Wednesday 15 July 2015

ಧೀಶಕ್ತಿ ಪ್ರಚೋದಕನಿಗೆ ಕೋಟಿ ನಮಸ್ಕಾರ…

ಬೆಳಗ್ಗೆ ಎಷ್ಟು ಗಂಟೆಗೆ ಏಳಬೇಕು?” ಹಾಗಂತರಾಮಕೃಷ್ಣಆಶ್ರಮದ ಸ್ವಾಮಿ ಪುರುಷೋತ್ತಮಾನಂದರನ್ನು ಭಕ್ತರೊಬ್ಬರು ಕೇಳಿದರಂತೆ. ಸ್ವಾಮೀಜಿತಮ್ಮ ಎಂದಿನ ಧಾಟಿಯಲ್ಲಿ, “ಎಷ್ಟು ಗಂಟೆಗಾದರೂ ಎದ್ದೇಳಿ, ಎದ್ದ ಮೇಲೆ ಪೂರ್ಣವಾಗಿಎದ್ದಿರಿ”ಎಂದಿದ್ದರಂತೆ. ಅದೂ ಸತ್ಯವೇ. ಏಳುವುದು ಅಂದರೆ ಹಾಸಿಗೆ ಬಿಟ್ಟು ಏಳುವುದು ಅಂತಲ್ಲ. ದೇಹದ ಪ್ರತಿಯೊಂದುಜೀವಕೋಶವೂ ಚೈತನ್ಯಶೀಲಗೊಳ್ಳುವುದು ಎಂದರ್ಥ. ಮಲಗುವ ಕೋಣೆಯನ್ನುಕತ್ತಲ ಕೂಪವಾಗಿಸಿ, ಕೆಲಸದಕಚೇರಿಯನ್ನು ಸದಾ ಬೆಳಕಿನ ಗೋಳವಾಗಿಸಿ ಹಗಲು ರಾತ್ರಿಗಳ ಕಲ್ಪನೆಯನ್ನೇ ಕಳೆದುಕೊಂಡಿರುವ ನಮಗೆ ಋಷಿ ಮುನಿಗಳು ಉಲ್ಲೇಖ ಮಾಡಿರುವ ಅನೇಕ ಸಂಗತಿಗಳನ್ನು ಅರ್ಥೈಸಿಕೊಳ್ಳುವುದು ಬಿಡಿ, ಕಲ್ಪಿಸಿಕೊಳ್ಳುವುದೂ ಅಸಾಧ್ಯ.
sun3
ನಾವು ಬ್ರಾಹ್ಮೀ ಮುಹೂರ್ತವೊಂದರ ಬಗ್ಗೆ ಬಹುವಾಗಿ ಚರ್ಚಿಸುತ್ತೇವೆ. ಸೂರ್ಯೋದಯಕ್ಕೂ ಮುನ್ನಿನ ಸಮಯವದು. ಮನು ತನ್ನ ಸ್ಮøತಿಗ್ರಂಥದಲ್ಲಿ ಸ್ಪಷ್ಟಪಡಿಸುತ್ತಾನೆ, “ನಕ್ಷತ್ರಗಳು ಕಾಣುತ್ತಿರುವಾಗಲೇಎದ್ದು ಸೂರ್ಯ ನಮನಗೈಯುವುದು ಉತ್ತಮ. ನಕ್ಷತ್ರಗಳು ಅಸ್ತಮಿಸಿ ಸ್ವಲ್ಪವಷ್ಟೆ ಬೆಳಕು ಕಾಣುವಾಗಿನ ಉಪಾಸನೆ ಮಧ್ಯಮ. ಇನ್ನು ಸೂರ್ಯೋದಯವಾದ ಮೇಲೆ ಎದ್ದುಆತನಿಗೆಅಭಿವಂದಿಸುವುದುಅಧಮ”.
ಬ್ರಾಹ್ಮೀ ಮುಹೂರ್ತಅಂತರ್ಮುಖಿಯಾಗಿ ಬ್ರಹ್ಮನನ್ನುಅರಿಯಲುಅತ್ಯಂತ ಸೂಕ್ತ ಸಮಯ. ಇದನ್ನೇ ಉಷಃ ಕಾಲ ಅಂತಲೂಕರೆಯುತ್ತಾರೆ. ಉಷೆ ಸೂರ್ಯನ ಪತ್ನಿಯಂತೆ. ಸೂರ್ಯ ಬೆಳಗ್ಗೆ ಎದ್ದುಆಕೆಯನ್ನೇ ಹಿಂಬಾಲಿಸಿ ಬರುತ್ತಾನಂತೆ! ಹಾಗಂತ ಪುರಾಣಗಳು ಬಣ್ಣಿಸುತ್ತವೆ. ಇಷ್ಟಕ್ಕೂ ರಾತ್ರಿ ಕಳೆದು ಹಗಲಾಗುವಾಗ ಮತ್ತು ಹಗಲು ಮುಗಿದುರಾತ್ರಿಆರಂಭವಾಗುವಾಗಿನ ಈ ಸಂಧಿ ಕಾಲವನ್ನು ಹೇಗೆ ಸಂಬೋಧಿಸಬೇಕೆಂಬ ಕಲ್ಪನೆಯೂಜಗತ್ತಿನಲ್ಲಿಯಾರಿಗೂಇರಲಿಲ್ಲ. ಭಾರತ ಈ ಸಂಧ್ಯಾಕಾಲಗಳನ್ನು ಗುರುತಿಸಿ ಉಪಾಸನೆಗೆ ಅವನ್ನು ಸೂಕ್ತ ಸಮಯವೆಂದು ನಿರ್ಧಾರ ಮಾಡಿತು. ಈ ಹೊತ್ತಿನಲ್ಲಿಯೇ ಸಾವಿರಾರುಜನ ನದಿ ದಂಡೆಯಲ್ಲಿ ನಿಂತು ಸೂರ್ಯನಿಗೆಅಘ್ರ್ಯ ನೀಡುತ್ತಿದ್ದುದಲ್ಲದೇಗಾಯತ್ರೀ ಮಂತ್ರೋಪಾಸನೆಯನ್ನೂ ಮಾಡುತ್ತಿದ್ದರು. ಸೂರ್ಯನ ಬೆಳಕಿನಲ್ಲಿರುವ ಶಖ್ತಿಯಅರಿವುಅವರಿಗೆಖಂಡಿತವಾಗಿಯೂಇತ್ತು. ಬೆಳಗಿನ ಸೂರ್ಯ ಕಿರಣಗಳಿಗೆ ಮೈಯೊಡ್ಡಿದರೆಇಡಿಯ ದಿನಕ್ಕೆ ಬೇಕಾದ ಶಕ್ತಿ ಸಂಗ್ರಹವಾಗುವುದರಕುರಿತುಅವರು ತಿಳಿದೇ ಇದ್ದರು.
ಆಧುನಿಕ ವಿಜ್ಞಾನದ ಪ್ರಕಾರ ನಮ್ಮ ನಿದ್ದೆಮತ್ತುಎಚ್ಚರದಚಕ್ರಜಾಗೃತವಾಗಿರೋದೇ ಸೂರ್ಯನಿಂದ. ಸೂರ್ಯನ ಕಿರಣಗಳು ನಮ್ಮ ಮಿದುಳಿನ ಬೆಳಕನ್ನು ಗ್ರಹಿಸುವ ನರದ(ಆಪ್ಟಿಕ್ ನರ್ವ್)ಮೇಲೆ ಬಿದ್ದೊಡನೆ ಮಿದುಳು ನಿದ್ದೆತರುವ ಮೆಲಟೋನಿನ್ ಹಾರ್ಮೋನು ಸ್ರವಿಸುವುದನ್ನು ನಿಲ್ಲಿಸಿಬಿಡುತ್ತದೆ. ಅದರೊಟ್ಟಿಗೇ ಸೆರಿಟೋನಿನ್ ಎಂಬ ದ್ರವ ಹೆಚ್ಚು ಸ್ರವಿಸಲಾರಂಭಿಸಿ ಜಾಗೃತಾವಸ್ಥೆಯಲ್ಲಿ ನಮ್ಮನ್ನುಇಡುವುದಲ್ಲದೆ, ಸಂತೋಷವಾಗಿರುವಂತೆಯೂ ನೋಡಿಕೊಳ್ಳುತ್ತದೆ. ಅದಕ್ಕಾಗಿಯೇ ನಮ್ಮವರು ಮುಂಜಾವಿನ ಸೂರ್ಯನೆದುರು ಕುಳಿತಿರುತ್ತಿದ್ದುದು. ಸುಮ್ಮನೆ ಕುಳಿತಿರುವುದು ಬೇಡವೆಂದೇಧರ್ಮದಚೌಕಟ್ಟು ಜೋಡಿಸಿ ಸೂರ್ಯಶಕ್ತಿಯನ್ನು ಪ್ರಚೋದಕ ಶಕ್ತಿಯಾಗಿಸುವಉಪಾಯ ತೋರಿಸಿಕೊಟ್ಟಿದ್ದು.
ನಾವು ಬಹಳ ದೂರ ಬಂದಿದ್ದೇವೆ. ರಾತ್ರಿಯಕಣ್ಣುಕೋರೈಸುವ ಬೆಳಕು ನಮ್ಮ ಬೆಳಕನ್ನು ಗ್ರಹಿಸುವ ನರಗಳಲ್ಲಿ ಗೊಂದಲವೆಬ್ಬಿಸಿಬಿಡುತ್ತದೆ. ಅದಕ್ಕೆಯಾವುದು ಬೆಳಗು –ರಾತ್ರಿ ಎಂಬುದರ ಅರಿವಾಗದೇ ದೇಹದೊಳಗಿನ ಗಡಿಯಾರ ಏರುಪೇರಾಗಿಬಿಡುತ್ತದೆ. ಜೀವಕೋಶಗಳು ಬಲುಬೇಗ ಸ್ವಾಸ್ಥ್ಯ ಕಳೆದುಕೊಂಡುಬಿಡುತ್ತವೆ. ಹೀಗಾಗಿಯೇ ನಾವು ಸದಾರೋಗಿಷ್ಠರು. ಅದಕ್ಕೆಂದೇ ವೈದ್ಯರು ಬೆಳಗಾಗೆದ್ದು ಸೂರ್ಯನ ಕಿರಣಗಳಿಗೆ ಮೈಯೊಡ್ಡಿಅಂತ ಹೇಳಿದ್ದು. ದೇಹಜರ್ಝರಿತವಾದ ಮೇಲೆ ವೈದ್ಯರ ಮಾತು ಕೇಳಲು ಹಿಂದೆ ಮುಂದೆ ನೋಡದ ನಾವು, ಬಾಲ್ಯದಲ್ಲಿಯೇ ಋಷಿಗಳ ಮಾತು ಪಾಲಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಅಲ್ಲವೇ?
ವಿಜ್ಞಾನದ ಅಮಲಿನಲ್ಲಿರುವಅಮೆರಿಕನ್ನರಿಗೂಇದರಅರಿವಾಗಿದೆ. ಸೂರ್ಯಕಾಣದ ಚಳಿಗಾಲದ ಹೊತ್ತಲ್ಲಿಅಮೆರಿಕದ ಶೇಕಡಾ 10ರಷ್ಟು ಜನಮಿದುಳಿನಲ್ಲಿ ಆಗುವ ರಾಸಾಯನಿಕಗಳ ಬದಲಾವಣೆಯಿಂದ ತೊಂದರೆಗೊಳಗಾಗುತ್ತಾರೆ. ಕೆಲಸ ಮಾಡಲಾಗದೆ ತೊಳಲಾಡುತ್ತಾರೆ. ಆಗೆಲ್ಲ ಸಊರ್ಯನಂತೆ ಭಾಸವಾಗುವದೊಡ್ಡದೊಡ್ಡ ಬಲ್ಬುಗಳನ್ನು ಅವರಎದುರಿಗಿಟ್ಟು ಸೆರಿಟೊನಿನ್ ಸ್ರವಿಸುವಂತೆ ಮಾಡಲಾಗುತ್ತದೆ. ಅನೇಕ ಬಾರಿ ಈ ಪ್ರಯೋಗಕೈಕೊಟ್ಟುಅನೇಕರು ಮಾನಸಿಕ ಖಿನ್ನತೆಗೆ ಒಳಗಾಗಿ ಹುಚ್ಚರೂಆಗಿಬಿಡುತ್ತಾರೆ!
ಸೂರ್ಯನನ್ನು ನಮ್ಮವರು ಗತಿಶೀಲ ಎಂದದ್ದು ಅದಕ್ಕೇ. ಆತತಾನಷ್ಟೆ ಚಲಿಸುವುದಿಲ್ಲ; ಎಲ್ಲರೊಳಗೂ ತಾನೇ ಹೊಕ್ಕು ಚಲಿಸುವಂತೆ ಮಾಡುತ್ತಾನೆ. ಬೆಳಗಾಗುವುದರೊಂದಿಗೆ ಉತ್ಸಾಹ ಮೂಡುವುದುಇದರಿಂದಲೇ. ಸಂಜೆಯಾಗುತ್ತದಣಿದದೇಹ ಮಲಗಿಕೊಳ್ಳಲು ಕಾತರಿಸುವುದುಇದಕ್ಕೇ. ದೇಹದಣಿಯಲು ಕೆಲಸ ಮಾಡಲೇಬೇಕೆಂದಿಲ್ಲ, ಸೂರ್ಯ ಅಸ್ತಮಿಸಿದರೆ ಸಾಕು! ಹೀಗಿದೆ ಸೂರ್ಯ ಮತ್ತು ನಮ್ಮದೇಹದ ಸಂಬಂಧ.
