Showing posts with label ಅಗಲ್ಪಾಡಿ. Show all posts
Showing posts with label ಅಗಲ್ಪಾಡಿ. Show all posts

Saturday 30 March 2024

ಅಗಲ್ಪಾಡಿಯಲ್ಲಿ ರುದ್ರಹೋಮ | ಸಹಸ್ರಚಂಡಿಕಾ ಯಾಗ | ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ವೇದಮಾತಾ ಟ್ರಸ್ಟ್ (ರಿ.) ಅಗಲ್ಪಾಡಿ ಇವರ ನೇತೃತ್ವದಲ್ಲಿ ಮಾರ್ಚ್ 27 ಬುಧವಾರದಿಂದ ಏಪ್ರಿಲ್ 3 ಬುಧವಾರದ ತನಕ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಅಷ್ಟೋತ್ತರ ಶತಕಲಶಾಭಿಷೇಕ, ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿಯಾಗ, ಋಕ್ ಸಂಹಿತಾ ಯಾಗ, ಐಕಮತ್ಯ ಹೋಮ, ರುದ್ರಹೋಮ, ಧನ್ವಂತರಿ ಹೋಮ ಮತ್ತು ಸಹಸ್ರಚಂಡಿಕಾ ಯಾಗ ಜರಗಲಿರುವುದು.

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ 2ನೇಯದಿನ ಋಕ್ ಸಂಹಿತಾ ಯಾಗ , ಐಕ್ಯ ಮತ್ಯ ಹೋಮ.


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ  2ನೇಯದಿನ ಋಕ್ ಸಂಹಿತಾ ಯಾಗ ಆಜ್ಯಾಹುತಿಯಿಂದ ಜರುಗಿತು. ಅರಣೀ ಮಥನ ಪೂರ್ವಕ ಅಗ್ನಿ ಪ್ರಜನನ ದೊಂದಿಗೆ ಐಕ್ಯ ಮತ್ಯ ಹೋಮ ಜರುಗಿತು.  ಹೊಮವನ್ನು ಐಕ್ಯ ಮತ್ಯ ಮಂತ್ರ ಪಠಣದೊಂದಿಗೆ ಆಜ್ಯ, ಚರು, ಸಮಿಧೆ ಸಮರ್ಪಿಸಿ,  ಋತ್ವಿಜರು ನೆರವೇರಿಸಿದರು. 

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಸಂಯುಕ್ತಾಶ್ರಯದಲ್ಲಿ  ಲೋಕ ಕಲ್ಯಾಣಾರ್ಥ ವಾಗಿ ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿಯಾಗ, ವೇದ ಪುರುಷನ ಪೂರ್ಣಾನುಗ್ರಹ ಪ್ರಾಪ್ತಿಗಾಗಿ ಋಕ್ ಸಂಹಿತಾ ಯಾಗ, ಐಕ್ಯಮತ್ಯಹೋಮ, ರುದ್ರಹೋಮ, ಧನ್ವಂತರಿ ಹೋಮ, ಹಾಗೂ ಸಹಸ್ರ ಚಂಡಿಕಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ಜರುಗುತ್ತಿರುವ ಸುಸಂದರ್ಭ ದಿನಾಂಕ 28 ಮಾರ್ಚ್ 2024ನೇ ಗುರುವಾರ ಸುಸಂಪನ್ನಗೊಂಡಿತು. ಪೂರ್ಣಾಹುತಿ ಯೊಂದಿಗೆ ಯಾಗ ಸಂಪನ್ನಗೊಂಡಿತು. 

ಮಧ್ಯಾಹ್ನ ಶ್ರೀ ದುರ್ಗಾಪರಮೇಶ್ವರಿ ದೇವರ ಮಹಾ ಮಂಗಳಾರತಿ  ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರುಗ ಪೂರ್ಣಾಹುತಿಯೊಂದಿಗೆ ನಡೆಸಲಾಯಿತು. 

ಕ್ಷೇತ್ರದ ಆಡಳಿತ ಮೊತ್ತೇಸರ ಎ.ಜಿ. ಶರ್ಮಾ ಕೋಳಿಕ್ಕಜೆ ಮುತುವರ್ಭಾಜಿಯಿಂದ ಭಾಗ ವಹಿಸಿದ್ದರು. ವೇದಮಾತಾ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ತಲೇಕ, ಲೋಕ ಸಭಾ ಸದಸ್ಯರು, ಸಮೀತಿ ಸದಸ್ಯರು , ಭಕ್ತರು ಭಾಗವಹಿಸಿದ್ದರು .

