IMPORTANT NOTICE
Saturday, 4 January 2025
Tuesday, 31 December 2024
ಜನನೀ ವಿಜಯೀಭವ : ಕರಾಡ ಸಮ್ಮಿಲನ 2024
ಕರಾಡ ಕಲಾ ಮಂಜೂಷ ಪ್ರಸ್ತುತ ಪಡಿಸುವ ಕರಾಡ ಸಮ್ಮಿಲನ 2024 ಸುರೇಶ್ ಶಿರಂತಡ್ಕ ವಿರಚಿತ ನಾಟಕ “ಜನನೀ ವಿಜಯೀಭವ”
ಪಾತ್ರವರ್ಗ
ನರಸಿಂಹಣ್ಣ : ರಮಾನಂದ ಎಡಮಲೆ
ಧೀಮಹಿ : ಋಗ್ವೇದ್ ಶಿರಂತಡ್ಕ
ಅನಾವರಣ್ : ವಚನ್ ಎಡಮಲೆ
ಪ್ರಚೋದನ್ : ರಚನ್ ಎಡಮಲೆ
ಗಂಗಣ್ಣ : ಸುರೇಶ್ ಶಿರಂತಡ್ಕ
ತಮ್ಮಣ್ಣ : ಡಾ। ಕಾರ್ತಿಕ್ ಕೋಳಿಕ್ಕಜೆ
ತಿಮ್ಮಣ್ಣ : ಸಿಎ।ಕೊಮ್ಮುಂಜೆ ಬಾಲಮುರಳಿ
ಪುರಂದರಣ್ಣ : ವೆಂಕಟಕೃಷ್ಣ ಎಡಮಲೆ
ಶಂಭಣ್ಣ : ವಿಘ್ನೇಶ್ ಶಿರಂತಡ್ಕ
ಬಾಲಕ : ಶೌರಿ ಕೋಳಿಕ್ಕಜೆ
ಕರ್ನಲ್ ಭಾರ್ಗವ : ಮನೋಹರ್ ಚಿಪ್ಳೂಣ್ಕರ್
ಡಾ।ಅರುಂಧತಿ : ಸುಮ ಚಂದುಕೂಡ್ಲು
ಧ್ವನಿ ಸಂಕಲನ : ಸುಧನ್ವ ಕೋಟೆ & ಶಶಾಂಕ್ ಕೋಟೆ
ಹಿನ್ನೆಲೆ ಧ್ವನಿ : ಶುಭಾ ಶಿರಂತಡ್ಕ & ಶಿಲ್ಪ ಕೆದುಕೋಡಿ
ಹಿನ್ನೆಲೆ ಗಾಯನ : ರಮಾನಂದ ಎಡಮಲೆ
ರಚನೆ & ನಿರ್ದೇಶನ : ಸುರೇಶ್ ಶಿರಂತಡ್ಕ
ಧ್ವನಿ & ದೀಪ : ಶಿವಗಿರಿ ಸೌಂಡ್ಸ್ ಪೆರ್ಲ
ಸ್ಥಳಾವಕಾಶ : ಶ್ರೀ ಭಾರತಿ ಸದನ, ಪೆರ್ಲ
ವಿಷ್ಣು ಶರ್ಮ ಆಟಿಕುಕ್ಕೆ ಅವರಿಗೆ ಡಾಕ್ಟರೇಟ್ ಪದವಿ (ಪಿಎಚ್.ಡಿ.)
ಮಣಿಪಾಲ: ತಾಂತ್ರಿಕ ಮಹಾವಿದ್ಯಾಲಯದ [MIT] ಸಂಶೋಧನ ವಿದ್ಯಾರ್ಥಿ ವಿಷ್ಣು ಶರ್ಮ ಆಟಿಕುಕ್ಕೆ ಅವರು ಬರೆದು ಮಂಡಿಸಿದ ಎಂಬ ಶೀರ್ಷಿಕೆಯ ಡಾಕ್ಟರೇಟ್ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [MAHE] ಸಂಸ್ಥೆಯು, ಪಿಎಚ್.ಡಿ. ಪದವಿಯನ್ನು ನೀಡಿದೆ.
ಇವರ ಸಂಶೋಧನೆಯು ಕೃಷಿ ಮಣ್ಣಿನ ಫಲವತ್ತತೆ ಮತ್ತು ರಾಸಾಯನಿಕ ಗೊಬ್ಬರಗಳ ವಿಪರೀತ ಬಳಕೆಯಿಂದ ಆಗಬಲ್ಲ ದುಷ್ಪರಿಣಾಮಗಳ ಬಗೆಗಿನ ಸಂಶೋಧನಾತ್ಮಕ ವರದಿಯಾಗಿದ್ದು, ಕೃಷಿಕರಿಗೆ, ಕೇಂದ್ರ ಹಾಗು ರಾಜ್ಯ ಸರಕಾರದ ಕೃಷಿ ಇಲಾಖೆ ಹಾಗೂ ಸಂಶೋಧನಾಸಕ್ತರಿಗೆ ಉಪಕಾರಿ ಆಗಬಲ್ಲುದು. ಈ ಸಂಶೋಧನೆಯ ಫಲಿತಾಂಶಗಳನ್ನು ಬರೆದು ಸಿದ್ದಪಡಿಸಿದ ಪ್ರಬಂಧಗಳು, ಪ್ರಪಂಚದ ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ.
ಇವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಭೂಗರ್ಭಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಹೆಚ್. ಎನ್. ಉದಯಶಂಕರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಅದೇ ವಿಭಾಗದ ಪ್ರಾಧ್ಯಾಪಕ ಡಾ. ಕೆ. ಬಾಲಕೃಷ್ಣ ಅವರ ಸಹಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು.
ಮೂಲತಃ ಕಾಸರಗೋಡಿನ ವಿಷ್ಣು ಶರ್ಮ ಆಟಿಕುಕ್ಕೆ ಅವರು ವಿದ್ವಾನ್ ಮಾಧವ ಭಟ್ ಆಟಿಕುಕ್ಕೆ ಹಾಗೂ ಸುಮತಿ ಆಟಿಕುಕ್ಕೆ ದಂಪತಿಗಳ ಪುತ್ರ. ಪ್ರಸ್ತುತ ಇವರು ಆಪಾವನಿ ಎನ್ವಿರಾನ್ಮೆಂಟಲ್ ಸೊಲ್ಯುಶನ್ಸ್ ಪ್ರೈ. ಲಿ. ಹಾಗೂ ರಿಪ್ಲ್ಯಾಸ್ಟಿಕೊ ಪ್ರೈ.ಲಿ. ಎಂಬ ಎರಡು ಸಂಸ್ಥೆಗಳನ್ನು ಆರಂಭಿಸಿ ಪರಿಸರ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

