಿನ. ಅಂದರೆ ಒಟ್ಟಾರೆ ಹಗಲು ರಾತ್ರಿ. ಆಮೇಲಿನದ್ದು ನಾವಂದುಕೊಂಡಂತೆ 30 ದಿನಗಳಿಗೆ ಒಂದು ಮಾಸ, ಆರು ಮಾಸಗಳಿಗೊಂದು ಅಯನ (ಉತ್ತರಾಯಣ ಮತ್ತು ದಕ್ಷಿಣಾಯನ). ಈ ರೀತಿಯ ಎರಡೂ ಅಯನಗಳು ಸೇರಿ ನಮ್ಮ ಒಂದು ವರ್ಷ!
ನಮಗೆ ಒಂದು ವರ್ಷ , ದೇವತೆಗಳಿಗೆ ಒಂದು ದಿನ. ಉತ್ತರಾಯಣ ದೇವತೆಗಳ ಹಗಲು, ದಕ್ಷಿಣಾಯನ ಅವರ ರಾತ್ರಿ. ನಮಗೆ 360 ವರ್ಷಗಳಾದಾಗ ದೇವತೆಗಳಿಗೆ ಒಂದು ವರ್ಷ! ಅದನ್ನು ದಿವ್ಯ ವರ್ಷವೆಂದು ಕರೆಯಲಾಗಿದೆ.
ನನಗೆ ಗೊತ್ತು. ಅನೇಕರು ಅದಾಗಲೇ ಲೆಕ್ಕಾಚಾರ ಬಿಡುವ ಹಂತದಲ್ಲಿದ್ದಾರೆ. ಈ ಲೆಕ್ಕಗಳು ಸುಲಭವಾಗಲೆಂದೇ ದಿವ್ಯವರ್ಷ ಬಳಸಿದ್ದು. ನಾವು ನಾಲ್ಕು ಯುಗಗಳನ್ನು ಗುರುತಿಸುತ್ತೇವೆ. ಕೃತ, ತ್ರೇತಾ, ದ್ವಾಪರ ಮತ್ತು ಕಲಿ. ಕೃತಯುಗದ ಅವಧಿ ನಾಲ್ಕು ಸಾವಿರ ದಿವ್ಯ ವರ್ಷಗಳು. ಅದಕ್ಕೆ ಪೂರ್ವ ಸಂಧ್ಯೆ ಹಾಗೂ ಸಾಯಂ ಸಂಧ್ಯೆಗಳು ತಲಾ 400 ವರ್ಷಗಳದ್ದು. ಒಟ್ಟಾರೆ 4,800 ದಿವ್ಯ ವರ್ಷಗಳು. ಒಂದೊಂದು ಯುಗಕ್ಕೂ ಈ ಸಂಖ್ಯೆ ಕಡಿಮೆಯಾಗುತ್ತ ಬಂದು, ಕಲಿಯುಗಕ್ಕೆ ಈ ಪ್ರಮಾಣ ಒಂದು ಸಾವಿರ ದಿವ್ಯ ವರ್ಷಗಳು, ಜೊತೆಗೆ ನೂರು – ನೂರು ವರ್ಷಗಳ ಪೂರ್ವ ಹಾಗೂ ಸಾಯಂ ಸಂಧ್ಯೆಗಳು ಸೇರಿದರೆ ಒಟ್ಟಾರೆ 1,200 ದಿವ್ಯ ವರ್ಷಗಳು. ಬರೋಬ್ಬರಿ ನಮ್ಮ ಲೆಕ್ಕದ ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರ್ಷಗಳು!! ಇವುಗಳಲ್ಲಿ ನಾವಿನ್ನೂ ಐದು ಸಾವಿರ ವರ್ಷ ದಾಟಿರಬಹುದಷ್ಟೇ. ಕಲಿಯುಗದ ದೀರ್ಘ ಪಯಣಬಾಕಿ ಇದೆ. ಸದ್ಯಕ್ಕಂತೂ ಪ್ರಳಯದ ಮುನ್ಸೂಚನೆ ಇಲ್ಲ!
ಹಾ! ಮತ್ತೆ ಲೆಕ್ಕಾಚಾರಕ್ಕೆ ಬನ್ನಿ. ನಾಲ್ಕು ಯುಗಗಳ ಒಂದು ಚಕ್ರ, 12 ಸಾವಿರ ದಿವ್ಯ ವರ್ಷಗಳದ್ದಲ್ಲವೆ? ಇದು ಸಾವಿರ ಬಾರಿ ತಿರುಗಿ ಬಂದರೆ ಬ್ರಹ್ಮನ ಒಂದು ಹಗಲು. ಎರಡು ಸಾವಿರ ಬಾರಿ ಆದರೆ ಆತನ ಒಟ್ಟಾರೆ ಒಂದು ದಿನ. ಇಂತಹ ದಿನಗಳು, ಮಾಸಗಳು, ವರ್ಷಗಳು ಕಳೆಯಬೇಕು. ಬ್ರಹ್ಮನಿಗೆ ಹೀಗೆ ನೂರು ವರ್ಷಗಳಾದಾಗ ಅದು ಪರಮಾಯಸ್ಸಂತೆ. ಮತ್ತೊಂದು ಹೊಸ ಸಋಷ್ಟಿಗೆ ಮುನ್ನದ ಮಹಾ ಪ್ರಳಯ ಕಾಲ ಅದು.