ಹೌದು.‘ಆರೋಗ್ಯ ಮತ್ತು ಸೂರ್ಯ’ ಈ ಕುರಿತಂತೆಯಾರಿಗೂ ಅನುಮಾನವೇಇಲ್ಲ. ಆದರೆ ಭಾರತೀಯರುಒಂದು ಹೆಜ್ಜೆ ಮುಂದೆಹೋಗಿ, ಅವನನ್ನು ಬುದ್ಧಿಶಕ್ತಿಯ ಪ್ರಚೋದಕ ಎಂತಲೂ ಭಾವಿಸಿ ಆರಾಧಿಸುತ್ತಾರೆ. ಒಟ್ಟಾರೆ ಗಾಯತ್ರಿ ಮಂತ್ರದ ಅರ್ಥವೇ ಧೀಶಕ್ತಿಯನ್ನು ಪ್ರಚೋದಿಸುವುದು ಅಂತ. ಭಗವದ್ಗೀತೆಯ ನಾಲ್ಕನೆ ಅಧ್ಯಾಯ ಶುರುವಾಗುವುದೇ ಕೃಷ್ಣನ ಅಚ್ಚರಿಯ ಮಾತುಗಳಿಂದ, “ನಾನು ಅವಿನಾಶಿಯಾದ ಈ ಯೋಗವನ್ನುಕಲ್ಪದಆದಿಯಲ್ಲಿ ಸೂರ್ಯನಿಗೆ ಹೇಳಿದೆ. ಸೂರ್ಯ ಮನುವಿಗೆ, ಮನು ಇಕ್ಷ್ವಾಕುವಿಗೆ ಹೇಳಿದ”–ಎಂದು ಮುಂದುವರೆಯುತ್ತದೆ. ತೈತ್ತಿರೀಯ ಬ್ರಾಹ್ಮಣವೂ“ಸೂರ್ಯ ಮುಂಜಾನೆಋಗ್ವೇದದೊಂದಿಗೆ ಉದಯಿಸಿದರೆ, ಯಜುರ್ವೇದದೊಂದಿಗೆ ಮಧ್ಯೆ ನಿಂತಿರುತ್ತಾನೆ. ಅಸ್ತಂಗತನಾಗುವ ವೇಳೆಗೆ ಸಾಮವೇದದಿಂದ ಪರಿಪುಷ್ಟವಾಗಿರುತ್ತಾನೆ”ಎಂದುಅಭಿಪ್ರಾಯಪಡುತ್ತದೆ.
ಶ್ರೇಷ್ಠ ಋಷಿ ಯಾಜ್ಞವಲ್ಕ್ಯರಂತೂ ಸೂರ್ಯನ ಶಿಷ್ಯರೇ! ಆಕತೆಯೇ ಸ್ವಾರಸ್ಯಕರ. ವೈಶಂಪಾಯನರ ಶಿಷ್ಯರಾಗಿದ್ದ ಯಾಜ್ಞ್ಯವಲ್ಕ್ಯರು ಸಣ್ಣ ವಿಚಾರವೊಂದಕ್ಕೆ ಗುರುಗಳೊಂದಿಗೆ ಜಿದ್ದಿಗೆ ಬಿದ್ದರು. ಕೋಪದಿಂದ ಗುರುಗಳು ತಾವುಕೊಟ್ಟ ವಿದ್ಯೆ ಮರಳಿ ಕೊಡಲು ಆಗ್ರಹಿಸಿದರು. ಯಾಜ್ಞವಲ್ಕ್ಯರೇನೂಕಡಿಮೆ ಸಾಧ್ಯತೆಯವರಲ್ಲ. ಅಲ್ಲಿಯೇ ಇದ್ದ ತಿತ್ತಿರಿಯೇ ಮೊದಲಾದ ಋಷಿಗಳೆದುರಿಗೆ ಇಷ್ಟೂ ದಿನ ಕಲಿತಿದ್ದನ್ನು ಹಾಗು ಹಾಗೆಯೇ ಒಪ್ಪಿಸಿಯೂಬಿಟ್ಟರು. ಹೀಗೆ ಪಡೆದುಕೊಂಡಿದ್ದನ್ನು ಆ ಋಷಿಗಳು ಮುಂದಿನ ಪೀಳಿಗೆಗೆ ಮುಟ್ಟಿಸಿದರು.ಅದು ಕೃಷ್ಣ ಯಜುರ್ವೇದವೆನಿಸಿತು. ಇತ್ತ ಯಾಜ್ಞವಲ್ಕ್ಯರು ಸೂರ್ಯನನ್ನೆ ಆರಾಧಿಸಿ ತಪಗೈದು ಒಲಿಸಿಕೊಂಡರು. ಅವರ ಜ್ಞಾನದ್ವಾರಗಳು ತೆರೆದುಕೊಂಡವು. ನಾರಾಯಣಪ್ರಣೀತವಾದಯಜುರ್ವೇದಅವರೆದುರಿಗೆಅನಾವರಣಗೊಂಡಿತು. ಅದು ಶುಕ್ಲಯಜುರ್ವೇದವಾಯ್ತು. ಹಾಗೆಂದು ವೇದಕಥೆಗಳು ಹೇಳುತ್ತವೆ.
ಸೂರ್ಯನಿಗೆ ನಮ್ಮ ಬುದ್ಧಿಯನ್ನು ಪ್ರಚೋದಿಸುವ ಶಕ್ತಿ ಇದೆಯೇ? ಈ ಪ್ರಶ್ನೆಕಾಡುವಂಥದ್ದೇ. ಇದನ್ನರಿಯಲು ಸ್ವಲ್ಪ ಮೆದುಳಿನ ಸಂರಚನೆ ತಿಳಿಯಬೇಕಾದ್ದು ಅನಿವಾರ್ಯ. ನಮ್ಮ ಮೆದುಳನ್ನು ಸ್ಥೂಲವಾಗಿ ಮೂರು ಭಾಗ ಮಾಡಬಹುದು. ಮುಂಭಾಗ, ಮಧ್ಯಭಾಗ ಮತ್ತು ಹಿಂಭಾಗ. ಮೆದುಳಿನ ಹಿಂಭಾಗ ಬೆನ್ನ ಹುರಿಗೆ ಹೊಂದಿಕೊಂಡಂತೆಇದೆ. ಇದುಎಲ್ಲಕಶೇರುಕ (ಬೆನ್ನ ಹುರಿಇರುವ ಪ್ರಾಣಿ)ಗಳಲ್ಲಿ ಇರುವಂಥದ್ದು. ನಾವು ತಲೆ ಹಾಕುವ ಅಗತ್ಯವೇಇಲ್ಲದ ಉಸಿರಾಟ, ಹೃದಯ ಬಡಿತದಂಥ ಕೆಲಸವನ್ನೆಲ್ಲಇದೇ ಮಾಡಿಸುತ್ತದೆ. ಇದಕ್ಕೆ ಸೇರಿಕೊಂಡ ಮೇಲ್ಭಾಗವೇ ಮೆದುಳಿನ ಮಧ್ಯಭಾಗ. ಇದು ಪ್ರತಿಕ್ರಿಯಾತ್ಮಕ ಕ್ರಿಯೆಗಳನ್ನು ನಡೆಸುತ್ತದೆ. ನೊಣ ಬಂದೊಡನೆಕಣ್ಮುಚ್ಚುತ್ತೇವಲ್ಲ, ಹಗ್ಗ ಕಂಡೊಡನೆ ಹಾವೆಂದು ಸರಕ್ಕನೆ ಹಿಂದೆ ಸರಿದುಬಿಡುತ್ತೇವಲ್ಲ, ಅಷ್ಟು ವೇಗದ ಪ್ರತಿಕ್ರಿಯೆ ಮೆದುಳಿನ ಮದ್ಯಭಾಗದಕೊಡುಗೆ. ಇನ್ನು, ಮಾನವ ಮೆದುಳಿನ ಅತ್ಯಂತ ಮುಂದುವರೆದ ಭಾಗವೇ ಮೆದುಳಿನ ಮುಂಭಾಗ. ಮೆದುಳು ಅಂತ ನಾವು ನೋಡೋದುಇದೇ ಭಾಗವನ್ನೆ. ಈ ಭಾಗ ಕ್ರಿಯಾಶೀಲವಾಗಿದ್ದಷ್ಟೂ ನಮ್ಮ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಯೋಜನೆರೂಪಿಸುವ ಕ್ಷಮತೆ ಬಲಿಯುತ್ತದೆ. ಕಲ್ಪನೆಯ ಶಕ್ತಿ, ಆಲೋಚನಾ ಶಕ್ತಿ ಹೆಚ್ಚುವುದಕ್ಕೂ ಮೆದುಳಿನ ಈ ಭಾಗದಕೊಡುಗೆಯೇದೊಡ್ಡದು! ಮೆದುಳಿನ ಈ ಭಾಗಜೀವಂತಿಕೆಯಿಂದಕೂಡಿದ್ದಷ್ಟೂ ಮನುಷ್ಯ ಹೆಚ್ಚು ಕಲೆಗಾರನಾಗುತ್ತಾನೆ, ವಿಜ್ಞಾನಿಯಾಗುತ್ತಾನೆ, ಋಷಿಯೂಆಗುತ್ತಾನೆ! ಇದರ ಸಾಮರ್ಥ್ಯ ಕಡಿಮೆಯಾದಂತೆಲ್ಲ ಆತ ಪಶುವಿನಂತಾಗುತ್ತಾನೆ. ಕೋಪ – ದರ್ಪಗಳು ಹೆಚ್ಚಾಗುತ್ತವೆ. ಹಾಗಂತ ಹೇಳಿರೋದು, ಪುರಾಣಕಾರರಲ್ಲ, ಸ್ಮೃತಿಕಾರರೂ ಅಲ್ಲ, ಅಮೆರಿಕಾದ ನರರೋಗಅಧ್ಯಯನ ಸಂಸ್ಥೆಯ ವಿಜ್ಞಾನಿಗಳು!
ಇದರ ಪರಿಪೂರ್ಣಜ್ಞಾನದಿಂದಾಗಿಯೇ ನಮ್ಮವರು ಮೆದುಳಿನ ಭಾಗಕ್ಕೆ ಶಕ್ತಿ ತುಂಬಲೆಂದು ಸೂರ್ಯನಿಗೆ ನಮಸ್ಕರಿಸುವ ಪದ್ಧತಿ ಅಭಿವೃದ್ಧಿಪಡಿಸಿದರು. ಸೂರ್ಯ ಶಕ್ತಿಯ ಕ್ರೋಢೀಕರಣಕ್ಕೆ ಛಂದಸ್ಸುಗಳು ಹುಟ್ಟಿಕೊಂಡವು. ಮಂತ್ರಗಳ ರಚನೆಯಾಯ್ತು. ಸೂರ್ಯ ರಶ್ಮಿಗಳನ್ನು ವಿದ್ಯುತ್ ಆಗಿ ಪರಿವರ್ತಿಸಲು ಮಾಳಿಗೆಯ ಮೇಲೆ ಫೋಟೋವೋಲ್ಟಾಯಿಕ್ ಸೆಲ್‍ಗಳ ಪ್ಯಾನೆಲ್‍ಜೋಡಿಸುವುದಿಲ್ಲವೆ? ಮಂತ್ರಗಳೂ ಅದೇ ಕೆಲಸವನ್ನು ದೇಹದೊಳಗೆ ಮಾಡುತ್ತವೆ, ಬೌದ್ಧಿಕ ಶಕ್ತಿಯನ್ನು ಪ್ರಚೋದಿಸುತ್ತವೆ. ಮಂತ್ರಗಳು – ಛಂದಸ್ಸುಗಳು ನರಗಳ ಮೇಲೆ ಬೀರುವ ಪ್ರಭಾವಗಳ ಅಧ್ಯಯನಕ್ಕೆ ಸೂಕ್ತಯಂತ್ರಗಳನ್ನು ಕಂಡುಹಿಡಿದರೆ, ಈ ಸತ್ಯ ಅನಾವರಣಗೊಳ್ಳಬಹುದು. ಅದನ್ನು ಅರ್ಥೈಸಿಕೊಳ್ಲಬಲ್ಲಷ್ಟು ವಿಜ್ಞಾನವೇ ಬೆಳೆಸಿಲ್ಲದಿರುವಾಗ ಅರೆಬರೆಜ್ಞಾನದಿಂದ ಮಂತ್ರದೊಳಗೆ ಶಕ್ತಿಯಿಲ್ಲವೆನ್ನುವುದು ಸರಿಯಾ?