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್(ರಿ) ಅಷ್ಟೋತ್ತರ ಶತಕಲಶಾಭಿಷೇಕ DAY 4

 


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ, ಶ್ರೀ ಮಹಾಗಣಪತಿ ಯಾಗ, ಋಕ್ ಸಂಹಿತಾ ಯಾಗ, ಯಾಗ ಸಮುಚ್ಚಯಕ್ಕೆ ಚಾಲನೆ.

 


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ, ಅಷ್ಟೋತ್ತರ ಸಹಸ್ರ ನಾಳಿಕೇರ ಶ್ರೀ ಮಹಾಗಣಪತಿ ಯಾಗ, ಋಕ್ ಸಂಹಿತಾ ಯಾಗ, ಯಾಗ ಸಮುಚ್ಚಯಕ್ಕೆ ಚಾಲನೆ. 

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಇದರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ವಾಗಿ ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿಯಾಗ, ವೇದ ಪುರುಷನ ಪೂರ್ಣಾನುಗ್ರಹ ಪ್ರಾಪ್ತಿಗಾಗಿ ಋಕ್ ಸಂಹಿತಾ ಯಾಗ, ಐಕ್ಯಮತ್ಯಹೋಮ, ರುದ್ರಹೋಮ, ಧನ್ವಂತರಿ ಹೋಮ, ಹಾಗೂ ಸಹಸ್ರ ಚಂಡಿಕಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ಮಾ.27ರಂದು ಆರಂಭಗೊಂಡು, ಪ್ರಾತ: ಋತ್ವಿಜರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಯಿತು. ಬಳಿಕ ಭಕ್ತರು ಸೇರಿ ದೇವತಾ ಪ್ರಾರ್ಥನೆ, ಗುರು ಗಣಪತಿ, ವರುಣ ಪೂಜನ, ಪುಣ್ಯಾಹ ವಾಚನ, ಋತ್ವಿಕ್ ವರಣ, ಮಧುಪರ್ಕ ಪೂಜೆ ನೆರವೇರಿ, ಅರಣೀ ಮಥನ ಮೂಲಕ ಅಗ್ನಿ ಪ್ರಜನನ, ಪೂಜನ, ಸ್ಥಾಪನ.   ಋಕ್ ಸಂಹಿತಾ ಯಾಗ ಮಂತ್ರ ಪಠಣದೊಂದಿಗೆ ಆಜ್ಯದ ಆಹುತಿ ಸಮರ್ಪಣೆ, ಪೂರ್ಣಾಹುತಿ ನಡೆಯಿತು.

ಕುಂಡ ಮಧ್ಯದಲ್ಲಿ ಅಗ್ನಿ ಸ್ಥಾಪನೆ, ಪೂಜನ, ಆಜ್ಯ, ಅಷ್ಟದ್ರವ್ಯ, ಕೇಪಳ ಹೂ, ದೂರ್ವೆಗಳಿಂದ ಹೋಮ, ಪೂರ್ಣಾಹುತಿ ನಡೆಯಿತು. ನವಗ್ರಹ ಹೊಮವನ್ನು ಆಜ್ಯ, ಚರು, ಸಮಿಧೆ ಸಮರ್ಪಿಸಿ ಪೂರ್ಣಾಹುತಿಯೊಂದಿಗೆ ನಡೆಸಲಾಯಿತು. 

ಕ್ಷೇತ್ರದ ಆಡಳಿತ ಮೊತ್ತೇಸರ ಎ.ಜಿ. ಶರ್ಮಾ ಕೋಳಿಕ್ಕಜೆ ಮುತುವರ್ಭಾಜಿಯಿಂದ ಭಾಗ ವಹಿಸಿದ್ದರು. ವೇದಮಾತಾ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ತಲೇಕ, ಲೋಕ ಸಭಾ ಸದಸ್ಯರು, ಸಮೀತಿ ಸದಸ್ಯರು , ಭಕ್ತರು ಭಾಗವಹಿಸಿದ್ದರು .


ಅಗಲ್ಪಾಡಿ ಯಾಗ ಶಾಲೆ, ಪಾಕಶಾಲೆ, ವಸತಿಗೃಹ ಸಾಂಸ್ಕೃತಿಕ ವೇದಿಕೆ ಎಡನೀರು ಶ್ರೀಗಳು ದೀಪ ಬೆಳಗಿಸಿ ಉದ್ಘಾಟಿಸಿದರು.


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಇದರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ವಾಗಿ ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿಯಾಗ, ವೇದಪುರುಷನ ಪೂರ್ಣಾನುಗ್ರಹ ಪ್ರಾಪ್ತಿಗಾಗಿ ಋಕ್ ಸಂಹಿತಾ ಯಾಗ, ಐಕ್ಯಮತ್ಯಹೋಮ, ರುದ್ರಹೋಮ, ಧನ್ವಂತರಿ ಹೋಮ, ಹಾಗೂ ಸಹಸ್ರ ಚಂಡಿಕಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ಮಾ.27ರಂದು ಆರಂಭಗೊಳ್ಳಲಿದ್ದು, ದೇವಸ್ಥಾನದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.

