Monday 8 October 2018

RUGUPAKARMA @ Agalpady/Bangalore/Mangalore and Mysore on 25th Aug 2018

D
ear All,

please find attached the details of rugupakarma being conducted at Agalpady/Mangalore/Mysore and Bangalore on 25th Aug 2018 along with the venue and items to be taken with them while attending at respective places

you are requested to utilize this opportunity

Nagaraj Uppangala                                            
95350 00365





Wednesday 27 June 2018

________ವಿರಹಿಣಿ....._______



ಅಲ್ಲಿ ಗುಡುಗಿದೆಯಂತೆ...ಎಲ್ಲೋ...
ಮಳೆ ನಿಂತ ಹೊತ್ತು.......
ಕಾಯುತ್ತಿರುತ್ತೇನೆ ಸಂಜೆಯ ಮಬ್ಬಿಗೆ ಆಗೀಗ ಬೆಳಗುವ
ಕೋಲ್ಮಿಂಚಿನಲ್ಲಿ ನಿನ್ನ ಮೊಗದ ಮಂದಹಾಸ ನಿರುಕಿಸುತ್ತಾ..........

ಎದೆಯ ಬಾಗಿಲ ತೆರೆದು ಮಧುರ ಗಾನವ ಹೊಸೆದು.....ಆಸೆ ಕಣ್ಣಲ್ಲಿ
ಕಾಯುತ್ತಿದ್ದೇನೆ...
ನೀ ಬಂದು ಸೇರುವೆಯೇನು ಒಲವ ತಂಗಾಳಿ.....

ಒಣಗಿ ಹೋಗಿದೆ ಮರುಭೂಮಿ ಇನ್ನಷ್ಟು ಕಡುವಿರಹಬೇಗೆಯಲಿ ...ಮನಕೆ ತಂಪೆರಚು ಝರಿಯಾಗಿ ಹರಿದು ಬಾ....
ಕರಟಿಹೋಗಿದೆ ಗರಿಕೆ ತುದಿ....
ಹೂ ಬನ ಬಾಡಿದೆ...ಕಮರುವ ಮುನ್ನ
ಹಸಿರನೆರಚು........
ಕರಣಿಕನಿಗೆ ಗೊತ್ತಿರುವ ಬಳಲಿಕೆಯ ಲೆಕ್ಕಾಚಾರ....
ಬರುವೆಯೋ ಬಾರೆಯೋ...
ಅಂಜಿಕೆಗೂ ಅಂಜಿಕೆ...ಒಂದು ಹುಲ್ಲಕಡ್ಡಿಯ ಭರವಸೆ...
ಮಿಂಚಿನ ತುದಿಹಿಡಿದು ಬಾಗಿಲಾಚೆ ಆಗೀಗ ಜಗ್ಗಿ ನೋಡುತ್ತೇನೆ.....
ನಿನ್ನ ಬರವು ಖಂಡಿತ... ಗವ್ವೆನ್ನುವ ಕಾರ್ಗತ್ತಲಲೂ ಪಿಸುನುಡಿ ಕೇಳಿ ಬಂದೀತು ಜಿರ್ರೆನ್ನುವ ಜೀರುಂಡೆಗಳ ಸದ್ದನಡಗಿಸಿ......
ಆ ಮೂಲೆ ಕೋಣೆಯೊಳಗಿನ
ಮೂರು ಕಾಲಿನ ಮಂಚ ಲೆಕ್ಕವಿಟ್ಟಿದೆ ನಮ್ಮ ಬೆವರಹನಿಗಳದು....
ಸುಣ್ಣ ಕಾಣದ ಗೋಡೆಗಳ ಮಾತುಗಳು
ಬರಿ ನಿನ್ನವೇ.....
ಸರಸದ ನೆನಪು ಹೊರಹೋಗದಂತೆ...
ಹನ್ನೆರಡು ಇಂಚಿನ ಹದಿಮೂರು ಮೊಳೆಗಳ ಜಡೆದ ಕರಿಕಿಟಕಿ....
...
ಕಾಯ ತಂಪಾಗುವ ಮುನ್ನ ಮತ್ತೊಮ್ಮೆ...
ಬರುವೆಯಲ್ಲ.... ಬಂದುಬಿಡು...
ಬಾರದಿರೆ.... ನಾ ಮತ್ತೆ..... ಫ್ರೇಮಿನೊಳಗಿನ     ಬರಿಯ ನೆನಪು.....