ಗಾಯತ್ರಿ ಮಂತ್ರವನ್ನುಕಂಡವರು ವಿಶ್ವಾಮಿತ್ರರಂತೆ. ತಪಸ್ಸಿಗೆ ಕುಳಿತು ಮೇನಕೆಯಿಂದಾಗಿ ವ್ರತಭಂಗವಾಗಿ ಮತ್ತೆ ಹಠದಿಂದ ಬ್ರಹ್ಮಬಲ ಸಆಕ್ಷಾತ್ಕರಿಸಿಕೊಂಡ ವಿಶ್ವಾಮಿತ್ರರು ವಸಿಷ್ಠರ ಪಾದಗಳಿಗೆ ಎರಗಿದಾಗ ಹೊರಬಂದ ಶ್ರೇಷ್ಠ ಮಂತ್ರವಂತೆಇದು. ಸಂಧ್ಯಾ ಕಾಲದಲ್ಲಿ ಇದನ್ನು ಉಚ್ಚರಿಸುವಾಗ ಮೆದುಳಿನ ಮುಂಭಾಗದ ಮೇಲೆ ವಿಶೇಷ ಪರಿಣಾಮ ಉಂಟು ಮಾಡುತ್ತದೆಎಂಬುದನ್ನು ನಮ್ಮವರುಒಪ್ಪಿದ್ದರು, ಸಿದ್ಧಪಡಿಸಿಕೊಂಡಿದ್ದರು. ಆಧುನಿಕ ವಿಜ್ಞಾನ ಇದನ್ನೇ ಬೇರೆ ಬೇರೆ ಮಾರ್ಗಗಳಿಂದ ಸಾಧಿಸಿಕೊಳ್ಳಲು ಯತ್ನಿಸುತ್ತಿದೆ. 1910ರಲ್ಲಿ ಲಂಡನ್ನಿನ ಕೆಲವು ವಿಜ್ಞಾನಿಗಳು ತಲೆಯ ಹೊರಭಾಗಕ್ಕೆಕೊಟ್ಟ ವಿದ್ಯುತ್ ಶಾಕ್‍ನಿಂದ ನರಗಳು ಪ್ರಭಾವಕ್ಕೆ ಒಳಗಾಗುವುದನ್ನು ಗುರುತಿಸಿದರು. 1985ರಲ್ಲಿ ಇನ್ನಷ್ಟು ವಿಜ್ಞಾನಿಗಳು ಪ್ರಯೋಗ ಮಾಡಿ ನೇರ ವಿದ್ಯುತ್ ಬಳಕೆಯ ಬದಲುಕಾಂತೀಯ ವಿದ್ಯುತ್(ಎಲೆಕ್ಟ್ರೋ ಮ್ಯಾಗ್ನೆಟ್) ಅನ್ನು ಬಳಸಿ ಬೇಕಾದ ನರಗಳನ್ನು ಚುರುಕುಗೊಳಿಸುವ ಪದ್ಧತಿ ಹುಡುಕಿದರು. ಇದನ್ನೇಇಂದು ವೈದ್ಯಕೀಯ ವಿಭಾಗದಲ್ಲಿಟ್ರಾನ್ಸ್‍ಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಷನ್ ಅನ್ನೋದು. ಮಾನಸಿಕ ಖಿನ್ನತೆ, ಸ್ಕಿಜೋಫ್ರೇನಿಯಾದಂತಹ ರೋಗಗಳಿಗೆ ಸೂಕ್ತ ಪರಿಹಾರಇದೆಂದು ವೈದ್ಯರು ಹೇಳುತ್ತಾರೆ. ಪ್ರಯೋಗದಲ್ಲಿ ಸ್ವಲ್ಪಎಡವಟ್ಟಾದರೂವ್ಯಕ್ತಿ ಮೂರ್ಛೆ ಹೋಗುವ ಅಥವಾ ಮೆದುಳು ಸ್ವಾಧೀನ ಕಳೆದುಕೊಳ್ಳುವ ಸಥಿತಿಗೂತಲುಪಬಹುದೆಂದುಎಚ್ಚರಿಕೆಯನ್ನೂಕೊಡುತ್ತಾರೆ.
ಈಗ ಸಊರ್ಯನತ್ತ ಮರಳಿ ಬನ್ನಿ. ವಿದ್ಯುತ್ತನ್ನುಕೊಟ್ಟು ನರಗಳನ್ನು ಉದ್ದೀಪಿಸುವ ಪ್ರಯತ್ನಇಂದು ವಿಜ್ಞಾನಿಗಳು ಮಾಡುತ್ತಿದ್ದಾರೆ; ವಿದ್ಯುತ್ತಿನ ಮೂಲಸ್ರೋತವಾದ ಸೂರ್ಯನೆದುರಿಗೆ ನಿಂತು ನರಗಳನ್ನು ಪ್ರದೀಪ್ತಗೊಳಿಸುವ ಶ್ರೇಷ್ಠ ಪದ್ಧತಿಯನ್ನು ನಮ್ಮವರುಅಂದೇ ವಿಕಾಸಗೊಳಿಸಿದ್ದರು. ನಮ್ಮ ಉಪಾಸನೆ ಪರಿಸರಕ್ಕೆಅದೆಷ್ಟು ಪೂರಕವೆಂದರೆ, ಅಲ್ಲಿ ದುಷ್ಪರಿಣಾಮಗಳಾಗುವ ಹೆದರಿಕೆಯೇಇಲ್ಲ!
ಅಂದಹಾಗೆಗೀತೆಯಲ್ಲಿ ಶ್ರೀಕೃಷ್ಣತಾನು ವೈಶ್ವಾನರನಾಗಿಜಠರದಲ್ಲಿ ಕುಳಿತಿರುತ್ತೇನೆ ಅಂದಿರೋದನ್ನು ಕೇಳಿದ್ದೀರಲ್ಲಾ! ವೈದ್ಯಕೀಯಜಗತ್ತು ಹೊಟ್ಟೆಯನ್ನು ಸೆಕೆಂಡ್ ಬ್ರೈನ್ (ಎರಡನೇ ಮೆದುಳು) ಎನ್ನುತ್ತವೆ. ಮೆದುಳಿನಲ್ಲಿ ಉ0ಟಾಗುವ ಎಲ್ಲ ಬಗೆಯರಾಸಯನಿಕ ಪ್ರಕ್ರಿಯೆಗಳು ಹೊಟ್ಟೆಯಲ್ಲಾಗುತ್ತವೆ0ನ್ದರ್ಥ . ಅದ್ದಕ್ಕೆ ಹೊಟ್ಟೆ ಸರಿಯಾಗಿದ್ದರೆಆರೋಗ್ಯ ಎ0ದು ಹೇಳಿ ನಮ್ಮವರುಅದರರಕ್ಷಣೆಗೂ ಅಷ್ಟೆ ಗಮನ ಕೊಟ್ಟಿದ್ದರು.
ಹೌದು. ಭಾರತದ ವಿಶ್ವಗುರುತ್ವದ ಹಿಂದಿನ ಶಕ್ತಿಯೇಅದು. ನಾವು ಪ್ರಕೃತಿಯ ರಹಸ್ಯಗಳನ್ನು ಭೇದಿಸಿದರೆï,ಜಗತ್ತಿನಜನರೆಲ್ಲ ಸುತ್ತಣ ಪ್ರಕೃತಿ ನಮ್ಮ ಅಡಿಯಾಳೆಂಬಂತೆ ಶೋಷಿಸಿ ಪ್ರಭುತ್ವ ಸ್ಥಾಪಿಸಲು ಹೆಣಗಾಡುತ್ತಿದ್ದಾರೆ. ಭಾರತ ಪ್ರಕೃತಿಯನ್ನು ಪ್ರೀತಿಸಿ ಅದನ್ನು ಒಲಿಸಿಕೊಂಡೇ ಬದುಕು ನಡೆಸುವುದನ್ನು ಹೇಳಿಕೊಟ್ಟಿದೆ. ಹೀಗಾಗಿಯೇಇಲ್ಲಿದೇಹದಿಂದ ಹಿಡಿದು ವಿಶ್ವದವರೆಗೆಒಂದು ಸೂಕ್ಷ್ಮವಾದಅನುಬಂಧವಿದೆ. ದೇಹದ ಪ್ರತಿಯೊಂದುಜೀವಕೋಶವೂ ವಿಶ್ವದ ಮಹತ್ತಿನೊಂದಿಗೆ ಯಾರಿಗೂ ಕೇಳದ ಸೂಕ್ಷ್ಮ ಭಾಷೆಯಲ್ಲಿ ಸಂವಾದಿಸುತ್ತಇರುತ್ತದೆ. ಈ ಸೂಕ್ಷ್ಮ ಸಂವಾದದಿಂದಾಗಿಯೇ ಪ್ರಕೃತಿಯೂತನ್ನನ್ನುತಾನು ಅನಾವರಣಗೊಳಿಸಿಕೊಳ್ಳೋದು. ಅದಕ್ಕೇ ಇಲ್ಲಿಯಾವ ಋಷಿಯೂ ಮಂತ್ರವನ್ನು‘ಕಂಡುಹಿಡಿದ’ಅನ್ನುವುದಿಲ್ಲ. ಬದಲಿಗೆದರ್ಶನ ಮಾಡಿಕೊಂಡಎನ್ನಲಾಗುತ್ತದೆ. ಪ್ರಕೃತಿಯ ಸತ್ಯಅವನೆದುರಿಗೆಗೋಚರವಾದ ರೀತಿ ಅದು. ಇದರಿಂದಾಗಿಯೇ ಸಾವಿರಾರು ವರ್ಷಗಳ ಹಿಂದೆಅವರು ಹೇಳಿರುವುದನ್ನು ಇಂದು ಪ್ರಯೋಗಾಲಯಗಳಲ್ಲಿ ಸಿದ್ಧಪಡಿಸುವುದಷ್ಟೆ ನಮ್ಮ ಕೆಲಸ. ಅಷ್ಟೇ ಅಲ್ಲ, ಅವರು ಹಾಕಿಕೊಟ್ಟರಾಜಮಾರ್ಗದಿಂದದೂರ ಸರಿದಷ್ಟೂಅದೆಷ್ಟು ಕಷ್ಟಕೋಟಲೆಗಳನ್ನು ಅನುಭವಿಸುತ್ತಿದ್ದೇವೆಂಬ ಅರಿವೂ ನಮಗಾಗುತ್ತದೆ. ಪ್ರಪಂಚ ಮಾರ್ಗ ಸಾಕು, ಮುಕ್ತಿಯ ಯೋಗ ಮಾರ್ಗ ಬೇಕೆಂದುಜಗತ್ತಿಗೆ ಅನ್ನಿಸಿರೋದೂ ಅದ್ಕಕಾಗಿಯೇ.
ಮತ್ತೆ, ಈ ರೀತಿಯ ಬುದ್ಧಿ ಪ್ರಚೋದನೆಗೂ ಆ ಸೂರ್ಯದೇವನೇಕಾರಣ. ನಮಸ್ಕಾರ ಮಾಡೋರು ಮುಜುಗರವೆನ್ನಿಸಿದರೆ ಕೊನೆಪಕ್ಷ ಸಂಧ್ಯಾಕಾಲದಲ್ಲಿ ಸೂರ್ಯನೆದುರಿಗೆ ನಿಂತು ಬುದ್ಧಿ ಪ್ರಚೋದಕ ನರಗಳನ್ನು ಹುರಿಗೊಳಿಸಿ ಹೊಸೆದುಕೊಳ್ಳೋಣ. ಏನಂತೀರಿ?

Saturday 11 July 2015

ಸರ್ವಾಂತರ್ಯಾಮಿ, ಸರ್ವಪ್ರೇರಕ ಸೂರ್ಯ

ಕಾಲ ಗಣನೆಯ ಚರ್ಚೆ ಬಂದಾಗ ಜಗತ್ತಿನ ಯಾವ ವಿಜ್ಞಾನಿಯೂ ಭಾರತವನ್ನು ಕಡೆಗಣಿಸುವುದು ಸಾಧ್ಯವೇ ಇಲ್ಲ. ಈ ವಿಚಾರದಲ್ಲಿ ಜಗತ್ತಿನ ಆಧುನಿಕ ಮತಗಳೂ, ಮತ ಗ್ರಂಥಗಳೂ ಹಿಂದೂ ಚಿಂತನೆಗಳಿಗಿಂತ ಬಲು ಹಿಂದು! ಅನುಮಾನವೇ ಇಲ್ಲ. ‘ವಿಶ್ವದ ಕೇಂದ್ರ ಭೂಮಿ. ಸೂರ್ಯನೂ ಇದೇ ಭೂಮಿಯನ್ನು ಸುತ್ತುತ್ತಾನೆ’ ಹಾಗಂತ ಸೆಮೆಟಿಕ್ ಮತಗಳು ನಂಬಿದ್ದವು.  ದೇವರ ಮಕ್ಕಳು, ಪ್ರವಾದಿಗಳು ಇಲ್ಲಿ ಹುಟ್ಟುತ್ತಾರೆಂದರೆ ಇದೇ ಸರ್ವಶ್ರೇಷ್ಠವಾಗಿರಬೇಕೆಂಬ ಸಹಜ ಸಿದ್ಧಾಂತ ಅದು. ಜೊತೆಗೆ ಬೆಳಗಾಗಿ ಎದ್ದಾಗ ಪೂರ್ವಕ್ಕೆ ಕಾಣುವ ಸೂರ್ಯ ಸಂಜೆಯಾಗುವಾಗ ಪಶ್ಚಿಮದಲ್ಲಿ ಅಸ್ತಂಗತನಾಗುತ್ತಾನೆ. ಸಾಮಾನ್ಯನಾದ ಪ್ರತಿಯೊಬ್ಬನಿಗೂ ಸೂರ್ಯನೇ ನಮಗೆ ಪ್ರದಕ್ಷಿಣೆ ಹಾಕುತ್ತಿದ್ದಾನೆ ಅನ್ನಿಸುವುದರಲ್ಲಿ ತಪ್ಪೇನೂ ಇಲ್ಲ. ಪ್ರವಾದಿಗಳು ಅದನ್ನು ಹೇಳಿ ದೃಢಪಡಿಸಿ ಹೋದರು.  ಈಗಲೂ ಈ ವಾಕ್ಯಗಳನ್ನು ದೃಢವಾಗಿ ನಂಬಿರುವ ಅನೇಕರು “ಭೂಮಿ ತಿರುಗುವುದೇ ನಿಜವಾದರೆ ಮೇಲಕ್ಕೆಸೆದ ಚೆಂಡು ಕೆಳಗೆ ಬೀಳುವಾಗ ನಮ್ಮ ಕೈಗೇ ಬೀಳುವುದು ಹೇಗೆ? ಅದು ಪಕ್ಕದಲ್ಲೆಲ್ಲೋ ಹೋಗಿ ಬೀಳಬೇಕಲ್ಲವೆ? “ ಎಂದು ಬಾಲಿಶವಾಗಿ ಪ್ರಶ್ನಿಸುತ್ತಾರೆ. ಪಾಪ. ಇಂತಹವರ ವಿರುದ್ಧ ಅನೇಕ ಶತಮಾನಗಳ ಕಾಲ ವಿಜ್ಞಾನಿಗಳೂ ದನಿಯೆತ್ತಲಾಗದೆ ಕೊರಗಿದ್ದರು. ಕೋಪರ್ನಿಕಸ್, ಗೆಲಿಲಿಯೋರಂಥವರೆಲ್ಲ ಅದೇ ಸಾಲಿಗೆ ಸೇರಿದವರು.
