Saturday 18 April 2015

ಎಲ್ಲ ಓಕೆ,,ಮದುವೆ ಲೇಟ್ ಯಾಕೆ ?


ನಮ್ಮ ಜೀವನದಲ್ಲಿ ಮಾಡಿಕೊಳ್ಳುವುದು ಒಂದು ಮದುವೆ , ಅಂದ ಮೇಲೆ ಅದು ಸರಿಯಾಗಿ ಆಗಬೇಡವೇ ? ಇದು ಇಂದಿನ ಬಹುತೇಕ ಯುವಜನರು ವ್ಯಕ್ತಪಡಿಸುವ ಅಭಿಪ್ರಾಯ ? ಹೌದು ಮದುವೆಯೆನ್ನುವದು ಒಂದು ಸಂಸ್ಕಾರ , ಅದೊಂದು ಶುಭಕಾರ್ಯ, ಎರಡು ಆತ್ಮಗಳ ಪವಿತ್ರ ಮಿಲನ ಜೀವನದಲ್ಲಿ ಮದುವೆ ಎನ್ನುವುದು ಒಂದು ಮುಖ್ಯ ಘಟ್ಟ , ಹದಿನಾರು ಸಂಸ್ಕಾರಗಳಲ್ಲಿ ಒಂದು ಎರಡು ಆತ್ಮಗಳನ್ನು ಹತ್ತಿರ ತಂದು ಜೀನವವಿಡೀ ಒಟ್ಟಾಗಿ ಬಾಳುವಂತೆ ಪ್ರಚೋದಿಸುವ ಒಂದು ಸಾಮಾಜಿಕ ಕಟ್ಟಳೆ ಇದು, ಆದರೆ ಈ ಸಂಸ್ಕಾರ ದ ಆಚರಣೆಗೆ ಈ ದಾರ್ಮಿಕ ವಿದಿ ಪೂರೈಕೆಗೆ ಇಂದಿನ ಯುವಜನತೆ ಮೊದಲ ಪ್ರಾಶಸ್ತ್ಯ ಕೊಡುತ್ತಿಲ್ಲ, ಮದುವೆ ಭಾರತೀಯ ಶಿಕ್ಷಿತ ಹಾಗೂ ನಗರವಾಸಿ ಯುವಕ ,ಯುವತಿಯರ ಬದುಕಿನ ಪ್ರಥಮ ಆದ್ಯತೆಗುಳಿದಿಲ್ಲ , ಉದ್ಯೋಗ ಅಂದರೆ ತಮ್ಮ ಆರ್ಥಿಕ ಸಬಲತೆಗೆ ಅವರು ಪ್ರಥಮ ಆದ್ಯತೆ ನೀಡುತ್ತಿದ್ದಾರೆ .
ಓದಿದ್ದಾಯಿತು ವರ್ಷ ಇಪ್ಪತ್ತೊಂದಾಯಿತು ಇನ್ನೂ ಮದುವೆಯಾಗಿ ಹಿರಿಯರು ಮಾಡಿಟ್ಟ ಆಸ್ತಿ ಪಾಸ್ತಿ ನೋಡಿಕೊಂಡು ಅಥವಾ ಅವರ ಉದ್ಯೋಗ ಮುಂದುವರೆಸಿಕೋಡು ಹೋಗುವ ಮನೋಬಾವ ಇಂದಿನ ಯುವಕರರಲಿಲ್ಲ , ಇನ್ನು ಯುವತಿಯರತ್ತ ದೃಷ್ಟಿ ಹರಿಸಿದರೆ ಹೆಣ್ಣಿಗೆ ಮನೆ ಗಂಡಿಗೆ ಜಗತ್ತು ಎಂಬ ಕಾಲದಿಂದ ಹತ್ತಿರ ಬಂದಿದ್ದಾರೆ, ಹುಡುಗಿಗೆ ಹದಿನೈದಾದರು ಇನ್ನು ಮದುವೆ ಯಾಗಿಲ್ಲ ಎಂಬ ಅಂದಿನ ಮಾತುಗಳಿಗೆ ಇಂದು ಬೆಲೆಯಿಲ್ಲ, ತಮ್ಮ ಮದುವೆಯ ಸಮಯಕ್ಕೆ ಯುವಕರಿಗೆ ಇಪ್ಪತ್ತವೋಂದು ವರ್ಷ ತುಂಬಿರಲೇಬೇಕು ಎನ್ನುತೆ ಕಾನೂನು,
