Tuesday 26 March 2024

ಅಗಲ್ಪಾಡೀ ಯಾಗಗಳ ಮಹತ್ವದ ಕುರಿತು ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ರವರಿಂದ ಮಾಹಿತಿ.


ಅಷ್ಟೋತ್ತರ ಶತ ಕಲಶಾಭಿಷೇಕ , ಅಷ್ಟೋತ್ತರ ಸಹಸ್ರ ನಾರೀಕೇಳ ಶ್ರೀ ಮಹಾಗಣಪತಿ ಯಾಗ , ಋಕ್ ಸಂಹಿಕಾ ಯಾಗ , ಐಕ್ಯಮತ್ಯ ಹೋಮ , ರುದ್ರ ಹೋಮ ,ಧನ್ವಂತರಿ ಹೋಮ , ಹಾಗೂ ಸಹಸ್ರ ಚಂಡಿಕಾ ಯಾಗ ಗಳು 26 .03. 2024 ನೇ ಬುಧವಾರದಿಂದ ಮೊದಲ್ಗೊಂಡು 03.04.2024 ನೇ ಬುಧವಾರ ತನಕ ವಿಜೃಂಭಣೆಯಿಂದ ನಡೆಯಲಿರುವುದು. 

ಕಾಸರಗೋಡು ಜಿಲ್ಲೆಯ ತಾಲೂಕಿನ ಉಬ್ರಂಗಳ ಅಗಲ್ಪಾಡೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಐತಿಹಾಸಿಕವಾಗಿ ಕರಾಡ ಸಮಾಜ ಐಕ್ಯಮತ್ಯವಾಗಿ ಮುನ್ನಡೆಯುವಲ್ಲಿ ಪ್ರೇರಣ ಶಕ್ತಿಯಾಗಿದೆ. 

ಈಗಾಗಲೇ ಆಡಳಿತ ಮೊಕ್ತೇಸರ ಅನಂತ ಗೋವಿಂದ ಶರ್ಮಾ ಕೋಳಿಕ್ಕಜೆ ನೇತೃತ್ವದ ಆಡಳಿತ ಮಂಡಳಿ ದೇವಳದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತಾ ಬಂದಿದೆ. ಈಗಾಗಲೇ ಸುಮಾರು ಹದಿಮೂರು ಎಕರೆ ಜಾಗ ದೇವಳಕ್ಕೆ ಲಭಿಸಿದ್ದು, ನೂತನ ಪಾಕ ಶಾಲೆ, ಅತಿಥಿಗೃಹ, ಸಾಂಸ್ಕೃತಿಕ ವೇದಿಕೆ, ಸಭಾಭವನ, ಅನ್ನ ಛತ್ರ ನಿರ್ಮಾಣ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಸ್ವಯಂಸೇವಕರ, ಪದಾಧಿಕಾರಿಗಳ ತಂಡ ಭರದಿಂದ ಸಿದ್ಧತೆಗಳನ್ನು ನಡೆಸುತ್ತಿದೆ. 

ಈಗಾಗಲೇ ವಿಶಿಷ್ಟ ರೀತಿಯಲ್ಲಿ ಹತ್ತು ಕುಂಡಗಳಿರುವ ಯಜ್ಞ ಶಾಲೆ ನೂತನವಾಗಿ ನಿರ್ಮಾಣಗೊಳ್ಳುತ್ತಿದೆ. ಸಾಂಸ್ಕೃತಿಕ ವೇದಿಕೆ, ಭವನ ಸಿದ್ಧಗೊಳ್ಳುತ್ತಿದೆ. ಯಾಗದ ದಿನಗಳಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರ ನಿರೀಕ್ಷೆಯಲ್ಲಿ ಕ್ಷೇತ್ರ ಸಿದ್ಧಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಅನ್ನ ಸಂತರ್ಪಣೆ ಚಪ್ಪರ ಅಣಿಗೊಂಡಿದೆ. ವಿಶಾಲವಾದ ವಾಹನ ನಿಲುಗಡೆ ಸ್ಥಳಗಳನ್ನು ಸಿಧ್ಧಗೊಳಿಸಲಾಗಿದೆ. ಅತಿಥಿ ವಸತಿ ಗೃಹಗಳು ಸಿಧ್ಧಗೊಂಡು ಉದ್ಘಾಟನೆಗೆ ಕಾಯುತ್ತಿವೆ. ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಆಗಾಗ್ಗೆ ಸಮೀತಿ ಪದಾಧಿಕಾರಿಗಳು, ಭಕ್ತರು ಸೇರಿ ಪೂರ್ವ ಭಾವೀ ಸಭೆ ನಡೆಸಿ ಚರ್ಚಿಸಲಾಗುತ್ತದೆ. 

ಆಡಳಿತ ಮೊಕ್ತೇಸರ ಕೋಳಿಕ್ಕಜೆ ಶ್ರೀ ಅನಂತ ಗೋವಿಂದ ಶರ್ಮಾ ರವರು ಶ್ರೀಯುತ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ರವರನ್ನು ಸ್ವಾಗತಿಸಿ ಬರಮಾಡಿಕೊಳ್ಳುವರು. ಶ್ರೀ ಯುತರು ದೇವಾಲಯ, ಯಾಗ, ಸಮಾಜ, ಮುಂದಿನ ಪೀಳಿಗೆ, ಪರಿಸರ ಕುರಿತಾಗಿ ವಿಶೇಷ ಮಾಹಿತಿಯನ್ನು ನೀಡುತ್ತಾ, ಇಹ ಪರಕ್ಕೆ ಸುಗಮ ಹಾದೀ ವೇದ ವಿದ್ಯೇಯಾಗಿದೆ, ಯಜ್ಞಗಳು ದೇವರಿಗೆ ಹವಿಸ್ಸು ಸಮರ್ಪಣೆಯ ವಿಧಾನ, ಯಜ್ಞಗಳು ಬ್ರಾಹ್ಮಣರ ಆದ್ಯ ಕರ್ತವ್ಯವಾಗಿದೆ ಎಂದರು.

No comments:

Post a Comment