su
ಆದರೆ ಈ ದೇಶ ಹಾಗಲ್ಲ. ಕಣ್ಣಿಗೆ ಕಾಣುವ ಈ ವಿಶ್ವದ ಕೇಂದ್ರ ಸೂರ್ಯನೇ ಎಂಬ ಅರಿವು ಇಲ್ಲಿನವರಿಗೆ ಇತ್ತು. ಸಕಲ ಚರಾಚರಗಳ ಪ್ರೇರಕ ಶಕ್ತಿಯೂ ಅವನೇ ಎಂಬುದೂ ಸ್ಪಷ್ಟವಾಗಿ ಗೊತ್ತಿತ್ತು. ಅದೂ ಒಂದೆರಡು ಸಾವಿರ ವರ್ಷಗಳ ಹಿಂದಲ್ಲ; ಋಗ್ವೇದ ಕಾಲದಿಂದಲೂ ಕೂಡ!
ಸಾಯಣರು ತಮ್ಮ ಋಗ್ವೇದ ಭಾಷ್ಯದಲ್ಲಿ `ಸೂರ್ಯ’ ಪದಕ್ಕೆ ಶ್ರೇಷ್ಠ, ಒಡೆಯ, ಸರ್ವಾಂತರ್ಯಾಮಿ, ಸರ್ವಪ್ರೇರಕ ಎಂಬೆಲ್ಲ ಅರ್ಥ ಹೇಳಿದರೆ; ಯಾಸ್ಕರು ತಮ್ಮ ನಿರುಕ್ತದಲ್ಲಿ ಸಂಚರಿಸುವವ, ಸೃಷ್ಟಿಸುವವ, ಪ್ರೇರೇಪಿಸುವವ ಎಂದೆಲ್ಲ ಗುಣಗಾನ ಮಾಡುತ್ತಾರೆ. ಅಲ್ಲಿಗೆ ಇಂದಿನ ವಿಜ್ಞಾನ ಸೂರ್ಯನ ಕುರಿತಂತೆ ನಡೆಸಿದ ಎಲ್ಲ ಸಂಶೋದನೆಗಳೂ ಇದರೊಳಗೆ ಸೇರಿಕೊಂಡಂತಾಯ್ತು. ನಮ್ಮ ಋಷಿಗಳು ಇಲ್ಲಿಗೇ ನಿಲ್ಲದೆ, ಸ್ಥಾವರ ಮತ್ತು ಜಂಗಮಾತ್ಮಕವಾದ ಪ್ರತಿಯೊಂದಕ್ಕೂ ಸೂರ್ಯನೇ ಅಂತರಾತ್ಮವೆಂದೂ ಬಣ್ಣಿಸಿ ಕೃತಾರ್ಥರಾಗಿದ್ದಾರೆ.
ಹಾಗಂತ ಈ ಲೇಖನ ಮಾಲೆಯುದ್ದಕ್ಕೂ ಬಣ್ಣಿಸಿದ ಸೃಷ್ಟಿಯ ಆದಿಪುರುಷ ಪರಬ್ರಹ್ಮ ಈ ಸೂರ್ಯನಲ್ಲವೆಂಬ ಜ್ಞಾನ ಋಷಿಗಳಿಗಿತ್ತು. ಭಗವದ್ಗೀತೆಯಂತೂ ಆ ಪರಮಾತ್ಮನೆದುರಿಗೆ ಈ ಸೂರ್ಯ ಕಳಾಹೀನವೆಂದು ಹೇಳಿದೆ. ಒಂದಂತೂ ಸ್ಪಷ್ಟ. ನಮ್ಮ ಕಣ್ಣೆದುರಿಗೆ ಕಾಣುವ ಗ್ರಹ – ಉಪಗ್ರಹಗಳ ಈ ಲೋಕಕ್ಕೆ ಸೂರ್ಯನೇ ಅಧಿಪತಿ. ಹೀಗೆ ಅನೇಕ ಲೋಕಗಳು ಸೇರಿ ನಿರ್ಮಾಣಗೊಂಡ ಮಹಾವಿಶ್ವದ ಅಧಿಪತಿ ಮಹಾಸೂರ್ಯ ಪರಮಾತ್ಮ ಎಂದಾಯ್ತು.
ಆ ವಿಶಿಷ್ಟ ಶಕ್ತಿಯಿಂದ ಪ್ರೇರಣೆ ಪಡೆದ ಈ ವಿಶ್ವ ಅದೆಷ್ಟು ಸರಳವಾಗಿದೆ ನೋಡಿ. ಪರಮಾತ್ಮ ತತ್ತ್ವದ ಸುತ್ತ ಸುತ್ತುವ ಇಡಿಯ ವಿಶ್ವ. ಅದರ ಮಿನಿಯೇಚರ್ ನಮ್ಮ ಸೌರ ಮಂಡಲ. ಇಲ್ಲಿ ಸೂರ್ಯನೇ ಪರಮಾತ್ಮ. ನೀವು ಅಣುವಿನ ಮಟ್ಟಕ್ಕೆ ಬಂದರೂ ಹಾಗೆಯೇ. ಪ್ರತಿಯೊಂದು ಪರಮಾಣುವಿನಲ್ಲೂ ಬಲಾಢ್ಯವಾದ ನ್ಯೂಕ್ಲಿಯಸ್ ಎಂಬ ಕೇಂದ್ರ, ಅದರ ಸುತ್ತಲೂ ಗಿರಗಿಟ್ಟಲೆಯಂತೆ ಸುತ್ತುವ ಎಲೆಕ್ಟ್ರಾನುಗಳು! ಇನ್ನು ನಮ್ಮ ವಿಚಾರಕ್ಕೆ ಬಂದರೆ, ಜೀವಕೋಶಗಳೂ ಹಾಗೆಯೇ. ಕೋಶಕ್ಕೊಂದು ಕೇಂದ್ರ, ಅದರ ಸುತ್ತಲೂ ರಚನೆಯಾಗಿರುವ ಜೀವ ಹಂದರ. ಪರಮಾತ್ಮ ತನ್ನಿರುವನ್ನು ಅಣುವಿನಿಂದ ಮಹತ್ತಿನವರೆಗೂ ಏಕಪ್ರಕಾರವಾಗಿ ತೊರಿಸಿಕೊಂಡಿದ್ದಾನೆ. ಹೀಗಾಗಿ “ಅಣೋರಣೀಯಾನ್ ಮಹತೋ ಮಹೀಯಾನ್” ಎಂದಾಗ ಇವೆಲ್ಲವೂ ಹಾದುಹೋಗುವುದು.
ನಮ್ಮ ಕಾಲ ಗಣನೆಯ ಕೇಂದ್ರ ಸೂರ್ಯ. ನಾವು ಹಗಲು ರಾತ್ರಿಗಳ ಲೆಕ್ಕಾಚಾರದಿಂದ ಶುರು ಮಾಡಿ ನಮ್ಮ ಆಯಸ್ಸು, ಭೂಮಿಯ ಆಯು, ವಿಶ್ವದ ಜೀವಾವಧಿಗಳನ್ನೆಲ್ಲ ಲೆಕ್ಕ ಹಾಕುತ್ತೇವಲ್ಲ, ಅದು ಸೂರ್ಯನ ಕಾರಣದಿಂದಲೇ. ಅವನಿಲ್ಲದ ಜಗತ್ತಿನ ಕಲ್ಪನೆ ಅಸಾಧ್ಯ. ನಮಗೆ ಹಗಲಿನ ಬೆಳಕೂ ಅವನದ್ದೇ; ರಾತ್ರಿ ಚಂದ್ರ ಪ್ರತಿಫಲಿಸುವ ಬೆಳಕೂ ಅವನದ್ದೇ! ರಾತ್ರಿಯ ವೇಳೆಗೆ ಮರತಪ್ರಾಯವಾಗುವ ಈ ಜಗತ್ತು ಬೆಳಕಾಗುವ ವೇಳೆಗೆ ಚೇತನವನ್ನು ಆವಾಹಿಸಿಕೊಂಡು ಜಾಗೃತವಾಗಲು ಆತನೇ ಕಾರಣ. ಭೂಮಿಯನ್ನು ಆತ ಆಕರ್ಷಿಸದೆ ಹೋಗಿದ್ದರೆ ಭೂಮಿ ಅದನ್ನು ಪ್ರತಿಭಟಿಸುವ ಜಗನ್ನಾಟಕ ನಡೆಯದೆ ಹೋಗಿದ್ದರೆ ಭೂಮಿಯ ಮೇಲೆ ಜೀವರಾಶಿಗಳು ಇರುತ್ತಲೇ ಇರಲಿಲ್ಲ. ಅರ್ಥವಾಗಲಿಲ್ಲವೆ? ವಿವರಿಸುತ್ತೇನೆ ಇರಿ.
ಭೂಮಿಯನ್ನು ಆದಿಶೇಷ ತಲೆಯ ಮೇಲೆ ಹೊತ್ತುಕೊಂಡಿದ್ದಾನೆ; ಅವನು ಅಲುಗಾಡಿದರೆ ಭೂಮಿಯ ನಾಶವೇ ಸರಿ ಅಂತ ಪುರಾಣಗಳಲ್ಲಿ ಹೇಳಿರುವುದನ್ನು ಕೇಳಿದ್ದು ನೆನಪಿದೆಯಾ? ನಾವೆಲ್ಲ ಇದನ್ನು ಆಡಿಕೊಂಡು ನಕ್ಕವರೇ. ಆದರೆ ವಿಜ್ಞಾನ ಅಧ್ಯಯನ ಹೆಚ್ಚಾದಂತೆ ಈ ಆದಿಶೇಷ ನಮ್ಮೆದುರು ಹೊಸತಾಗಿ ಅನಾವರಣಗೊಂಡ. ಭಾರತದಲ್ಲಿ ದೇವ ದಏವಿಯರ ಪರಿಕಲ್ಪನೆಗಳೆಲ್ಲವೂ ತಾತ್ತ್ವಿಕ ಹಿನ್ನೆಲೆಯುಳ್ಳವೇ ಎಂಬುದು ಅರಿವಾದರೆ, ಈ ಎಲ್ಲ ವೈಜ್ಞಾನಿಕ ಸತ್ಯಗಳ ಸುರುಳಿ ಬಿಚ್ಚುವುದು ಸುಲಭ.