    ರಚನೆ: ಶ್ರೀಕೃಷ್ಣ ಸಿ ಯನ್ ಚೇರ್ಕೂಡ್ಲು ಮಂಗಳೂರು


ಸಂಜೆ ನಡಿಗೆ



ನಡೆಯುವುದು ಸಾಮಾನ್ಯ ನಾನೂ ಹಾಗೇನೇ 
ಸಂಜೆ ಮಬ್ಬಿಗೆ...  ಒಮ್ಮೊಮ್ಮೆ  ಕಡಲತಡಿಯ ಮರಳಿನ ಹಾದಿ ಹಿಡಿದು....
ಸಹಜವಾಗಿಯೇ ನಿಮಗೆ ಅಚ್ಚರಿಯಾದೀತು....
ನಿಮ್ಮ
ಅನುಭವಕ್ಕೆ ನಿಲುಕದ ಎಷ್ಟೋ ಯೋಚನೆಗಳ ಕಟ್ಟುವ ಕೆಲಸ.....ಹಾದಿಯುದ್ದಕ್ಕೂ....
ಆ ಕ್ಷಣ
ಕಡಲಾಳ ಒಡಲಾಳ ಎರಡೂ ಒಂದೇ ತೆರ....
ಈಜುವ ಛಲ ಎರಡರೊಳಗಿಳಿದು....
ಮೌನವಾಗಿ ನಗುತ್ತೇನೆ ....
ಅಲ್ಲೇ ಅಲೆಯ ಮೇಲೆ ತೇಲಿ ಬಂದೊಂದು
ನಕ್ಷತ್ರ ಮೀನಿಗೂ ನನ್ನ ನಗು ಇಷ್ಟವಾಗಿರಬೇಕು...
ಪುಟಪುಟನೆ ಖುಷಿಯಿಂದ ಎಗರುವುದ ನೋಡುತ್ತಾ ಕಳೆದು ಹೋಗುತ್ತೇನೆ...
ಕಡಲ ತೀರದ ತುಂಬಾ
ನಿನ್ನೆ ನಡೆದ ಹಾದಿಯ ಹೆಜ್ಜೆ ಗುರುತುಗಳು ಹಾಗೇ ಇವೆ....
ಹತ್ತಾರು ಮರಳಕಣಗಳು ಸವೆದು ಹೋಗಿರಬಹುದು ಅಷ್ಟೆ....
ಭಾವುಕನಾಗುತ್ತೇನೆ......
ಇಂದಿನತನಕ ಯಾವ ಅಲೆಗಳಿಗೂ ನನ್ನ ಹೆಜ್ಜೆಗಳ ಗುರುತು ಅಳಿಸುವ ಶಕ್ತಿ ಇದ್ದಿರಲಿಲ್ಲ......ಮುಂದೊಂದು ದಿನ ಬರಬಹುದೇನೋ....
ಬರಲೇಬೇಕು...
ಅದೇ ಕಡಲು ಅದೇ ಹಾದಿ...
ಅದೇ ಭೋರ್ಗರೆತ.... ಅವೇ ಅಲೆಗಳ ಅಬ್ಬರ.....
ಇಷ್ಟಾಗಿಯೂ  ಅಂದುಕೊಳ್ಳುತ್ತೇನೆ .....
ನನ್ನ ಹೆಜ್ಜೆಗಳನ್ನು ಅನುಸರಿಸಿ ಬದುಕುವ ಮಂದಿ ಬಂದಾರು......
ಕುಳಿತು ಕಾಯುತ್ತಿರುತ್ತೇನೆ...
ವಿಶ್ರಾಂತಿ ಎಲ್ಲಿಂದ ಸಿಗಬೇಕು.....
ಯೋಚನೆಗಳ ಸರಪಣಿಯೊಳಗೆ
ಬಂಧಗಳು ಬಂಧಿಯಾಗಿವೆ....
ಮೌನ ಉಳಿಯುತ್ತದೆ ಕವಿತೆಯಲ್ಲಿ .....
ಮತ್ತೆ ಎಚ್ಚೆತ್ತು... ನಡೆಯುತ್ತೇನೆ...
ಅದೇ ಉಸುಕಿನ ಜೊತೆ ಮುಸುಕಿನ...
ಗುದ್ದಾಟ....
. ಮತ್ತೊಮ್ಮೆ
ಅದೇ ಮಬ್ಬಿನೊಳಗೆ.... ಸೇರಿ ....
ಹಾಗೆ ಮೌನವಾಗಿ ಮತ್ತೆ ನಗುತ್ತೇನೆ....
              ರಚನೆ: ಶ್ರೀಕೃಷ್ಣ ಸಿ ಯನ್ ಚೇರ್ಕೂಡ್ಲು ಮಂಗಳೂರು