ವಯಸ್ಸಿನ ಮಾತು ಹಾಗಿರಲಿ ಮದುವೆಗಿಂತ ನಮ್ಮ ಬದುಕು ,ಭವಿಷ್ಯ ಮುಖ್ಯ ಎನ್ನುವ ಯುವಜನೆತೆಯ ನಂಬಿಕೆ .ಈಗ ಅಧಿಕವಾಗಿದೆ ೩೦ ಮೀರಿದರೂ ಮದುವೆಯ ಬಗ್ಗೆ ಚಿಂತಿಸದೆ ಉದ್ಯೋಗ ಬದುಕಿನ ಸ್ಥಿರತೆ ಸಾಮಜಿಕ ಸ್ತಾನಮಾನ ಮುಂತಾದವುಗಳ ಬಗ್ಗೆ ಯೋಚಿಸುವ ಯುವಜನರ ಸಂಖ್ಯೆ ಹೆಚ್ಚಿದೆ , ಬದುಕಿನ ಆರ್ಥಿಕ ಬದ್ರತೆ ಹಿನ್ನಲೆಯಲ್ಲಿ ಮದುವೆ ಮುಂದೂಡುವ ಸುಶಿಕ್ಷಿತ ಯುವಕ ,ಯುವತಿಯರ ಸಂಖ್ಯಯಲ್ಲಿ ಹೆಚ್ಚಳ ಕಂಡುಬಂದಿದೆ ,
ಮದುವೆ ಎಂಬ ದಾರ್ಮಿಕ ವಿಧಿಯ ಆಚರಣೆಯನ್ನು ಇಂದಿನ ಯುವಜನತೆ ಬಹು ಅದ್ದೂರಿಯಾಗಿ ವಿಜೃಂಬಣೇಯಿಂದ ನೆರವೇರಿಸಲು ಅಪೇಕ್ಚೆ ವ್ಯಕ್ತಪಡಿಸಿದರೂ ಯುವಕ , ಯುವತಿಯರು ತಮ್ಮ ಉದ್ಯೋಗ ಸಂಪಾದನೆಗಳತ್ತ ಒಲವು ತೋರಿ ವಿವಾಹಗಳನ್ನು ಮುಂದೂಡುತ್ತಾರೆ
ಈಗಿನ ಕಾಲಮಾನ ಸಾಕಷ್ಟು ಬದಲಾವಣೆ ಕಂಡಿವೆ , ಜನಸಂಖ್ಯೆ ಹೆಚ್ಚಳ ಸಂಪನ್ಮೂಲಗಳ ಕೊರತೆ ನಿರುದ್ಯೋಗದ ಸಮಸ್ಯೆಗಳನ್ನು ಸೃಷ್ಟಿಸಿದೆ , ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗುವ ಅವಶ್ಯಕತೆ ಇಂದು ಹೆಚ್ಚಿದೆ ಓದಿದ ಮಾತ್ರಕ್ಕೆ ಉದ್ಯೋಗ ದೊರಕದೆ ಆರ್ಥಿಕ ಸಂಪಾದನೆಯಾಗದು ಅಂತೆಯೇ ಅದ್ದೂರಿಯ ಮದುವೆ ಆ ಬಳಿಕ ಜೀವನ ನಿರ್ವಹಣೆ ಎಲ್ಲವೂ ಇಷ್ಟ ಸಾಧ್ಯವೇ ? ಹೀಗಾಗಿ ಬಹುಪಾಲು ಯುವ ಜನತೆ ತಮ್ಮ ಆರ್ಥಿಕ ನೆಲೆಗಟ್ಟು ಭದ್ರವಾಗುವ ತನಕ ಮದುವೆಯನ್ನು ಮುಂದೂಡುತ್ತಾರೆ ಇದು ಯುವಕರ ಮಾತಾದರೆ , ಯುವತಿಯರೂ ಅದೇ ನಿಟ್ಟಿನಲ್ಲಿ ಯೋಚಿಸುತ್ತಾರೆ.