ಸೂರ್ಯನ ಆಕರ್ಷಣ ಶಕ್ತಿ ಅದೆಷ್ಟೆಂದರೆ ಆತ ಭೂಮಿಯೂ ಸೇರಿದಂತೆ ಎಲ್ಲ ಗ್ರಹಗಳನ್ನು ತನ್ನೊಡಲೊಳಗೆ ಸೆಳೆದುಕೊಂಡುಬಿಡಲು ಸಿದ್ಧನಾಗಿಯೇ ಇರುತ್ತಾನೆ. ಅದಕ್ಕೇ ಅವನನ್ನು ಮಾರ್ತಾಂಡ ಎನ್ನೋದು. ಗೋಬಲ ಮಹರ್ಷಿಗಳ ಪ್ರಕಾರ ಮಾರ್ತಾಂಡ ಎಂದರೆ ಪ್ರಪಂಚದ ವಿಧ್ವಂಸಕ್ಕೆ ಕಾರಣನಾಗುವ ಪ್ರಳಯಕಾರಿ ಎಂದರ್ಥ. ಆತ ಸದಾ ಕಾಲ ಮಾರ್ತಾಂಡರೂಪೀ ಬಲವೊಂದನ್ನು ಭೂಮಿಯ ಮೇಲೆ ಹಾಕುತ್ತಲೇ ಇರುತ್ತಾನೆ. ಇತ್ತ ಭೂಮಿಯೂ ತನ್ನೊಡಲ ಸಾಮಥ್ರ್ಯವಷ್ಟನ್ನೂ ಬಗೆದು ಪ್ರಳಯವಾಗುವುದನ್ನು ತಡೆಗಟ್ಟುತ್ತಾಳೆ. ಸೂರ್ಯ ಭೂಮಿಯ ಮೇಲೆ ಹಾಕುವ ಬಲದಲ್ಲಿ ಭೂಮಿ ಸೂರ್ಯನ ಮೇಲೆ ಹಾಕುವ ಬಲವನ್ನು ಕಳೆದರೆ ಉಳಿಯುವ ಶೇಷವಿದೆಯಲ್ಲ. ಅದನ್ನೇ ನಮ್ಮವರು ಅತ್ಯಂತ ಪ್ರಾಚೀನವಾದ ‘ಆದಿಶೇಷ’ ಎಂದು ಕರೆದದ್ದು! ಈ ಆದಿಶೇಷವೇ ಭೂಮಿಯನ್ನು ಸೂಕ್ತ ಸ್ಥಾನದಲ್ಲಿ ಹಿಡಿದು ನಿಲ್ಲಿಸಿರೋದು. ಈ ಆದಿಶೇಷ ಏರುಪೇರಾದರೆ ಒಂದೋ ಭೂಮಿ ಸೂರ್ಯನೊಳಗೆ ಸೇರಿ ಹೋಗುತ್ತದೆ ಇಲ್ಲವೇ ಕಕ್ಷೆ ಬದಲಾಯಿಸಿಬಿಡುತ್ತದೆ. ಹೇಗಾದರೂ ಪ್ರಳಯ ಖಾತ್ರಿ. ಯಾವ ಜೀವಿಯೂ ಜೀವಿಸಲು ಭೂಮಿ ಯೋಗ್ಯವಾಗಿ ಉಳಿಯೋದಿಲ್ಲ.
ರಾಕ್ಷಸರ ಉಪಟಳ ಹೆಚ್ಚಾದಾಗ ಭೂದೇವಿ ಭಾರದಿಂದ ನಲುಗಿ ವಿಷ್ಣುವಿನ ಬಳಿ ಸಾಗಿ ಕಣ್ಣೀರ್ಗರೆಯುತ್ತಾಲೆಂಬುದನ್ನು ಎಲ್ಲ ಪುರಾಣಗಳಲ್ಲಿಯೂ ನೋಡುತ್ತೇವಲ್ಲ, ಅದು ಇದೇ ಆದಿಶೇಷ ಅಲುಗಾಡುವ ಪ್ರಸಂಗ. ಆಗಲೇ ಅವತಾರಗಳುದಿಸಿ ಕೆಡುಕನ್ನು ಕಡಿಮೆ ಮಾಡಿ ಭೂಮಿಯ ಶಕ್ತಿ ಹೆಚ್ಚಿಸುತ್ತಾರೆ. ರಾಮ ಕಾಡಿನಲ್ಲಿ ರಾಕ್ಷಸರ ಸಂಹಾರ ಮಾಡಿದನೆಂದರೆ ಕಾಡುಗಳ್ಳರ, ಮರ ಕಡಿಯುವವರ, ಪ್ರಾಣಿ ಹಿಂಸಕರನ್ನು ನಾಶ ಮಾಡಿದ ಎಂಬ ಅರ್ಥವೇ ಇರಬೇಕು; ಕೃಷ್ಣ ಯಮುನೆಯಲ್ಲಿ ಕಾಳಿಂಗನ ಮರ್ದಿಸಿದನೆಂದರೆ ನದಿಗೆ ವಿಷ ಕಕ್ಕುತ್ತಿದ್ದ ಜನರನ್ನು ನಾಶಗೈದಿರಬೇಕು. ಭೂಮಿಯನ್ನು ತಣಿಸಿ ಆಕೆಗೆ ಶಕ್ತಿಯನ್ನೇನೋ ಈ ರೀತಿ ತುಂಬಿಸಿದ್ದಾಯ್ತು. ಸೂರ್ಯನ ಮಾರ್ತಾಂಡರೂಪೀ ಬಲವನ್ನು ತಣಿಸುವುದು ಹೇಗೆ?
ಅದಕ್ಕೇ ಭಾರತದ ಋಷಿಗಳು ಉದಯಿಸುವ ಮತ್ತು ಅಸ್ತಮಿಸುವ ಸೂರ್ಯನಿಗೆ ಅಘ್ರ್ಯ ನೀಡುವ ಪರಂಪರೆ ತಂದರು. ಇದನ್ನೆ ಸಂಧ್ಯಾವಂದನೆ, ಸಂಧ್ಯಾ ಉಪಾಸನೆ ಎಂದು ಕರೆದರು. ತೈತ್ತಿರೀಯ ಆರಣ್ಯಕದ ಪ್ರಕಾರ ರಾಕ್ಷಸರು ಭಗವಂತನ ಕುರಿತು ತಪಸ್ಸು ಮಾಡಿ ಸೂರ್ಯನೊಡನೆ ಸದಾಕಾಲ ಕಾದಾಡುವ ವರ ಪಡೆದುಕೊಂಡರಂತೆ. ರಾಕ್ಷಸರನ್ನು ಕತ್ತಲಿಗೆ ಹೋಲಿಸುವುದಾದರೆ, ಕತ್ತಲು – ಬೆಳಕುಗಳ ಕದನವನ್ನೆ ಹಗಲು – ರಾತ್ರಿ ಎಂದು ಕರೆಯಬಹುದು ತಾನೆ? ಸಂಧ್ಯಾವಂದನೆ ಮಾಡುವಾಗ ನೀರನ್ನು ಅಭಿಮಂತ್ರಿಸಿ ತನ್ನೊಳಗಿನ ಪಾಪಪುರುಷನನ್ನು ನಾಶ ಮಾಡಿ ಪವಿತ್ರವಾಗುವ ವ್ಯಕ್ತಿ ಗಾಯತ್ರಿ ಮಂತ್ರದ ಉಚ್ಚಾರಣೆಯಿಂದಿಗೆ ಸೂರ್ಯನಿಗೆ ಅಘ್ರ್ಯ ಸಮರ್ಪಿಸುತ್ತಾನೆ. ಹೀಗೆ ಸಮರ್ಪಿಸಿದ ಅಘ್ರ್ಯವೇ ಸೂರ್ಯನಿಗೆ ವಜ್ರಕವಚದಂತೆ. ಅದರ ಮೂಲಕವೇ ಆತ ರಾಕ್ಷಸರೊಂದಿಗೆ ಕಾದಾಡಿ ಜಯಶೀಲನಾಗುತ್ತಾನಂತೆ. ಆತನ ಗೆಲುವು ನಮಗೆ ಬೆಳಕು!
ಹೌದು. ನನಗೆ ಗೊತ್ತು. ಇಷ್ಟನ್ನೂ ಕೇಳುವಾಗ ನಿಮಗೆ ನಗು ಬರುತ್ತಿರಬಹುದು. ನಾವು ಅಘ್ರ್ಯ ನೀಡದಿದ್ದರೆ ಬೆಳಕೇ ಆಗುವುದಿಲ್ಲವೇನೋ ಎಂದೂ ಕೇಳಬಹುದು. ನಾನು ಕೊಡುವ ಯಾವ ಉತ್ತರವೂ ನಿಮ್ಮನ್ನು ಸಮಾಧಾನ ಪಡಿಸಲಾರದು. ಆದರೆ ಒಂದಂತೂ ಸತ್ಯ. ಜಗತ್ತಿನ ಅನೇಕ ರಾಷ್ಟ್ರಗಳು ಪ್ರಖರ ಸೂರ್ಯ ರಷ್ಮಿಯಿಂದ ಬೆಂದು ಹೋಗಿವೆ. ಅಲ್ಲೆಲ್ಲ ಕುಡಿಯುವ ನೀರಿಗಿಂತ ಪೆಟ್ರೋಲೇ ಅಗ್ಗ. ಇನ್ನೂ ಕೆಲವು ದೇಶಗಳಲ್ಲಿ ಆತನ ಕಿರಣಗಳು ಅದೆಷ್ಟು ಕೋಮಲವೆಂದರೆ ಕುಡಿಯುವ ನೀರು ದ್ರವರೂಪದಲ್ಲಿರದೇ ಮಂಜುಗಡ್ಡೆಯಾಗಿಬಿಟ್ಟಿದೆ. ನೀರು ಬೇಕೆಂದರೆ ಮಂಜು ಕರಗಿಸಿ ಕುಡಿಯಬೇಕು.
ಭಾರತದ ಕಥೆಯೇ ಬೇರೆ. ಇಲ್ಲಿ ನದಿಗಳಿಗೆ ಕೊರತೆಯಿಲ್ಲ. ಫಲವತ್ತಾದ ಭೂಮಿಯ ಕೊರತೆಯಿಲ್ಲ. ಇಳುವರಿಯಂತೂ ಜಗತ್ತಿನ ಇತರ ಭಾಗಗಳಿಗಿಂತ ಹೆಚ್ಚು. ಏಕೆ ಹೀಗೆ? ಈಗೀಗ ಪರಿಸ್ಥಿತಿ ಬದಲಾಗುತ್ತಿದೆ. ನದಿಗಳು ಬತ್ತುತ್ತಿವೆ. ಭೂಮಿ ಬರಡಾಗುತ್ತಿದೆ. ಬೆಳೆಯ ಪ್ರಮಾಣ ನಿರೀಕ್ಷೆಯಷ್ಟಿಲ್ಲ. ಸೆಕೆ ತಡೆಯಲಾಗದಷ್ಟು ಹೆಚ್ಚುತ್ತಿದೆ. ಹೀಗೇಕೆ?
ವೈಜ್ಞಾನಿಕ ಬುದ್ಧಿಮತ್ತೆಯ ನೆಪದಲ್ಲಿ ಸೂರ್ಯನಿಗೆ ನಮಿಸುವ, ಭೂಮಿಯನ್ನು ತಣಿಸುವ ಆಚರಣೆಗಳನ್ನೆಲ್ಲ ಬಿಟ್ಟಿದ್ದೇ ಕಾರಣ ಇರಬಹುದಾ? ಹೌದೆಂದು ನಾನು ಹೇಳುತ್ತಿಲ್ಲ. ಪ್ರಶ್ನೆ ಕೇಳಿಕೊಂಡೆ ಅಷ್ಟೆ. ಹಾಗಂತ ಸೂರ್ಯನಿಗೆ ನಮಿಸುವ ಈ ಪರಂಪರೆ ಮೇಲ್ವರ್ಗದ ಜನರು ಹುಟ್ಟುಹಾಕಿದ್ದೆಂದು ಭಾವಿಸಬೇಡಿ. ಪ್ರಾಯಶಃ ಜಗತ್ತಿನ ಎಲ್ಲ ಬುಡಕಟ್ಟು ಜನಾಂಗಗಳೂ ಸೂರ್ಯನನ್ನು ಆರಾಧಿಸಿಯೇ ಆರಾಧಿಸುತ್ತವೆ. ಅರುಣಾಚಲ ಪ್ರದೇಶದಲ್ಲಿ ಈಗಲೂ ಮತಾಂತರಗೊಳ್ಳದ ಜನ ಪೂಜಿಸುವುದು ‘ಡೋನ್ಯೋ – ಪೋಲೋ’ ಎಂಬ ಸೂರ್ಯ – ಚಂದ್ರರ ಕಲ್ಪನೆಯನ್ನೇ. ಆ ಸೂರ್ಯನನ್ನು ಅವರು ಹಾಡಿ ಹೊಗಳುತ್ತಾರೆ. ಅವನಿಗಾಗಿ ಹಬ್ಬ ಆಚರಿಸುತ್ತಾರೆ. ಬಲಿ ಕೊಡುತ್ತಾರೆ ಎಲ್ಲವೂ! ಹಾಗೆ ಮಾಡದ ಕೆಲವರು ಇತ್ತೀಚೆಗೆ “ನಾವು ಪರಮಾತ್ಮನಿಗೆ ಮಾತ್ರ ನಮಿಸುತ್ತೇವೆ, ಸೂರ್ಯನಿಗಲ್ಲ” ಎಂದು ಹೊಸ ವಾದ ಹುಟ್ಟುಹಾಕಿದ್ದಾರೆ. ಟಾಟಾ ಮೋಟಾರ್ಸ್‍ನಲ್ಲಿ ಕೆಲಸ ಮಾಡುವವ “ನಾನು ನನ್ನ ಮ್ಯಾನೇಜರ್‍ಗೆ ಗೌರವ ಕೊಡಲಾರೆ, ರತನ್ ಟಾಟಾ ಮಾತು ಮಾತ್ರ ಕೇಳುತ್ತೇನೆ” ಎಂದರೆ ಎಷ್ಟು ಮೂರ್ಖತನವೋ ಅಷ್ಟೇ ಮೂರ್ಖತನದ ವಾದ ಇದು. ಅಂತಹ ಕೆಲಸಗಾರನನ್ನು ರತನ್ ಟಾಟಾ ಕೂಡ ಕಂಪನಿಯಿಂದ ಕಿತ್ತೆಸೆಯುವುದರಲ್ಲಿ ಅನುಮಾಣವೇ ಇಲ್ಲ. ಏನಂತೀರಿ?