ಕಾರ್ಯಕ್ರಮದ ಅಂಗವಾಗಿ ಮಾ.26ರಂದು ಬೆಳಗ್ಗೆ ಗಣಪತಿಯಾಗ ಸಂಪನ್ನಗೊಂಡು, ಎಡನೀರು ಸಂಸ್ಥಾನದ ಮಠಾಧೀಶರಾದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಯವರು ಚಿತ್ತೈಸಿ, ಯಾಗ ಶಾಲೆ, ಪಾಕಶಾಲೆ, ವಸತಿಗೃಹ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. 

ಪುಂಗನೂರು ಗೋಮಾತೆ ಯಾಗದ ಸಂದರ್ಭದಲ್ಲಿ ಆಂಧ್ರಪ್ರದೇಶದ ಪುಂಗನೂರು ಗೋವು ಭಗವದ್ಭಕ್ತರನ್ನು ತಳಿಯ ಗೋವಿನಂತೆ ಪುಂಗನೂರು ಗೋವು ಆಕರ್ಷಿಸಲಿದೆ. ಗಿಡ್ಡ ತಳಿಯಾಗಿ ನೋಡಲು ಆಕರ್ಷಕವಾಗಿದೆ. ಇದರ ಹಾಲು ಅತ್ಯಂತ ಶ್ರೇಷ್ಠವಾಗಿದ್ದು ಆರೋಗ್ಯದಾಯಕವಾಗಿದೆ. ಒಂದು ಗಂಡು ಹಾಗೂ ಒಂದು ಹೆಣ್ಣು ಗೋವನ್ನು ಆಂಧ್ರಪ್ರದೇಶದಿಂದ ತರಲಾಗಿದೆ. ಇದು ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದ ಗೋ ಶಾಲೆಯಲ್ಲಿ ಇರಲಿದೆ.

Thursday 28 March 2024

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್(ರಿ) ಅಗಲ್ಪಾಡಿ | DAY 2

 


ಅಗಲ್ಪಾಡಿ ಕ್ಷೇತ್ರ ಅಷ್ಟೋತ್ತರ ಶತಕಲಶಾಭಿಷೇಕ, ಋಕ್‌ಸಂಹಿತಾ ಯಾಗ, ಚಂಡಿಕಾ ಯಾಗ FOX24LIVE

 




ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್(ರಿ) ಅಗಲ್ಪಾಡಿ | ಮೆರವಣಿಗೆ

 

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್(ರಿ) ಅಗಲ್ಪಾಡಿ | ಅಷ್ಟೋತ್ತರ ಶತಕಲಶಾಭಿಷೇಕ


 

Tuesday 26 March 2024

ಅಗಲ್ಪಾಡೀ ಯಾಗಗಳ ಮಹತ್ವದ ಕುರಿತು ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ರವರಿಂದ ಮಾಹಿತಿ.


ಅಷ್ಟೋತ್ತರ ಶತ ಕಲಶಾಭಿಷೇಕ , ಅಷ್ಟೋತ್ತರ ಸಹಸ್ರ ನಾರೀಕೇಳ ಶ್ರೀ ಮಹಾಗಣಪತಿ ಯಾಗ , ಋಕ್ ಸಂಹಿಕಾ ಯಾಗ , ಐಕ್ಯಮತ್ಯ ಹೋಮ , ರುದ್ರ ಹೋಮ ,ಧನ್ವಂತರಿ ಹೋಮ , ಹಾಗೂ ಸಹಸ್ರ ಚಂಡಿಕಾ ಯಾಗ ಗಳು 26 .03. 2024 ನೇ ಬುಧವಾರದಿಂದ ಮೊದಲ್ಗೊಂಡು 03.04.2024 ನೇ ಬುಧವಾರ ತನಕ ವಿಜೃಂಭಣೆಯಿಂದ ನಡೆಯಲಿರುವುದು. 

ಕಾಸರಗೋಡು ಜಿಲ್ಲೆಯ ತಾಲೂಕಿನ ಉಬ್ರಂಗಳ ಅಗಲ್ಪಾಡೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಐತಿಹಾಸಿಕವಾಗಿ ಕರಾಡ ಸಮಾಜ ಐಕ್ಯಮತ್ಯವಾಗಿ ಮುನ್ನಡೆಯುವಲ್ಲಿ ಪ್ರೇರಣ ಶಕ್ತಿಯಾಗಿದೆ. 