ಮದುವೆಗೆ ಮುಂಚೆ ಮನೆಯಲ್ಲಿ ಸುಮ್ಮನೆ ಕುಳಿತಿರುವ ಯುವತಿಯರಿಲ್ಲ, ಮದುವೆಗೆ ಮುಂಚೆ ಹುಡುಗಿ ಉದ್ಯೋಗ ದಲ್ಲಿದ್ದರೆ ಅವಳು ಹೆತ್ತವರಿಗೆ ಬಾರವಾಗುವುದಿಲ್ಲ , ಅವಳ ಸಂಪಾದನೆಯಿಂದ ಮನೆಗೂ ಸಹಾಯವಾಗುತ್ತದೆ , ಮುಂದಾಗಲಿರುವ ಮದುವಗಾಗಿ ಹಣ ಒಡವೆ ಮಾಡಿಟ್ಟು ಕೊಳ್ಳುತ್ತಾರೆ , ಹಿಂದೆ ಯುವಕರು ಹೇಳುತ್ತಿದ್ದ ಮೊದಲು ಉದ್ಯೋಗ ನಂತರ ಮದುವೆ ಎಂಬ ಮಾತನ್ನು ಇಂದು ಯುವತಿಯರು ಹೇಳುತ್ತಿದ್ದಾರೆ.
ಆದುನಿಕ ಕಾಲಕ್ಕೆ ತಕ್ಕಂತೆ ಯುವಕ ಯವತಿಯರ ಮನೋಭಾವವೂ ಬದಲಾಗಿರುವುದು ಮದುವೆಗಳನ್ನು ಮುಂದೂಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇಂದಿನ ತರುಣಿಯರು ಮದುವೆಯಾಗಿ ಮನೆಯಲ್ಲೇ ಉಳಿಯಲು ಬಯಸರು , ಆದುನಿಕತೆ ಸೌಕರ್ಯಗಳು ಇರುವ ಗಂಡ-ಹೆಂಡತಿ ಮಾತ್ರ ವಾಸವಾಗಿರಲು ಅವಕಾಶವಿರುವ ನಗರದಲ್ಲಿರಬಹುದಾದ ಕಡೆಗೆ ಹೆಚ್ಚಾಗಿ ಒಲವು ತೋರುತ್ತಾರೆ .
ಕೃಷಿಯನ್ನು ನಂಬಿಕೊಂಡು ತಂದೆ ತಾಯಿಗಳೊಂದಿಗೆ ವಾಸವಾಗಿರುವ ಯುವಕರಿಗೆ ಮದುವೆಯ ಸಂದರ್ಬಗಳು ಒದಗಿಬರುವುದು ತಡವಾಗಿಯೇ , ಹಿಂದಿನಂತೆ ಮನೆಗೆಲಸಗಳನ್ನು ಮಾಡುತ್ತಾ, ಮನೆಯಲ್ಲೇ ಕುಳಿತಿರಲು ಈ ಗಿನ ಯುವತಿಯರು ಬಯಸರು , ಯುವಕರೂ ಅಷ್ಟೇ , ಆದೆಷ್ಟು ನಗರ ಪ್ರದೇಶಗಳ ಕಡೆಗೆ ಉದ್ಯೋಗ ವನ್ನರಸುತ್ತಾ ಸಾಗುತ್ತಾರೆ.