ಸೂರ್ಯನನ್ನು ಅವಜ್ಞೆ ಮಾಡುವ ಪ್ರಮೇಯವೇ ಇಲ್ಲ. ಪರಿಸರಕ್ಕೆ ಪೂರಕವಾಗಿ ಬದುಕುವುದು ಎಂದರೆ ಸೂರ್ಯನ ಗಡಿಯಾರಕ್ಕೆ ಹೊಂದಿಕೊಳ್ಳುವುದೆಂದೇ ಅರ್ಥ. ಆತ ಅಸ್ತಂಗತನಾಗುವಾಗ ಇಡಿಯ ಪ್ರಕೃತಿಯೇ ಚೈತನ್ಯಶೂನ್ಯವಾಗುತ್ತದೆ. ಪಕ್ಷಿಗಳು ಗೂಡು ಸೇರುತ್ತವೆ, ಕ್ರಿಯಾಶೀಲವಾಗಿದ್ದ ಕೀಟ – ಭ್ರಮರಗಳು ಸದ್ದು ನಿಲ್ಲಿಸುತ್ತವೆ. ಗವ್ವೆನ್ನುವ ನೀರವತೆ. ಬೆಳಗಾಗುವ ಒಂದು ತಾಸು ಮುನ್ನ ಕಾಡಿನ ಬಳಿ ಇರುವ ಯಾವುದಾದರೂ ಗುಡ್ಡವನ್ನೇರಿ ಕುಳಿತುಬಿಡಿ. ಬೆಳಗಾಗುವ ಆ ಇಡಿಯ ಪ್ರಕ್ರಿಯೆ ನೋಡಿ ನೀವು ದಂಗಾಗದಿದ್ದರೆ ಕೇಳಿ. ಆದಿತ್ಯನ ಆಗಮನದ ಮುನ್ಸೂಚನೆ ಮೊದಲು ಕೀಟಗಳಿಗೆ ದೊರೆಯುತ್ತದೆ. ಅವುಗಳ ಸದ್ದು ನಿಧಾನವಾಗಿ ಇಡಿಯ ಕಾಡನ್ನು ವ್ಯಾಪಿಸಿ ಕಾಡನ್ನು ಜುಯ್ಯೆನ್ನಿಸಿಬಿಡುತ್ತದೆ. ಒಂದೊಂದೇ ಜಾತಿಯ ಪಕ್ಷಿಗಳು ಅನುಕ್ರಮವಾಗಿ ಚಿಂವ್‍ಗುಡಲಾರಂಭಿಸುತ್ತವೆ. ರೆಕ್ಕೆ ಝಾಡಿಸಿ ಮೈಕೊಡವಿಕೊಂಡು ಆಹಾರ ಅರಸಿ ಹೊರಟೇಬಿಡುತ್ತವೆ. ಈ ಎಲ್ಲ ಪಕ್ಷಿಗಳಲ್ಲಿ ಅತ್ಯಂತ ಕೊನೆಗೆ ಕೂಗುವುದು ಕೋಳಿ. ಮನುಷ್ಯರಾದ ನಾವು ಕೋಳಿ ಕೂಗಿದ ಮೇಲೆ ಬೆಳಗಾಯ್ತು ಎನ್ನುತ್ತೇವೆ!
ಸೂರ್ಯ ಸಣ್ಣ ಕೀಟದಿಂದ ಹಿಡಿದು ಮನುಷ್ಯನವರೆಗಿನ ಪ್ರತಿಯೊಂದನ್ನೂ ತನ್ನ ಶಕ್ತಿಯಿಂದ ಪ್ರಚೋದಿಸುತ್ತಾನೆ. ನಮ್ಮೊಳಗಿನ ಪ್ರತಿಯೊಂದು ಜೀವಕೋಶಗಳೂ ಆತನಿಂದ ಪುಷ್ಟಿಗೊಳ್ಳುತ್ತವೆ. ಸೂರ್ಯನ ಬೆಳಕು – ಶಾಖದಲ್ಲಿ ಆಗುವ ಸಣ್ಣ ಏರುಪೇರುಗಳೂ ನಮ್ಮಲ್ಲಿ ಅನೇಕ ರೋಗಗಳನ್ನು ಹುಟ್ಟುಹಾಕಬಹುದು. ಋಗ್ವೇದದ ಮಂತ್ರವೊಂದು ಸೂರ್ಯನನ್ನು ಶರೀರಗತ ಬಾಹ್ಯರೋಗವನ್ನೂ ಹೃದಯದ ಅಂತರ ರೋಗವನ್ನೂ ನಾಶಗೊಳಿಸೆಂದು ಪ್ರಾರ್ಥಿಸುತ್ತದೆ. ಪ್ರಸ್ಕಣ್ವ ಋಷಿಯು ಈ ಮಂತ್ರದ ಮೂಲಕ ಚರ್ಮಸಂಬಂಧಿ ಕಾಯಿಲೆಯಿಂದ ಮುಕ್ತಗೊಂಡರಂತೆ. ಸೂರ್ಯಕಿರಣಗಳ ಕೊರತೆಯಿಂದ ವಿಟಮಿನ್ ಡಿ ನಷ್ಟವಾಗಿ ರಿಕೆಟ್ಸ್ ಕಾಯಿಲೆ ಬರುವುದೆಂದು ಪ್ರಾಥಮಿಕ ಶಾಲೆಯಲ್ಲೇ ಓದಿದ್ದೇವಲ್ಲ!
ಸೂರ್ಯ ಕಥನ ಮುಗಿಯುವಂಥದ್ದಲ್ಲ. ಯಾರು ಏನಾದರೂ ಮಾಡಿಕೊಳ್ಳಲಿ, ನಾವು ಸೂರ್ಯನಮಸ್ಕಾರಕ್ಕೆ ಅಣಿಯಾಗೋಣ, ಶತ್ರುಂಜಯರಾಗೋಣ!

Thursday 9 July 2015

ಪುರಾಣಗಳೆಂದು ಜರಿಯದಿರಿ!

ಶಿವ’ ಯಾವಾಗಲೂ ಕಾಡುವ ದೇವರೇ. ಅವನ ಆಕಾರ, ಬಣ್ಣ, ವೇಷ, ವಾಸ ಸ್ಥಳ, ಆಭರಣ ಇವ್ಯಾವುವೂ ಸರಳವಾದುದಲ್ಲ. ಅತ್ಯಂತ ಗೂಢವಾದುದೇನನ್ನೋ ವಿವರಿಸುವ ಪ್ರಯತ್ನ ಅದರ ಹಿಂದಿದೆ. ಕೊರಳಲ್ಲಿ ಹಾವು, ಮೈ ಪೂರಾ ಭಸ್ಮ, ಸೊಂಟಕ್ಕೆ ವ್ಯಾಘ್ರ ಚರ್ಮ, ಕತ್ತಲ್ಲಿ ರುಂಡ ಮಾಲೆ. ತಲೆಯ ಮೇಲೆ ಗಂಗೆ, ಹಣೆಯಲ್ಲಿ ಉರಿವ ಕಣ್ಣು. ಸ್ಮಶಾನ ವಾಸಿ, ಹಿಮಾಲಯದ ಒಡೆಯ. ಉಫ್.. ಎಲ್ಲವೂ ವಿಚಿತ್ರ. ಆತನ ಲಿಂಗ ರೂಪವಂತೂ ಅನೇಕ ವೈಜ್ಞಾನಿಕ ಸತ್ಯಗಳ ಮೂರ್ತ ರೂಪ.
ಅಲ್ಲದೆ ಮತ್ತೇನು? ಪ್ರಳಯ ಕಾಲದಲ್ಲಿ ಮಹಾ ಗುರುತ್ವಕ್ಕೆ ಒಳಗಾಗಿ ಬಿಗ್ ಕ್ರಂಚ್ ಆಗುವುದೆಂಬ ಕಲ್ಪನೆಯನ್ನು ಭೌತ ವಿಜ್ಞಾನಿಗಳು ಮುಂದಿಡುತ್ತಾರಲ್ಲ, ಅದು ನಡೆದಾಗ ಇಡಿಯ ವಿಶ್ವ ತಾಳಬಹುದಾದ ರೂಪ ಶಿವ ಲಿಂಗದ್ದೇ! ಅದಕ್ಕೇ ಆತನನ್ನು `ಮಹಾ ಕಾಲ’ ಅಂತ ಕರೆಯೋದು. `ಲಿಂಗ’ ಶೂನ್ಯದ ಕಲ್ಪನೆ. ಶೂನ್ಯ ಎಂದರೆ ಖಾಲಿ. ಖಾಲಿ ಎಂದರೆ ಅಕ್ಷರಶಃ ಪೂರ್ಣ ಖಾಲಿ. ಇದೆಷ್ಟು ವಿಚಿತ್ರ ಅಲ್ಲವೆ? ಪೂರ್ಣ ಮತ್ತು ಖಾಲಿ ಎರಡೂ ಸೇರಿಕೊಂಡದ್ದೇ ಲಿಂಗಾಕೃತಿ. ಹೀಗಾಗಿಯೇ ಅದಕ್ಕೆ ಪೂಜೆ.
ಹೋಗಲಿ ಲಿಂಗವಲ್ಲದ್ದು ಪ್ರಕೃತಿಯಲ್ಲಿ ಏನಿದೆ ಹೇಳಿ. ನಮ್ಮ ಗೆಲಾಕ್ಸಿ ಕ್ಷೀರಪಥ, ಗ್ರಹಗಳು ಸೂರ್ಯನ ಸುತ್ತ ಸುತ್ತುವ ಪರಿ, ಕೊನೆಗೆ ಕಣ್ಣೆದುರು ಕಾಣುವ ಬೆಟ್ಟ ಗುಡ್ಡಗಳೂ ಭೂಮ ಲಿಂಗವೇ. ಅದಕ್ಕೇ ದ.ರಾ.ಬೇಂದ್ರೆ ‘ಗುಡ್ಡ ಗುಡ್ಡ ಸ್ಥಾವರ ಲಿಂಗ / ಅದಕ್ಕೆ ಮುಗಿಲಿನ ಅಭ್ಯಂಗ’ ಅಂತ ಕುಣಿಕುಣಿದು ಹಾಡಿದ್ದು. ಕೈಲಾಸ ಪರ್ವತ ಬಿಡಿ, ಹಿಮಾಲಯದುದ್ದಕ್ಕೂ ಹರಡಿರುವ ಪರ್ವತ ಶ್ರೇಣಿಗಳು ಬೃಹತ್ತಾದ ಶಿವ ಲಿಂಗದ್ದೇ ನೆನಪು ತರುತ್ತವೆ. ಹೀಗಾಗಿಯೇ ಲಿಂಗ ಪೂಜೆಯ ಪರಿಕಲ್ಪನೆ ಭಾರತದಲ್ಲಿ ಅವತೀರ್ಣಗೊಂಡಿರಬಹುದು ಅನ್ನುತ್ತಾರೆ ಬಹುತೇಕ ವಿದ್ವಾಂಸರು. ಆದರೆ ಕ್ರಿಸ್ತಾನುಯಾಯಿ ಪಂಡಿತರನೇಕರು ಈ ಲಿಂಗ ಪೂಜೆಯನ್ನು ಶಿಶ್ನ ಪೂಜೆಯೆಂದು ಲೇವಡಿ ಮಾಡುತ್ತಾರೆ. ಅಷ್ಟೇ ಅಲ್ಲ, ಪೀಠವನ್ನು ಯೋನಿಯ ಸಂಕೇತವೆಂದು ಕರೆದು, ಲಿಂಗಪೂಜೆಯನ್ನು ಲೈಂಗಿಕ ಕ್ರಿಯೆಯ ಪ್ರತೀಕ ಎಂದುಬಿಡುತ್ತಾರೆ. ಒಂದು ಸಂಸ್ಕøತಿಯು ನಂಬಿಕೊಂಡು ಬಂದಿರುವ ಆಚರಣೆಯನ್ನು ಅವಹೇಳನ ಮಾಡುವಲ್ಲಿ ಅವರೆಂದಿಗೂ ಹಿಂದುಮುಂದು ನೋಡುವುದಿಲ್ಲ. ಆದರೆ ಭಾರತದ ಯಾವೊಬ್ಬ ಚಳವಳಿಕಾರನೂ ಶಿಲುಬೆಯೇರಿದ ಏಸುಕ್ರಿಸ್ತನನ್ನು ನಮಸ್ಕರಿಸುವ ಜನರಿಗೆ ಶವ ನಮಸ್ಕಾರ ಮಾಡುವಿರೇಕೆ ಎಂದು ಪ್ರಶ್ನಿಸುವುದಿಲ್ಲ, ಅಲ್ಲವೆ? ಅದು ಮತ್ತೆ ನಮ್ಮ ಪರಂಪರೆಯ ಪಾಠ. ಪರಮಾತ್ಮ ತತ್ತ್ವ ಎಲ್ಲೆಡೆಯೂ ಇರುವುದರಿಂದ ಎಲ್ಲ ಮಾರ್ಗಗಳೂ ಅವನನ್ನೇ ಸೇರುತ್ತವೆ ಅಂತ!