ಒಟ್ಟಾರೆ ಲೆಕ್ಕಾಚಾರ 8.64 ಟ್ರಿಲಿಯನ್ ವರ್ಷ ಭೂಮಿಯ ಆಯಸ್ಸು ಎಂದಾದರೆ, ಅದರಲ್ಲಿ ಈಗಾಗಲೇ ಪರಾರ್ಧವೆಂಬ ಬ್ರಹ್ಮನ ಅರ್ಧ ಆಯಸ್ಸು ಮುಗಿದಿದೆ. ಅಲ್ಲಿಗೆ, 4.32 ಅರಿಲಿಯನ್ ವರ್ಷಗಳು ಕಳೆದುಹೋಗಿವೆ. ನನಗೆ ಗೊತ್ತು. ಈ ಸಂಖ್ಯೆಯನ್ನು ನಮ್ಮಲ್ಲಿ ಕೆಲವರು ಗಾಬರಿಯಿಂದ ಗಮನಿಸುತ್ತಾರೆ. ಕೆಲವರು ಇದನ್ನು ಪುರಾಣವೆಂದು ತಳ್ಳಿ ಹಾಕಿದರೆ, ಇನ್ನೂ ಕೆಲವರು ಈ ಸಂಖ್ಯೆಯನ್ನು ಊಹಿಸಿಕೊಳ್ಳಲಾಗದೆ ಹೆಣಗುತ್ತಾರೆ.
ಇಷ್ಟೆಲ್ಲ ಓದಿಕೊಂಡ ಮೇಲೂ 2ಜಿ ಹಗರಣದ ಒಂದು ಲಕ್ಷದ ಎಪ್ಪತ್ತಾರು ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಇಂದಿನ ದಿನಮಾನದಲ್ಲೆ ಹೆಣಗಾಡುತ್ತಿರುವಾಗ, ಋಷಿಗಳ ಕಾಲದಲ್ಲಿ ಅಷ್ಟು ದೊಡ್ಡ ಸಂಖ್ಯೆಯನ್ನು ಲೀಲಾಜಾಲವಾಗಿ ಬಳಕೆ ಮಾಡಿ ಕಾಲ ಗಣನೆ ಮಾಡುತ್ತಿದ್ದರಲ್ಲ, ಆ ಸಾಮಥ್ರ್ಯದ ಕುರಿತು ಒಮ್ಮೆ ಆಲೋಚಿಸಿ. \
ಆಧುನಿಕ ವಿಜ್ಞಾನ ಇದಕ್ಕೆ ಹೊರತಾಗಿಲ್ಲ. ಸುಮಾರು ನೂರೈವತ್ತು ವರ್ಷಗಳ ಹಿಂದೆ ವಿಲಿಯಂ ಥಾಮ್ಸನ್ ತನ್ನ ಸಾಮಥ್ರ್ಯಕ್ಕೆ ತಕ್ಕಂತೆ, ಭೂಮಿ ಹುಟ್ಟಿ 20ರಿಂದ 400 ದಶಲಕ್ಷ ವರ್ಷಗಳಾಗಿರಬಹುದು ಎಂದು ಅಂದಾಜಿಸಿದ. ಬಹುಶಃ ಆಗಿನ ಕಾಲಕ್ಕೆ ಇದೇ ದೊಡ್ಡ ಗಣನೆಯಾಗಿರಲಿಕ್ಕೆ ಸಾಕು. ಭೂಗರ್ಭ ಶಾಸ್ತ್ರಜ್ಞ ಚಾಲ್ರ್ಸ ಲಿಲ್ ಇದನ್ನೊಪ್ಪಲು ಸಿದ್ಧವಿರಲಿಲ್ಲ. ಜೀವ ವಿಜ್ಞಾನಿಗಳಿಗಂತೂ ಇಷ್ಟು ಕಡಿಮೆ ಅವಧಿಯಲ್ಲಿ ಜೀವ ವಿಕಾಸ ಪ್ರಕ್ರಿಯೆ ನಡೆದಿರಬಹುದೆಂದು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ವಿಜ್ಞಾನ ಬೆಳೆದಂತೆ ಭೂಮಿಯ ಉಗಮದ ಕಲ್ಪನೆಯೂ ವಿಸ್ತಾರವಾಯಿತು. ವಿಕಿರಣ ಶಾಸ್ತ್ರದ ಅನ್ವಯಗಳಿಂದ ಭೂಮಿಯ ಹುಟ್ಟಿನ ಅಧ್ಯಯನ ಮಾಡಲಾಯ್ತು. ಆರ್ಥರ್ ಹೋಮ್ಸ್, ಪ್ರಾಚೀನವೆನ್ನುವ ಒಂದಷ್ಟು ಕಲ್ಲುಗಳ ಅಧ್ಯಯನ ನಡೆಸಿ, ಭೂಮಿ ಸುಮಾರು 1.6 ಬಿಲಿಯನ್ ವರ್ಷಗಳಷ್ಟು ಹಳೆಯದು ಎಂದ. ಮತ್ತೆ ಸಾಕಷ್ಟು ಸಂಶೋಧನೆಗಳು, ಚರ್ಚೆಗಳು ನಡೆದು ಆಧುನಿಕ ರೇಡಿಯೋ ಮೆಟ್ರಿಕ್ ವಿಧಾನದಿಂದ ಹಳೆಯ ಪರ್ವತ ಶ್ರೇಣಿಗಳ ಅಧ್ಯಯನ ನಡೆಸಿದಾಗ ನಾಲ್ಕೂವರೆ ಬಿಲಿಯನ್ ವರ್ಷಗಳೆಂದು ಅಂದಾಜಿಸಲಾಯ್ತು. ವಿಜ್ಞಾನದ ಹೊಸ ಶಾಖೆ ಅಧ್ಯಯನಕ್ಕೆ ಅತ್ಯಾಧುನಿಕ ಮಾರ್ಗ ತೋರುವವರೆಗೂ ಅವರೆಲ್ಲ ಇದನ್ನು ನಂಬುತ್ತಾರೆ.
ಹಾ! ಅಂದಹಾಗೆ ನಾವು ಪುರಾಣಗಳಲ್ಲಿ ಯಾವುದನ್ನು ಬ್ರಹ್ಮನ ಒಂದು ದಿನವೆಂದು ಕರೆದೆವೋ ಅದು ನಮ್ಮ ಮಿಲ್ಕಿ ವೇ ಗ್ಯಾಲಕ್ಸಿ ತನ್ನ ಅಕ್ಷದ ಸುತ್ತ ತಾನು ಒಮ್ಮೆ ಸುತ್ತಲು ತೆಗೆದುಕೊಳ್ಳುವ ಕಾಲವೆಂದು ವಿಜ್ಞಾನದ ಲೆಕ್ಕಾಚಾರವಂತೆ. ಹೀಗೇ ಅದು ವಿಶ್ವದ ಕೇಂದ್ರವಾದ ಪರಬ್ರಹ್ಮನನ್ನು ಒಂದು ಸುತ್ತು ಬಂದರೆ ಒಂದು ವರ್ಷ ಇರಬಹುದು. ಈ ರೀತಿಯ ನೂರು ವರ್ಷಗಳು ವಿಶ್ವದ ಆಯಸ್ಸೆಂಬುದು ನಮ್ಮ ಅಂದಾಜಾ? ಗೊತ್ತಿಲ್ಲ.
ವಿಜ್ಞಾನಕ್ಕೆ ಎಲ್ಲ ಗೊತ್ತಿದೆ. ಅದು ಹೇಳಿದ್ದು ಮಾತ್ರ ಸತ್ಯವೆಂದು ನಂಬುತ್ತೇವಲ್ಲ; ಮೂಢ ನಂಬಿಕೆಗಳಲ್ಲಿ ಅದೂ ದೊಡ್ಡದ್ದೇ. ವಿಜ್ಞಾನ ಅನೇಕ ವಿಚಾರಗಳಲ್ಲಿ ಕೈಚೆಲ್ಲಿ ಸುಮ್ಮನಾಗುತ್ತದೆಯಷ್ಟೇ ಅಲ್ಲ, ತಾನೇ ಹಿಂದೆ ಸಾಬೀತುಪಡಿಸಿ ಸತ್ಯವೆಂದು ಸಾರಿದ್ದನ್ನು ಅಲ್ಲಗಳೆದು ಗೊಂದಲವೆಬ್ಬಿಸಿಬಿಡುತ್ತದೆ.
ಅದಕ್ಕೇ ಹಳೆಯದನ್ನೆಲ್ಲ ಪುರಾಣವೆಂದು ಜರಿಯಬೇಡಿ. ಹೊಸತು ವಿಜ್ಞಾನವೆಂದು ಹಿಗ್ಗಿಬಿಡಬೇಡಿ. ಮಧ್ಯೆ ನಿಂತು ಹಂಸದಂತೆ ಹಾಲಿನಿಂದ ನೀರು ಬೇರೆ ಮಾಡಿ ಹಾಲನ್ನು ಸೇವಿಸಿ, ಅಷ್ಟೇ. ಭಾರತ ಅದನ್ನು ಹೇಳಿದ್ದಲ್ಲದೆ, ಆಚರಿಸಿತು ಕೂಡ. ಹೀಗಾಗಿಯೇ ಅದು ವಿಶ್ವಗುರು!