ತಮ್ಮ ಜೀವನ ನಿರ್ವಹಣೆಗೆ ಅಗತ್ಯವಾದ ವರಮಾನಕ್ಕೆ ಸಂಪಾದನೆಗೆ ಸೂಕ್ತ ಅವಕಾಶ ಸಿಗುವ ತನಕ , ಮದುವೆಯ ಬಗ್ಗೆಯೇ ಯೋಚನೆ , ಮದುವೆ ಎಂಬುದು ಒಂದು ಬಂದನ , ಎಂಬ ಅರಿವು ಯುಜನತೆಯಲ್ಲಿ ಆದಾಗಲೇ ಮೂಡಿದೆ. ಪ್ರಸ್ತುತ ಆದುನಿಕ ಬದುಕಿನ ದಾಂಪತ್ಯ ಕಹಿ ಪ್ರಕರಣಗಳನ್ನು ನೆರೆಹೊರೆಯವರಲ್ಲಿ ಪತ್ರಿಕೆಗಳಲ್ಲಿ ನೋಡಿ ಕೇಳೀ ತಿಳಿದುಕೊಳ್ಳು ವ ಇಂದಿನ ಯುವ ಜನರು ಆದೆಷ್ಟು ಮದುವೆಯನ್ನು ಮುಂದೂಡಲು ಪ್ರಯತ್ನಿಸುತ್ತಿದ್ದಾರೆ,
ಮೊದಲೆಲ್ಲ ವಿವಾಹದ ವಯಸ್ಸು ಬಂತೆಂದರೆ ಹೆತ್ತವರಿಗೆ ತಲೆಬಿಸಿ ಸಾವಿರ ಸುಳ್ಳೂ ಹೇಳಿ ಮದುವೆ ಮಾಡಬೇಕಾದ ಅನಿವಾರ್ಯತೆ ಇತ್ತು, ಮಗಳ ಕನ್ಯಾ - ಸೆರೆ ಬಿಡಿಸಲು ಆಸ್ತಿ-ಪಾಸ್ತಿ ಮಾರುವ ಅಗತ್ಯತೆ ಅನಿವಾರ್ಯವಾಗಿತ್ತು, ಜೀವನ ನಿರ್ವಹಣೆಯನ್ನು ಬದಿಗೊತ್ತಿ ಕೇವಲ ವಿದಿಯೊಂದರ ಆಚರಣೆಗೆ ಮಾಡಬೇಕಾದ ಖರ್ಚು , ಅದಕ್ಕಿಂತ ತೊಳಲಾಟ, ಪರದಾಟ , ಇಷ್ಟೆಲ್ಲವೂ ದಾಂಪತ್ಯ ಬದುಕಿಗೆ ಅಡ್ಡಿಯಾಗದಿರುವುದು ವೈಶಿಷ್ಟವೇ ಆದರೂ ಇಂದು ಕೈಗಾರೀಕರಣ ಆರ್ಥಿಕ ಮುನ್ನಡೆ, ಹಳೆಯ ನೈತಿಕ ಮೌಲ್ಯಗಳನ್ನು ಒರೆಗೆ ಹಚ್ಚಿ ನೋಡುವ ಆದುನಿಕ ವಿಚಾರದಾರೆ ತ್ರೀವವಾಗಿರುವ ಮಹಿಳಾ ವಿಮೋಚನಾ ಒತ್ತಾಸೆ , ಸಮಾನ ಮನಸ್ಸಿನ ಅಭಾವ, ಸಂಶಯ , ಪ್ರೇಮ ವಂಚನೆ ಪ್ರಕರಣಗಳು ಹಾಗೂ ಕೇವಲ ಪಾರಂಪರಿಕ ಕಾರಣಗಳಿಂದಾಗಿ ಇಂದು ಬಾರತೀಯ ದಾಂಪತ್ಯ ಬದುಕು ಕಳೆಗುಂದಿದೆ.