Cosmic womb
ಇರಲಿ. ಈಗ ಪ್ರಶ್ನೆ ಇರೋದು ಮಹಾಕಾಲ ಶಿವನದ್ದು. ವಿಜ್ಞಾನಿಗಳನೇಕರಿಗೆ ದೀರ್ಘಕಾಲ ಕಾಡಿದ ಮತ್ತು ಕಾಡುತ್ತಲೇ ಇರುವ ಎರಡು ಸಂಗತಿಗಳು: ಒಂದು – ಆಕಾಶ, ಮತ್ತೊಂದು- ಕಾಲ. ಭಾರತದಲ್ಲಿ ಇವೆರಡಕ್ಕೂ ಶಿವನೇ ಉತ್ತರ. ಒಂದೆಡೆ ಚಿದಂಬರದ ನಟರಾಜ ಆಕಾಶ ತತ್ತ್ವದ ಪ್ರತೀಕವಾಗಿ ನಿಂತರೆ, ಮತ್ತೊಂದೆಡೆ ಉಜ್ಜಯಿನಿಯ ಮಹಾಕಾಲ. ಜ್ಯೋತಿರ್ಲಿಂಗವೊಂದಕ್ಕೆ ಮಹಾಕಾಲವೆಂದು ಹೆಸರಿಡುವುದೇ ರೋಮಾಂಚಕಾರಿ. ಅದರಲ್ಲೂ ಅದನ್ನು ನೆಲೆಗೊಳಿಸಲಾಗಿರುವ ಉಜ್ಜಯಿನಿಗೂ ಕಾಲಕ್ಕೂ ಇರುವ ಸಂಬಂಧ ಖಗೋಳದ ದೃಷ್ಟಿಯಿಂದ ವಿಶಿಷ್ಟ. ಹೀಗಾಗಿ ಆಕಾಶ ಕಾಯಗಳ ಕುರಿತಂತೆ ಆರ್ಯಭಟ ನಡೆಸಿದ ಅಧ್ಯಯನಕ್ಕೆ ಉಜ್ಜಯಿನಿಯೇ ಕೇಂದ್ರವಾಗಿತ್ತು. ಪ್ರಾಚೀನ ಭಾರತದಲ್ಲಿ ಕಾಲ ಗಣನೆಯ ಕೇಂದ್ರವಾಗಿದ್ದೂ ಉಜ್ಜಯಿನಿಯೇ. ಇಂದು ನಾವು ನಮ್ಮ ಮೊಬೈಲುಗಳಲ್ಲಿ ಗಡಿಯಾರ ಹೊಂದಿಸುವಾಗ ಆರಂಭದಲ್ಲಿ ಕೋಲ್ಕೊತ್ತಾಕ್ಕೋ ದೆಹಲಿಗೋ ಐಎಸ್‍ಟಿ ಹೊಂದಾಣಿಕೆ ಮಾಡುವುದಿಲ್ಲವಾ? ಹಾಗೆ ಇಡಿಯ ಭರತ ವರ್ಷದ ಕಾಲ ನಿರ್ಣಯ ಉಜ್ಜಯಿನಿಯ ಸಮಯಕ್ಕೆ ಹೊಂದಾಣಿಕೆಯಾಗಿರುತ್ತಿತ್ತಂತೆ. ಹೀಗಾಗಿ ಆತ ಮಹಾಕಾಲ!
ಹೀಗೆ ಅಕ್ಷಾಂಶ – ರೇಖಾಂಶಗಳಿಗೆ ಅನುಗುಣವಾಗಿ ಸಮಯ ಬೇರೆಬೇರೆ ಇರುತ್ತದೆ ಎನ್ನುವುದು ನಮ್ಮ ಪೂರ್ವಜರಿಗೆ ಯಾವಾಗಲೋ ಗೊತ್ತಿತ್ತು. ಅಷ್ಟೇ ಅಲ್ಲ, ಈ ಕಾಲ ನಾವು ನಿರ್ಧರಿಸಿದಂತೆ ಎಲ್ಲೆಡೆ ಅನ್ವಯವಾಗುವುದಿಲ್ಲ, ಬೇರೆ ಬೇರೆ ಗ್ರಹಗಳಲ್ಲಿ ಕಾಲಗತಿ ಬೇರೆ ಬೇರೆಯಾಗಿರುತ್ತದೆ ಎನ್ನುವುದನ್ನೂ ನಮ್ಮವರು ಅರಿತಿದ್ದರು. ಸ್ವಲ್ಪ ಗೊಂದಲವೆನ್ನಿಸುತ್ತಿದೆಯೇ? ವಿವರಿಸುತ್ತೇನೆ ಇರಿ.
ಭೂಮಿ ತನ್ನ ಅಕ್ಷದ ಮೇಲೆ ಒಂದು ಸುತ್ತು ಬರಲು 24 ಗಂಟೆ ತೆಗೆದುಕೊಳ್ಳುತ್ತದೆ. ಇದರಲ್ಲಿ ಅರ್ಧದಷ್ಟು ಹಗಲು, ಉಳಿದದ್ದು ರಾತ್ರಿ ತಾನೆ? ಹಾಗೆ ಬೇರೆಬೇರೆ ಗ್ರಹಗಳು ತನ್ನ ಸುತ್ತ ಸುತ್ತಲು ತೆಗೆದುಕೊಳ್ಳುವ ಕಾಲಾವಧಿ ಬೇರೆಬೇರೆ. ಅಲ್ಲಿ ನಾವು ಕೈಗೆ ಕಟ್ಟಿಕೊಂಡ ಗಡಿಯಾರ ಉಪಯೋಗಕ್ಕೆ ಬರುವುದಿಲ್ಲ. ಬುಧ ತನ್ನ ಕಕ್ಷೆಯ ಮೇಲೆ ವೇಗವಾಗಿ ತಿರುಗಿದರೆ, ಶನಿ, ಯುರೇನಸ್, ನೆಪ್ಚೂನ್‍ಗಳೆಲ್ಲ ಬಲು ನಿಧಾನವಾಗಿ ಸುತ್ತುತ್ತವೆ. ಭೂಮಿಯ ಮೇಲೆ ನಿಮಗೆ 35 ವರ್ಷ ಅಂತ ಭಾವಿಸಿ. ನಿಮ್ಮೊಡನೆ ಶುಕ್ರನ ಮೇಲೆ ಹುಟ್ಟಿದವನಿಗೆ 57 ವರ್ಷವಾಗಿರುತ್ತದೆ. ಆಥ ನೀವು ಇಲ್ಲಿ ಹುಟ್ಟಿದಾಗ ಬುಧನ ಮೇಲೆ ಹುಟ್ಟಿದರೆ ಅವನ ಈಗಿನ ಆಯಸ್ಸು 145 ವರ್ಷಗಳು! ಚಕಿತಗೊಳಿಸುವ ಸಂಗತಿಯೆಂದರೆ, ಯುರೇನಸ್, ನೆಪ್ಚೂನ್, ಫ್ಲೂಟೋಗಳ ಮೇಲೆ ಅವನಿಗಿನ್ನೂ ಒಂದು ವರ್ಷವೂ ತುಂಬಿರುವುದಿಲ್ಲ! ಸೂರ್ಯನನ್ನು ಗ್ರಹಗಳು ಸುತ್ತುವ ಕಾಲವನ್ನು ವರ್ಷವೆಂದು ಕರೆದರೆ, ಪಾಫ, ಅತ್ಯಂತ ದೂರದಲ್ಲಿರುವ ಈ ಗ್ರಹಗಳು ಒಂದು ಸುತ್ತು ಬರುವುದರೊಳಗೆ ಅದೆಷ್ಟೋ ಭೂ ವರ್ಷಗಳು ಕಳೆದು ಬಿಟ್ಟಿರುತ್ತವೆ!
ಇನ್ನು, ಊಹಿಸಿಯೇ ರೋಮಾಂಚನಗೊಳ್ಳುವಂಥ ಸಂಗತಿಯೊಂದಿದೆ. ಅದೇನು ಗೊತ್ತಾ? ನೀವು ಹುಟ್ಟಿದಾಕ್ಷಣ ಹೇಗೋ ಯುರೇನಸ್ ತಲುಪಿಕೊಂಡುಬಿಟ್ಟರೆ, ನಿಮಗೆ ಎರಡು ವರ್ಷ ತುಂಬಿ ಮರಳಿದಾಗ ನಿಮ್ಮೊಡನೆ ಹುಟ್ಟಿದವರಿಗೆ ಇಲ್ಲಿ 70 ವರ್ಷವಾದರೂ ಆಗಿರುತ್ತದೆ. ಅಂದರೆ, ಅವರ 70 ವರ್ಷ ನಿಮ್ಮ ಎರಡು ವರ್ಷಕ್ಕೆ ಸಮ!
ಭಾರತೀಯ ಶಾಸ್ತ್ರಗಳು ಬಲು ಹಿಂದೆಯೇ ಇದನ್ನು ಅರಗಿಸಿಕೊಂಡು ಸಮರ್ಥವಾಗಿ ಪ್ರತಿಪಾದಿಸಿದ್ದವು. ಕೆಲವೊಂದು ಮತಗಳು ಭೂಮಿಯ ಹುಟ್ಟಿನ ನಿಖರ ದಿನಾಂಕ ಹೇಳಿ ಅಪಹಾಸ್ಯಕ್ಕೀಡಾದರೆ, ಇನ್ನೂ ಕೆಲವು ಕೊನೆಗಾಲ ಬಂತೆಂದು ಬೊಬ್ಬೆ ಹೊಡೆದು ಲೇವಡಿಗೊಳಗಾಗಿವೆ. ಆದರೆ ಸನಾತನ ಧರ್ಮ ಮಾತ್ರ ಮಹಾಕಾಲದ ಕಲ್ಪನೆಯನ್ನು ಬಲು ಚುರುಕಾಗಿ ಕಟ್ಟಿಕೊಟ್ಟಿದೆ.
ಮನುಷ್ಯನ ದಿನಮಾನಕ್ಕಿಂತಲೂ ದೀರ್ಘ ದೇವತೆಗಳ ದಿನಮಾನಗಳು. ಅವಕ್ಕಿಂತಲೂ ದೀರ್ಘ ಬ್ರಹ್ಮನ ದಿನ – ರಾತ್ರಿಗಳು. ಬ್ರಹ್ಮನಿಗೆ ನೂರು ವರ್ಷಗಳಾದಾಗ ಪ್ರಳಯವಂತೆ. ಅಲ್ಲಿಗೆ ಎಲ್ಲವೂ ಸ್ತಬ್ಧ. ಆದರೆ ಮಹಾಕಾಲನ ಚಟುವಟಿಕೆ ನಡೆದೇ ಇರುತ್ತದೆ. ಆತನ ಕಾರಣದಿಂದಾಗಿ ನಟರಾಜ ಜಾಗೃತವಾಗಿ ಢಮರು ನಿನಾದವಾಗುತ್ತದೆ. ಪರಬ್ರಹ್ಮ ತತ್ತ್ವ ಸೃಷ್ಟಿಕಾರ್ಯಕ್ಕೆ ಅಣಿಯಾಘುತ್ತದೆ! ಒಟ್ಟೂ ಸೃಷ್ಟಿ ರಹಸ್ಯದ ಅಸ್ಥಿಪಂಜರವಿದು.
ಈಗ ಕಾಲಗಣನೆಯತ್ತ ಹೊರಳೋಣ. ವಿಷ್ಣು ಪುರಾಣದ ಪ್ರಕಾರ ಕಣ್ಣಿನ ರೆಪ್ಪೆ ಮಿಟುಕಿಸುವಷ್ಟು ಸಮಯವನ್ನು ನಿಮೇಷ ಎನ್ನಲಾಗುತ್ತದೆ. ಹದಿನೈದು ನಿಮೇಷಗಳಿಗೆ ಒಂದು ಕಾಷ್ಠ. ಮೂವತ್ತು ಕಾಷ್ಠಗಳಿಂದ ಒಂದು ಕಾಲ. 30 ಕಾಲಗಳಿಂದ ಒಂದು ಮುಹೂರ್ತ. ಇಂತಹ 30 ಮುಹೂರ್ತಗಳಿಂದ ಒಂದು ದಿನ. ಅಂದರೆ ಒಟ್ಟಾರೆ ಹಗಲು ರಾತ್ರಿ. ಆಮೇಲಿನದ್ದು ನಾವಂದುಕೊಂಡಂತೆ 30 ದಿನಗಳಿಗೆ ಒಂದು ಮಾಸ, ಆರು ಮಾಸಗಳಿಗೊಂದು ಅಯನ (ಉತ್ತರಾಯಣ ಮತ್ತು ದಕ್ಷಿಣಾಯನ). ಈ ರೀತಿಯ ಎರಡೂ ಅಯನಗಳು ಸೇರಿ ನಮ್ಮ ಒಂದು ವರ್ಷ!
ನಮಗೆ ಒಂದು ವರ್ಷ , ದೇವತೆಗಳಿಗೆ ಒಂದು ದಿನ. ಉತ್ತರಾಯಣ ದೇವತೆಗಳ ಹಗಲು, ದಕ್ಷಿಣಾಯನ ಅವರ ರಾತ್ರಿ. ನಮಗೆ 360 ವರ್ಷಗಳಾದಾಗ ದೇವತೆಗಳಿಗೆ ಒಂದು ವರ್ಷ! ಅದನ್ನು ದಿವ್ಯ ವರ್ಷವೆಂದು ಕರೆಯಲಾಗಿದೆ.