ಈಗಾಗಲೇ ಆಡಳಿತ ಮೊಕ್ತೇಸರ ಅನಂತ ಗೋವಿಂದ ಶರ್ಮಾ ಕೋಳಿಕ್ಕಜೆ ನೇತೃತ್ವದ ಆಡಳಿತ ಮಂಡಳಿ ದೇವಳದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತಾ ಬಂದಿದೆ. ಈಗಾಗಲೇ ಸುಮಾರು ಹದಿಮೂರು ಎಕರೆ ಜಾಗ ದೇವಳಕ್ಕೆ ಲಭಿಸಿದ್ದು, ನೂತನ ಪಾಕ ಶಾಲೆ, ಅತಿಥಿಗೃಹ, ಸಾಂಸ್ಕೃತಿಕ ವೇದಿಕೆ, ಸಭಾಭವನ, ಅನ್ನ ಛತ್ರ ನಿರ್ಮಾಣ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಸ್ವಯಂಸೇವಕರ, ಪದಾಧಿಕಾರಿಗಳ ತಂಡ ಭರದಿಂದ ಸಿದ್ಧತೆಗಳನ್ನು ನಡೆಸುತ್ತಿದೆ. 

ಈಗಾಗಲೇ ವಿಶಿಷ್ಟ ರೀತಿಯಲ್ಲಿ ಹತ್ತು ಕುಂಡಗಳಿರುವ ಯಜ್ಞ ಶಾಲೆ ನೂತನವಾಗಿ ನಿರ್ಮಾಣಗೊಳ್ಳುತ್ತಿದೆ. ಸಾಂಸ್ಕೃತಿಕ ವೇದಿಕೆ, ಭವನ ಸಿದ್ಧಗೊಳ್ಳುತ್ತಿದೆ. ಯಾಗದ ದಿನಗಳಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರ ನಿರೀಕ್ಷೆಯಲ್ಲಿ ಕ್ಷೇತ್ರ ಸಿದ್ಧಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಅನ್ನ ಸಂತರ್ಪಣೆ ಚಪ್ಪರ ಅಣಿಗೊಂಡಿದೆ. ವಿಶಾಲವಾದ ವಾಹನ ನಿಲುಗಡೆ ಸ್ಥಳಗಳನ್ನು ಸಿಧ್ಧಗೊಳಿಸಲಾಗಿದೆ. ಅತಿಥಿ ವಸತಿ ಗೃಹಗಳು ಸಿಧ್ಧಗೊಂಡು ಉದ್ಘಾಟನೆಗೆ ಕಾಯುತ್ತಿವೆ. ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಆಗಾಗ್ಗೆ ಸಮೀತಿ ಪದಾಧಿಕಾರಿಗಳು, ಭಕ್ತರು ಸೇರಿ ಪೂರ್ವ ಭಾವೀ ಸಭೆ ನಡೆಸಿ ಚರ್ಚಿಸಲಾಗುತ್ತದೆ. 

ಆಡಳಿತ ಮೊಕ್ತೇಸರ ಕೋಳಿಕ್ಕಜೆ ಶ್ರೀ ಅನಂತ ಗೋವಿಂದ ಶರ್ಮಾ ರವರು ಶ್ರೀಯುತ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ರವರನ್ನು ಸ್ವಾಗತಿಸಿ ಬರಮಾಡಿಕೊಳ್ಳುವರು. ಶ್ರೀ ಯುತರು ದೇವಾಲಯ, ಯಾಗ, ಸಮಾಜ, ಮುಂದಿನ ಪೀಳಿಗೆ, ಪರಿಸರ ಕುರಿತಾಗಿ ವಿಶೇಷ ಮಾಹಿತಿಯನ್ನು ನೀಡುತ್ತಾ, ಇಹ ಪರಕ್ಕೆ ಸುಗಮ ಹಾದೀ ವೇದ ವಿದ್ಯೇಯಾಗಿದೆ, ಯಜ್ಞಗಳು ದೇವರಿಗೆ ಹವಿಸ್ಸು ಸಮರ್ಪಣೆಯ ವಿಧಾನ, ಯಜ್ಞಗಳು ಬ್ರಾಹ್ಮಣರ ಆದ್ಯ ಕರ್ತವ್ಯವಾಗಿದೆ ಎಂದರು.

ಋಕ್ ಸಂಹಿತಾ ಯಾಗ & ಸಹಸ್ರ ಚಂಡಿಕಾ ಯಾಗ : ಶ್ರೀ ಕ್ಷೇತ್ರ ಅಗಲ್ಪಾಡಿ (27 Mar 24 - 03 Apr 24) - VIDEO INVITATION