ಇಂದು ಸಮಾನ ಮನಸ್ಸಿನ ಅಭಾವ ಆದುನಿಕ ದಂಪತಿಗಳಲ್ಲಿ ಎದ್ದು ಕಾಣುವ ಪ್ರಧಾನ ಅಂಶವಾಗಿದೆ, ಇತ್ತೀಚೆಗೆ ಹೆಚ್ಚುತಿರುವ ವಿವಾಹ ವಿಚ್ಚೇದನೆ ಪ್ರಕರಣಗಳು ದಾಂಪತ್ಯ ಜೀವನದಲ್ಲಿರುವ ಬಿರುಕುಗಳನ್ನು ಎತ್ತಿ ತೋರಿಸುತ್ತದೆ.
ಔದ್ಯೋಗಿಕ ಕಾರಣದಿಂದಾಗಿ ಹುಟ್ಟಿಕೊಂಡ ನಮ್ಮ ಬೃಹತ್ ನಗರಗಳ ಯುವಜನತೆಗೆ ಇಂದು ಮದುವೆ ಪ್ರಥಮ ಆದ್ಯಯತೆಯಲ್ಲಿ , ಆಶಾಶ್ವತವಾದ ಈ ಬದುಕಿನಲ್ಲಿ ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವಲ್ಲಿ ಯುವಜನತೆ ನಿರತರಾಗಿದ್ದಾರೆ, ಬದುಕಿನಲ್ಲಿ ಒಂದು ಸ್ಥಾನಮಾನ ಗಳಿಸಿಕೊಂಡಿರುವ ಮೇಲೆಯೇ ಮದುವೆಯ ಮಾತು ಎಂಬುದು ಇವರ ನಿರ್ದಾರವಾಗಿದೆ .
ಒಟ್ಟಿನಲ್ಲಿ ಹೇಳುವುದಾದರೆ ಎರಡು ಆತ್ಮಗಳನ್ನು ಹತ್ತಿರ ತಂದು ಜೀವನವಿಡೀ ಒಟ್ಟಾಗಿ ಬಾಳುವಂತೆ ಪ್ರಚೋದಿಸುವ ಈ ಸಾಮಾಜಿಕ ಕಟ್ಟು ಕಟ್ಟಳೆಯಾದ ಮದುವೆಯನ್ನು ಮುಂದೂಡುವುದರಿಂದ ಮುಂದಿನ ಬದುಕಿನಲ್ಲಿ ಬಂದರೆಗುವ ನಾನಾ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ , ಓದು ಸೇರಿದಂತೆ ಉದ್ಯೋಗ ಆ ಮೂಲಕ ಆರ್ಥಿಕ ಸಬಲತೆಗೆ ಪ್ರಮುಖ ಪ್ರಾಶಸ್ಯ ಕೊಡಬೇಕಾಗಿದ್ದು ಇಂದಿನ ಅಗತ್ಯ ಹಾಗೆ ಮಾಡದೆ ಮೊದಲೇ ಮುದುವೆಯಂಬ ಬಂದನಕ್ಕೆ ಒಳಗಾಗಿ ಜೀವನ ರಥವನ್ನು ಸಾಗಿಸಲಾಗದೆ ಹೆತ್ತವರಿಗೆ ಹೊರೆಯಾಗಿ ಸಮಾಜಕ್ಕೂ ತೊಂದರೆ ಕೊಡುವಂತಾಗಬಾರದು ,
ಸಂಸಾರವೆಂಬ ಸಾಗರದ ಈಜಿ ದಾಟಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವುದು , ಅತ್ಯಗತ್ಯ ಅಂತಹ ಪೂರ್ವ ಸಿದ್ದತೆಗಳೊಂದಿಗೆ ಮದುವೆಯಂಬ ಧಾರ್ಮಿಕ ವಿದಿಗೆ ಅಡಿ ಇಟ್ಟರೆ ಮುಂದೆ ಸಂಸಾರಿಕ ಜೀವನ ಸುಗಮವಾಗಿ ಸಾಗಲು ಸಾದ್ಯ ನೀವೇನಂತೀರ ?

No comments:

Post a Comment