ನನಗೆ ಗೊತ್ತು. ಅನೇಕರು ಅದಾಗಲೇ ಲೆಕ್ಕಾಚಾರ ಬಿಡುವ ಹಂತದಲ್ಲಿದ್ದಾರೆ. ಈ ಲೆಕ್ಕಗಳು ಸುಲಭವಾಗಲೆಂದೇ ದಿವ್ಯವರ್ಷ ಬಳಸಿದ್ದು. ನಾವು ನಾಲ್ಕು ಯುಗಗಳನ್ನು ಗುರುತಿಸುತ್ತೇವೆ. ಕೃತ, ತ್ರೇತಾ, ದ್ವಾಪರ ಮತ್ತು ಕಲಿ. ಕೃತಯುಗದ ಅವಧಿ ನಾಲ್ಕು ಸಾವಿರ ದಿವ್ಯ ವರ್ಷಗಳು. ಅದಕ್ಕೆ ಪೂರ್ವ ಸಂಧ್ಯೆ ಹಾಗೂ ಸಾಯಂ ಸಂಧ್ಯೆಗಳು ತಲಾ 400 ವರ್ಷಗಳದ್ದು. ಒಟ್ಟಾರೆ 4,800 ದಿವ್ಯ ವರ್ಷಗಳು. ಒಂದೊಂದು ಯುಗಕ್ಕೂ ಈ ಸಂಖ್ಯೆ ಕಡಿಮೆಯಾಗುತ್ತ ಬಂದು, ಕಲಿಯುಗಕ್ಕೆ ಈ ಪ್ರಮಾಣ ಒಂದು ಸಾವಿರ ದಿವ್ಯ ವರ್ಷಗಳು, ಜೊತೆಗೆ ನೂರು – ನೂರು ವರ್ಷಗಳ ಪೂರ್ವ ಹಾಗೂ ಸಾಯಂ ಸಂಧ್ಯೆಗಳು ಸೇರಿದರೆ ಒಟ್ಟಾರೆ 1,200 ದಿವ್ಯ ವರ್ಷಗಳು. ಬರೋಬ್ಬರಿ ನಮ್ಮ ಲೆಕ್ಕದ ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರ್ಷಗಳು!! ಇವುಗಳಲ್ಲಿ ನಾವಿನ್ನೂ ಐದು ಸಾವಿರ ವರ್ಷ ದಾಟಿರಬಹುದಷ್ಟೇ. ಕಲಿಯುಗದ ದೀರ್ಘ ಪಯಣಬಾಕಿ ಇದೆ. ಸದ್ಯಕ್ಕಂತೂ ಪ್ರಳಯದ ಮುನ್ಸೂಚನೆ ಇಲ್ಲ!
ಹಾ! ಮತ್ತೆ ಲೆಕ್ಕಾಚಾರಕ್ಕೆ ಬನ್ನಿ. ನಾಲ್ಕು ಯುಗಗಳ ಒಂದು ಚಕ್ರ, 12 ಸಾವಿರ ದಿವ್ಯ ವರ್ಷಗಳದ್ದಲ್ಲವೆ? ಇದು ಸಾವಿರ ಬಾರಿ ತಿರುಗಿ ಬಂದರೆ ಬ್ರಹ್ಮನ ಒಂದು ಹಗಲು. ಎರಡು ಸಾವಿರ ಬಾರಿ ಆದರೆ ಆತನ ಒಟ್ಟಾರೆ ಒಂದು ದಿನ. ಇಂತಹ ದಿನಗಳು, ಮಾಸಗಳು, ವರ್ಷಗಳು ಕಳೆಯಬೇಕು. ಬ್ರಹ್ಮನಿಗೆ ಹೀಗೆ ನೂರು ವರ್ಷಗಳಾದಾಗ ಅದು ಪರಮಾಯಸ್ಸಂತೆ. ಮತ್ತೊಂದು ಹೊಸ ಸಋಷ್ಟಿಗೆ ಮುನ್ನದ ಮಹಾ ಪ್ರಳಯ ಕಾಲ ಅದು.
ಒಟ್ಟಾರೆ ಲೆಕ್ಕಾಚಾರ 8.64 ಟ್ರಿಲಿಯನ್ ವರ್ಷ ಭೂಮಿಯ ಆಯಸ್ಸು ಎಂದಾದರೆ, ಅದರಲ್ಲಿ ಈಗಾಗಲೇ ಪರಾರ್ಧವೆಂಬ ಬ್ರಹ್ಮನ ಅರ್ಧ ಆಯಸ್ಸು ಮುಗಿದಿದೆ. ಅಲ್ಲಿಗೆ, 4.32 ಅರಿಲಿಯನ್ ವರ್ಷಗಳು ಕಳೆದುಹೋಗಿವೆ. ನನಗೆ ಗೊತ್ತು. ಈ ಸಂಖ್ಯೆಯನ್ನು ನಮ್ಮಲ್ಲಿ ಕೆಲವರು ಗಾಬರಿಯಿಂದ ಗಮನಿಸುತ್ತಾರೆ. ಕೆಲವರು ಇದನ್ನು ಪುರಾಣವೆಂದು ತಳ್ಳಿ ಹಾಕಿದರೆ, ಇನ್ನೂ ಕೆಲವರು ಈ ಸಂಖ್ಯೆಯನ್ನು ಊಹಿಸಿಕೊಳ್ಳಲಾಗದೆ ಹೆಣಗುತ್ತಾರೆ.
ಇಷ್ಟೆಲ್ಲ ಓದಿಕೊಂಡ ಮೇಲೂ 2ಜಿ ಹಗರಣದ ಒಂದು ಲಕ್ಷದ ಎಪ್ಪತ್ತಾರು ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಇಂದಿನ ದಿನಮಾನದಲ್ಲೆ ಹೆಣಗಾಡುತ್ತಿರುವಾಗ, ಋಷಿಗಳ ಕಾಲದಲ್ಲಿ ಅಷ್ಟು ದೊಡ್ಡ ಸಂಖ್ಯೆಯನ್ನು ಲೀಲಾಜಾಲವಾಗಿ ಬಳಕೆ ಮಾಡಿ ಕಾಲ ಗಣನೆ ಮಾಡುತ್ತಿದ್ದರಲ್ಲ, ಆ ಸಾಮಥ್ರ್ಯದ ಕುರಿತು ಒಮ್ಮೆ ಆಲೋಚಿಸಿ. \
ಆಧುನಿಕ ವಿಜ್ಞಾನ ಇದಕ್ಕೆ ಹೊರತಾಗಿಲ್ಲ. ಸುಮಾರು ನೂರೈವತ್ತು ವರ್ಷಗಳ ಹಿಂದೆ ವಿಲಿಯಂ ಥಾಮ್ಸನ್ ತನ್ನ ಸಾಮಥ್ರ್ಯಕ್ಕೆ ತಕ್ಕಂತೆ, ಭೂಮಿ ಹುಟ್ಟಿ 20ರಿಂದ 400 ದಶಲಕ್ಷ ವರ್ಷಗಳಾಗಿರಬಹುದು ಎಂದು ಅಂದಾಜಿಸಿದ. ಬಹುಶಃ ಆಗಿನ ಕಾಲಕ್ಕೆ ಇದೇ ದೊಡ್ಡ ಗಣನೆಯಾಗಿರಲಿಕ್ಕೆ ಸಾಕು. ಭೂಗರ್ಭ ಶಾಸ್ತ್ರಜ್ಞ ಚಾಲ್ರ್ಸ ಲಿಲ್ ಇದನ್ನೊಪ್ಪಲು ಸಿದ್ಧವಿರಲಿಲ್ಲ. ಜೀವ ವಿಜ್ಞಾನಿಗಳಿಗಂತೂ ಇಷ್ಟು ಕಡಿಮೆ ಅವಧಿಯಲ್ಲಿ ಜೀವ ವಿಕಾಸ ಪ್ರಕ್ರಿಯೆ ನಡೆದಿರಬಹುದೆಂದು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ವಿಜ್ಞಾನ ಬೆಳೆದಂತೆ ಭೂಮಿಯ ಉಗಮದ ಕಲ್ಪನೆಯೂ ವಿಸ್ತಾರವಾಯಿತು. ವಿಕಿರಣ ಶಾಸ್ತ್ರದ ಅನ್ವಯಗಳಿಂದ ಭೂಮಿಯ ಹುಟ್ಟಿನ ಅಧ್ಯಯನ ಮಾಡಲಾಯ್ತು. ಆರ್ಥರ್ ಹೋಮ್ಸ್, ಪ್ರಾಚೀನವೆನ್ನುವ ಒಂದಷ್ಟು ಕಲ್ಲುಗಳ ಅಧ್ಯಯನ ನಡೆಸಿ, ಭೂಮಿ ಸುಮಾರು 1.6 ಬಿಲಿಯನ್ ವರ್ಷಗಳಷ್ಟು ಹಳೆಯದು ಎಂದ. ಮತ್ತೆ ಸಾಕಷ್ಟು ಸಂಶೋಧನೆಗಳು, ಚರ್ಚೆಗಳು ನಡೆದು ಆಧುನಿಕ ರೇಡಿಯೋ ಮೆಟ್ರಿಕ್ ವಿಧಾನದಿಂದ ಹಳೆಯ ಪರ್ವತ ಶ್ರೇಣಿಗಳ ಅಧ್ಯಯನ ನಡೆಸಿದಾಗ ನಾಲ್ಕೂವರೆ ಬಿಲಿಯನ್ ವರ್ಷಗಳೆಂದು ಅಂದಾಜಿಸಲಾಯ್ತು. ವಿಜ್ಞಾನದ ಹೊಸ ಶಾಖೆ ಅಧ್ಯಯನಕ್ಕೆ ಅತ್ಯಾಧುನಿಕ ಮಾರ್ಗ ತೋರುವವರೆಗೂ ಅವರೆಲ್ಲ ಇದನ್ನು ನಂಬುತ್ತಾರೆ.
ಹಾ! ಅಂದಹಾಗೆ ನಾವು ಪುರಾಣಗಳಲ್ಲಿ ಯಾವುದನ್ನು ಬ್ರಹ್ಮನ ಒಂದು ದಿನವೆಂದು ಕರೆದೆವೋ ಅದು ನಮ್ಮ ಮಿಲ್ಕಿ ವೇ ಗ್ಯಾಲಕ್ಸಿ ತನ್ನ ಅಕ್ಷದ ಸುತ್ತ ತಾನು ಒಮ್ಮೆ ಸುತ್ತಲು ತೆಗೆದುಕೊಳ್ಳುವ ಕಾಲವೆಂದು ವಿಜ್ಞಾನದ ಲೆಕ್ಕಾಚಾರವಂತೆ. ಹೀಗೇ ಅದು ವಿಶ್ವದ ಕೇಂದ್ರವಾದ ಪರಬ್ರಹ್ಮನನ್ನು ಒಂದು ಸುತ್ತು ಬಂದರೆ ಒಂದು ವರ್ಷ ಇರಬಹುದು. ಈ ರೀತಿಯ ನೂರು ವರ್ಷಗಳು ವಿಶ್ವದ ಆಯಸ್ಸೆಂಬುದು ನಮ್ಮ ಅಂದಾಜಾ? ಗೊತ್ತಿಲ್ಲ.
ವಿಜ್ಞಾನಕ್ಕೆ ಎಲ್ಲ ಗೊತ್ತಿದೆ. ಅದು ಹೇಳಿದ್ದು ಮಾತ್ರ ಸತ್ಯವೆಂದು ನಂಬುತ್ತೇವಲ್ಲ; ಮೂಢ ನಂಬಿಕೆಗಳಲ್ಲಿ ಅದೂ ದೊಡ್ಡದ್ದೇ. ವಿಜ್ಞಾನ ಅನೇಕ ವಿಚಾರಗಳಲ್ಲಿ ಕೈಚೆಲ್ಲಿ ಸುಮ್ಮನಾಗುತ್ತದೆಯಷ್ಟೇ ಅಲ್ಲ, ತಾನೇ ಹಿಂದೆ ಸಾಬೀತುಪಡಿಸಿ ಸತ್ಯವೆಂದು ಸಾರಿದ್ದನ್ನು ಅಲ್ಲಗಳೆದು ಗೊಂದಲವೆಬ್ಬಿಸಿಬಿಡುತ್ತದೆ.
ಅದಕ್ಕೇ ಹಳೆಯದನ್ನೆಲ್ಲ ಪುರಾಣವೆಂದು ಜರಿಯಬೇಡಿ. ಹೊಸತು ವಿಜ್ಞಾನವೆಂದು ಹಿಗ್ಗಿಬಿಡಬೇಡಿ. ಮಧ್ಯೆ ನಿಂತು ಹಂಸದಂತೆ ಹಾಲಿನಿಂದ ನೀರು ಬೇರೆ ಮಾಡಿ ಹಾಲನ್ನು ಸೇವಿಸಿ, ಅಷ್ಟೇ. ಭಾರತ ಅದನ್ನು ಹೇಳಿದ್ದಲ್ಲದೆ, ಆಚರಿಸಿತು ಕೂಡ. ಹೀಗಾಗಿಯೇ ಅದು ವಿಶ್ವಗುರು!